ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೫೭ ನೇ ಸಾಲು:
==ಪ್ರಾಣ್ ಎಂಬ ಸ್ವರೂಪ==
ಮಕ್ಕಳು ಗಲಾಟೆ ಮಾಡಿದರೆ 'ಪ್ರಾಣ್ ಬಂದ್ರು' ಎಂದು ಪೋಷಕರು ಹೆದರಿಸುತ್ತಿದ್ದ ಕಥೆ ಒಂದು ರೀತಿಯದ್ದಾದರೆ, ಇಡೀ ಚಿತ್ರರಂಗದಲ್ಲಿ ‘ಪ್ರಾಣ್ ಸಾಹೇಬ್’ ಅಂದರೆ ಒಂದು ಗೌರವಾನ್ವಿತ ವ್ಯಕ್ತಿತ್ವ. ಪ್ರಾಣ್ ತಮ್ಮ ಪಾತ್ರಗಳಲ್ಲಿ ಅಭಿನಯಿಸುವಾಗ ಒಂದು ಚಿತ್ರದಲ್ಲಿ ಹೇಳುವ 'ಬರ್ಕ್ಹುರ್ದಾರ್', ಎನ್ನುವ ಡಯಲಾಗ್, ಅತ್ಯಂತ ಜನಪ್ರಿಯತೆ ಗಳಿಸಿದೆ.ಪ್ರಾಣ್ ಮಾತನಾಡುವಾಗ ಅವರ ಧ್ವನಿ ಹೃದಯದಿಂದ ಬರುತ್ತಿತ್ತು. ಮಾತಿನಲ್ಲಿ ಒಂದು ಗತ್ತು ಇತ್ತು. ಅವರ ಮಾತಿನ ಧಾಟಿಯನ್ನು ನಾವು,'ಜಂಜೀರ್' ಚಿತ್ರದಲ್ಲಿ ಕಾಣಬಹುದು : "ಈಸ್ ಇಲಾಖೆ ಮೇ ನಯೇ ಆಯೆ ಹೊ ಸಾಹೇಬ್; ವರ್ನಾ ಶೇರ್ ಖಾನ್ ಕೊ ಕೌನ್ ನಹಿ ಜಾನ್ತಾ" ಹಾಗೂ 'ಜಿಸ್ ದೇಸ್ ಮೇ ಗಂಗಾ ಬೆಹ್ತಿ ಹೈ' ಚಿತ್ರದಲ್ಲಿ, "ತುಮ್ಹಾರ ಬಾಪ್ ರಾಕಾ",
==ವಿದಾಯ==▼
==ಪ್ರಾಣ್ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಗಳು==
* ಪ್ರಾಣ್ ಮೊಟ್ಟಮೊದಲು ಬೊಂಬಾಯಿಗೆ ಬಂದಾಗ, 'ತಾಜ್ ಮಹಲ್ ಹೋಟೆಲ್' ನಲ್ಲಿ ವಾಸವಾಗಿದ್ದರು. ಬೊಂಬಾಯಿನಲ್ಲಿ ಆಗ ಅವರು ನಿರುದ್ಯೊಗಿಯಾಗಿದ್ದರು.ಊರಿನಿಂದ ತಂದ ಹಣ ಬೇಗ ವ್ಯಯವಾಗಿ, ಚಿಕ್ಕ ಹೋಟೆಲ್ ಗಳಲ್ಲಿ ಗೆಸ್ಟ್ ಹೌಸ್ ಗಳಲ್ಲಿ ಇರಬೇಕಾಗಿ ಬಂತು. ಸನ್. ೧೯೫೪ ರ ವರೆಗೆ ಬಾಡಿಗೆ ಮನೆಗಳಲ್ಲಿ ವಾಸ್ತವ್ಯ. 'ಪಾಲಿ ಹಿಲ್' ನಲ್ಲಿ ೨ ಬೆಡ್ ರೂಂ ಫ್ಲಾಟ್ ಬಾಡಿಗೆಗೆ ಗೊತ್ತುಮಾಡಿಕೊಂಡರು. ನಂತರ 'ಮಝಗಾಂ'(ಸೆಂಟ್ರೆಲ್ ಮುಂಬೈ)ನಲ್ಲಿ ವಾಸವಾಗಿದ್ದರು. ಕಿರಿಯ ಮಗಳು 'ಪಿಂಕಿ,' ೩ ವರ್ಷದವಳಿದ್ದಾಗ,'ಬಾಂದ್ರದ ಯೂನಿಯನ್ ಪಾರ್ಕ್' ನಲ್ಲಿ ಒಂದು 'ಬಂಗಲೆ' ಖರೀದಿಸಿದರು.
Line ೭೪ ⟶ ೭೦:
* ಒಂದು ಸಮಯದಲ್ಲಿ, ಪ್ರಾಣ್, ಅಮಿತಾಬ್, ವಿನೋದ್ ಖನ್ನ, ನವೀನ್ ನಿಶ್ಚಲ್, ಶತ್ರುಘ್ನ ಸಿಂಹ, ರಣ್ಧೀರ್ ಕಪೂರ್, ರಿಷಿ ಕಪೂರ್, ರವರಿಗಿಂತ ಅಧಿಕ ಸಂಭಾವನೆಗಳಿಸುತ್ತಿದ್ದರು.೧೯೭೦-೧೯೮೨ ರಲ್ಲಿ, ಕೇವಲ ರಾಜೇಶ್ ಖನ್ನ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಸನ್.೧೯೭೦-೧೯೮೯ ಸಮಯದಲ್ಲಿ, ಪ್ರಾಣ್ ರವರಿಗೂ ಸಂಜೀವ್ ಕುಮಾರ್ ಧರ್ಮೇಂದ್ರ,ಶಶಿಕಪೂರ್, ಒಟ್ಟಿಗೆ ಅಭಿನಯಿಸಿದಾಗ, ಅವರಷ್ಟೇ ಹಣ ಪಡೆಯುತ್ತಿದ್ದರು.
* ೨ ತೆಲುಗು ಚಿತ್ರಗಳಲ್ಲಿ, ೧ ೯ ೮ ೬,ರಲ್ಲಿ, 'ತಂದ್ರ ಪಾಪರಾಯುಡು', ೧೯೯೦ ರಲ್ಲಿ ಚಿರಂಜೀವಿ ಜೊತೆಗೆ, 'ಕೊಡಮ ಸಿಂಹಂ' ಎಂಬ ಚಿತ್ರಗಳಲ್ಲಿ ಅಭಿನಯಿಸಿದರು. ಸನ್.೧೯೯೧ ರಲ್ಲಿ 'ಹೊಸರಾಗ'ವೆಂಬ ಕನ್ನಡ ಚಿತ್ರದಲ್ಲಿ ಅಭಿನಯಿಸಿದರು.
==ಪ್ರಶಸ್ತಿ ಗೌರವಗಳು==
'''ಪ್ರಾಣ್ ಅವರಿಗೆ ಸಂದ ಗೌರವಗಳು ಅನೇಕವಾದವು.'''
Line ೧೧೩ ⟶ ೧೦೮:
[[ಚಿತ್ರ:P.014402513.jpg|thumb|right|300px|'ಪ್ರಾಣ್ ಜೊತೆ ಅವರ ಪರಿವಾರ']]
ಸನ್.೧೯೯೭ ರ ಚಿತ್ರೀಕರಣದ ಸಮಯದಲ್ಲೇ ಅವರಿಗೆ ಮೊಣಕಾಲು ಚಿಪ್ಪಿನ ನೋವು ಹೆಚ್ಚಾಯಿತು. ಬಹಳ ಕಾಲದಿಂದ ಅದರ ನೋವನ್ನು ಅನುಭವಿಸುತ್ತಿದ್ದಾರೆ. 'ವೀಲ್ ಛೇರ್' ನಲ್ಲೇ ಕುಳಿತು ಕೆಲವು ಚಿತ್ರಗಳಲ್ಲಿ ಅತಿಥಿನಟನಾಗಿ ನಟಿಸಿದ್ದಾರೆ. ಅವರಿಗೆ ಈಗಾಗಲೇ ಸಂದಿರುವ ಚಿತ್ರರಂಗದ ಶ್ರೇಷ್ಠ ಗೌರವವಾದ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ಸನ್. ೨೦೧೩ ರ, ಮೇ ತಿಂಗಳ ೩ ರಂದು ;ಭಾರತೀಯ ಚಲನಚಿತ್ರರಂಗದ ನೂರನೆಯ ವರ್ಷದ ಆಚರಣೆಯ ಶುಭ ಸಂದರ್ಭ;ದಲ್ಲಿ ದೆಹಲಿಗೆ ಪ್ರಯಾಣಿಸಿ, 'ರಾಷ್ಟ್ರಪತಿ ಪ್ರಣಬ್ ಮುಖರ್ಜಿ'ಯವರ ಹಸ್ತದಿಂದ ಪಡೆಯಲು ಸಾಧ್ಯವಾಗಲಿಲ್ಲ. ೨೦೧೩ ರ, ಮೇ, ೧೦, ಶುಕ್ರವಾರ, ದೆಹಲಿಯಿಂದ 'ವಾರ್ತೆ ಹಾಗೂ ಪ್ರಸಾರಾಂಗ ಖಾತೆಯ ಮಂತ್ರಿ, ಮನೀಷ್ ತಿವಾರಿ, ಸಚಿವ ಉದಯಕುಮಾರ್ ವರ್ಮಾ ಹಾಗೂ ಸಚಿವಾಲಯದ ಫಿಲ್ಮೋತ್ಸವದ ಡೆಲಿಗೇಶನ್ ಜೊತೆ, ನವದೆಹಲಿಯಿಂದ ಮುಂಬೈನ 'ಪ್ರಾಣ್ ರವರ ನಿವಾಸಕ್ಕೆ ಬಂದು ಈಗಾಗಲೇ ಘೋಶಿಸಿರುವ 'ಡಾ. ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಪ್ರದಾನಮಾಡಲಾಯಿತು. ಪುತ್ರಿ, 'ಪಿಂಕಿ ಭಲ್ಲಾ' ಮತ್ತು ಮನೆಯ ಸದಸ್ಯರೆಲ್ಲರ ಸಮ್ಮುಖದಲ್ಲಿ ಪ್ರಥಮಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನಮಾಡಿರುವುದು ಒಂದು ದಾಖಲೆಯಾಗಿದೆ. 'ಸ್ವರ್ಣ ಕಮಲ', 'ಸ್ಮೃತಿ ಫಲಕ', 'ಶಾಲು', ಹಾಗೂ '೧೦ ಲಕ್ಷ ರೂಗಳ ನಕದು ಬಹುಮಾನ'ವೂ ಇದರ ಜೊತೆ ಸೇರಿದೆ.
▲==ವಿದಾಯ==
ಸನ್. ೨೦೧೩ ರ, ಜುಲೈ ೧೨, ಶುಕ್ರವಾರ,ದಂದು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಸುಮಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಹಿಂದಿ ಚಿತ್ರರಂಗದ ಖಳನಾಯಕ, ಪ್ರಾಣ್, ಕೊನೆಯುಸಿರೆಳೆದರು.
* ಚಿತ್ರಕೃಪೆ : ಉದಯವಾಣಿ ಕನ್ನಡ ದಿನಪತ್ರಿಕೆ [[http://www.udayavani.com/news/294462L15-%E0%B2%B9-%E0%B2%B0-%E0%B2%AF-%E0%B2%A8%E0%B2%9F-%E0%B2%AA-%E0%B2%B0-%E0%B2%A3--%E0%B2%97--%E0%B2%AE%E0%B2%A8-%E0%B2%AF%E0%B2%B2-%E0%B2%B2--%E0%B2%AB-%E0%B2%B2-%E0%B2%95--%E0%B2%97-%E0%B2%B0%E0%B2%B5-%E0%B2%AA-%E0%B2%B0%E0%B2%A6-%E0%B2%A8.html,]]
|