ನ್ಯಾಯ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಕಾರ್ಯ ಕಾರಣ ಸಿದ್ಧಾಂತ: ಮುಂದುವರೆ ಸಿದೆ
೧೭೭ ನೇ ಸಾಲು:
 
== ಕಾರ್ಯ ಕಾರಣ ಸಿದ್ಧಾಂತ ==
'''ಕಾರ್ಯ ಕಾರಣ ಸಿದ್ಧಾಂತ''' :
:ಅನನ್ಯತಾ ಸಿದ್ಧವಾಗಿರುವ ಕಾರ್ಯಕ್ಕೆ ಪೂರ್ವವಾಗಿ ಇರುವುದು ಕಾರಣ. ಕಾರಣವು ಕಾರ್ಯಕ್ಕಿಂತ ಹಿಂದಿನದು. ಅದು ನಿಯತವಾಗಿರಬೇಕು. ಕೆಲವುಕಡೆ ಇದೆ ;ಕೆಲವು ಕಡೆ ಇಲ್ಲ ಎನ್ನುವಂತಿರಬಾರದು. ಕಾರ್ಯವನ್ನುಂಟುಮಾಡುವಲ್ಲಿ ಅತ್ಯಂತ ಅವಶ್ಯವಾಗಿರಬೇಕು.ಅದು ಇಲ್ಲದಿದ್ದರೆ ಕಾರ್ಯವಿಲ್ಲವಾಗಬೇಕು. ಉದಾಹರಣೆ : ಬಟ್ಟೆಗೆ -ದಾರ. ಇತ್ಯಾದಿ. ಅನ್ಯತಾ ಸಂಬಂಧ ಸಿದ್ಧಿಗಳಿರಬಾರದೆಂಬುದು ಮುಖ್ಯ.
:ಉದಾಹರಣೆ : ಮಣ್ಣನ್ನು ಹೊರಲು ಕತ್ತೆ ಬೇಕು . ಆದ್ದರಿಂದ ಮಡಕೆಗೆ ಕತ್ತೆ ಕಾರಣ ;
:ಅನ್ಯತಾ ಸಂಬಂಧ : ಕಾರಣದಿಂದ ಕಾರ್ಯವು ಹುಟ್ಟುತ್ತದೆ. ಆದರೆ ಕಾರ್ಯದಲ್ಲಿ ಕಾರಣವು ಇರುವುದಿಲ್ಲ. (ಕಾರ್ಯಾಭಾವ ಪತಿಯೋಗಿ) ; ಹಾಗಿದ್ದರೂ ಅವುಗಳಲ್ಲಿ (ಕಾರ್ಯ-ಕಾರಣ) ಸಮವಾಯು (ಬೇರ್ಪಡಿಸಲಾಗದ) ಸಂಬಂಧವಿರುತ್ತದೆ.
;ಕಾರಣವು ಮೂರು ವಿಧ : ಸಮವಾಯು, ಅಸಮವಾಯು, ಮತ್ತು ನಿಮಿತ್ತ.
 
:೧. ಕಾರ್ಯದ ಉತ್ಪತ್ತಿಗೆ ಕಾರಣವಾದ ದ್ರವ್ಯವನ್ನು ಸಮವಾಯು, ಅಥವಾ ಉಪಾದಾನ ಕಾರಣ ಎನ್ನುತ್ತಾರೆ.
ಉದಾರಣೆ : ಮಡಕೆ -ಮಣ್ಣು (ಮಡಕೆಗೆ ಮಣ್ಣು ಉಪಾದಾನ ಕಾರಣ).
:೨. ಕಾರ್ಯ ಅಥವಾ ಕಾರಣದೊಡನೆ ಒಂದು ವಸ್ತುವಿನ ಅಸಮವಾಯು ಸಂಬಂಧ ವಿರುವಾಗ ಉಂಟಾಗುವ ಕಾರ್ಯವನ್ನು ಅಸಮವಾಯು ಎನ್ನುತ್ತಾರೆ,
::ಉದಾ : ದಾರಗಳ ಸಂಯೋಗವು ಬಟ್ಟೆಗೆ ಅಸಮವಾಯು ಕಾರಣ - ದಾರಗಳಿಗೂ ಅವುಗಳ ಸಂಯೋಗಕ್ಕೂ ಸಮವಾಯು ಸಂಬಂಧ. ನೂಲಿನ ರೂಪವು ಬಟ್ಟೆಗಳ ರೂಪಕ್ಕೆ ಅಸಮವಾಯು ಕಾರಣ. ಗುಣ ಮತ್ತು ಕ್ರಿಯೆಗಳು ಅಸಮವಾಯುಗಳಾಗಿರುತ್ತವೆ. ನೈಯಾಯಿಕರು (ನ್ಯಾಯ ದರ್ಶನದ ಅನಯಾಯಿಗಳು) ಮಾತ್ರಾ ಈಸಂಬಂಧ ಹೇಳುತ್ತಾರೆ.
 
:೩. ಸಮವಾಯು ಮತ್ತು ಅಸಮವಾಯು ಕಾರಣಗಳಿಗಿಂತ ಬೇರೆಯಾದುದು . ನಿಮಿತ್ತ ಕಾರಣ.
::ಉದಾಹರಣೆ ಮಡಕೆ ಮಾಡಲು ಕುಂಬಾರ ಬೇಕು ; ಇಲ್ಲಿ ಕುಂಬಾರ ನಿಮಿತ್ತ ಕಾರಣ. (ಇದಕ್ಕೆ ಸಂಪ್ರದಾನ ಕಾರಣವೆಂದೂ ಹೇಳುವರು).
:ಮುಂದುವರೆ ಸಿದೆ/ಯುವುದು-
:ಓಂ [[ಸದಸ್ಯ:Bschandrasgr/ಪರಿಚಯ|ತ]]ತ್ಸತ್
"https://kn.wikipedia.org/wiki/ನ್ಯಾಯ_ದರ್ಶನ" ಇಂದ ಪಡೆಯಲ್ಪಟ್ಟಿದೆ