ಈರುಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
 
 
'''ಈರುಳ್ಳಿ'''ಯು (''ಆಲಿಯಮ್ ಕೆಪಾ'' ಜಾತಿ [[ಆಲಿಯಮ್]]) ಒಂದು ತರಕಾರಿಯಾಗಿ ಬಳಸಲಾಗುವ ಬೆಳೆ. ಅದು ಸಸ್ಯದ ನೆಲದಡಿಯಲ್ಲಿ ಆಹಾರ ಸಂಗ್ರಹಕ್ಕಾಗಿ ಬಳಕೆಯಾಗುವ ಒಂದು ಲಂಬವಾದ ಕುಡಿಯಾಗಿ ಬೆಳೆಯುತ್ತದೆ, ಹಾಗಾಗಿ ಇದನ್ನು ಒಂದು [[ಗೆಡ್ಡೆ]]ಯೆಂದು ತಪ್ಪಾಗಿ ತಿಳಿಯಬಹುದು, ಆದರೆ ಇದು ಗೆಡ್ಡೆಯಲ್ಲ. ''ಆಲಿಯಮ್ ಕೆಪಾ'' ಸಾಗುವಳಿಯಲ್ಲಿ ಮಾತ್ರ ಪರಿಚಿತವಾಗಿದೆ ಆದರೆ ಸಂಬಂಧಿತ ಕಾಡು ಜಾತಿಗಳು ಮಧ್ಯ ಏಷ್ಯಾದಲ್ಲಿ ಕಾಣುತ್ತವೆ. ಅತ್ಯಂತ ಹಳೆಯ [[ತರಕಾರಿ]]ಗಳ ಪೈಕಿ ಒಂದಾದ ಈರುಳ್ಳಿಗಳು, ಬಹುತೇಕ ವಿಶ್ವದ ಎಲ್ಲ ಸಂಸ್ಕೃತಿಗಳಿಗೆ ವ್ಯಾಪಿಸುವ ಹೆಚ್ಚಿನ ಸಂಖ್ಯೆಯ ಪಾಕಗಳು ಮತ್ತು ಅಡುಗೆಗಳಲ್ಲಿ ಕಾಣುತ್ತವೆ.ಇದರಲ್ಲಿ ೩೦೦ ಪ್ರಭೇದಗಳಿವೆ.ಕೆಲವು ಕೆಲವೇ ತಿಂಗಳಲ್ಲಿ ಬೆಳೆದು ಮುದುಡಿ ಹೋಗುವ ಗಿಡಗಳಾದರೆ ಮತ್ತೆ ಕೆಲವು ಬಹುವಾಷಿಕ ಸಸ್ಯಗಳು. ಈರುಳ್ಳಿಯ ಗೆಡ್ಡೆಯಲ್ಲಿ ಅನೇಕ ಸಾವಯವ ಗಂಧಕ ಸಂಯುಕ್ತ ವಸ್ತುಗಲಿವೆ. ಇವು ಸಂಕೀಣ್ರ್ರ ರೂಪದಿಂದ ಸರಳ ರೂಪಕ್ಕೆ ಬದಲಾಗುವಾಗ ಈರುಳ್ಳಿಯ ಪರಿಮಳವು ಹೊರಹೊಮೂಮ್ಮುತ್ತದೆ. ಈರುಳ್ಳಿಯನ್ನು ಶೀತಲೀಕರಿಸಿದಾಗ ಅಥವಾ ಹುರಿದಾಗ ಅದರ ರಾಸಾಯನಿಕ ರಚನೆ ಬದಲಾಗುತ್ತದೆ. ಅದು ಹಸಿ ಇದ್ದಗ ಕಿಣ್ವಗಳ ಪ್ರಕ್ರಿಯೆಯನ್ನು ಮಾಡುತ್ತಿದ್ದು ನಿಂತು ಹೋಗುತ್ತದೆ. ಈ ಕಾರಣದಿಂದಲೇ ಹುರಿದಾಗ ಅಥವಾ ಬೇಯಿಸಿದಾಗ ಈರುಳ್ಳಿಯ ರುಚಿ ಬೇರೆಯಾಹಿರುತ್ತೆ. ಈರುಳ್ಳಿಯಲ್ಲಿರುವ ಕ್ವೆಸ್ರೆಟಿನ್ ಎನ್ನುವ ರಾಸಾಯ್ನಿಕವು ಒಂದು ಪ್ರಬಲ ಯ್ಯಂಟಿ ಆಕ್ಸಿಡೆಂಟ್ ಆಗಿದ್ದು, ನಮ್ಮ ಆರೋಗ್ಯ ರಕ್ಷಣೆಯನ್ನು ಮಡುತ್ತದೆ. ಈರುಳ್ಳಿ ಗಿಡ ೨-೩ ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ.ಎಲೆಗಳು ಉದ್ದಕ್ಕಿರುತ್ತವೆ. ಒಳಗಡೆ ಟೊಳ್ಳಾಗಿರುತ್ತವೆ. ಕೊಳವೆಯಾಕಾರದಲ್ಲಿರುತ್ತವೆ. ಹಸಿರು ಬಣ್ಣದಲ್ಲಿ ಎಲೆಯ್ ತುದಿಯಲ್ಲಿ ಬಿಳಿ ಬಣ್ಣದ ಹೂವು ಇರುತ್ತದೆ.ಹೂವು ಫಲಿತವಾಗಿ ಹಣ್ಣಾದಗ ಒಳಗೆ ಮೂರು ಕೋಶಗಳಲ್ಲಿ ತಲಾ ಒಂದರಂತೆ ಬೀಜಗಳಿರುತ್ತವೆ.ಈರುಳ್ಳಿಯ ಗೆಡ್ಡೆ, ಎಲೆ,ಹೂವು ಮತ್ತು ಬೀಜ -ಇವಿಷ್ಟನ್ನು ನಮ್ಮ ದೇಶದಲ್ಲಿ ಬೇರೆ ಬೇರೆ ಬಗೆಯ ಅಡುಗೆಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇವು ಕೇವಲ ಅಡುಗೆ ತಯಾರಿಕೆಯಲ್ಲಷ್ಟೆ ಅಲ್ಲದೇ ಹಲವು ಬಗೆಯ ದೈಹಿಕ ಸಮಸ್ಯೆಗಳ ಪರಿಹಾರಕ್ಕೂ ಬಳಕೆಯಾಗುತ್ತಿವೆ. ಈರುಳ್ಳಿಯ ಮೂಲಸ್ಥಳದ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಹೆಚ್ಚಿನವರು ಇದು ಏಷ್ಯಾದ ಒಂದು ಮೂಲಸಸ್ಯವೆಂದು ಹೇಳುತ್ತಾರೆ. ಮತ್ತೆ ಕೆಲವು ವಿಜ್ಞಾನಿಗಳ ಪ್ರಕಾರ ಅಫಘಾನಿಸ್ತಾನ, ರಷ್ಯಾದ ತಾಜಕೀಸ್ಥಾನ, ಉಜ್ಬೇಕಿಸ್ಥಾನ ಈರುಳ್ಳಿಯ ಮೂಲಸ್ಥಳಗಳಾಗಿವೆ.ಇದೊಂದು ಮೂಲಿಕಾ ಸಸ್ಯ. ಗೆಡ್ಡೆಗಳಿಗಾದರೆ ಏಕವಾರ್ಷಿಕ ಬೆಳೆ. ಬೀಜೋತ್ಪಾದನೆಗಾದರೆ ಎರಡು ವರ್ಷದ ಬೆಳೆ. ಗೆಡ್ಡೆಗಳು ಬಲಿತಂತೆ ಉದ್ದನೆಯ ಹೂ ತೆನೆ ಮೂಡುತ್ತದೆ. ಹೂಚೆಂಡು ಮತ್ತು ಹೂಗಳ ಬಣ್ಣ ಬಿಳಿಹಸಿರು. ಬೀಜಗಳು ಒರಟಾಗಿದ್ದು ಕಪ್ಪು ಬಣ್ಣದಲಿರುತ್ತದೆ. ಎಲೆಗಳು ಬಲಿತಂತೆ ಹಳದಿ ಬಣ್ಣ ತಾಳುತ್ತವೆ. ನಂತರ ಮುರಿದು ಬೀಳುತ್ತವೆ. ಆದರೆ ಒಣಗಿದ ನಂತರವೂ ಅವು ಗಿಡಗಳಿಗೆ ಅಂಟಿಕೊಂಡಿರುತ್ತವೆ.ಸಾಮಾನ್ಯವಾಗಿ ಕೆಂಪು ಬಣ್ಣದ ಈರುಳ್ಳಿಗಳು ಎಲ್ಲ ಕಡೆ ಕಾಣಸಿಗುತ್ತವೆ. ಬಿಳಿ ಬಣ್ಣದ್ ಈರುಳ್ಳಿಯೂ ಸಾಮಾನ್ಯವಾಗಿದೆ. ಸ್ವಲ್ಪ ಕಡಮೆ ಪ್ರಮಾಣದಲ್ಲಿ ಹಳದಿ ಬಣ್ಣದ ಈರುಳ್ಳಿಯೂ ಸಿಗುತ್ತದೆ.ಗೆಡ್ಡೆಗಳ ಗಾತ್ರದಲ್ಲೂ ವೈವಿಧ್ಯವಿದೆ. ಸಣ್ಣ ಗಾತ್ರದ, ಉದ್ದ ಗಾತ್ರದ,ಗುಂಡಗಿನ, ಗೋಲಾಕಾರದ, ದೊಡ್ಡಗಾತ್ರದ ಈರುಳ್ಳಿಗಳಿವೆ. ಗೊಂಚಲುಗೊಂಚಲಾಗಿ ಬಿಡುವ ಈರುಳ್ಳಿಗಳೂ ಇವೆ. ಬಿಡಿಬಿಡಿಯಾಗಿ ಬಿಡುವ ಈರುಳ್ಳಿಗಳು ಇವೆ. ಕೆಲವು ಈರುಳ್ಳಿ ರುಚಿಯಲ್ಲಿ ಬಹಳ ಖಾರವಾಗಿರುತ್ತವೆ. ಕೆಲವು ಈರುಳ್ಳಿಗಳ ರುಚಿ ಸಾಧಾರಣ ಮಟ್ಟದ ಖಾರ ಇರುತ್ತವೆ. ನಾವು ನೋಡುವ ಸಾಧಾರಣ ಬಗೆಯ ಈರುಳ್ಳಿಗಳಲ್ಲದೆ ಇನ್ನೂ ಅನೇಕ ಬಗೆಯ ಈರುಳ್ಳಿಗಳನ್ನು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಕೃಷಿ ಮಾಡುತ್ತಿದ್ದಾರೆ.
 
ಇವೆಲ್ಲವೂ ಈರುಳ್ಳಿ ಕುಟುಂಬದ ಸದಸ್ಯರೇ
{{ಚುಟುಕು}}
:ಶಾಲಟ್ - Allium ascalonicum
:ಬೆಳ್ಳುಳ್ಳಿ - Allium sativum
:ಶೈವ್ - Allium schoenoprasum
:ವೆಲ್ಷ್ ಈರುಳ್ಳಿ - Allium fistulosum
:ಚೀನೀ ಈರುಳ್ಳಿ - Allium chinense
:ಲೀಕ್ - Allium porrum
 
ಸಣ್ಣ ಗಾತ್ರದ ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿರುತ್ತವೆ. ಈರುಳ್ಳಿಯಲ್ಲಿರುವ ಖಾರದ ರುಚಿಗೆ ಈರುಳ್ಳಿಯಲ್ಲಿರುವ ಅಲೈಲ್ ಪ್ರೊಪೈಲ್ ಡೈಸಲ್ಫೈಡ್ ಎಂಬ ಚಂಚಲತೈಲವೇ ಕಾರಣವಾವಿದೆ. ಈರುಳ್ಳಿಯ ಪ್ರಬಲ ರಾಸಾಯನಿಕವು - ಅದನ್ನು ಹಸಿಯಗಿ ತಿಂದಾಗ ಹೆಚ್ಚಿನ ಪ್ರಮಾಣದಲ್ಲಿ ದೇಹದಲ್ಲಿ ಉಳಿದು ಕೊಳ್ಳುತ್ತದೆ. ಈ ರಾಸಾಯನಿಕಗಳ ಅಣುಗಾತ್ರ ಎಷ್ಟು ಚಿಕ್ಕದಾಗಿರುತ್ತದೆಂದರೆ ಹಸಿ ಈರುಳ್ಳಿಯನ್ನು ತಿಂದ ನಂತರ ಹಲ್ಲನ್ನು ತಿಕ್ಕಿದಾಗಲೂ ಈ ಅಣುಗಳು ಸಾಕಷ್ಟು ಪ್ರಮಾಣದಲ್ಲಿ ಬಾಯಲ್ಲಿ ಉಳಿದುಕೊಳ್ಳುವುದರಿಂದ ಈರುಳ್ಳಿಯ ವಾಸನೆ ಹಾಗೆಯೇ ಇರುತ್ತದೆ. ಈರುಳ್ಳಿಯ ಹಸಿವಾಸನೆ ತಿಂದವನಿಗೆ ತೃಪ್ತಿ ಕೊಟ್ಟರು ಹಸಿ ಈರುಳ್ಳಿ ತಿಂದವನ ಹತ್ತಿರ ಹೋಗುವವರಿಗೆ ದುರ್ವಾಸನೆ ಕಾಡುತ್ತದೆ. ಈರುಳ್ಳಿ ತಿಂದವನೇ ಮತ್ತೊಬ್ಬ ಈರುಳ್ಳಿ ತಿಂದವನ ವಾಸನೆಗೆ ಹೇಸಿಗೆ ಪಟ್ಟುಕೊಳ್ಳುವುದು ಸಾಮಾನ್ಯ!
 
ಏನೇ ಆಗಲಿ ಹಸಿ ಈರುಳ್ಳಿ ಮಾತ್ರ ನಮ್ಮ ದೇಹದಲ್ಲಿ ಸರಿಯದ ರೀತಿಯಲ್ಲಿ ಜೀರ್ಣವಾಗುತ್ತದೆ. ಹುರಿದ ಅಥವಾ ಬೇಯಿಸಿದ ಈರುಳ್ಳಿ ಜೀರ್ಣವಾಗುವುದು ಕಷ್ಟ. ಈರುಳ್ಳಿಯ ರಸದಲ್ಲಿರುವ ರಾಸಾಯನಿಕಗಳು ರೋಗಾಣುಗಳಿಗೆ ಇಷ್ಟವಾಗುವುದಿಲ್ಲ. ಈರುಳ್ಳಿ ರಸ ಒಂದು ಸುಲಭ ಜೀವಿರೋಧಕವೆಂಬ ಅಭಿಪ್ರಾಯವು ಇದೆ. ನಮಗೆ ಬರುವ ಅನೇಕ ರೋಗಗಳ ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸುವುದು ಬಾಯಿ, ಮೂಗಿನಿಂದ. ರಷ್ಯಾದ ವೈದ್ಯ ಬಿ.ಪಿ ತೊಹ್ಕಿನ್ ಎಂಬಾತ ಹೇಳುತ್ತಾನೆ - 'ಈರುಳ್ಳಿಯ ಚೂರುಗಳನ್ನು ಬಾಯಲ್ಲಿಟ್ಟುಕೊಂಡು ೨-೩ ನಿಮಿಷಗಳವರೆಗೆ ಅಗಿಯುತ್ತಿದ್ದರೆ ಬಾಯಲ್ಲಿರುವ ರೋಗಾಣುಗಳೆಲ್ಲ ನಾಶವಾಗುತ್ತವೆ. ಬಾಯಿ ಮೂಗಿನ ಮೂಲಕ ರೋಗಾಣುಗಳು ಒಳಬರಲಾರವು'.
 
ಇದು ಒಂದು ಪ್ರಬಲ ವಾಸನಾ ದ್ರವ್ಯವಾಗಿದೆ. ಇದರಿಂದ ಅನೇಕ ರೀತಿಯ ಪ್ರಯೋಜನಗಳು ಇವೆ. ಮೂರ್ಛೆ ಹೋದವರಿಗೆ ಈರುಳ್ಳಿಯನ್ನು ಮೂಸುವಂತೆ ಮಾಡಿದರೆ ಮೂರ್ಛೆ ತಿಳಿದು ಏಳುತ್ತಾರೆ. ಪ್ರಜ್ಞೆ ತಪ್ಪಿದವರಿಗೂ ಇದೇ ಚಿಕಿತ್ಸೆ ಫಲಕಾರಿಯಗುತ್ತದೆ. ತಲೆ ನೋವು ಇದ್ದಾಗ ಹಣೆಗೆ ಈರುಳ್ಳಿ ರಸ ಹಚ್ಚಿಕೊಂಡರೆ ನೋವು ನಿವಾರಣೆಯಾಗುತ್ತದೆ.
 
{{ಚುಟುಕು}}
[[ವರ್ಗ:ತರಕಾರಿ]]
[[ವರ್ಗ:ಸಸ್ಯಗಳು]]
"https://kn.wikipedia.org/wiki/ಈರುಳ್ಳಿ" ಇಂದ ಪಡೆಯಲ್ಪಟ್ಟಿದೆ