|death-date= {{death date and age|1950|4|14|1879|12|30|df=y}}
|death-place= ಶ್ರೀ ರಮಣಾಶ್ರಮ, ತಿರುವಣ್ಣಾಮಲೆ
|philosophy= ಆತ್ಮ ವಿಚಾರ
|quote= ಮನಸ್ಸಿನಲ್ಲಿ ಉದ್ಭವಿಸುವ ಆಲೋಚನೆಗಳಲ್ಲೆಲ್ಲ 'ನಾನು' ಎಂಬುದು ಪ್ರಪ್ರಥಮವಾದುದು
|footnotes=
}}
'''ಶ್ರೀ ರಮಣ ಮಹರ್ಷಿ''' - (ಡಿಸೆಂಬರ್ ೩೦ ೧೮೭೯ - ಏಪ್ರಿಲ್ ೧೪ ೧೯೫೦) ಭಾರತದ ಹೆಸರಾಂತ ಆಧ್ಯಾತ್ಮ ಗುರುಗಳಲ್ಲೊಬ್ಬರು. ಅವರು ಆತ್ಮ ಜ್ಙಾನಪ್ರಾಪ್ತಿಗೆ 'ನಾನು ಯಾರು' ಎಂಬ ರೂಪದ ಆತ್ಮವಿಚಾರವೇ ಮುಖ್ಯ ಸಾಧನವೆಂದು ಬೋಧಿಸಿದರು. ಇದನ್ನೇ ಮುಂದೆ ವಿಸ್ತರಿಸಿ, ಗುರುವಿಗೆ ಅಥವಾ ಇಷ್ಟ ದೇವತೆಗೆ ಮಾಡಿದ ಶರಣಾಗತಿಯೂ ಸಾಧನವಾಗಬಹುದೆಂದರು. ಹಾಗಿದ್ದರೂ, ಅವರು ಇತರ ವಿಧಾನಗಳನ್ನು ಅನುಸರಿಸುತ್ತಿದ್ದ ಸಾಧಕರಿಗೂ ಕೂಡ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತಿದ್ದರು.