ಕಣಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚುNo edit summary |
ಚುNo edit summary |
||
೩ ನೇ ಸಾಲು:
ಬೆಳೆ ಬೆಳೆಯುವ ರೈತರು ಬಂದ ಬೆಳೆಯನ್ನು ಕಾಪಾಡಿಕೊಳ್ಳಲು ಪುರಾತನ ಕಾಲದಿಂದಲೂ ಮಾಡಿಕೊಂಡಿರುವ ಒಂದು ವ್ಯವಸ್ಥೆ. ಅದರಲ್ಲೂ ಮುಖ್ಯವಾಗಿ ಬತ್ತದ ಬೆಳೆಗಾರರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಕನ್ನಡದಲ್ಲಿ ಒಂದು ಸೊಗಸಾದ ಗಾದೆಯೂ ಇದೆ."ಹನಿ ಹನಿ ಕೂಡಿದರೆ ಹಳ್ಳ,; ತೆನೆ ತೆನೆ ಕೂಡಿದರೆ ಬಳ್ಳ. ಬಳ್ಳ ಎಂದರೆ ಧವಸ-ಧಾನ್ಯಗಳನ್ನು ಅಳೆಯುವ ಸಾಧನ. ಹಿಂದೆ ರಾಜ-ಮಹಾರಾಜರು ರೈತರಿಂದ ಧವಸ-ಧಾನ್ಯಗಳನ್ನು ವಸೂಲಿ ಮಾಡಿ ಅವನ್ನೇಲ್ಲ ಸಂಗ್ರಹಿಸಿ ದೊಡ್ಡದೊಂದು ಉಗ್ರಾಣವನ್ನು ಕಟ್ಟಿಸಿ ಅದರೊಳಗೆ ವರ್ಷಗಟ್ಟಲೆ ಶೇಖರಿಸಿ ಇಡುತ್ತಿದ್ದರು. ಊರಿಗೆ ಬರಗಾಲ, ಕ್ಷಾಮ ಬಂದಾಗ ಉಗ್ರಾಣದಲ್ಲಿನ ಧವಸ-ಧಾನ್ಯಗಳನ್ನು ಜನರಿಗೆ ದಾನ ಮಾಡುತ್ತಿದ್ದರು. ಈಗಲೂ ಅಂತಹ ಬೃಹತ್ ಉಗ್ರಾಣ/ಕಣಜವನ್ನು ಹಾವೇರಿ ಜಿಲ್ಲೆಯಲ್ಲಿರುವ ಬಂಕಾಪುರದಲ್ಲಿ ಕಾಣಬಹುದು. ಜನಪದರ ಇಡೀ ಜೀವನವೇ ಕಣಜದಲ್ಲಿ ಅಡಗಿರುತ್ತದೆ ಎಂಬ ಮಾತಿದೆ. ಜನ ಸಾಮಾನ್ಯರು ರಾಜ-ಮಹಾರಾಜರಂತೆ ಉಗ್ರಾಣಗಳನ್ನು ಕಟ್ಟಿಸುವ ಶಕ್ತಿ ಇಲ್ಲದುದರಿಂದ ತಮ ತಮಗೆ ಅನುಕೂಲವಾಗುವ ರೀತಿಯಲ್ಲಿ ಬಿದಿರಿನಿಂದ ಮಾಡಿದ ಗುಡಾಣ/ಕಣಜಗಳನ್ನು ಸಗಣಿಯಿಂದ ತಾರಿಸಿ ಧವಸ-ಧಾನ್ಯಗಳ ಶೇಖರಣೆಗೆ ಬಳಸುತ್ತಾರೆ. ಕೆಲವರು ಮನೆಯೊಳಗೆ ಸಿಮೆಂಟಿನಲ್ಲಿ ಉಗ್ರಾಣ/ಕಣಜವನ್ನು ಕಟ್ಟಿಸಿದರೆ, ಹಿರಿಯರು ಬೃಹತ್ ಮಡಕೆಯಲ್ಲಿ ಕಣಜವನ್ನು ತಯಾರಿಸಿ ಅದರಲ್ಲಿ ಧವಸ-ಧಾನ್ಯಗಳ ಶೇಖರಿಸಿ ಇಡುತ್ತಿದ್ದರು. ಕಣಜಗಳನ್ನು ಹೊರಗಿನಿಂದ ನೋಡಿದರೆ ಪುಟ್ಟ ಗುಡಿಸಿಲಿನಂತೆ ಗೋಚರಿಸುತ್ತದೆ. ಕಣಜಕ್ಕೆ ಮಳೆ, ಗಾಳಿ ,ಬಿಸಿಲು ಬೀಳದಂತೆ ಜತನ ಮಾಡುತ್ತಿದ್ದರು. ಸಾಮಾನ್ಯವಾಗಿ ಮನೆಯೊಳಗಿನ ಕಡೆಯ ಕತ್ತಲೆ ಕೋಣೆಯೊಳಗೆ, ಇದನ್ನು ಇಡುತ್ತಿದ್ದರು. ಮನೆಯ ಹಿರಿಯರಿಗೆ ಮಾತ್ರ ಕಣಜದ ಕೋಣೆಯೊಳಗೆ ಪ್ರವೇಶ ಇರುತ್ತಿತ್ತು.
[[Image:_ _ _ Kanaja 2.JPG|thumb| ಕಣಜ]]
|