ಏಕಾದಶಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಏಕಾದಶ''' ಈ [[ಸಂಸ್ಕೃತ]] ಪದದ ಅರ್ಥ ಹನ್ನೊಂದು(೧೧).ಹಿಂದೂ ಪಂಚಾಂಗದ ೧೨ ಮಾಸಗಳ [[ಶುಕ್ಲ ಪಕ್ಷ| ಶುಕ್ಲ ಪಕ್ಷದ]] ಮತ್ತು [[ ಕೃಷ್ಣ ಪಕ್ಷ|ಕೃಷ್ಣ ಪಕ್ಷದ]] ಹನ್ನೊಂದನೆಯ ದಿನವನ್ನು ''ಏಕಾದಶಿ'' ಎನ್ನಲಾಗುತ್ತದೆ.ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ.ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ,[[ ಉಪವಾಸ ]]ಮಾಡುವ ಸಂಪ್ರದಾಯವಿದೆ.ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ.ಏಕಾದಶಿಯ ದಿನ ಉಪವಾಸವಿದ್ದು,ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ ೯ ಘಂಟೆಯೊಳಗಾಗಿ '''ಪಾರಣೆ'''(ಊಟ)ಮಾಡುವ ಸಂಪ್ರದಾಯವಿದೆ. ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ.
 
'''ವೈಕುಂಠ ಏಕಾದಶಿ''' ಏಕಾದಶಿಗಳಲ್ಲಿ ವಿಶೇಷ ದಿನ.ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚು. ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ [[ವೈಕುಂಠ]] ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ಪ್ರತೀತಿಯಿದೆ.೨೦೦೬ನೇ ವರ್ಷದಲ್ಲಿ ಈ ದಿನ ಡಿಸೆಂಬರ್ ೩೦ನೇ ತಾರೀಖು ಬರುತ್ತದೆ.
 
ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ಪ್ರತಿತೀ ಇದೆ. ಅಂದು ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯು ಇದೆ.
 
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ ಹೆಸರು "ಶಯನೀ" (ಅಥವಾ ಪ್ರಥಮಾ ಎಂದೂ ಇನ್ನೊಂದು ಹೆಸರಿದೆ). ಅದಿನ ಮಹಾವಿಷ್ಣುವು ನಿದ್ರಿಸಲು ತೆರಳುವನೆಂದೂ, ಮುಂದೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿ "ಪ್ರಬೋಧಿನೀ"ಯ ನಂತರ ಬರುವ [’ಉತ್ಥಾನ’ದ್ವಾದಶಿಯಂದು.ಅವನ ನಿದ್ರೆಯಿಂದ ಎಚ್ಚರವಾಗುತ್ತಾನೆಂಬ ನಂಬಿಕೆ ಇದೆ. ನಡುವಿನ ಈ ನಾಲ್ಕು ತಿಂಗಳ ಅವಧಿಯನ್ನು . [ಚಾತುರ್ಮಾಸ್ಯ ]] ಎನ್ನಲಾಗುತ್ತದೆ.
 
ಮುಂದಿನ ನಾಲ್ಕು ತಿಂಗಳ ಅವಧಿಗೆ. ಅದನ್ನೇ ಚಾತುರ್ಮಾಸ್ಯ ಎನ್ನುತ್ತೇವೆ.
 
==ಏಕಾದಶಿ ಕ್ರಮವು==
"https://kn.wikipedia.org/wiki/ಏಕಾದಶಿ" ಇಂದ ಪಡೆಯಲ್ಪಟ್ಟಿದೆ