ಮರಾಠಿ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೨೪ ನೇ ಸಾಲು:
ಮರಾಠಿ ರಂಗಭೂಮಿಯೊಂದಿಗೇ ಮರಾಠಿ ಚಿತ್ರೋದ್ಯಮವೂ ಬೆಳೆದರೂ, ಚಿತ್ರೋದ್ಯಮಕ್ಕೆ ಸತತ ಯಶಸ್ಸು ದೊರಕಲಿಲ್ಲ. ಭಾರತಲ್ಲಿಯೇ ಮೊಟ್ಟಮೊದಲ ವಾಕಿ ಚಿತ್ರ ತಯಾರಿಸಿದ [[ದಾದಾಸಾಹೇಬ್ ಫಾಳಕೆ]] , ಖ್ಯಾತ ನಿರ್ದೇಶಕ [[ವಿ.ಶಾಂತಾರಾಮ್]] ಮೊದಲಾದವರಿಂದ ಮರಾಠಿ ಚಿತ್ಯೋದ್ಯಮ ಸಮಕಾಲೀನ ಹಿಂದೀ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡಿತು. ನಿರ್ದೇಶಕ ರಾಜಾ ಪರಾಂಜಪೆ, ಸಂಗೀತ ನಿರ್ದೇಶಕ ಸುಧೀರ್ ಫಡ್ಕೆ, ಸಂಗೀತ ರಚನಕಾರ ಜಿ. ಮಾಡಗೂಳಕರ್ , ನಟ ರಾಜಾ ಗೋಸಾವಿ ಮೊದಲಾದವರು ಒಂದುಗೂಡಿ ಅನೇಕ ಗಮನಾರ್ಹ ಮರಾಠಿ ಚಿತ್ರಗಳನ್ನು ತೆರೆಗಿತ್ತರು. ಅಂದಿನ ಮರಾಠಿ ಆಡುಭಾಷೆಯು ನಾಟಕ, ಸಿನಿಮಾ ಅಷ್ಟಲ್ಲದೇ ಮರಾಠಿ ಸಾಹಿತ್ಯದಿಂದಲೂ ಪ್ರಭಾವಿತವಾಗಿತ್ತು.
ಆಧುನಿಕ ಮರಾಠಿ ಕಾವ್ಯ [[ಮಹಾತ್ಮಾ ಜ್ಯೋತಿಬಾ ಫುಲೆ]]ಯ ಕೃತಿಗಳಿಂದ ಮೊದಲಾಯಿತು. ನಂತರದ ಕವಿಗಳಾದ ಕೇಶವಸುತ, ಬಾಲಕವಿ, ಗೋವಿಂದಾಗ್ರಜ,ಮತ್ತು ರವಿ ಕಿರಣ ಂಂಡಲದ ಕವಿಗಳಾದ ಮಾಧವ ಜೂಲಿಯನ್ ಇತ್ಯಾದಿಗಳು ಸೃಷ್ಟಿಸಿದ ಕಾವ್ಯದಲ್ಲಿ ರಮ್ಯ ಮತ್ತು ವಿಕ್ಟೋರಿಯನ್ ಇಂಗ್ಲೀಷ್ ಕಾವ್ಯದ ಪ್ರಭಾವವಿತ್ತು. ಭಾವತೀವ್ರತೆ ಮತ್ತು ಗೇಯ ಗುಣ ಇವುಗಳ ಪ್ರಧಾನ ಆಂಶವಾಗಿತ್ತು. ಖ್ಯಾತ ವಿಡಂಬನ ಸಾಹಿತಿ ಮತ್ತು ರಾಜಕಾರಣಿ ಪಿ.ಕೆ.ಆತ್ರೆ ಝೆಂಡೂಚೆ ಫುಲೆ ಎಂಬ ಪ್ರಹಸನ ಸಂಕಲನದಲ್ಲಿ ಈ ಕಾವ್ಯ ಪ್ರಕಾರದ ಲೇವಡಿ ಮಾಡಿದರು. [[ಸಾನೆ ಗುರೂಜಿ]] (1899-1950) ಮರಾಠಿ ಮಕ್ಕಳ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದರು. ಶ್ಯಾಮಚೀ ಆಯಿ (ಶ್ಯಾಮನ ತಾಯಿ), ಆಸ್ತಿಕ್, ಗೋಡೆ ಶೇವಟ್ ( ಸುಖಾಂತ)ಅವರ ಮುಖ್ಯ ಕೃತಿಗಳು .ಅನೇಕ ಪಾಶ್ಚಿಮಾತ್ಯ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಮರಾಠಿಯಲ್ಲಿ ಸರಳ ರೀತಿಯಲ್ಲಿ ಭಾಷಾಂತರಿಸಿ ಗೋಡೆ ಗೋಷ್ಟಿ (ಮಧುರ ಕಥೆಗಳು) ಎಂಬ ಹೆಸರಿನಲ್ಲಿ ಪ್ರಕಟಿಸಿದರು. ವಿಷ್ಣು ಸಖಾರಾಮ ಖಾಂಡೇಕರ್ (1889-1976) ಬರೆದ ಯಯಾತಿ ಕೃತಿ 1975ರಲ್ಲಿ [[ಜ್ಞಾನಪೀಠ ]] ಪ್ರಶಸ್ತಿಯನ್ನು ಗಳಿಸಿತು. ಕಾದಂಬರಿ, ಸಣ್ಣ ಕಥೆ ,
ನಲವತ್ತರ ದಶಕದಲ್ಲಿ ಬಿ.ಎಸ್.ಮರ್ಧೇಕರರ ನವ್ಯಕಾವ್ಯದೊಂದಿಗೆ ಮರಾಠಿ ಸಾಹಿತ್ಯ ಹೊಸ ದಾರಿಯಲ್ಲಿ ಪ್ರವೇಶಿಸಿತು. ಐವತ್ತರ ದಶಕದಲ್ಲಿ'little magazine movement' ವೇಗದಿಂದ ಬೆಳೆಯತೊಡಗಿತು. ಈ ಚಳುವಳಿಯಲ್ಲಿ ಸಂಪ್ರದಾಯವಿರೋಧಿ, ಕ್ರಾಂತಿಕಾರಿ, ಪ್ರಾಯೋಗಿಕ ಕೃತಿಗಳನ್ನು ಪ್ರಕಾಶಿಸಲಾಯಿತು. ಇದು ದಲಿತ ಸಾಹಿತ್ಯದ ಬೆಳವಣಿಗೆಗೂ ಕುಮ್ಮಕ್ಕು ಕೊಟ್ಟಿತು. ಡಾ. ಬಾಬಾಸಾಹೇಬ ಅಂಬೇಡ್ಕರರ ಬೋಧನೆಗಳಿಮಧ ಪ್ರಭಾವಿತವಾಗಿದ್ದ ದಲಿತ ಸಾಹಿತ್ಯ , ಮಧ್ಮಮವರ್ಗೀಯ, ಉಚ್ಚಜಾತೀಯ ಮತ್ತು ನಗರಕೇಂದ್ರಿತವಾಗಿದ್ದ ಪ್ರಸಕ್ತ ಮರಾಠಿ ಸಾಹಿತ್ಯ ವ್ಯವಸ್ಥೆಗೆ ಸವಾಲೆಸೆಯಿತು. ಖ್ಯಾತ ಕಾದಂಬರಿಕಾರ, ಕವಿ ಹಾಗೂ ವಿಮರ್ಶಕ ಭಾಲಚಂದ್ರ ನೇಮಾಡೆಯವರಂತಹ ಬರಹಗಾರರನ್ನು little magazine movement ಬೆಳಕಿಗೆ ತಂದಿತು. ಅರುಣ್ ಕೋಲಾಟ್ಕರ್, ದಿಲೀಪ್ ಚಿತ್ರೆ, ನಾಮದೇವ ಢಸಾಳ್, ವಸಂತ ಅಬಾಜಿ ಡಹಾಕೆ, ಮನೋಹರ ಓಕ್ ಇತ್ಯಾದಿ ನವ್ಯ ಪಂಥೀಯರ ಕಾವ್ಯ ಸಂಕೀರ್ಣವಷ್ಟೇ ಅಲ್ಲದೆ , ವಿವರಗಳಿಂದ ಶ್ರೀಮಂತವಾಗಿ , ಓದುಗರನ್ನು ಬಡಿದೆಬ್ಬಿಸುವಂಥಹವುಗಳಾಗಿದ್ದವು. ಭಾವು ಪಾಧ್ಯೆ, ವಿಲಾಸ್ ಸಾರಂಗ್ , ಶ್ಯಾಮ್ ಮನೋಹರ್ ಮತ್ತು ವಿಶ್ರಾಮ್ ಬೇಡೇಕರ್ ಕೆಲು ಹೆಸರಾಂತ ಕಥೆಗಾರರು.
The another major paradigm shift in Marathi sensibility began in the nineties with the another avant-garde modernist poetry of poets associated with abhidhanantar. In the post nineties, this 'new little magazine movement' gained momentum and poets like manya joshi,hemant divate,sachin ketkar,mangesh kale,salil wagh,nitin kulkarni,varjesh solanki touched the new areas of post-modern life.the poetry collections broughtout by abhidhanantar prakashan and the regular issues of the magazine abhidhanantar is taking marathi poetry to the global standards.
|