ತಾಳ್ತಜೆ ವಸಂತಕುಮಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೬ ನೇ ಸಾಲು:
==ಪುತ್ತೂರಿನಲ್ಲಿ ಅಭಿನಂದನಾ ಸಮಾರಂಭ==
ಸನ್. ೨೦೧೩ ರ ಮಾರ್ಚ್ ೧೭ ರಂದು ದಿನವಿಡೀ ಜರುಗಿದ ವೈವಿಧ್ಯ ಪೂರ್ಣ ಕಾರ್ಯಕ್ರಮದಲ್ಲಿ 'ಆಯನ' ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಯಿತು. ಜಿಲ್ಲೆಯ ಹಿರಿಯ ಸಾಂಸ್ಕೃತಿಕ ಮುಂದಾಳು ಶ್ರೀ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷತೆಯಲ್ಲಿ ಕಾವ್ಯ ವಾಚನ, ವಿಶೇಷ ಉಪನ್ಯಾಸ, ಹಾಗೂ ೮ ಮಂದಿ ಶಿಷ್ಯರ ಗುರುವಂದನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಕಾವ್ಯವಾಚನ ಶ್ರೀ. ಗಣಪತಿ ಪದ್ಯಾಣರಿಂದ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಧ್ಯಕ್ಷರಾದ, ಶ್ರೀ.ಪ್ರದೀಪ್ ಕುಮಾರ್ ಕಲ್ಕೂರ ಶುಭ ಹಾರೈಸಿದರು. ಡಾ. ಪಾದೇಕಲ್ಲು ವಿಷ್ಣು ಭಟ್ಟ 'ಕನ್ನಡ ಸಾಹಿತ್ಯ ಸಂಶೋಧನೆಗಳಿಗೆ ತಾಳ್ತಜೆ ವಸಂತಕುಮಾರರ ಕೊಡುಗೆ' ಎಂಬ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಮುಂಬೈ ಪ್ರತಿನಿಧಿ ಡಾ. ಗಿರಿಜಾ ಶಾಸ್ತ್ರಿಯವರು ಶುಭ ಹಾರೈಸಿದರು.
ಮಧ್ಯಾನ್ಹ 'ಯಕ್ಷಗಾನ ತಾಳ ಮದ್ದಲೆ ಕಾರ್ಯಕ್ರಮ' ವಿತ್ತು. ಅಭಿನಂದನಾ ಕಾರ್ಯಕ್ರಮ ಸಂಜೆ ಜರುಗಿತು. ನಾಡೋಜ, ಹಂಪ ನಾಗರಾಜಯ್ಯ ಅಧ್ಯಕ್ಷರಾಗಿದ್ದರು.ಪ್ರೊ. ಎ. ವಿ. ನಾರಾಯಣ ಸ್ವಾಗತ ಭಾಷಣ ಮಾಡಿದರು. ಡಾ. ಬಿ. ಎ. ವಿವೇಕ ರೈ 'ಆಯನ' ಗ್ರಂಥವನ್ನು ಅನಾವರಣ ಗೊಳಿಸಿ ಅರ್ಪಿಸಿದರು. ಚಿನ್ನಪ್ಪ ಗೌಡ ಪ್ರಾಸ್ತಾವಿಕ ಭಾಷಣ, ಪ್ರೊ. ಎಂ. ರಾಮಚಂದ್ರ, ಅಭಿನಂದನಾ ಭಾಷಣ ಮಾಡಿದರು. ಕಾರ್ಯದರ್ಶಿ ಡಾ. ಗೊವಿಂದ ಪ್ರಸಾದ್ ಕಜೆ, ವಂದಿಸಿದರು. ಡಾ. ಹಂಪನಾ, ಮತ್ತು ಸಮಿತಿಯ ಗೌರವಾಧ್ಯಕ್ಷ ಶ್ರೀ. ರಾಮ್ ಭಟ್, ಸಮಿತಿಯ ಪರವಾಗಿ ಡಾ. ತಾಳ್ತಜೆಯವರಿಗೆ ಪುಷ್ಪ ಹಾರ, ತಾಂಬೂಲ, ಫಲ,ಸ್ಮರಣಿಕೆಗಳನ್ನಿತ್ತು ಶಾಲು ಹೊದಿಸಿ ಗೌರವ ಸಮರ್ಪಿಸಿದರು. ಶ್ರೀ. ಮಹೇಶ್ ಕಜೆ, ಕಾರ್ಯಕ್ರಮ ನಿರೂಪಣೆ ಮಾಡಿದರು. ವಿವೇಕನಂದವಿವೇಕಾನಂದ ಕಾಲೇಜಿನಲ್ಲಿ ತಾಳ್ತಜೆಯವರು ಸುಮಾರು ೧೫ ವರ್ಷ ಸೇವಿಸಲ್ಲಿಸಿದ್ದರುಸೇವೆ ಸಲ್ಲಿಸಿದ್ದರು. ಹಾಗಾಗಿ ಅವರ ಶಿಷ್ಯರು, ಅಭಿಮಾನಿಗಳು, ಬಂಧುಗಳು ಹಾಗೂ ಅಪಾರ ಸ್ನೇಹಿತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.