ಎಲ್.ಆರ್.ಈಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox person | name = ಎಲ್. ಆರ್. ಈಶ್ವರಿ | image = | caption = | image_size = | background ...
( ಯಾವುದೇ ವ್ಯತ್ಯಾಸವಿಲ್ಲ )

೦೯:೩೯, ೩ ಡಿಸೆಂಬರ್ ೨೦೧೩ ನಂತೆ ಪರಿಷ್ಕರಣೆ

ಎಲ್ ಆರ್ ಈಶ್ವರಿ (ಡಿಸೆಂಬರ್ ೭, ೧೯೩೯) ಚಲನಚಿತ್ರರಂಗದ ಪ್ರಸಿದ್ಧ ಹಿನ್ನೆಲೆಗಾಯಕಿಯರಲ್ಲೊಬ್ಬರು

ಎಲ್. ಆರ್. ಈಶ್ವರಿ
Bornಡಿಸೆಂಬರ್ ೭, ೧೯೩೯
ಚೆನ್ನೈ
Occupationಚಲನಚಿತ್ರ ಹಿನ್ನೆಲೆ ಗಾಯಕಿ
Years active೧೯೫೦ - ಪ್ರಸಕ್ತ

ಜೀವನ

ಎಲ್ ಆರ್. ಈಶ್ವರಿ ಅವರು ಚೆನ್ನೈನ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಡಿಸೆಂಬರ್ ೭, ೧೯೩೯ರಂದು ಜನಿಸಿದರು. ಅವರ ತಂದೆ ಅಂತೋನಿ ದೇವರಾಜ್ ಮತ್ತು ತಾಯಿ ರೆಗೀನಾ ಮೇರಿ ನಿರ್ಮಲ. ಅವರ ವಂಶಸ್ಥರು ಮಧುರೈ ಬಳಿಯ ಪರಮಕುಡಿ ಗ್ರಾಮಕ್ಕೆ ಸೇರಿದವರು. ಎಲ್. ಆರ್. ಈಶ್ವರಿ ಅವರ ಪೂರ್ಣ ಹೆಸರು ಲೋರ್ಡಿ ಮೇರಿ ರಾಜೇಶ್ವರಿ. ಅಂದಿನ ಕಾಲದಲ್ಲಿ ಎಂ. ಎಸ್. ರಾಜೇಶ್ವರಿ ಎಂಬ ಪ್ರಸಿದ್ಧ ಗಾಯಕಿ ಒಬ್ಬರು ಇದ್ದುದರಿಂದ ಇವರು ತಮ್ಮ ಹೆಸರನ್ನು ಎಲ್. ಆರ್. ಈಶ್ವರಿ ಎಂದ ಕಿರಿದು ಮಾಡಿಕೊಂಡರು.

ಎಲ್ ಆರ್. ಈಶ್ವರಿ ಅವರಿಗೆ ಸಾಂಪ್ರದಾಯಿಕ ಸಂಗೀತದ ಶಿಕ್ಷಣ ಪಾಠವೇನೂ ದಕ್ಕಲಿಲ್ಲ. ಅವರ ತಾಯಿ ಚಲನಚಿತ್ರರಂಗದಲ್ಲಿ ವೃಂದ ಗಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ತಾಯಿಯೊಡನೆ ಸ್ಟುಡಿಯೋಗೆ ಹೋಗುತ್ತಿದ್ದ ಈಶ್ವರಿ ತಾವೂ ವೃಂದ ಗಾಯಕಿಯಾದರೂ ಶೀಘ್ರದಲ್ಲಿ ಪ್ರಮುಖ ಗಾಯಕಿಯಾಗಿ ಹೊರಹೊಮ್ಮಿದರು. ಅವರಿಗೆ ಎಂ. ಎಸ್. ವಿಶ್ವನಾಥನ್ ಅವರು ೧೯೫೮ರ ವರ್ಷದಲ್ಲಿ 'ನಲ್ಲ ಎಡತ್ತು ಸಂಬಂಧಂ' ಎಂಬ ತಮಿಳು ಚಿತ್ರದಲ್ಲಿ ಅವಕಾಶ ನೀಡಿದರು. ೧೯೬೧ರಲ್ಲಿ ತೆರೆಕಂಡ ಪ್ರಸಿದ್ಧ ತಮಿಳು ಚಿತ್ರ 'ಪಾಸ ಮಲರ್'ನಲ್ಲಿ ವಿಶ್ವನಾಥನ್ - ರಾಮಮೂರ್ತಿ ಅವರ ನಿರ್ದೇಶನದಲ್ಲಿ ಮೂಡಿಬಂದ 'ವಾರಾಯಿ ಎನ್ ತೋಯಿ ವಾರಾಯೋ' ಎಂಬ ಗೀತೆ ಬಹಳ ಜನಪ್ರಿಯವಾಯಿತು. ಮುಂದೆ ಅವರು ಸುಮಾರು ಎರಡು ದಶಕಗಳ ಕಾಲ ಜನಪ್ರಿಯ ಗಾಯಕಿಯಾಗಿ ಚಿತ್ರರಂಗದಲ್ಲಿ ವಿಜ್ರಂಭಿಸಿದರು.

ವಿಶಿಷ್ಟ ಧ್ವನಿ

ಕೆಲವೊಂದು ಗಾಯಕರ ದ್ವನಿಯಲ್ಲಿ ಒಂದು ರೀತಿಯ ವಿಶಿಷ್ಟ ಹೊಳಹು ಇರುತ್ತದೆ. ಆ ದ್ವನಿ ಅಂತರಾಳವನ್ನು ತಟ್ಟುವ ಮಾದಕತೆಯ ಮೋಡಿ ಅವರ್ಣನೀಯವಾದದ್ದು. ಅಂತಹ ದ್ವನಿ ಹೊಂದಿದವರು ಬಹಳ ಬಹಳ ಅಪರೂಪ. ಅಂತಹ ಅಪರೂಪದ ದ್ವನಿ ಎಲ್. ಆರ್. ಈಶ್ವರಿ.

ಎಲ್. ಆರ್ ಈಶ್ವರಿ ಎಂದರೆ ತಕ್ಷಣ ನೆನಪಿಗೆ ಬರುವ ಹಾಡೆಂದರೆ ‘ಜೋಕೆ, ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು’. ಎಲ್. ಆರ್. ಈಶ್ವರಿ ಅವರ ಉಚ್ಚಾರದಲ್ಲಿ ಈ ಗೀತೆ ನೀಡುವ ಸೊಬಗು ವಿಶಿಷ್ಟವಾದದ್ದು. ಕೌಬಾಯ್ ಕುಳ್ಳ ಎಂಬ ಚಿತ್ರದಲ್ಲಿ ‘ಸಿಂಗಾಪುರಿಂದ ಬಂದೆ ಬಂಗಾರ ಹೊತ್ತು ತಂದೆ, ಸಂಗಾತಿ ನೀ ಇಲ್ಲಿ ಬಾ ಬಾ’ ಎಂಬಲ್ಲಿನ ತುಂಟಾಟದ ಹಾಡು ಆಲಿಸುವ ಕಿವಿಗಳಿಗೆ ಹುಟ್ಟಿಸುವ ಸಂತೋಷ ಅಪ್ರತಿಮವಾದದ್ದು. ‘ಸಿಟ್ಯಾಕೋ ಸಿಡುಕ್ಯಾಕೋ ನೆಲೆ ಜಾಣ’, ಇಟ್ಟಾಯ್ತೋ ನಿನಮೇಲೆ ನನ ಪ್ರಾಣ’, ‘ದೂರದಿಂದ ಬಂದಂತ ಸುಂದರಾಂಗ ಜಾಣ’, ‘ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾವ’, ‘ನಮ್ಮೂರ್ ನಾಗ್ ನಾನೊಬ್ನೆ ಜಾಣ’, ‘ಭಾಮ, ಭಾಮಾ ನೀನರಿಯೆ ಮನದ ಮರ್ಮ’, ‘ರಸಿಕ, ರಸಿಕ, ನೀ ಮೆಲ್ಲನೆ ಓಲಾಡು, ರಸದ ನಿಮಿಷ’, ‘ಸುಮ ಬಾಲೆಯ ಪ್ರೇಮದ ಸಿರಿಯೆ’, ‘ದೂರದಿಂದ ಬಂದವರೇ, ಬಾಗಿಲಲಿ ನಿಂದವರೆ, ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ’, ‘ಅಯ್ಯಯ್ಯಯ್ಯೋ ಹಳ್ಳೀಮುಖ, ಯಾವಾಗ್ ಬಂದೆ ಬೆಂಗಳೂರ್ ಬಕ’, ‘ಆಶಾವಿಲಾಸಿ ಈ ರೂಪರಾಶಿ’, ‘ಮಾಡರ್ನ್ ಲೇಡಿಯ ನೋಡಿ ನೀವು ಕಣ್ ಕಣ್ ಬಿಡಬೇಡಿ’ ಹೀಗೆ ಅವರ ಹಾಡುಗಳು ಒಂದಕ್ಕಿಂತ ಒಂದು ಸಂಗೀತ ಪ್ರಿಯರನ್ನೂ ಬಹಳ ಹಲವು ದಶಕಗಳಿಂದ ಹಿಡಿದಿಟ್ಟಿದೆ. ಅಂತೆಯೇ ದಕ್ಷಿಣ ಭಾರತದ ಪ್ರೇಕ್ಷಕರಿಗೆಲ್ಲ ಮೋಡಿ ಮಾಡಿದ ಮರೋಚರಿತ್ರದ ‘ಭಲೆ ಭಲೇ ಮಗಾಡಿ ಓಯ್’, ತಮಿಳಿನ ಮನ್ಮಥ ಲೀಲೈ ಚಿತ್ರದ ‘ಹಲೋ ಮೈ ಡಿಯರ್ ರಾಂಗ್ ನಂಬರ್’ ಇವೆಲ್ಲ ಹುಟ್ಟಿಸಿದ ಜನಪ್ರೀತಿ ಅಸಾಧಾರಣವಾದದ್ದು. ಅವರ ದ್ವನಿಯಲ್ಲಿ ಮೂಡಿದ ‘ಆದಿ ದೇವ, ಆದಿ ಮೂಲ, ಆದಿ ಬ್ರಹ್ಮ ಜೋ ಜೋ, ಪರಮ ಪುರುಷ ಪರಬ್ರಹ್ಮ ಪುರುಷೋತ್ತಮ ಜೋ ಜೋ’ ಎಂಬ ಭಕ್ತಿಗೀತೆ ಕೂಡಾ ಜನಪ್ರಿಯವಾಗಿದೆ.

ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ದ್ವನಿ ಮೂಡಿಸಿದ ಎಲ್ ಆರ್ ಈಶ್ವರಿ ಹಾಡಿದ ಸಂಖ್ಯೆಗಳಿಗೆ ಲೆಖ್ಖವೇ ಇಲ್ಲ. ಅಷ್ಟೊಂದು ಹಾಡುಗಳು ಅವರ ದ್ವನಿಯಲ್ಲಿ ಮೂಡಿಬಂದಿವೆ. ಚಲನಚಿತ್ರಗಳಲ್ಲಿ ಮಾದಕ, ತುಂಟಾಟದ ಹಾಡುಗಳನ್ನು ಎಷ್ಟು ಹಾಡಿದ್ದಾರೋ ಅದಕ್ಕೆ ಸರಿಸಮವಾಗಿ ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ಶೀಘ್ರಗತಿಯಲ್ಲಿ ಸಾಗುವ ಹಾಡುಗಳಿಗೆ ಅವರದ್ದು ಹೇಳಿ ಮಾಡಿಸಿದಂತಹ ಧ್ವನಿ ಎಂಬ ಅಭಿಪ್ರಾಯ ಚಿತ್ರರಂಗದಲ್ಲಿ ರೂಢಿಯಲ್ಲಿತ್ತು.

ನಿರಂತರ ಹಾಡುಗಾರ್ತಿ

ತನಗೆ ಮಾತು ತಿಳಿಯಿತು ಎಂದು ಅರಿವಿಗೆ ಬಂದಂದಿನಿಂದ ನಾನು ಹಾಡುತ್ತಲೇ ಇರುವೆ ಎನ್ನುತ್ತಾರೆ ಎಲ್. ಆರ್. ಈಶ್ವರಿ. ಅವರ ಬಗ್ಗೆ ಅವರ ತಾತ ಮತ್ತು ಅವರ ತಾಯಿ, ‘ಈಕೆ ಹಾಡಲೆಂದೇ ಹುಟ್ಟಿದ್ದಾಳೆ’ ಎಂದು ಕೇಳಿದ ಮಾತೇ ಆಕೆಗೆ ಅದು ನಿಜ ಎಂಬ ಭಾವ ಹುಟ್ಟಿಸಿ ಅಂತೆಯೇ ಹಾಡುತ್ತಲೇ ಬಂದೆ ಎನ್ನುತ್ತಾರೆ ಅವರು.

‘ನಾನು ಎಲ್ಲಾರ್ ಈಶ್ವರಿ ಎಲ್ಲರ ಈಶ್ವರಿ’ ಎಂದು ಹೇಳುವ ಎಲ್ ಆರ್ ಈಶ್ವರಿ ಸಮಸ್ತ ಸಂಗೀತ ರಸಿಕರಿಗೂ ಇಷ್ಟದವರು.