ಪದಬಂಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
ಅ.ನಾ.ಪ್ರಹ್ಲಾದ ರಾವ್ ವಿವಿಧ ಪತ್ರಿಕೆಗಳಿಗೆ ರಚಿಸಿದ ಪದಬಂಧಗಳನ್ನು ಆಧರಿಸಿದ ೫ ಪದಬಂಧ ಪುಸ್ತಕಗಳು ಒಂದೇ ಬಾರಿ ಬಿಡುಗಡೆಗೊಂಡವು. ಪದ್ಮಶ್ರೀ ಪುರಸ್ಕೃತ ಹಿರಿಯ ಕವಿ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಈ ಪದಬಂಧ ಪುಸ್ತಕಗಳನ್ನು ಲೋಕಾಪ೯ಣೆ ಮಾಡಿದರು. ಕನ್ನಡ ಭಾಷೆಯಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಪದಬಂಧ ಪುಸ್ತಕಗಳು ಇವಾಗಿವೆ. ಕನ್ನಡ ಭಾಷೆಯ ಮಟ್ಟಿಗೆ ಇದೊಂದು ದಾಖಲೆ. ೫ ಪುಸ್ತಕಗಳಲ್ಲಿ ೨ ಸಾಮಾನ್ಯ, ೧ ಕನ್ನಡ ಸಿನಿಮಾ ಹಾಗೂ ಮತ್ತೊಂದು ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಿದ್ಡಪಡಿಸಿದ ಪದಬಂಧ ಪುಸ್ತಕಗಳಾಗಿವೆ. ಇಂಗ್ಲಿಷ್ ಭಾಷೆಯಲ್ಫ್ಲಿ ಪದಬಂಧ ಪುಸ್ತಕ ಪ್ರಕಟಗೊಂಡ ೮೮ ವಷ೯ಗಳ ನಂತರ ಕನ್ನಡ ಭಾಷೆಯಲ್ಲಿ ಪದಬಂಧ ಪುಸ್ತಕ ಪ್ರಕಟಗೊಂಡಿರುವುದು ವಿಶೇಷವಾಗಿದೆ. ಅ.ನಾ.ಪ್ರಹ್ಲಾದ ರಾವ್ ಅವರು ಕನ್ನಡದಲ್ಲಿ ೩೫,೦೦೦ ಪದಬಂಧಗಳನ್ನು ರಚಿಸಿದ್ದಾರೆ. ಇದಕ್ಕಾಗಿ ಈವರೆವಿಗೂ ಅ.ನಾ.ಪ್ರಹ್ಲಾದ ರಾವ್ ಅವರು ಎಂಟು ಲಕ್ಷ ಸುಳುಹುಗಳನ್ನು ನೀಡಿದ್ದಾರೆ.
 
==ಜಿ.ವೆಂಕಟಸುಬ್ಬಯ್ಯನವರ ಮುನ್ನುಡಿ==
ಕನ್ನಡದಲ್ಲಿ 35,000 ಪದಬಂಧಗಳನ್ನು ರಚಿಸುವ ಮೂಲಕ ಭಾರತದಲ್ಲಿಯೇ ಅತ್ಯಂತ ಹೆಚ್ಚು ಪದಬಂಧ ರಚಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಅ.ನಾ.ಪ್ರಹ್ಲಾದರಾವ್ ಕನ್ನಡ ಪತ್ರಿಕೆಗಳಿಗೆ ಕಳೆದ 27 ವರ್ಷಗಳಿಂದ ನಿರಂತರವಾಗಿ ಪದಬಂಧಗಳನ್ನು ಬರೆದುಕೊಡುತ್ತಿದ್ದಾರೆ. ಇವರು ರಚಿಸಿದ ಪದಬಂಧಗಳಿಗಾಗಿ ಸುಮಾರು 12 ಲಕ್ಷ ಸುಳುಹುಗಳನ್ನು ಬರೆದ ಹೆಗ್ಗಳಿಕೆ ಇವರದಾಗಿದೆ. ಕನ್ನಡದ ಸುಮಾರು 30ಕ್ಕೂ ಹೆಚ್ಚು ನಿಯತಕಾಲಿಕೆಗಳು ಹಾಗೂ ಹಲವಾರು ದಿನ ಪತ್ರಿಕೆಗಳಲ್ಲಿ ಪದಬಂಧಗಳು ಪ್ರಕಟಗೊಳ್ಳುತ್ತಿವೆ. ಕನ್ನಡಡಲ್ಲಿ ಮೊದಲ ಬಾರಿಗೆ ಪದಬಂಧ ಪುಸ್ತಕಗಳನ್ನು ಪ್ರಕಟಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು ಒಂದೇ ಬಾರಿಗೆ 2008ರಲ್ಲಿ ಐದು `ಕನ್ನಡ ಪದಬಂಧ` ಪುಸ್ತಕಗಳನ್ನು ಹೊರ ತಂದಿದ್ದಾರೆ. ಪದಬಂಧ ಪುಸ್ತಕಗಳಿಗೆ ಹಿರಿಯ ಲೇಖಕರಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಮುನ್ನುಡಿ ಬರೆದಿದ್ದಾರೆ. ಪುನಃ 2013ರಲ್ಲಿ ತಲಾ 200 ಪದಬಂಧಗಳನ್ನು ಹೊಂದಿದ `ಪದಲೋಕ` ಹಾಗೂ `ಪದಕ್ರೀಡೆ` ಮತ್ತೆರಡು ಪದಬಂಧ ಪುಸ್ತಕಗಳನ್ನು ಹೊತಂದರು.
 
ಟಿ.ವೆಂಕಟೇಶ್ ಅವರು ಪ್ರಕಟಿಸಲು ಆರಂಭಿಸಿದ `ಅಭಿಮಾನಿ` ಪತ್ರಿಕೆಗೆ 1984ರಲ್ಲಿ ಪದಬಂಧ ಬರೆಯಲು ಆರಂಭಿಸಿದ ಅ.ನಾ.ಪ್ರಹ್ಲಾದರಾವ್ ಜೊತೆ ಜೊತೆಯಲ್ಲಿ ಅವರದೇ ಪ್ರಕಟಣೆಯಾದ `ಅರಗಿಣಿ` ಪತ್ರಿಕೆಗೆ ಸಿನಿಮಾ ಪದಬಂಧ ಬರೆಯತೊಡಗಿದರು. 30 ವರ್ಷಗಳ ನಂತರವೂ `ಅರಗಿಣಿ` ಪತ್ರಿಕೆಗಾಗಿ ಸಿನಿಮಾ ವಿಷಯ ಆಧರಿಸಿದ `ಗಿಣಿಬಂಧ` ರಚಿಸಿಕೊಂಡು ಬಂದಿರುವುದು ಹೆಗ್ಗಳಿಕೆಯಾಗಿದೆ. 1984ರಲ್ಲಿ ಆರಂಭಗೊಂಡ `ಮಂಗಳ` ವಾರಪತ್ರಿಕೆಗಾಗಿ ಮಂಗಳ ಪದಬಂಧ ಬರೆಯತೊಡಗಿದ ಅ.ನಾ.ಪ್ರ ಅವರು ಪದಬಂಧ ಮಾತ್ರವಲ್ಲದೆ ಚಲನಚಿತ್ರ ಕುರಿತ ಚಿತ್ರಾನ್ವೇಷಣೆ ಅಂಕಣವನ್ನು 30 ವರ್ಷಗಳ ನಂತರವೂ ಬರೆಯುತ್ತಿದ್ದಾರೆ. ಕನ್ನಡದ ಕಾದಂಬರಿಗಳನ್ನು ಆಧರಿಸಿದ ಸಾಹಿತ್ಯ ಪದಬಂಧಗಳನ್ನು ಮಂಗಳ ಪತ್ರಿಕೆಗಾಗಿ ಬರೆದುಕೊಟ್ಟಿದ್ದಾರೆ. ಇವರದೆ ಪ್ರಕಟಣೆಯಾದ `ಬಾಲಮಂಗಳ` ಪಾಕ್ಷಿಕಕ್ಕಾಗಿ ಸುಮಾರು 15 ವರ್ಷ ಕಾಲ ಪದಬಂಧ ಹಾಗೂ ಪದಾನ್ವೇಷಣೆ ಅಂಕಣಗಳನ್ನು ಬರೆದಿದ್ದಾರೆ. `ಬಾಲಮಂಗಳ` ಪತ್ರಿಕೆಗಾಗಿ ಕನ್ನಡ ಸುಳುಹುಗಳನ್ನು ಆಧರಿಸಿ ಸರಳ ಇಂಗ್ಲಿಷ್ ಪದಗಳನ್ನು ತುಂಬುವ `ಸಮ್ಮಿಶ್ರಬಂಧ` ರಚಿಸಿದ್ದಾರೆ. ರಾಜನ್ಸ್ ಸಂಸ್ಥೆ ಹೊರ ತರುತ್ತಿರುವ `ಪ್ರಿಯಾಂಕ` ಹಾಗೂ `ಚಿತ್ರ` ಸಿನಿಮಾ ಪತ್ರಿಕೆಗೆ ಆ ಎರಡೂ ಮಾಸಿಕಗಳು ಆರಂಭಗೊಂಡ ಮೊದಲ ಸಂಚಿಕೆಯಿಂದಲೂ ಪದಬಂಧಗಳನ್ನು ರಚಿಸುತ್ತಿದ್ದಾರೆ.
 
==ವಿಜಯಕರ್ನಾಟಕ==
ವಿಜಯಕರ್ನಾಟಕ ಪತ್ರಿಕೆಯಲ್ಲಿ ಆ ಪತ್ರಿಕೆ ಆರಂಭಗೊಂಡ 1998ರಿಂದ ಇಂದಿನವರೆಗೂ ಸತತವಾಗಿ ಇವರ ಪದಬಂಧ ಅಂಕಣ ಮೂಡಿಬರುತ್ತಿದೆ. ಸಂಯುಕ್ತಕರ್ನಾಟಕ ಪತ್ರಿಕೆಯಲ್ಲಿ 1985ರಿಂದ 2004ರವರೆಗೆ 18 ವರ್ಷಗಳ ಕಾಲ ಭಾನುವಾರದ ಪುರವಣಿಯಲ್ಲಿ ಸಂಯುಕ್ತಬಂಧ ಪ್ರಕಟಗೊಂಡಿದೆ. ಸಂಯುಕ್ತಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ನಿತ್ಯ 2006ರಿಂದ ನಿರಂತರವಾಗಿ ಪದಬಂಧ ಪ್ರಕಟಗೊಳ್ಳುತ್ತಿದೆ. ಪ್ರಜಾವಾಣಿ ಪತ್ರಿಕೆಯಲ್ಲಿ 1992ರಿಂದ 2008ರವರೆಗೆ ಸುಮಾರು 16 ವರ್ಷಗಳ ಕಾಲ ಶುಕ್ರವಾರದ ಸಿನಿಮಾ ಪುರವಣಿಯಲ್ಲಿ ಚಿತ್ರಬಂಧ ಪ್ರಕಟಗೊಂಡಿದೆ. ಕನ್ನಡದಲ್ಲಿ ಪ್ರತಿ ನಿತ್ಯ ಪದಬಂಧ ಆರಂಭಿಸಿದ ಕೀರ್ತಿ ಕನ್ನಡಪ್ರಭ ಪತ್ರಿಕೆಯದು. ವೈ.ಎನ್.ಕೆ ಅವರು ಈ ಪತ್ರಿಕೆಯ ಸಂಪಾದಕರಾಗಿದ್ದ ಸಮಯದಲ್ಲಿ 2001ರಲ್ಲಿ ಅ.ನಾ.ಪ್ರ ಕನ್ನಡಪ್ರಭ ಪತ್ರಿಕೆಗೆ ನಿತ್ಯ ಪದಪ್ರಭ ಬರೆಯಲು ಆರಂಭಿಸಿದರು. ಐದು ವರ್ಷಗಳ ಕಾಲ ನಿರಂತರವಾಗಿ ಈ ಪತ್ರಿಕೆಗೆ ಪದಬಂಧ ರಚಿಸಿಕೊಟ್ಟರು. ಪುನಃ ವೆಂಕಟನಾರಾಯಣ ಅವರು ಸಂಪಾದಕರಾದ ಸಮಯದಲ್ಲಿ ಕನ್ನಡಪ್ರಭಕ್ಕಾಗಿ 2007ರಲ್ಲಿ ಪದಪ್ರಭ ಮುಂದುವರೆಸಿದರು. ಈಸಂಜೆ, ಮಂಗಳ, ಅರಗಿಣಿ, ಕಂದಾಯವಾರ್ತೆ, ಪ್ರ್ರಿಯಾಂಕ, ಚಿತ್ರ, ಬಾಲಮಂಗಳ, ವಿಜಯಚಿತ್ರ, ವನಿತಾ, ತರಂಗ ಮುಂತಾದ ಪತ್ರಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಂಡಿವೆ.
 
ಹಂಪಿ ಕನ್ನಡ ವಿಶ್ವವಿದಾಲಯ ಪ್ರಕಟಿಸುತ್ತಿದ್ದ ಪತ್ರಕರ್ತ ವಾಸುಕಿ ಅವರ ಸಂಪಾದಕತ್ವದಲ್ಲಿ ಹೊರ ಬಂದ `ವಿಜ್ಞಾನಸಂಗಾತಿ` ಮಾಸಪತ್ರಿಕೆಗಾಗಿ 1986ರಿಂದ ಸುಮಾರು 5 ವರ್ಷ ಕಾಲ ವಿಜ್ಞಾನ ಆಧರಿಸಿದ ವಿಜ್ಞಾನಬಂಧ ಹಾಗೂ ವಿಶೇಷ ಪದ ಅನ್ವೇಷಣ ಅಂಕಣಗಳನ್ನು ಬರೆದುಕೊಟ್ಟಿದ್ದಾರೆ. ಪತ್ರಕರ್ತ, ಸಾಹಿತಿ ರವಿಬೆಳಗೆರೆ ಅವರ ಸಂಪಾದಕತ್ವದಲ್ಲಿ 1992ರಲ್ಲಿ ಪುನರ್ಜೀವ ಪಡೆದ `ಕರ್ಮವೀರ` ಪತ್ರಿಕೆಗಾಗಿ ಪ್ರಥಮ ಸಂಚಿಕೆಯಿಂದ ಸುಮಾರು 15 ವರ್ಷಗಳ ಕಾಲ `ಪದಸಂಪದ` ಎಂಬ ಹೊಸ ನಾಮಧೇಯವನ್ನು ತಾವೇ ನೀಡಿ ಪದಬಂಧ ರಚಿಸಿಕೊಟ್ಟರು. ಹಾಗೂ ಅಷ್ಟೇ ಕಾಲ `ಕರ್ಮವೀರ` ಪತ್ರಿಕೆಗಾಗಿ ಸಿನಿಮಾ ಆಧರಿಸಿದ `ಚಿತ್ರಜ್ಞಾನ` ಬಂಧವನ್ನು ಬರೆದರು. ಮದರಾಸ್ ನಗರದಿಂದ ಹೊರ ಬರುತ್ತಿದ್ದ, ನಾಗಿರೆಡ್ಡಿ-ಚಕ್ರಪಾಣಿ ಅವರ ಪ್ರತಿಷ್ಠಿತ ಪ್ರಕಟಣ ಸಂಸ್ಥೆ `ಡಾಲ್ಫಿನ್ ಪಬ್ಲಿಕೇಷನ್ಸ್` ಸಂಸ್ಥೆ ಪ್ರಕಟಿಸುತ್ತಿದ್ದ `ಚಂದಮಾಮ` ಪತ್ರಿಕೆಯ ಸೋದರ ಪತ್ರಿಕೆಗಳಾದ `ವನಿತಾ` ಹಾಗು `ವಿಜಯಚಿತ್ರ` ಮಾಸ ಪತ್ರಿಕೆಗಳಿಗೆ ಸುಮಾರು 8 ವರ್ಷ ಪದಬಂಧಗಳನ್ನು ಬರೆದುಕೊಟ್ಟ ವಿಶೇಷ ಅನಾಪ್ರ ಅವರದಾಗಿದೆ.
 
==ಕ್ರೀಡೆ ವಿಜ್ಞಾನ ಅಪರಾಧ ಸಿನಿಮಾ ಪದಬಂಧ==
ಮಲ್ಲಿಕಾರ್ಜುನಯ್ಯ ಅವರು ಹೊರ ತರುತ್ತಿದ್ದ `ಪೊಲೀಸ್ ನ್ಯೂಸ್` ವಾರಪತ್ರಿಕೆಗಾಗಿ 8 ವರ್ಷ ಅಪರಾಧ ವಿಷಯಗಳನ್ನು ಆಧರಿಸಿದ ಪೊಲೀಸ್ ಬಂಧ ರಚಿಸಿದ್ದಾರೆ. ಅದೇ ರೀತಿ ಟಿ.ವೆಂಕಟೇಶ್ ಅವರಿಗಾಗಿ ರವಿಬೆಳಗೆರೆ ಸಂಪಾದಿಸಿದ `ಪೊಲೀಸ್ ಫೈಲ್` ವಾರಪತ್ರಿಕೆಗಾಗಿ ಸುಮಾರು 2 ವರ್ಷ ಕಾಲ ಅಪರಾಧ ಬಂಧಗಳನ್ನು ರಚಿಸಿದರು. ಅಭಿಮಾನಿ ಸಂಸ್ಥೆಗಾಗಿ ಗಣೇಶ್ ಕಾಸರಗೋಡು ಸಂಪಾದಿಸುತ್ತದ್ದ `ಸಂಚು` ಅಪರಾಧ ಪತ್ರಿಕೆ ಹಾಗೂ `ತಾಯಿ` ಮಹಿಳಾ ಪತ್ರಿಕೆ ಮತ್ತು `ಕ್ರೀಡಾಭಿಮಾನಿ` ಕ್ರೀಡಾ ಪತ್ರಿಕೆಗಳಿಗಾಗಿ ಪದಬಂಧಗಳನ್ನು ಬರೆದಿದ್ದಾರೆ. ಬಾಲಕೃಷ್ಣ ಕಾಕತ್ಕರ್ ಹೊರ ತಂದ `ರಂಗವಲ್ಲಿ` ಸಿನಿಮಾ ಪತ್ರಿಕೆ, ವಿ.ಎನ್.ಸುಬ್ಬರಾವ್ ಹಾಗೂ ವಿಜಯಾ ಹೊರ ತಂದ `ನಕ್ಷತ್ರಲೋಕ` ಸಿನಿಮಾ ಪತ್ರಿಕೆಗಳಿಗಾಗಿ ಸಿನಿಮಾ ಪದಬಂಧಗಳು, ಕೆ.ರಾಜರಾವ್ ಸಂಪಾದಕತ್ವದಲ್ಲಿ ಪ್ರಕಟಗೊಂಡ `ಹೋಟೆಲ್ ಪತ್ರಿಕೆ`ಗಾಗಿ ತಿಂಡಿ-ತಿನಿಸು ಆಧರಿಸಿದ ಪದಬಂಧಗಳನ್ನು ಅ.ನಾ.ಪ್ರ ರಚಿಸಿದ್ದಾರೆ. `ಚೆಲುವೆ`, `ರಾಜಧಾನಿ` ಮುಂತಾದ ಪತ್ರಿಕೆಗಳಿಗೂ ಪದಬಂಧ ರಚಿಸಿದ್ದಾರೆ. ಇಸ್ಕಾನ್ ಸಂಸ್ಥೆ ಹೊರತರುತ್ತಿರುವ ಮಾಸ ಪತ್ರಿಕೆಗಾಗಿ ಕೃಷ್ಣಬಂಧ ರಚಿಸಿದ್ದಾರೆ. ಶಾ.ಅಶೋಕಬಾಬು ನಡೆಸುತ್ತಿದ್ದ `ಕರ್ನಾಟಕ ನ್ಯೂಸ್‍ನೆಟ್` ಸುದ್ದಿ ಸಂಸ್ಥೆಗಾಗಿ ಹಲವು ವರ್ಷ ಪ್ರತಿ ನಿತ್ಯ ಪದಬಂಧ ರಚಿಸಿಕೊಡುತ್ತಿದ್ದು, ಈ ಪದಬಂಧಗಳು ನಾಡಿನ ಹತ್ತಾರು ಜಿಲ್ಲಾ ಪತ್ರಿಕೆಗಳಲ್ಲಿ ಪ್ರತಿ ನಿತ್ಯ ಪ್ರಕಟಗಂಡಿವೆ. ಇದೇ ಸಂಸ್ಥೆ ಪದಬಂಧಗಳಿಗಾಗಿಯೇ ಮೀಸಲಿರಿಸಿ ಹೊರ ತಂದ `ಶ್ರುತಿ` ಮಾಸ ಪತ್ರಿಕೆಗಾಗಿ ಪ್ರತಿ ಸಂಚಿಕೆಗೂ 50ಕ್ಕಿಂತಲೂ ಹೆಚ್ಚು ಬಂಧಗಳನ್ನು ಬರೆದುಕೊಟ್ಟಿದ್ದಾರೆ.
 
ಅಭಿಮಾನಿ ಪ್ರಕಾಶನ ಸಂಸ್ಥೆ `ಅಭಿಮಾನ` ದಿನ ಪತ್ರಿಕೆ ಆರಂಭಿಸಿದಾಗ ಆ ಪತ್ರಿಕೆಗಾಗಿ ನಿತ್ಯ ಪದಬಂದಗಳನ್ನು ರಚಿಸಿಕೊಟ್ಟರು. ಈ ಸಂಸ್ಥೆ 1989ರಲ್ಲಿ ಆರಂಭಿಸಿದ `ಈಸಂಜೆ` ಸಂಜೆ ದಿನ ಪತ್ರಿಕೆಗಾಗಿ ಸುಮಾರು 15 ವರ್ಷ ಕಾಲ ಪ್ರತಿ ನಿತ್ಯ ನಿತ್ಯಬಂಧ ಸಿದ್ಧಪಡಿಸದರು. ಅಲ್ಲದೆ, ಈಸಂಜೆ ಪತ್ರಿಕೆಗಾಗಿ ಪ್ರತಿ ಶುಕ್ರವಾರ ಚಲನಚಿತ್ರ ಆಧರಿಸಿದ ಪದಬಂಧಗಳನ್ನು ರಚಿಸಿಕೊಟ್ಟರು. ನವದೆಹಲಿಯಿಂದ ಕೆ.ಆರ್.ರೇಣು ಅವರು ಹೊರ ತರುತ್ತಿರುವ `ದೆಹಲಿ ಕನ್ನಡಿಗ` ಪತ್ರಿಕೆಗಾಗಿ ಹಾಗೂ ಮುಂಬೈನಿಂದ ಮುಂಜಾನೆ ಸತ್ಯ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ `ಉದಯರಾಗ` ದಿನ ಪತ್ರಿಕೆಗಳಿಗೆ ಹಲವು ವರ್ಷಗಳ ಕಾಲ ನಿತ್ಯ ಪದಬಂಧ ಬರೆದುಕೊಟ್ಟರು. ಬೆಳಗಾವಿಯ `ಕನ್ನಡಮ್ಮ` ಬೆಂಗಳೂರಿನಿಂದ ಹೊರ ಬರುತ್ತಿದ್ದ `ಜನವಾಹಿನಿ` ಪತ್ರಿಕೆಗಳಿಗೆ ವಾರಕ್ಕೊಮ್ಮೆ ಪದಬಂಧ ರಚಿಸಿದರು. ಕನಾಟಕ ಸರ್ಕಾರದ ಮಾಸಿಕ ಪ್ರಕಟಣೆಗಳಾದ `ಜನಪದ` `ಯುವಕರ್ನಾಟಕ` ಹಾಗೂ `ಕಂದಾಯವಾರ್ತೆ` ಪತ್ರಿಕೆಗಳಿಗೆ ಕೆಲವಾರು ವರ್ಷ ಇವರು ಪದಬಂಧ ರಚಿಸಿದ್ದಾರೆ. ಮಣಿಪಾಲದಿಂದ ಹೊರ ಬರುತ್ತಿರುವ ಜನಪ್ರಿಯ ಸಾಪ್ತಾಹಿಕ `ತರಂಗ` ಪತ್ರಿಕೆಯ ಮಕ್ಕಳ ವಿಭಾಗಕ್ಕಾಗಿ ಪದಬಂಧ ರಚಿಸಿಕೊಟ್ಟಿದ್ದಾರೆ.
 
==ಪದಬಂಧ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳು==
ಅ.ನಾ.ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳು: ವಿಜಯ ಕರ್ನಾಟಕ (ಪ್ರತಿನಿತ್ಯ), ಸಂಯುಕ್ತ ಕರ್ನಾಟಕ (ಪ್ರತಿ ನಿತ್ಯ), ಮಂಗಳ (ಪ್ರತಿವಾರ), ಅರಗಿಣಿ (ಚಲನಚಿತ್ರ), ಪ್ರಿಯಾಂಕ (ಮಾಸಿಕ), ಚಿತ್ರ (ಚಲನಚಿತ್ರ ಮಾಸಿಕ),.
 
==ಪದಬಂಧ ಪ್ರಕಟಗೊಂಡ ಪತ್ರಿಕೆಗಳು==
ಅ.ನಾ.ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಂಡ ಪತ್ರಿಕೆಗಳು: ಕನ್ನಡಪ್ರಭ (ಪ್ರತಿನಿತ್ಯ), ಈಸಂಜೆ (ಪ್ರತಿನಿತ್ಯ), ಪ್ರಜಾವಾಣಿ (ಚಲನಚಿತ್ರ-ಪ್ರತಿವಾರ), ಬಾಲಮಂಗಳ (ಪಾಕ್ಷಿಕ), ದೆಹಲಿವಾರ್ತೆ (ನವದೆಹಲಿ-ಪ್ರತಿನಿತ್ಯ), ಉದಯರಾಗ (ಮುಂಬೈ-ಪ್ರತಿನಿತ್ಯ), ರಂಗವಲ್ಲಿ (ವಾಪ), ಚೆಲುವೆ (ವಾರ ಪತ್ರಿಕೆÀ), ಹೋಟೆಲ್ ಪತ್ರಿಕೆ (ಪಾಕ್ಷಿಕ ತಿಂಡಿ ತಿನಿಸು), ರಾಜಕೀಯಸುದ್ದಿ (ವಾರ ಪತ್ರಿಕೆÀ), ಮಾರ್ಚ್ ಆಫ್ ಕರ್ನಾಟಕ (ಮಾಸಿಕ-ವಾರ್ತಾ ಇಲಾಖೆ), ಜನಪದ (ಮಾಸಿಕ-ವಾರ್ತಾಇಲಾಖೆ), ಯುವ ಕರ್ನಾಟಕ (ಮಾಸಿಕ-ಯುವಜನಸೇವಾ ಇಲಾಖೆ), ವಿಜ್ಞಾನ ಸಂಗಾತಿ (ಮಾಸಿಕ-ಕನ್ನಡ ವಿ.ವಿ, ಹಂಪೆ), ವಿಜಯಚಿತ್ರ (ಮಾಸಿಕ-ಚಲನಚಿತ್ರ, ಚಂದಮಾಮ ಪ್ರಕಟಣೆ), ವನಿತಾ (ಮಾಸಿಕ-ಚಂದಮಾಮ ಪ್ರಕಟಣೆ), ಪೆÇಲೀಸ್ ನ್ಯೂಸ್ (ವಾರ ಪತ್ರಿಕೆ-ಅಪರಾಧ), ಪೆÇಲಿಸ್ ಫೈಲ್ (ವಾರ ಪತ್ರಿಕೆ-ಅಪರಾಧ), ಸಂಚು (ಮಾಸಿಕ-ಅಪರಾಧ), ತಾಯಿ (ಮಾಸಿಕ-ಗೃಹ), ಕ್ರಿಡಾಭಿಮಾನಿ (ಮಾಸಿಕ-ಕ್ರೀಡೆ), ಅಭಿಮಾನಿ-(ವಾರ ಪತ್ರಿಕೆ), ಅಭಿಮಾನ (ಪ್ರತಿನಿತ್ಯ), ತರಂಗ (ಮಕ್ಕಳಿಗಾಗಿ), ಕನ್ನಡಮ್ಮ (ವಾರಕ್ಕೊಮ್ಮೆ), ಕೆ.ಎನ್.ಎನ್ ನ್ಯೂಸ್‍ನೆಟ್ ಮೂಲಕ ಹಲವಾರು ಜಿಲ್ಲಾಪತ್ರಿಕೆಗಳು, ಶೃತಿ (ಪದಬಂಧ ಮಾಸಿಕ), ಜನವಾಹಿನಿ (ಪ್ರತಿ ವಾರ), ಕರ್ಮವೀರ (ವಾರ ಪತ್ರಿಕೆÀ), ಈಸಂಜೆ (ಪ್ರತಿ ವಾರ-ಸಿನಿಮಾ), ಕಂದಾಯ ವಾರ್ತೆ (ಕಂದಾಯ ಇಲಾಖೆ ಮಾಸಿಕ), ಸಂಯುಕ್ತ ಕರ್ನಾಟಕ (ಪ್ರತಿ ವಾರ), ಕೃಷ್ಣವೇದಾಂತ ದರ್ಶನ (ಮಾಸಿಕ-ಇಸ್ಕಾನ್), ಇಂಡಿಕ್ರಾಸ್ ಆನ್‍ಲೈನ್ ಪದಬಂಧಗಳು ಮತ್ತು ಒಂಬತ್ತು ಪದಬಂಧ ಪುಸ್ತಕಗಳು.
 
==ಕನ್ನಡದ ಮೊದಲ ಪದಬಂಧ ಪುಸ್ತಕಗಳು==
೨೦೦೮ರ ಫಬ್ರವರಿಯಲ್ಲಿ ಇವರು ವಿವಿಧ ಪತ್ರಿಕೆಗಳಿಗೆ ರಚಿಸಿದ ಪದಬಂಧಗಳನ್ನು ಆಧರಿಸಿದ ೫ ಪದಬಂಧ ಪುಸ್ತಕಗಳು ಬಿಡುಗಡೆಯಾದವು. ಕನ್ನಡ ಭಾಷೆಯಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಪದಬಂಧ ಪುಸ್ತಕಗಳು ಇವಾಗಿವೆ. ಕನ್ನಡ ಭಾಷೆಯ ಮಟ್ಟಿಗೆ ಇದೊಂದು ದಾಖಲೆ. ೫ ಪುಸ್ತಕಗಳಲ್ಲಿ ೨ ಸಾಮಾನ್ಯ, ೧ ಕನ್ನಡ ಸಿನಿಮಾ ಹಾಗೂ ಮತ್ತೊಂದು ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಿದ್ಡಪಡಿಸಿದ ಪದಬಂಧ ಪುಸ್ತಕಗಳಾಗಿವೆ. ಇಂಗ್ಲಿಷ್ ಭಾಷೆಯಲ್ಲಿ ಪದಬಂಧ ಪುಸ್ತಕ ಪ್ರಕಟಗೊಂಡ ೮೮ ವಷ೯ಗಳ ನಂತರ ಕನ್ನಡ ಭಾಷೆಯಲ್ಲಿ ಪದಬಂಧ ಪುಸ್ತಕ ಪ್ರಕಟಗೊಂಡಿರುವುದು ವಿಶೇಷವಾಗಿದೆ.
 
==ಪದಲೋಕ ಮತ್ತು ಪದಕ್ರೀಡೆ==
2013ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಮತ್ತೆರಡು ಪದಬಂಧ ಪುಸ್ತಕಗಳು. ವಿಶ್ವ ಪದಬಂಧ ಶತಮಾನೋತ್ಸವದ ಅಂಗವಾಗಿ ಅ.ನಾ.ಪ್ರಹ್ಲಾದರಾವ್ ಅವರು ಈ ಎರಡು ಪದಬಂಧ ಪುಸ್ತಕಗಳನ್ನು ಹೊರತಂದರು. ವಸಂತ ಪ್ರಕಾಶನ ಪ್ರಕಾಶನಗೊಳಿಸಿದ ಈ ಪುಸ್ತಕಗಳಲ್ಲಿ ತಲಾ 160 ಪದಬಂಧಗಳನ್ನು ಅಡಕಗೊಳಿಸಲಾಗಿದೆ. ಪತ್ರಿಕೆಗಳ ಬಹುಪಾಲು ಓದುಗರ ನೆಚ್ಚಿನ ಅಂಕಣ `ಪದಬಂಧ`. ಭಾಷಾ ಪ್ರೌಢಿಮೆ, ಮನೋವಿಕಾಸ ಮತ್ತು ಮನೋಲ್ಲಾಸಕ್ಕೆ ಪೂರಕವಾಗುವ `ಪದಬಂಧ`ದ ಇತಿಹಾಸ ಒಂದು ಶತಮಾನದ್ದ್ಲು. ಇಂಗ್ಲೆಂಡಿನ ರಾಜನೊಬ್ಬ ಕಾಲಹರಣಕ್ಕಾಗಿ ಎಡದಿಂದ ಬಲಕ್ಕೆ ಮತ್ತು ಮೇಲಿಂದ ಕೆಳಕ್ಕೆ ಅಕ್ಷರಗಳ ಜೋಡಿಸಿ ಮಾಡಿದ ಪದರಚನೆಯೇ ಪದಬಂಧದ ಉಗಮವಾಗಲು ಕಾರಣ. ಪತ್ರಿಕೆಯಲ್ಲಿ ಪದಬಂಧ ಮೊದಲು ಮೂಡಿದ್ದು 1913ರ ಡಿಸೆಂಬರ್ 21ರ ಸಂಚಿಕೆಯಲ್ಲಿ. ಕ್ರಿಸ್‍ಮಸ್ ವಿಶೇóಷಾಂಕದಲ್ಲಿ ಏನಾದರೊಂದು ವಿಶೇಷ ಆಳವಡಿಸಬೇಕೆಂದು ನಿರ್ಧರಿಸಿದ `ದಿ ನ್ಯೂಯಾರ್ಕ್ ವರ್ಡ್` ಪತ್ರಿಕೆಯ ಸಂಪಾದಕ ಆರ್ಥರ್ ವಿನ್ನೆ ಪದಗಳ ಆಟದೊಂದಿಗೆ ಓದುಗರ ನೋಟವನ್ನು ಸೆಳೆಯಲು `ವರ್ಡ್‍ಕ್ರಾಸ್` ಎಂಬ ಅಂಕಣವನ್ನು ಸೃಷ್ಟಿಸಿದ. ನಂತರ, ಆ ಆಂಕಣ ಎಷ್ಟು ಜನಪ್ರಿಯವಾಯಿತೆಂದರೆ ಇತರೆ ಪತ್ರಿಕೆಗಳೂ ಇಂತಹುದೇ ಅಂಕಣವನ್ನು ತಮ್ಮ ಪುರವಣಿಗಳಲ್ಲಿ ಪ್ರಕಟಿಸಲೇ ಬೇಕಾದ ಅನಿವಾರ್ಯತೆಯುಂಟಾಯಿತು. ಅ.ನಾ.ಪ್ರಹ್ಲಾದರಾವ್ ಅವರ ಪದಬಂಧಗಳು ಪ್ರತಿ ನಿತ್ಯ `ವಿಜಯಕರ್ನಾಟಕ` ಹಾಗೂ `ಸಂಯುಕ್ತ ಕರ್ನಾಟಕ` ದಿನ ಪತ್ರಿಕೆಗಳಲ್ಲಿ, `ಮಂಗಳ` ಮತ್ತು `ಅರಗಿಣಿ` ವಾರ ಪತ್ರಿಕೆಗಳು, 'ಪ್ರಿಯಾಂಕ` `ಚಿತ್ರ` `ಕಂದಾಯವಾರ್ತೆ` ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ. `ಪ್ರಜಾವಾಣಿ` ಸಿನಿಮಾರಂಜನೆ, `ಕರ್ಮವೀರ`, `ಸಂಯುಕ್ತಕರ್ನಾಟಕ ಸಾಪ್ತಾಹಿಕ, `ಕನ್ನಡಪ್ರಭ` ಸೇರಿದಂತೆ 40ಕ್ಕೂ ಹೆಚ್ಚು ನಿಯತಕಾಲಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಂಡಿವೆ. ಆನ್‍ಲೈನ್‍ನಲ್ಲಿ ಪ್ರತಿ ನಿತ್ಯ ಅನಾವರಣಗೊಳ್ಳುತ್ತಿರುವ `ಇಂಡಿಕ್ರಾಸ್.ಕಾಮ್`ಗಾಗಿಯೂ ಪದಬಂಧಗಳನ್ನು ರಚಿಸಿಕೊಡುತ್ತಿದ್ದಾರೆ.
 
* http://www.youtube.com/watch?v=QV2dYGo9DK0
"https://kn.wikipedia.org/wiki/ಪದಬಂಧ" ಇಂದ ಪಡೆಯಲ್ಪಟ್ಟಿದೆ