ಚಾಮುಂಡೇಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Camunda5.JPG|thumb|right|150px|ಹಳೆಬೀಡಿನಲ್ಲಿರುವ ಚಾಮುಂಡಿಯ ವಿಗ್ರಹ]]
[[ಹಿಂದೂ ಧರ್ಮ]]ದಲ್ಲಿ, '''ಚಾಮುಂಡೇಶ್ವರಿ''', '''ಚಾಮುಂಡಿ''' ಎಂದೂ ಪರಿಚಿತವಾಗಿರುವ [[ಹಿಂದೂ]] [[ದೇವಿ ಮಾತೆ]]ಯಾದ [[ದೇವಿ]]ಯ ಭಯಾನಕ ರೂಪ ಮತ್ತು ಏಳು [[ಮಾತೃಕೆ]]ಯರ ಪೈಕಿ ಒಬ್ಬಳು. ಅವಳು, ಯೋಧೆ [[ದುರ್ಗೆ|ದುರ್ಗಾ]] ದೇವಿಯ ಪರಿಚಾರಕಿಯರಾದ ಅರವತ್ತು ನಾಲ್ಕು ಅಥವಾ ಎಂಬತ್ತೊಂದು [[ತಂತ್ರ|ತಾಂತ್ರಿಕ]] ದೇವತೆಗಳಾದ, ಮುಖ್ಯ [[ಯೋಗಿನಿ]]ಗಳ ಪೈಕಿ ಕೂಡ ಒಬ್ಬಳು. ಈ ಹೆಸರು ಚಾಮುಂಡಿಯು ಕೊಂದ ಇಬ್ಬರು ಅಸುರರಾದ [[ಚಂಡ]] ಮತ್ತು [[ಮುಂಡ]]ರ ಸಂಯೋಗವಾಗಿದೆ.ಮತ್ತು ಇಕೆಯು ಮೈಸೂರಿನ ಸಮಾತ್ಸನದ ದೇವತೆ, ಸಪ್ತಮಾತೃಕೆ ಯರಲ್ಲಿ ಏಳನೆಯವಳು ಹಿಂದೂ ಧರ್ಮದಲ್ಲಿ, '''ಚಾಮುಂಡೇಶ್ವರಿ' ಪ್ರಬಲವಾದ ದೇವತೆ ಎನ್ನುತ್ತಾರೆ. "ಚಾಮುಂಡಿ" ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ-ಶಿಷ್ಟರಕ್ಷಕಿಯಾಗಿ ಮಹಿಷೂರಿನ ಮಹಿಷನನ್ನು ಕೊಂದು, ಲೋಕ ಕಂಟಕರಾಗಿದ್ದ
ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ 'ಚಾಮುಂಡಿ'ಯಾಗಿದ್ದಾಳೆ. ಈಕೆ-ಅಂಬೆ ,ಈಶ್ವರಿ ,ಚಂಡಿ ,ಕಾಳಿ ,ಭಗವತೀ ಭಗವತಿ,ಮಹೇಶ್ವರಿ ,ಮಹಾದೇವಿ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಜನಪದಕಥೆಯೊಂದರ
ಪುರಾಣವೂಂದರ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ
ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಚಾಮುಂಡಿ ಮಹಿಷಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿದ್ದಾಳೆ. ಇನ್ನೊಂದೆಡೆ ಜನಪದ ಕಥೆಯ
ಪ್ರಕಾರ ಚಾಮುಂಡಿ ಉಜ್ಜಯಿನಿ ದೇಶದ ಬಿಜ್ಜಳರಾಯನ ಕಿರಿಯ ಮಗಳು. ಚಾಮುಂಡಿಯ ಅಕ್ಕ ಉರಿಮಸಣಿ ಸೇರಿದಂತೆ ಒಟ್ಟು ಏಳುಜನ ಅಕ್ಕ-ತಂಗಿಯರು. ಇವರು ಕಾರಣಾಂತರಗಳಿಂದ ಪರಸ್ಪರ ಜಗಳ ಕಾದು, ಮನೆ
ಬಿಟ್ಟು ಪರಿತ್ಯಕ್ತೆಯರಾಗುತ್ತಾರೆ. ಇವರೆಲ್ಲ ಉತ್ತರಪ್ರದೇಶದಿಂದ ಹೊರಟು, ದಕ್ಷಿಣಪ್ರಾಂತ್ಯದ ಭಿನ್ನ ಭಿನ್ನ ಸ್ಥಳಗಳಲ್ಲಿ ನೆಲೆ ಕಂಡು ಕೊಳ್ಳುತ್ತಾರೆ. ಮತ್ತೊಂದು ಕಥೆಯ ಪ್ರಕಾರ ಚಾಮುಂಡಿ ಚಾಮರಾಯನ ಮಗಳು. ಈಕೆಗೆ
ಕುಚುಕುಚು ಮಾರಿ ಎಂಬ ಸೋದರಿ, ಮಹದೇಶ್ವರ ಮತ್ತು ಬ್ರಹ್ಮೇಶ್ವರ ಎಂಬ ಸೋದರರಿರುತ್ತಾರೆ. ಅನ್ಯ ಕಾರಣ ನಿಮಿತ್ತ ಈ ನಾಲ್ವರು ಮನೆ ಬಿಟ್ಟು ಹೊರಬರುವಾಗ, ಸುಳ್ವಾಡಿ ಎಂಬ ಊರಲ್ಲಿ ಲಂಬಾಣಿಜನಾಂಗದವರು
ಮಾಂಸದಡುಗೆ ಮಾಡುತ್ತಿರುವುದನ್ನು ಕಂಡ ಕುಚುಕುಚು ಮಾರಿಯ ಬಾಯಲ್ಲಿ ನೀರೂರಿ ಬಿಡುತ್ತದೆ. ಆಗ ಆಕೆ ತನ್ನ ಅಕ್ಕ ಮತ್ತು ಅಣ್ಣಂದಿರಿಗೆ ತಾನಿಲ್ಲೆ ಉಳಿಯುವುದಾಗಿ ಹೇಳುತ್ತಾಳೆ. ಅದಕ್ಕವರು ಸಮ್ಮತಿಸುತ್ತಾರೆ. ಸುಮಾರು
ಒಂದು ಮೈಲಿ ದೂರ ಬಂದಾಗ ಮಹದೇಶ್ವರ, ತಮ್ಮ ಬ್ರಹ್ಮೇಶ್ವರನಿಗೆ ನೀನು ತಂಗಿಯ ರಕ್ಷಣೆಗಾಗಿ ಇಲ್ಲೇ ಉಳಿವಂತೆ ಆದೇಶಿಸುತ್ತಾನೆ. ನಂತರ ತಾನು ಮಹದೇಶ್ವರ ಬೆಟ್ಟದೆಡೆಗೆ ಸಾಗಿ ಏಳುಮಲೆಯಲ್ಲಿ ನೆಲೆಸುತ್ತಾನೆ.ಬೆಟ್ಟದೆಡೆಗೂ, ಚಾಮುಂಡಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ರಕ್ಷಣಾದೇವತೆಯಾಗಿ ನೆಲೆನಿಲ್ಲುತ್ತಾಳೆ.
ಚರಿತ್ರೆಯ ಪ್ರಕಾರ ಈಕೆ ಐತಿಹಾಸಿಕ ವೀರವನಿತೆ. ಮೈಸೂರು ಒಡೆಯರ ಕುಲದೇವತೆ.
 
 
"https://kn.wikipedia.org/wiki/ಚಾಮುಂಡೇಶ್ವರಿ" ಇಂದ ಪಡೆಯಲ್ಪಟ್ಟಿದೆ