ಮಾಲತಿ ಪಟ್ಟಣಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಮಾಲತಿ ಪಟ್ಟಣಶೆಟ್ಟಿ
 
ಚು ಮಾಲತಿ ಪಟ್ಟಣಶೆಟ್ಟಿ:ಹೆಚ್ಚಿನ ಮಾಹಿತಿ
೧ ನೇ ಸಾಲು:
ಶ್ರೀಮತಿ '''ಮಾಲತಿ ಪಟ್ಟಣಶೆಟ್ಟಿ''' ಇವರು [[ಧಾರವಾಡ]]ದ [[ಜೆ.ಎಸ್.ಎಸ್.ಕನ್ನಡ ಕಾಲೇಜಿ]]ನಲ್ಲಿಸಾಹಿತ್ಯಕ್ಕೆ ಆಂಗ್ಲಬಹುಮುಖ ಪ್ರಾಧ್ಯಾಪಕಿಯಾಗಿರಾಗಿದ್ದುಸೇವೆ ಈಗಸಲ್ಲಿಸುತ್ತಿರುವ ನಿವೃತ್ತರಾಗಿದ್ದಾರೆಲೇಖಕಿ.
[[ಇಂಗ್ಲಿಷ್|ಆಂಗ್ಲ]] ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಾಲತಿಯವರು [[ಬೆಳಗಾವಿ]]ಯ '''ರಾಣಿ ಪಾರ್ವತಿದೇವಿ ಕಾಲೇಜಿ'''ನಲ್ಲಿ ಮೂರು ವರ್ಷ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ,ಆನಂತರ [[ಧಾರವಾಡ]]ದ '''ಜನತಾ ಶಿಕ್ಷಣ ಸಮಿತಿಯ ಕಾಲೇಜಿ'''ನಲ್ಲಿ ೩೧ ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ಹಾಗು ವಿಭಾಗ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
 
ಇವರ ಕಾವ್ಯಸಂಕಲನ '''ಹೂದಂಡಿ'''ಯು ೨೦೦೬ನೆಯ ಸಾಲಿನ [[ಹುಬ್ಬಳ್ಳಿ]]ಯ [[ಡಾ.ಡಿ.ಎಸ್.ಕರ್ಕಿ ಕಾವ್ಯಪ್ರಶಸ್ತಿ]]ಗೆ ಆಯ್ಕೆಯಾಗಿದೆ.
 
==ಸಾಹಿತ್ಯ==
[[Category:ಸಾಹಿತಿಗಳು]]
 
[[Category:ಲೇಖಕಿಯರು]]
===ಕವಿತಾ ಸಂಕಲನ===
* ಬಾ ಪರೀಕ್ಷೆಗೆ
* ಗರಿಗೆದರಿ
* ತಂದೆ ಬದುಕು ಗುಲಾಬಿ
* ದಾಹ ತೀರ
* ಮೌನ ಕರುಗುವ ಹೊತ್ತು
* ಇತ್ತೀಚಿನ ಕವಿತೆಗಳು
* ಹೂದಂಡಿ (ಆಯ್ದ ಕವಿತಾ ಸಂಗ್ರಹ)
 
===ಕಥಾ ಸಂಕಲನ===
* ಇಂದು ನಿನ್ನಿನ ಕತೆಗಳು
* ಸೂರ್ಯ ಮುಳುಗುವದಿಲ್ಲ
 
===ವಿಮರ್ಶೆ===
* ಬಸವರಾಜ ಕಟ್ಟೀಮನಿ-ಬದುಕು ಬರಹ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಣೆ)
 
===ಸಂಪಾದನೆ===
* ಕಾವ್ಯ ೯೬ (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆ)
* ಪ್ರಶಾಂತ (ಶ್ರೀಮತಿ ಶಾಂತಾದೇವಿ ಮಾಳವಾಡ ಇವರ ಷಷ್ಟ್ಯಬ್ದಿ ಸಮಾರೋಹ ಅಭಿನಂದನ ಗ್ರಂಥ)
* ಸಮತಾ (ಸಮುದಾಯ ಸಂಸ್ಥೆಯ ಪ್ರಕಟಣೆ)
 
===ಸಾರ ಸಂಗ್ರಹ===
* ‘ಮಾಡಿ ಮಡಿದವರು’ (ಲೇಖಕರು: ಬಸವರಾಜ ಕಟ್ಟೀಮನಿ; ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ)
 
 
==ಆಕಾಶವಾಣಿ/ದೂರದರ್ಶನ==
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರು ಚಿಂತನ, ಭಾಷಣ, ನಾಟಕರಚನೆ, ರೂಪಕರಚನೆ, ಪಾತ್ರನಿರ್ವಹಣೆ,ಚರ್ಚೆ, ಕಥಾವಾಚನ, ಮುಂತಾದ [[ಆಕಾಶವಾಣಿ]]ಯ ಕಾರ್ಯಕ್ರಮಗಳಲ್ಲಿ ಸುಮಾರು [[೧೯೭೦]]ರಿಂದಲೇ ಭಾಗವಹಿಸುತ್ತಿದ್ದಾರೆ. ಆಕಾಶವಾಣಿಯಂತೆಯೆ [[ದೂರದರ್ಶನ]]ದಲ್ಲಿ ಸಹ ಇವರ ಸಂದರ್ಶನ, ಕಾವ್ಯವಾಚನ ಹಾಗು ಕವಿಗೋಷ್ಠಿ ಕಾರ್ಯಕ್ರಮ ಜರುಗಿವೆ.
 
 
==ಸಾಂಸ್ಕೃತಿಕ ಚಟುವಟಿಕೆಗಳು==
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದೈವ ನಿರತರಾಗಿರುತ್ತಾರೆ.
* ಗೋರೆಗಾಂವ, [[ಮುಂಬಯಿ]]ಯ ಲೇಖಕಿಯರ ಪ್ರಥಮ ಸಮ್ಮೇಳನದ ಪ್ರಥಮ ಅಧ್ಯಕ್ಷೆ ([[೧೯೯೪]])ಯಾಗಿದ್ದರು.
* [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ಆಶ್ರಯದಲ್ಲಿ ಜರುಗಿದ ಆಖಿಲ ಭಾರತ ಮಹಿಳಾ ಸಮ್ಮೇಳನಗಳಲ್ಲಿ ಮೂರು ಸಲ ಕವಿಗೋಷ್ಠಿಯ ಅಧ್ಯಕ್ಷೆಯಾಗಿದ್ದರು.
* [[ಕರ್ನಾಟಕ ಲೇಖಕಿಯರ ಸಂಘ]] ಹಾಗು [[ಉತ್ತರ ಕರ್ನಾಟಕ ಲೇಖಕಿಯರ ಸಂಘ]]ದ ವಿಶೇಷ ಸಾಹಿತ್ಯ ಸಮ್ಮೇಳನಗಳಲ್ಲಿ ಎರಡು ಬಾರಿ ಕವಿಗೋಷ್ಠಿಯ ಅಧ್ಯಕ್ಷೆಯಾಗಿದ್ದರು.
 
ಇದಲ್ಲದೆ ಕೆಳಗಿನ ಕವಿಗೋಷ್ಠಿಗಳಲ್ಲಿ ಕಾವ್ಯವಾಚನ ಮಾಡಿದ್ದಾರೆ.
* ವಿಶ್ವ [[ಕನ್ನಡ]] ಸಾಹಿತ್ಯ ಸಮ್ಮೇಳನ ([[ಮೈಸೂರು]])
* [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ಅಮೃತ ಮಹೋತ್ಸವ
* [[ಮೈಸೂರು]] [[ದಸರಾ]] ಕವಿಗೋಷ್ಠಿ (ನಾಲ್ಕು ಬಾರಿ)
* [[ಇಂದೂರು|ಇಂದೂರಿನ]] ಅಂತರರಾಜ್ಯ ಕವಿಸಮ್ಮೇಳನ
* ರಾಜ್ಯ ಮಹಿಳಾ ಸಾಹಿತ್ಯ ಸಮ್ಮೇಳನ (ಮೂರು ಬಾರಿ)
* ರಾಜ್ಯ ಸಾಹಿತ್ಯ ಪರಿಷತ್ತಿನ ಸಮ್ಮೇಳನ (ನಾಲ್ಕು ಬಾರಿ)
 
ರಾಜ್ಯ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಗೋಷ್ಠಿಗಳಲ್ಲಿ, ವಿಶ್ವವಿದ್ಯಾಲಯಗಳ ವಿಶೇಷ ಗೋಷ್ಠಿಗಳಲ್ಲಿ ಹಾಗು ರಾಜ್ಯ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ ಮತ್ತು ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
 
==ಸದಸ್ಯತ್ವ==
* [[ರಾಜ್ಯ ಸಾಹಿತ್ಯ ಅಕಾಡೆಮಿ]] ಸದಸ್ಯೆ ([[೧೯೮೭]]ರಿಂದ [[೧೯೮೯]]ರವರೆಗೆ).
* [[ಕೇಂದ್ರ ಸಾಹಿತ್ಯ ಅಕಾಡೆಮಿ]] ಸಲಹಾ ಸದಸ್ಯೆ ([[೧೯೮೮]]ರಿಂದ [[೧೯೯೩]]).
* [[ಉತ್ತರ ಕರ್ನಾಟಕ ಲೇಖಕಿಯರ ಸಂಘ]],[[ಧಾರವಾಡ-[[ಹುಬ್ಬಳ್ಳಿ]], ಕಾರ್ಯಾಧ್ಯಕ್ಷೆ ([[೧೯೯೩]]ರಿಂದ [[೧೯೯೬]]) ಹಾಗು ಗೌರವ ಉಪಾಧ್ಯಕ್ಷೆ([[೨೦೦೦]]ದಿಂದ….).
* [[ಕರ್ನಾಟಕ ವಿದ್ಯಾವರ್ಧಕ ಸಂಘ]]ದ ಮಹಿಳಾ ಮಂಟಪದ ಕಾರ್ಯಾಧ್ಯಕ್ಷೆ ([[೧೯೭೩]]-[[೧೯೭೬]]).
* [[ಕರ್ನಾಟಕ ವಿದ್ಯಾವರ್ಧಕ ಸಂಘ]]ದ ಶಿಕ್ಷಣ ಮಂಟಪದ ಸದಸ್ಯೆ ([[೧೯೯೬]]-[[೧೯೯೮]]).
* ರಾಜ್ಯ ಸಾರ್ವಜನಿಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯೆ ([[೧೯೯೮]]-[[೨೦೦೦]]).
* [[ಧಾರವಾಡ]] ವಿಭಾಗದ ಜೀವವಿಮಾ ಯೋಜನಾ ಕಾರ್ಯಾಲಯದ ಮಹಿಳಾ ಉದ್ಯೋಗಿಗಳಿಗಾಗಿ ರಚಿಸಲಾದ ‘ದೌರ್ಜನ್ಯ ನಿಯಂತ್ರಕ ಸಮಿತಿ’ ಸದಸ್ಯೆ.
 
==ಪ್ರಶಸ್ತಿ==
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರ ಕೃತಿಗಳಿಗೆ ಪ್ರಶಸ್ತಿಗಳ ಸುರಿಮಳೆಯೆ ಸಂದಿದೆ.
 
* ‘ತಂದೆ ಬದುಕು ಗುಲಾಬಿ’ ಕೃತಿಗೆ [[ಕರ್ನಾಟಕ ವಿದ್ಯಾವರ್ಧಕ ಸಂಘ]]ದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಹಾಗು [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ಮಲ್ಲಿಕಾ ಪ್ರಶಸ್ತಿ ಲಭಿಸಿವೆ.
* ‘ಇಂದು ನಿನ್ನಿನ ಕತೆಗಳು’ ಕೃತಿಗೆ [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ರತ್ನಾಕರ ವರ್ಣಿ ಅನಾಮಿಕ ದತ್ತಿ ಪ್ರಶಸ್ತಿ ದೊರೆತಿದೆ.
* ‘ದಾಹ ತೀರ ‘ ಕೃತಿಗೆ [[ಕರ್ನಾಟಕ ವಿದ್ಯಾವರ್ಧಕ ಸಂಘ]]ದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಹಾಗು [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ಮಲ್ಲಿಕಾ ಪ್ರಶಸ್ತಿ ಮತ್ತು ಡಾ| ಬಸಪಟ್ಟದ ಕಾವ್ಯಪ್ರಶಸ್ತಿ ದೊರೆತಿವೆ.
* ‘ಸೂರ್ಯ ಮುಳುಗುವದಿಲ್ಲ’ ಕೃತಿಗೆ [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ಗಂಗಾದೇವಿ ಸಿಂಧೂರ ಪ್ರಶಸ್ತಿ ಹಾಗು [[ಗುಲ್ಬರ್ಗ|ಕಲಬುರ್ಗಿಯ]] ಮಾಣಿಕಬಾಯಿ ಪಾಟೀಲ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿವೆ.
* ‘ಮೌನ ಕರಗುವ ಹೊತ್ತು’ ಕೃತಿಗೆ ಗೊರೂರು ಪ್ರಶಸ್ತಿ, [[ಕರ್ನಾಟಕ ಲೇಖಕಿಯರ ಸಂಘ]]ದ ಪ್ರಶಸ್ತಿ ಹಾಗು ದಿ|ಗೀತಾ ದೇಸಾಯಿ ಕಾವ್ಯ ಪ್ರಶಸ್ತಿ ದೊರೆತಿವೆ.
* ‘ಬದುಕೆಯ ಮೋಹ’ ಕೃತಿಗೆ ಎಚ್.ಎಮ್.ಟಿ. ಕಥಾಪ್ರಶಸ್ತಿ ದೊರೆತಿದೆ.
* ಸಾಹಿತ್ಯಸೇವೆಗಾಗಿ [[ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ]]ಯ [[೨೦೦೦]] ಇಸವಿಯ ಗೌರವ ಪ್ರಶಸ್ತಿ ಲಭಿಸಿದೆ.
* ಸಾಹಿತ್ಯಸೇವೆಗಾಗಿ [[ಬೆಳಗಾವಿ]]ಯ ನಾಡೋಜ ಪತ್ರಿಕೆಯ ಕಾತ್ಯಾಯಿನಿ ಸಾಹಿತ್ಯ ಪ್ರಶಸ್ತಿ ದೊರೆತಿದೆ.
* [[ಧಾರವಾಡ]] ಜಿಲ್ಲಾ [[ಕನ್ನಡ ಸಾಹಿತ್ಯ ಪರಿಷತ್ತು]] ಸನ್ಮಾನ ನೀಡಿದೆ.
* [[ದಿಲ್ಲಿ]]ಯ ಕನ್ನಡಿಗ ಪತ್ರಿಕೆ ದಿ|ಎಮ್.ಕೆ.ಇಂದಿರಾ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
* ರಾಷ್ಟ್ರೀಯ ಸರ್ವಭಾಷಾ ಕವಯಿತ್ರಿ ಸಮ್ಮೇಳನದಲ್ಲಿ ಸರಸ್ವತಿ ಚಿಮ್ಮಲಗಿ ಪ್ರಶಸ್ತಿ ನೀಡಲಾಗಿದೆ.
* [[೨೦೦೫]]ನೆಯ ಸಾಲಿನ ಡಾ|ಡಿ.ಎಸ್.ಕರ್ಕಿ ಪ್ರಶಸ್ತಿ ಲಭಿಸಿದೆ.
 
ಪ್ರಶಸ್ತಿ ಹಾಗು ಸನ್ಮಾನಗಳಲ್ಲದೆ ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರ ಕೆಲವು ಕವಿತೆಗಳು
[[ಕರ್ನಾಟಕ ವಿಶ್ವವಿದ್ಯಾಲಯ]]ದ ಪದವಿ ಪರೀಕ್ಷೆಗಳ [[ಕನ್ನಡ]] ಪಠ್ಯಗಳಲ್ಲಿ ಆಯ್ಕೆಯಾಗಿವೆ. [[ಮಹಾರಾಷ್ಟ್ರ]] ರಾಜ್ಯದ ಹನ್ನೆರಡನೆಯ ತರಗತಿಯ [[ಕನ್ನಡ]] ಪಠ್ಯಗಳಲ್ಲಿ ಸಹ ಇವರ ಕವಿತೆ ಆಯ್ಕೆಯಾಗಿದೆ.
 
[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಮಾಲತಿ ಪಟ್ಟಣಶೆಟ್ಟಿ]] [[ವರ್ಗ:ಲೇಖಕಿಯರು]]