ಭದ್ರಾವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫ ನೇ ಸಾಲು:
| type_2 =
| skyline= Lakshmi Narasimha Temple Bhadravathi.jpg
| skyline_caption= ಭದ್ರಾವತಿಯಲ್ಲಿರುವ ೧೩ನೇ ಶತಮಾನದ ಲಕ್ಷ್ಮಿ ನರಸಿಂಹಲಕ್ಷ್ಮೀನರಸಿಂಹ ದೇವಾಲಯದ ಎಡಗೋಪುರ
| locator_position = left
| latd = 13.5
೩೨ ನೇ ಸಾಲು:
}}
 
'''ಭದ್ರಾವತಿ''' [[ಭಾರತ]] ದೇಶದ, [[ಕರ್ನಾಟಕ]] ರಾಜ್ಯದ, [[ಶಿವಮೊಗ್ಗ]] ಜಿಲ್ಲೆಯಲ್ಲಿರುವ ಒಂದು ಕೈಗಾರಿಕಾ ಪಟ್ಟಣ. ಶಿವಮೊಗ್ಗ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಕರ್ನಾಟಕದ ಉಕ್ಕಿನ ನಗರವೆಂದು ಕರೆಯಲ್ಪಡುವ ಇದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು ೨೫೫ ಕಿಲೋಮೀಟರ್ ಮತ್ತು ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ ೧೮ ಕಿಲೋಮೀಟರ್ ದೂರದಲ್ಲಿದೆ. ಈ ಪಟ್ಟಣವು ೬೭ ಚದರ ಕಿ.ಮೀ ಕ್ಷೇತ್ರಫಲ ಮತ್ತು ೨೦೦೧ ಜನಗಣತಿಯ ಪ್ರಕಾರ ೧೬೦,೬೬೨ ಜನ ಸಂಖ್ಯೆ ಹೊಂದಿದೆ. ಇತ್ತೀಚಿನ ಚರಿತ್ರೆಯಲ್ಲಿ ಭದ್ರಾವತಿಯು ೧೯೧೮ರಲ್ಲಿ ಸ್ಥಾಪಿಸಲಾದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಹೆಸರಾಯಿತು. ಅನಂತರ 'ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ' ಎಂದು ನಾಮಕರಣಗೊಂಡ ಇದು ಒಂದು ದೊಡ್ಡ ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಸೌಕರ್ಯ ಹೊಂದಿದ್ದು ಭದ್ರಾವತಿಯ ಮುಖ್ಯ ಭಾಗವಾಗಿದೆ. ಕಾರ್ಖಾನೆಗಳ ಪಟ್ಟಣ ಎಂಬ ಪ್ರಖ್ಯಾತಿಯನ್ನು ಹೆಚ್ಚಿಸಿದ್ದು ೧೯೩೬ರಲ್ಲಿ ಸ್ಥಾಪಿಸಲಾದ ಒಂದು ಕಾಗದ ಕಾರ್ಖಾನೆ, ಮೈಸೂರು ಕಾಗದ ಕಾರ್ಖಾನೆ.
 
== ಚರಿತ್ರೆ ==
ಭದ್ರಾವತಿಯ ಹೆಸರು ಅದರ ಮೂಲಕ ಹರಿಯುವ [[ಭದ್ರಾ]] ನದಿಯಿಂದ ಉತ್ಪನ್ನವಾಗಿದೆ. ಹಿಂದೆ ಬೆಂಕಿಪುರ (ಅಥವಾ ವಂಕಿಪುರ/ವೆಂಕಿಪುರ) ಎಂದು ಕರೆಯಲ್ಪಟ್ಟಿತ್ತು. ಇತ್ತೀಚಿನ ಚರಿತ್ರೆಯಲ್ಲಿ ಭದ್ರಾವತಿಯು ೧೯೧೮ರಲ್ಲಿ ಸ್ಥಾಪಿಸಲಾದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಹೆಸರಾಯಿತು. ಅನಂತರ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಎಂದು ನಾಮಕರಣಗೊಂಡ ಇದು ಒಂದು ದೊಡ್ಡ ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಸೌಕರ್ಯ ಹೊಂದಿದ್ದು ಭದ್ರಾವತಿಯ ಮುಖ್ಯ ಭಾಗವಾಗಿದೆ. ಕಾರ್ಖಾನೆಗಳ ನಗರ ಎಂಬ ಪ್ರಖ್ಯಾತಿಯನ್ನು ಹೆಚ್ಚಿಸಿದ್ದು ೧೯೩೬ರಲ್ಲಿ ಸ್ಥಾಪಿಸಲಾದ ಒಂದು ಕಾಗದ ಕಾರ್ಖಾನೆ, ಮೈಸೂರು ಕಾಗದ ಕಾರ್ಖಾನೆ.
ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ [[ಸರ್. ಎಂ. ವಿಶ್ವೇಶ್ವರಯ್ಯ]]ನವರು ಇಲ್ಲಿ ಕಬ್ಬಿಣದ ಕಾರ್ಖಾನೆಯನ್ನು ಸ್ಥಾಪಿಸಿದ ಮೇಲೆ ಭದ್ರಾವತಿ ಎಂಬ ಈ ಹೊಸ ಹೆಸರು ಈ ಊರಿಗೆ ಬಂದಿತೆಂದು ಹೇಳಲಾಗುತ್ತದೆ. ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೂ ಈ ಊರಿಗೆ ಬೆಂಕಿಪುರವೆಂದು ಕರೆಯುತ್ತಿದ್ದರು. ಈ ಬೆಂಕಿಪುರವೆಂಬ ಹೆಸರಿಗೂ ಬೆಂಕಿಗೂ ಯಾವ ಸಂಬಂಧವೂ ಇಲ್ಲ. ಈ ಬೆಂಕಿಪುರ ಎಂಬ ಪದವು ವಂಕೀಪುರ ಎನ್ನುವ ಹೆಸರಿ ಅಪಭ್ರಂಶವಷ್ಟೆ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಬಳಿ ಸಹ್ಯಾದ್ರಿಯ ಒಡಲಲ್ಲಿ ತನ್ನ ಉಗಮಸ್ಥಾನ ಹೊಂದಿರುವ ಭದ್ರಾನದಿಯು ಉತ್ತರಾಭಿಮುಖವಾಗಿ ಹರಿದು ಭದ್ರಾವತಿ ನಗರವನ್ನು ದಕ್ಷಿಣ ದಿಕ್ಕ್ಕಿನಿಂದ ಪ್ರವೇಶಿಸುತ್ತದೆ. ಹೀಗೆ ಪ್ರವೇಶಿಸುವಾಗ, ಉತ್ತರ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ಎಡಕ್ಕೆ ತಿರುಗಿ ಪಶ್ಚಿಮ ವಾಹಿನಿಯಾಗುತದೆ. ಉತ್ತರ ದಿಕ್ಕಿನಿಂದ ಪಶ್ಛಿಮ ದಿಕ್ಕಿಗೆ ತಿರುಗುವ ಈ ತಿರುವಿಗೆ ಚಕ್ರತೀರ್ಥ ಎನ್ನುತ್ತಾರೆ. ಈ ಚಕ್ರತೀರ್ಥದ ಬಳಿ ಪುರಾಣ ಪ್ರಸಿದ್ಧ ವಂಕೀ ಮಹರ್ಷಿಗಳ ಆಶ್ರಮವಿತ್ತಂತೆ. ಈ ವಂಕೀ ಮಹರ್ಷಿಗಳು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಕುರಿತು ತಪಸ್ಸನ್ನಾಚರಿಸುತ್ತಾರೆ. ಸ್ವಾಮಿಯು ಈ ಋಷಿಗಳಿಗೆ ದರ್ಶನವಿತ್ತು, "ಪಶ್ಚಿಮವಾಹಿನಿಯಾದ ಭದ್ರೆಯ ಯಾವ ಪವಿತ್ರ ಕ್ಷೇತ್ರದಲ್ಲಿ ನೀನು ತಪವನ್ನಾಚರಿಸಿದೆಯೋ ಆ ಕ್ಷೇತ್ರದಲ್ಲಿ ನಾನು ಸ್ಥಿರವಾಗಿ ನೆಲೆಸಿ ಭಕ್ತರ ಅಭೀಷ್ಟೆಗಳನ್ನು ಈಡೇರಿಸುವನು" ಎಂದು ಹೇಳಿದನೆಂದು ಪ್ರತೀತಿ. ಮುಂದೆ ಹದಿಮೂರನೇ ಶತಮಾನದಲ್ಲಿ ಹೊಯ್ಸಳರ ವೀರನಸಿಂಹನು ([[ವಿಷ್ಣುವರ್ಧನ]]ನ ಮೊಮ್ಮಗ ಮತ್ತು ಎರಡನೇ ಬಲ್ಲಾಳನ ಮಗ) ವಂಕೀ ಮಹರ್ಷಿ ಮತ್ತು ಲಕ್ಷ್ಮೀನರಸಿಂಹ ಸ್ಥಳ ಪುರಾಣವಿದ್ದ ಈ ಪ್ರದೇಶದಲ್ಲಿ ಭವ್ಯವಾದ ಲಕ್ಷ್ಮೀನರಸಿಂಹ ದೇವಾಲಯವನ್ನು [[ಹೊಯ್ಸಳ]] ಶಿಲ್ಪಕಲಾ ಮಾದರಿಯಲ್ಲಿ ಕಟ್ಟಿಸಿ ಕ್ರಿ.ಶ. ೧೨೨೪ ನೇ ಇಸವಿಯ ವ್ಯಯನಾಮ ಸಂವತ್ಸರದ ದ್ವಿತೀಯ ಶುದ್ಧ ತ್ರಯೋದಶಿಯಂದು ಲೋಕಾರ್ಪಣೆ ಮಾಡಿದನು. ಇಂದಿಗೂ ಈ ದೇವಾಲಯ ಭದ್ರಾವತಿಯ ಹಳೇನಗರದಲ್ಲಿದ್ದು ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿ ಐತಿಹಾಸಿಕ ಸ್ಮಾರಕವೆಂದು ಘೋಷಿಸಲ್ಪಟ್ಟಿದೆ. ಈ ಊರಿಗೆ ವಂಕೀಪುರ ಎಂಬ ಹೆಸರು ಇತ್ತೆಂಬುದಕ್ಕೆ ಇಂಬು ಕೊಡುವಂತೆ, ಶ್ರೀಲಕ್ಷ್ಮೀನರಸಿಂಹನ ಬಗ್ಗೆ ಒಂದು ಶ್ಲೋಕವಿದೆ. ಅದೆಂದರೆ "ಮಂಗಲಂ ಸ್ತಂಭ ಡಿಂಭಾಯ, ಮಂಗಲಂ ಮೃತ್ಯು ಮೃತ್ಯವೇ, ವಂಕೀಪುರ ನಿವಾಸಾಯ, ನರಸಿಂಹಾಯ ಮಂಗಲಂ" ಎಂದು. ಈ ಶ್ಲೋಕವನ್ನು ಇಂದಿಗೂ ದೇವಾಲಯ ದ್ವಾರದಲ್ಲಿ ಕಾಣಬಹುದು. ಹದಿನಾಲ್ಕನೇ ಶತಮಾನದಿಂದೀಚೆಗೆ ಈ ಊರಿಗೆ ಲಕ್ಷ್ಮೀಪುರ, ಲಕ್ಷ್ಮೀನರಸಿಂಹಪುರ, ಭದ್ರಾಪುರ ಇನ್ನೂ ಮುಂತಾದ ಹೆಸರುಗಳಿದ್ದವೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಇಷ್ಟೆಲ್ಲಾ ಹೆಸರುಗಳಿದ್ದೂ ವಂಕೀಪುರವೆಂಬ ಹೆಸರೇ ರೂಢಿಯಲ್ಲಿ ಉಳಿದುಕೊಂಡು ಕಾಲಕ್ರಮೇಣ ಜನರಬಾಯಲ್ಲಿ ಅದು ಬೆಂಕಿಪುರವಾದದ್ದು, ತದನಂತರ [[ನಾಲ್ವಡಿ ಕೃಷ್ಣರಾಜ ಒಡೆಯರ್]] ಆಳ್ವಿಕೆಯ ಕಾಲದಲ್ಲಿ ಭದ್ರಾವತಿ ಎಂದು ಮರುನಾಮಕರಣಗೊಂಡಿತು.
 
== ಭೌಗೋಳಿಕ ==
Line ೪೩ ⟶ ೪೪:
=== ರಸ್ತೆ ===
 
[[ಬೆಂಗಳೂರು | ಬೆಂಗಳೂರಿನಿಂದ]] [[ತುಮಕೂರು]], [[ತಿಪಟೂರು]], [[ಅರಸೀಕೆರೆ]], [[ಕಡೂರು]], [[ಬೀರೂರು]] ಮತ್ತು [[ತರೀಕೆರೆ]] ಮೂಲಕ ಸಾಗುವ ಬೆಂಗಳೂರು-ಹೊನ್ನಾವರ NHರಾ.ಹೆ.-206೨೦೬ ಹೆದ್ದಾರಿ(ಬಿ.ಹೆಚ್ ರಸ್ತೆ)ಯ ಮೂಲಕ ಭದ್ರಾವತಿಯನ್ನು ತಲುಪಬಹುದು. ಬೆಂಗಳೂರಿನಿಂದ [[ಶಿವಮೊಗ್ಗ | ಶಿವಮೊಗ್ಗಕ್ಕೆ]] ಹೋಗುವ ಬಸ್ಸುಗಳು ಭದ್ರಾವತಿಯಲ್ಲಿಯೂಭದ್ರಾವತಿಯಲ್ಲಿ ನಿಲ್ಲಿಸುತ್ತವೆ ಮತ್ತು ಪ್ರಯಾಣಕ್ಕೆಸುಮಾರುಪ್ರಯಾಣಕ್ಕೆ ಸುಮಾರು ಆರು ಘಂಟೆ ಸಮಯ ತೆಗೆದುಕೊಳ್ಳುತ್ತವೆ. ಚಿತ್ರದುರ್ಗ, ದಾವಣಗೆರೆ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಕೆಲವು ಸ್ಥಳಗಳು ಮುಂತಾದ ಬೇರೆ ಬೇರೆ ಕೆಲವು ಸ್ಥಳಗಳಿಂದ ಭದ್ರಾವತಿಗೆ ನೇರವಾಗಿ ರಸ್ತೆ ಸಂಪರ್ಕವಿದೆ. ಜಿಲ್ಲಾಕೇಂದ್ರ ಶಿವಮೊಗ್ಗವು ಕರ್ನಾಟಕದ ಎಲ್ಲಾ ಭಾಗಗಳಿಂದ ಚೆನ್ನಾಗಿ ರಸ್ತೆಯ ಮೂಲಕ ಸಂಪರ್ಕಿಸಲ್ಪಟ್ಟಿರುವುದರಿಂದ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಭದ್ರಾವತಿ ತಲುಪಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳ ಸೌಲಭ್ಯವಿದೆ.
 
=== ರೈಲು ===
Line ೫೧ ⟶ ೫೨:
=== ವಿಮಾನ ===
 
ಭದ್ರಾವತಿಗೆ ಅತಿ ಸಮೀಪದ ವಿಮಾನ ನಿಲ್ದಾಣ ಹುಬ್ಬಳ್ಳಿ.. ಹುಬ್ಬಳ್ಳಿ ಭದ್ರಾವತಿಯಿಂದ ಸುಮಾರು ೧೭೦ ಕಿ.ಮಿ ದೂರದಲ್ಲಿದೆ. ಹುಬ್ಬಳ್ಳಿಗೆ ಬೆಂಗಳೂರಿನಿಂದ ಮತ್ತು ಬೆಳಗಾವಿಯಿಂದ ವಿಮಾನ ಹಾರಾಡುತ್ತದೆ. ಬೆಂಗಳೂರು ಅಥವಾ ಮಂಗಳೂರಿನವರಗೆ ವಿಮಾನದಲ್ಲಿ ಪ್ರಯಾಣಿಸಿ, ಅಲ್ಲಿಂದ ಭದ್ರಾವತಿಗೆ ರೈಲಿನಲ್ಲಿ ಅಥವಾ ಬಸ್ಸಿನಲ್ಲಿ ಪ್ರಯಾಣಿಸಬಹುದು.
ಈಗ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸಿದ್ಢ ಆಗುತ್ತಿದೆ.
 
Line ೮೧ ⟶ ೮೨:
* [[ಸಿ.ಎಂ.ಇಬ್ರಾಹಿಂ]] - ರಾಜಕಾರಣಿ, ಮಾಜಿ ಕೇಂದ್ರ ಸಚಿವ
 
==''' ಗ್ರಂಥಾಲಯ''' /ವಾಚನಾಲಯಗಳು==
 
* ಹಳೇನಗರ ಶಾಖಾ ಗ್ರಂಥಾಲಯ
* ಕಾಗದನಗರ ಶಾಖಾ ಗ್ರಂಥಾಲಯ
* ನ್ಯೂಟೌನ್ ಶಾಖಾ ಗ್ರಂಥಾಲಯ
* ಅಂಬೇಡ್ಕರ್ ಶಾಖಾ ಗ್ರಂಥಾಲಯ
* ವಾಚನಾಲಯ ಮಿಲಿಟರಿ ಕ್ಯಾಂಪ್
* ಸಂಚಾರಿ ಗ್ರಂಥಾಲಯ
* ವಾಚನಾಲಯ ಮಿಲಿಟರಿ ಕ್ಯಾಂಪ್
 
== ಹೊರಗಿನ ಕೊಂಡಿಗಳು ==
* [http://www.bhadravathicity.gov.in/ ಭದ್ರಾವತಿ ನಗರಸಭೆಯ ಅ೦ತರಜಾಲ ತಾಣ]
* ಚರಿತ್ರೆ ಮಾಹಿತಿ ಕೃಪೆ - 'ಹಾಯ್ ಬೆಂಗಳೂರ್' ಪತ್ರಿಕೆ, ಮೇ ೩೦, ೨೦೧೩ - ಲೇಖಕರು: ಬಿ.ಆರ್. ಸುಬ್ರಹ್ಮಣ್ಯ
 
[[Category:ಭೂಗೋಳ]]
"https://kn.wikipedia.org/wiki/ಭದ್ರಾವತಿ" ಇಂದ ಪಡೆಯಲ್ಪಟ್ಟಿದೆ