ತಾಳ್ತಜೆ ವಸಂತಕುಮಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
No edit summary
೧ ನೇ ಸಾಲು:
[[ಚಿತ್ರ:20415.jpg|thumb|rigt|250px|' ಡಾ.'ತಾಳ್ತಜೆ ವಸಂತಕುಮಾರ' ರು ಮುಂಬೈನ ಕನ್ನಡ ಸಂಘದಲ್ಲಿ']]
'''ಡಾ|ತಾಳ್ತಜೆ ವಸಂತಕುಮಾರ''' ಇವರು [[ಕರ್ನಾಟಕ]]ದ [[ದಕ್ಷಿಣ ಕನ್ನಡ]] ಜಿಲ್ಲೆಯವರು. [[ಮುಂಬಯಿ ವಿಶ್ವವಿದ್ಯಾಲಯ]]ದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ನಿವೃತ್ತರಾಗಿದ್ದಾರೆ. [[ಮುಂಬಯಿ]]ಯ [[ಕನ್ನಡ]] ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ತಾಳ್ತಜೆಯವರು ಸೃಜನಾತ್ಮಕ ಸಾಹಿತಿಗಳು, ವಿಮರ್ಶಕರು ಹಾಗು ಸಂಶೋಧಕರೂ ಸಹ ಆಗಿರುತ್ತಾರೆ.
==’ಡಾ. ತಾಳ್ತಜೆ’ ಯವರಿಗೆ, ’ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’-೨೦೦೯ ==
’[[೨೦೦೯ ರ ಪ್ರತಿಶ್ಠಿತ, ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ]],' ಖ್ಯಾತ ಸಾಹಿತಿ, ಸಂಶೋಧಕ, ಸಮರ್ಥ ಆಯೋಜಕ, ಡಾ|ತಾಳ್ತಜೆ ವಸಂತಕುಮಾರ್ ವರಿಗೆ ಲಭಿಸಿದೆ. ಮುಂಬೈಯ ’ಅಕ್ಷಯ ಪತ್ರಿಕೆ’ ಯ ಗೌ. ಪ್ರಧಾನ-ಸಂಪಾದಕರಾದ, ’ಎಂ.ಬಿ. ಕುಕ್ಯಾನ್’, ಪ್ರಾಯೋಜಕತ್ವದಲ್ಲಿ, ಮುಂಬೈನ 'ಬಿಲ್ಲವರ ಅಸೋಸಿಯೇಷನ್’, ಕೊಡಲಿಚ್ಛಿಸುವ '[[ಪ್ರತಿಷ್ಠಿತ, ನಾರಾಯಣ ಗುರುಸಾಹಿತ್ಯ ಪ್ರಶಸ್ತಿ]]',ತಾಳ್ತಜೆಯವರ, ೪ ದಶಕಗಳ ಮುಂಬೈನ ಕನ್ನಡ ಶಿಕ್ಷಣ ಸಾಹಿತ್ಯ ಸೇವೆಗಳನ್ನು ಗುರುತಿಸಿ, ೧೩ ನೇ ತಾರೀಖಿನಂದು ಖ್ಯಾತಕವಿ, '[[ಶ್ರೀ. ಬಿ. ಎ. ಸನದಿ]]'ಯವರ ಹಸ್ತದಿಂದ ಪ್ರದಾನಮಾಡಲಾಯಿತು. ಪ್ರಶಸ್ತಿ ಫಲಕ, ಶಾಲು, ಫಲಪುಷ್ಪ, ಸನ್ಮಾನ-ಪತ್ರ, ಹಾಗೂ ನಗದು ಹತ್ತು ಸಾವಿರ ರೂಪಾಯಿಗಳ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಯಿತು. ನಿವೃತ್ತ ಹಾಗೂ ಒಂಟಿ-ಜೀವನ ನಡೆಸುತ್ತಿರುವಾಗ, ಸ್ನೇಹ, ವಿಶ್ವಾಸ, ಕೃತಜ್ಞನೆಗಳು ದೊಡ್ಡ ಮೌಲ್ಯಗಳಾಗಿ ಸಮಾಧಾನ ಕೊಡುತ್ತವೆ, ಎಂದು ತಾಳ್ತಜೆಯವರು ನುಡಿದರು. ಸಮಾರಂಭದ ಪ್ರಮುಖ ಅತಿಥಿಯಾಗಿ, ಆಗಮಿಸಿದ, ’[[ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಮೂಡಬಿದ್ರಿ]]’, ಛೇರ್ಮನ್, ಡಾ, ಎಂ ಮೋಹನ ಆಳ್ವ, ದೀಪಬೆಳಗಿ, '[[ಅಕ್ಷಯ ಮಾಸ ಪತ್ರಿಕೆಯ ವಿಶೇಷಾಂಕ]]',ದ ಬಿಡುಗಡೆಮಾಡಿದರು. ಅಕ್ಷಯ ಪತ್ರಿಕೆಯ '[[ಪ್ರಧಾನ ಸಂಪಾದಕ, ಕುಕ್ಯಾನ್]]' ರವರನ್ನು ಗೌರವಿಸಲಾಯಿತು. ಖ್ಯಾತಕವಿ, ಬಿ. ಎ. ಸನದಿಯವರು 'ಅಕ್ಷಯ ಮಾಸ ಪತ್ರಿಕೆ'ಯ ಬಗ್ಗೆ ಮಾತನಾಡಿ, ಅದು ಒಳನಾಡು ಹೊರನಾಡುಗಳನ್ನು ಬೆಸೆದು, 'ಅತ್ಯಂತ ಜನಪ್ರಿಯ ಪತ್ರಿಕೆ'ಯಾಗಿ ಹೊರಹೊಮ್ಮಿದೆಯೆಂದರು. ವಸಂತಕುಮಾರ್ ಮಾತನಾಡಿ, 'ಬಿಲ್ಲವರ ಎಸೋಸಿಯೇಷನ್' ಮುಂಬೈನಗರದ, ಒಂದು ಮುಕ್ತಮನಸ್ಸುಗಳ ಸುಸಂಘಟನೆಯಾಗಿ ಬೆಳೆದಿರುವುದನ್ನು ಶ್ಲಾಘಿಸಿದರು. ಅಧ್ಯಕ್ಷ, ಜಯ ಸಿ. ಸುವರ್ಣ ಮುಂದುವರೆದು, 'ಬಿಲ್ಲವರ ಅಸೋಸಿಯೇಷನ್, ಕಳೆದ ಏಳೂವರೆ ದಶಕಗಳಿಂದ ಸಮಾಜನಿರ್ಮಾಣ ಕಾರ್ಯಗಳನ್ನು ಮುಂದುವರೆಸಿ, ಸಮಾಜದ ದುರ್ಬಲ ವರ್ಗಕ್ಕೆ ಸಹಾಯಮಾಡಿ, ನಾರಾಯಣ ಗುರುಗಳ ಸಂದೇಶದಂತೆ, ಬಡಮಕ್ಕಳ ಅಕ್ಷರ ಸೇವೆಯ ಕಡೆ ಗಮನ ಹರಿಸುತ್ತಾ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದಲ್ಲೂ ಹೆಸರುಮಾಡಿದೆಯೆಂದು ತಿಳಿಸಿದರು.
==ಮನರಂಜನೆ ಕಾರ್ಯಕ್ರಮ, ’ಕಲಾಸೌರಭತಂಡ’ದಿಂದ’ಕಲಾಸೌರಭ ತಂಡ’ದಿಂದ==
’ರಸಮಂಜರಿ’, ಮತ್ತು ಮಹಿಳಾ ವಿಭಾಗದಿಂದ ನೃತ್ಯ, ಇತ್ಯಾದಿಗಳು ಜರುಗಿದವು. ಈ ಸಮಯದಲ್ಲಿ, ಗೌ.ಪ್ರಧಾನ ಕಾರ್ಯದರ್ಶಿ, ಜ್ಯೋತಿ. ಕೆ. ಸುವರ್ಣ, ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಭಾರತ್ ಕೋ. ಆಪರೇಟಿವ್ ಬ್ಯಾಂಕ್ ನ ಕಾರ್ಯಾಧ್ಯಕ್ಷ, ವಾಸುದೇವ ಆರ್. ಕೋಟ್ಯಾನ್, ಅಸೋಸಿಯೇಷನ್ ನ ಗೌ. ಅಧ್ಯಕ್ಷ, ವೈ. ನಾಗೇಶ್, ಮಹಿಳಾ ವಿಭಾದ ಕಾರ್ಯಾಧ್ಯಕ್ಷೆ, ಜಯಂತಿ ಉಳ್ಳಾಲ್, ಉಪಾಧ್ಯಕ್ಷ ಎಲ್.ವಿ. ಅಮೀನ್, ಸಿಟಿ. ಸಾಲ್ಯಾನ್ ಹಾಗೂ ಮತ್ತಿತರ ಗಣ್ಯರು, ಸಭೆಯಲ್ಲಿ ಉಪಸ್ಥಿತರಿದ್ದರು
==ಪ್ರಶಸ್ತಿಪ್ರದಾನ-ಸಮಿತಿ==
೧೩ ನೇ ಸಾಲು:
* ಸನ್, ೨೦೧೦ ರ 'ಕಾಂತಾವರ ಪ್ರಶಸ್ತಿ'.
* ಸನ್, ೨೦೧೧ ರ, ಸಾಲಿನ 'ಸೇಡಿಯಾಪು ವಿದ್ವತ್ ಪ್ರಶಸ್ತಿ'. ಇದನ್ನು 'ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ' ನೀಡುತ್ತಾ ಬಂದಿದೆ.
==ಕೃತಿಗಳು==
 
=='ಡಾ.ತಾಳ್ತಜೆ ವಸಂತಕುಮಾರ್' ರವರು, ಪ್ರಕಟಿಸಿದ ಕೃತಿಗಳು ಹೀಗಿವೆ==
* '[[ಸಾಧನೆ]]',
 
* '[[ಮುತ್ತಿನ ಸತ್ತಿಗೆ]]',
 
* '[[ಶಿವರಾಮ ಕಾರಂತ]]',
 
* '[[ಬೌದ್ಧಾಯನ]]', (ಸಂಶೋಧನಾ ಕೃತಿಗೆ, '[[ಕರ್ನಾಟಕ ಸಾಹಿತ್ಯ ಕಾಡೆಮಿ ಪ್ರಶಸ್ತಿ]],' ಲಭಿಸಿದೆ)
==ಅತ್ಯುತ್ತಮ ವಿಮರ್ಶಕ, ಹಾಗೂ ಮಾತುಗಾರರು==
 
ಡಾ. ವಸಂತಕುಮಾರರು, ರಾಷ್ಟ್ರಮಟ್ಟದ, ಮತ್ತು ಪ್ರಾದೇಶಿಕ ವಿಚಾರ ಸಂಕಿರಣಗಳು, ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ.ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ, ಅನೇಕ ರಾಷ್ಟ್ರ ಮಟ್ಟದ ಮತ್ತು ಪ್ರಾದೇಶಿಕ ವಿಚಾರಸಂಕಿರಣಗಳನ್ನು ವ್ಯವಸ್ಥೆಗೊಳಿಸಿ, ನಿರ್ದೇಶಿಸಿದ್ದಾರೆ. ಒಳ್ಳೆಯ ಮಾತುಗಾರರು, ಹಾಗೂ ಅತ್ಯುನ್ನತ ವಿಮರ್ಶಕರಲ್ಲೊಬ್ಬರು.
==ಕೃತಿಗಳು==