ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಅರ್ಥಾಪತ್ತಿ: ಮುಂದುವರೆಸಿದೆ-
೪೨ ನೇ ಸಾಲು:
:'''ಪ್ರಮಾಣ''' : ಮೀಮಾಂಸಕರು ಹೊಸದಾಗಿ ಸೇರಿಸಿದ ಪ್ರಮಾಣ . ಕೇಳಿದ ಸಂಗತಿಯಲ್ಲಿ ವಿರೋಧವನ್ನು ಪರಿಹರಿಸಿಕೊಳ್ಳಲು ಅರ್ಥಾಂತರವನ್ನು ಕಲ್ಪಿಸಿಕೊಳ್ಳುವುದು - '''ಇದು ಅರ್ಥಾಪತ್ತಿ.''' ಉದಾಹರಣೆ; 'ದೇವದತ್ತನು ಹಗಲಿನಲ್ಲಿ ಊಟಮಾಡುವುದಿಲ್ಲ, ಆದರೆ ದಪ್ಪಗಿದ್ದಾನೆ'; -'ಹಾಗಿದ್ದರೆ ರಾತ್ರಿ ಊಟಮಾಡುತ್ತಾನೆ', ಎಂದು ಕಲ್ಪಿಸಿಕೊಳ್ಳುವುದು. (ಕಾರಣ -ಇಲ್ಲದಿದ್ದರೆ ತೆಳ್ಳಗಿರಬೇಕಾಗಿತ್ತು). ಇದರಲ್ಲಿ, 'ದೃಷ್ಟ' ಕಂಡಿದ್ದು; 'ಶಬ್ದ ' (ಮಾತು ) , ಎಂದು ಎರಡು ವಿಧ. ನ್ಯಾಯದಲ್ಲಿ ಇದನ್ನು ಅನುಮಾನ ಪ್ರಮಾಣದಲ್ಲಿ ಸೇರಿಸುತ್ತಾರೆ. ಅರ್ಥಾಪತ್ತಿ ಪ್ರಮಾಣವನ್ನು ಮರಣಾನಂತರ ಆತ್ಮವಿರುತ್ತದೆ, ಎಂಬುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಕರ್ಮಕ್ಕೆ ಫಲವಿರುವುರಿಂದ - ಇಲ್ಲಿ ಭೋಗಿಸದ ಕರ್ಮ ಫಲವನ್ನು ಭೋಗಿಸಲು ಮರಣಾನಂತರ ಆತ್ಮವಿರುತ್ತದೆ -ಇರಬೇಕು.
:'''ಅನುಪಲಬ್ಧಿ :''' ಅಭಾವ , ಇಲ್ಲದ್ದನ್ನು ತಿಳಿಯಲು ಪ್ರಮಾಣ. ಉದಾ: ನೆಲದ ಮೇಲೆ ಗಡಿಗೆ ಇಲ್ಲ. ಪ್ರತ್ಯಕ್ಷ ವಸ್ತು ಇಲ್ಲ. ಅಭಾವವನ್ನು ಶೂನ್ಯವೆಂದು ಹೇಳಲಾಗದು. ಆದ್ದರಿಂದ ಅಭಾವವನ್ನು ತಿಳಿಯಲೂ ಪ್ರಮಾಣ ಬೇಕು.
== ಸ್ವತಃ ಪ್ರಾಮಾಣ್ಯವಾದ ==
:ಪ್ರಮಾಣಗಳಿಂದ ದೊರೆತ ಜ್ಞಾನದ ಸತ್ಯತೆಯನ್ನು ತೀರ್ಮಾನಿಸುವುದು, ಹೇಗೆಂಬುದು ಜ್ಞಾನ ಮೀಮಾಂಸೆಯ ಸಮಸ್ಯೆ . ಇಂದ್ರಿಯಗಳು ಉಪಕರಣಗಳು ದೋಷರಹಿತವಾಗಿದ್ದರೆ ಜ್ಞಾನ ಯತಾರ್ಥ. ಉದಾ : ಕಣ್ಣು -ಬೆಳಕನ್ನೂ , ಕೆಂಪು ಲೇಖನಿಯನ್ನೂ ಸರಿಯಾಗಿ ಗುರುತಿಸುವುದು. ಅಂದರೆ ಜ್ಞಾನವು ಹುಟ್ಟಿನಲ್ಲಿಯೂ (ಉತ್ಪತ್ತಿಯಲ್ಲಿಯೂ) ('''ಉತ್ಪತ್ತೌ'''), ಜ್ಞಪ್ತಿಯಲ್ಲಿಯೂ, ಪ್ರಾಮಾಣಿಕವಾಗಿರುತ್ತದೆ.
:೧. ಜ್ಞಾನದ ಪ್ರಾಮಾಣಿಕತೆಯು, ಬಾಹ್ಯ ವಸ್ತುಗಳಿಂದ ಉಂಟಾಗುವುದಿಲ್ಲ. ಆದರೆ ಅದು ಜ್ಞಾನಗಳನ್ನು ಉಂಟುಮಾಡುವ ವಸ್ತುಗಳ ಜೊತೆಗೇ ಹುಟ್ಟುತ್ತದೆ. ('''ಪ್ರಮಾಣಂ ಸ್ವತಃ ಉತ್ಪದ್ಯತೇ''')
Line ೫೩ ⟶ ೫೪:
:ಎರಡು ಭಿನ್ನವಾದ ಜ್ಞಾನಗಳ ಬೇಧವನ್ನು ತಿಳಿಯುವುದರಿಂದ , -ತಿಳಿಯಲಾರದ್ದರಿಂದ ತಪ್ಪು ಜ್ಞಾನವಾಗುತ್ತದೆ. ಇದು ಭ್ರಮೆ _ (ಉದಾ: ಚಿಪ್ಪು - ಬೆಳ್ಳಿ) ಇದಕ್ಕೆ '''ಆಖ್ಯಾತ ವಾದ'''ವೆಂದು ಹೆಸರು .
:'''ವಿಪರೀತ ಖ್ಯಾತಿ ವಾದ''' :-
:ಬೆಳ್ಳಿಯ ಜ್ಞಾನ - ಕಪ್ಪೆ ಚಿಪ್ಪಿನಲ್ಲಿ ಅದರ ಆರೋಪ. -ಇದರಿಂದ ಭ್ರಮೆ . ಇದು ವಿಪರೀತ ಖ್ಯಾತಿವದ -ಇದು ಕುಮಾರಿಲ ಭಟ್ಟರ ಮತ.
 
== ಜಗತ್ತು ==
:ಮೀಮಾಂಸ ಜಗತ್ತನ್ನು ನಿತ್ಯವೆಂದು ಹೇಳುತ್ತದೆ.
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ