[[ಡಿಸೆಂಬರ್ ೨೯]], [[೧೯೦೪]], [[ಚಿಕ್ಕಮಗಳೂರು]] ಜಿಲ್ಲೆಯ '''[[ಕೊಪ್ಪ]]''' ತಾಲ್ಲೂಕಿನತಾಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, [[ಕುಪ್ಪಳ್ಳಿ]] ([[ಶಿವಮೊಗ್ಗ]] ಜಿಲ್ಲೆ, [[ತೀರ್ಥಹಳ್ಳಿ]] ತಾಲ್ಲೂಕು) ಹಾಗೂ [[ಮೈಸೂರು|ಮೈಸೂರಿನಲ್ಲಿ]] ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, [[ಮೈಸೂರು ವಿಶ್ವವಿದ್ಯಾಲಯ|ಮೈಸೂರು ವಿಶ್ವವಿದ್ಯಾಲಯದಲ್ಲಿ]] ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾದರು.ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು([[ಪೂರ್ಣಚಂದ್ರ ತೇಜಸ್ವಿ]], ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).
ರಾಷ್ಟ್ರಕವಿ ಡಾ.ಕು.ವೆಂ.ಪು ಅವರ ಕುರಿತ ಮತ್ತೊಂದು ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ http://kannadaratna.com/achievers/kuvempu.html