ಆದಿ ಶಂಕರರು ಮತ್ತು ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೫ ನೇ ಸಾಲು:
*ಸುಮಾರು ಕ್ರಿ ಶ ೭೦೦ ರಲ್ಲಿ ಬದುಕಿದ ಗೌಡಪಾದಮುನಿಗಳು ಮಾಡೂಕ್ಯ ಕಾರಿಕೆಯ ಮೂಲಕ ಮೊಟ್ಟಮೊದಲಿಗೆ ಅದ್ವೈತ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಧೃಡವಾಗಿ ಪ್ರತಿಪಾದಿಸಿದರು. ಅವರ ಶಿಷ್ಯರು ಗೋವಿಂದ ಭಗವತ್ಪಾದರು. ಆವರ ಶಿಷ್ಯರು ಶ್ರೀ ಶಂಕರಾಚಾರ್ಯರು. ಅವರು ಅದ್ವೈತ ತತ್ವ ಸಿದ್ಧಾಂತಕ್ಕೆ ಸ್ಪಷ್ಟ ರೂಪಕೊಟ್ಟು ಜಗತ್ತಿನ ಮನ್ನಣೆ ಸಿಗುವಂತೆ ಮಾಡಿದರು.
*ಶ್ರೀಶಂಕರಾಚಾರ್ಯರು [ಕ್ರಿಶ.೭೮೮-೮೨೦ ವಿಕಿಪೀಡಿಯ] ಒಬ್ಬ ಅಸಾಧಾರಣ ಕ್ರಿಯಾಶೀಲ ಅದ್ಭುತ ವ್ಯಕ್ತಿ. ಕೇರಳದ ಕಾಲಟಿಯಲ್ಲಿ ಜನಿಸಿ, ಕನ್ಯಾಕುಮಾರಿಯಿಂದ ಬದರಿ ಕಾಶ್ಮೀರ,; ಕಾಶ್ಮೀರದಿಂದ ಕಾಶಿ, ಪುನಃ ಶೃಂಗೇರಿ, ಕಂಚಿ, ಪುರಿ, ದ್ವಾರಕಾ, ಬದರಿ, ಹೀಗೆ ಭಾರತವನ್ನು ಎರಡು ಬಾರಿ ಕಾಲ್ನೆಡಿಗೆಯಲ್ಲಿ ಸುತ್ತಿ, ತಮ್ಮ ತರ್ಕಶಕ್ತಿ ಯಿಂದ ಪ್ರತಿವಾದಿಗಳನ್ನು ಸೋಲಿಸಿ ಅದ್ವೈತದ ಧ್ವಜವನ್ನು ಎತ್ತಿ ಹಿಡಿದರು. ಅವರು ಬದುಕಿದ್ದು ಕೇವಲ ೩೨ವರ್ಷಗಳ ಕಾಲ ಮಾತ್ರವಾದರೂ, ಪ್ರತಿಯೊಂದು ಕ್ಷಣವನ್ನೂ ಸಾರ್ಥಕ ಪಡಿಸಿಕೊಂಡವರು. ಅವರ ಬಗೆಗೆ ಜನ ಶ್ರುತಿ ಹೀಗಿದೆ :
 
* '''ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರ ವಿತ್ |'''
* '''ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||'''
 
* '''ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||'''
*[ಎಂಟುವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು ಮೂವತ್ತೆರಡನೇ ವರ್ಷದಲ್ಲಿ ಅಭ್ಯಗತರು- ಎಂದರೆ ಹೊರಟು ಹೋದರು ]
*ಶ್ರೀ ಶಂಕರರು ಬೌದ್ಧ ಮತ್ತು ಇತರ ವೈದಿಕ ದರ್ಶನಗಳಲ್ಲಿರುವ ದೋಷಗಳನ್ನು ಎತ್ತಿ ತೋರಿಸಿ ಅದ್ವೈತ ವೇದಾಂತವೇ ಪರಿಪೂರ್ಣ ದರ್ಶನವೆಂದು ಸಾಧಿಸಿದರು. ಸ್ವಮತ ಸ್ಸ್ಥಾಪನೆ ಪರಮತ ಖಂಡನೆಗಳಲ್ಲಿ ಅವರಂಥ ನಿಪುಣರನ್ನು ಕಾಣುವುದು ಕಷ್ಟ. ಯಾರೇ ಆಗಲಿ ಅವರ ಧೀಮಂತ ವ್ಯಕ್ತಿತ್ವ ಪ್ರತಿಭೆಗಳಿಗೆ ತಲೆಬಾಗುವುದು ಸಹಜ. ಅವರು ಭಗವದ್ಗೀತೆ, ಹತ್ತು ಉಪನಿಷತ್ತುಗಳು ಮತ್ತು ಬ್ರಹ್ಮಸೂತ್ರಗಳನ್ನು ಸೂಕ್ಷ್ಮ ವಾಗಿ ಪರಿಶೀಲಿಸಿ ಅವುಗಳಿಗೆ ಭಾಷ್ಯಗಳನ್ನು ಬರೆದು ಅವಗಳಿಗೆ ಸಮ್ಮತವಾದುದು ಅದ್ವೈತ ಸಿದ್ಧಾಂತವೆಂದು ನಿರೂಪಿಸಿದ್ದಾರೆ. ಈ ಮೂರೂ ಗ್ರಂಥಗಳಿಗೆ ಪ್ರಸ್ಥಾನತ್ರಯ ವೆಂದು ಹೆಸರು. ಇವಲ್ಲದೆ ಕೆಲವು ವೇದಾಂತ ಗ್ರಂಥಗಳನ್ನೂ , ಸ್ತೋತ್ರಗಳನ್ನೂ ಬರೆದಿದ್ದಾರೆ.