ಕನ್ನಡ ಚಿತ್ರರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
(ಆಧಾರ • ಡಾ. ಕೆ. ಪುಟ್ಟಸ್ವಾಮಿ ಬರೆದಿರುವ "ಸಿನಿಮಾ ಯಾನ" ಪುಸ್ತಕದ ಎಂಟು ಮತ್ತು ಒಂಬತ್ತನೇ ಪುಟದಿಂದ.'ನಮನ" )
 
 
== "ಷಾ ಚಮನ್‍ಮಲ್ ಡುಂಗಾಜಿ"" ==
ಕನ್ನಡ ಚಿತ್ರ ರಂಗದ ಇತಿಹಾಸದಲ್ಲಿ "ಷಾ ಚಮನ್‍ಮಲ್ ಡುಂಗಾಜಿ" ಪಾತ್ರ ಅತ್ಯಂತ ಮಹತ್ವದ್ದು ."ಷಾ ಚಮನ್‍ಮಲ್ ಡುಂಗಾಜಿ" ಮೂಲತಃ ರಾಜಸ್ತಾಸನದವರು, ವ್ಯಾಪರಕ್ಕೆಂದು ೧೯೦೩ ರಲ್ಲಿ ಬೆಂಗಳೂರಿಗೆ ಆಗಮಿಸಿದರು ಇಲ್ಲಿನ ಅಂದರೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಪಾತ್ರೆಗಳ ವ್ಯಾಪಾರ ಆರಂಭಿಸಿದರು. ಇಂದಿಗೂ ಬೆಂಗಳೂರಿನಲ್ಲಿರುವ ಆದಿನಾಥ ಜೈನಶ್ವೇತಾಂಬರ ದೇವಾಸ್ಥಾನವನ್ನು೧೯೧೮ ರಲ್ಲಿ ನಿರ್ಮಿಸಿದಾತ ಹಾಗೂ ಅಂದಿನಿಂದ ತನ್ನ ಜೀವನ ಪರ್ಯಂತ ಜೈನಶ್ವೇತಾಂಬರ ಸಂಘಕ್ಕೆ ಅಧ್ಯಕ್ಷರಾಗಿ ಕೆಲಸ ಕಾರ್ಯಗಳನ್ನು ಖುದ್ದಾಗಿ ನಿಂತು ಮಾಡಿರುವ ಹೆಸರು ಇವರದ್ದು,ಇವರ ಹಿರಿಮೆ ಇಷ್ಟೇ ಅಲ್ಲ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿಯೂ ಸಹಾಯ ಮಾಡಲು ಸಧಾ ಮುಂದೆ ಬರುತ್ತಿದ್ದರು. ಇವರು ಬೆಂಗಳೂರಿನ "ಪ್ರಾಣಿದಯಾ ಪ್ರಚಾರಕ ಸಂಘದ ಅಧ್ಯಕ್ಷರು" ಸಹ ಆಗಿದ್ದರು. ಷಾ ಚಮನ್‍ಮಲ್ ಡುಂಗಾಜಿ ಅವರು ಪ್ರಾಣಿಮೇಲಿನ ಅತೀ ಪ್ರೀತಿಯನ್ನು ಮೆರೆದ ಸಂಗತಿಯೊಂದಿದೆ - ಪ್ರಾಣಿಗಳನ್ನು ಉತ್ಸವಗಳಲ್ಲಿ ಬಲಿಯನ್ನು ನೀಡುತ್ತಿದ್ದ ಕಾಲವದು, ಅದನ್ನು ತಡೆಯಲೆಂದು ಇದರ ವಿರುದ್ಧವಾಗಿ "ಪ್ರಾಣಿಬಲಿ" ನಾಶ ಪ್ರಚಾರವನ್ನು ಮಾಡಲು ಪ್ರಾರಂಭಿಸಿದರು, ಇವರ ಪ್ರಚಾರ ವ್ಯರ್ಥವಾಗಲಿಲ್ಲ ಈ ಕಾರ್ಯವನ್ನು ಜನರು ಸಂಪೂರ್ಣವಾಗಿ ನಿಲ್ಲಿಸಿದರು. ಹಾಗೂ ನೂರಾರು ಪ್ರಾಣಿಗಳ ಜೀವ ಉಳಿಸಿದ ಕೀರ್ತಿ ಷಾ ಚಮನ್‍ಮಲ್ ಡುಂಗಾಜಿ ಅವರದ್ದಾಗಿತ್ತು.
 
ಷಾ ಚಮನ್‍ಮಲ್ ಡುಂಗಾಜಿ ಘನತೆ ಗೌರವವನ್ನು ಕಂಡ ಮೈಸೂರು ವಿಶ್ವವಿದ್ಯಾನಿಲಯ ೧೯೨೫ ರಿಂದ ಇಂದಿನವರೆಗೂ ಕಾಮರ್ಸ್ ವಿಷಯದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಷಾ ಚಮನ್‍ಮಲ್ ಡುಂಗಾಜಿ ಪರವಾಗಿ ಚಿನ್ನದ ಪದಕವನ್ನು ನೀಡುತ್ತಾ ಬಂದಿದ್ದಾರೆ.ಧಾರ್ಮಿಕ, ಸಾಮಾಜಿಕ ವಿಷ್ಯಗಳಲ್ಲದೆ ೧೯೨೯ ರಲ್ಲಿ ಶ್ರೀ ಸೌತ್ ಇಂಡಿಯಾ ಫಿಲ್ಮ್ ಕಂಪೆನಿ ಎಂಬ ಹೆಸರಿನಲ್ಲಿ ವಿತರಕ ಆಫಿಸ್ (ಡಿಸ್ಟಿಬ್ಯೂಷನ್ ಆಫಿಸ್)ವೊಂದನ್ನು ಪ್ರಾರಂಭಿಸಿದರು ಸುಮಾರು ೫೦-೬೦ ಚಿತ್ರಗಳನ್ನು ವಿತರಣೆ ಮಾಡುತ್ತಿದ್ದರು."ಷಾ ಚಮನ್‍ಮಲ್ ಡುಂಗಾಜಿ" ಅವರು ನಾವು ಮೈಸೂರು ದೇಶದಲ್ಲಿ ಇದ್ದೇವೆ, ಇಲ್ಲಿನ ಮಾತೃಭಾಷೆಯಾದ ಕನ್ನಡದಲ್ಲಿ ಚಿತ್ರವನ್ನೇಕೆ ಮಾಡಬಾರದೆಂಬ ಪ್ರಶ್ನೆ ತಮ್ಮ ಮನಸಿನಲ್ಲಿ ಮೂಡಿಬಂದಾಗ ಪೂರ್ವಾಪರ ಎಲ್ಲವನ್ನೂ ಯೋಚಿಸಿ ಮನಸ್ಸು ನುಡಿದಂತೆ ೧೯೩೨ ರಲ್ಲಿ "ಸೌತ್ ಇಂಡಿಯನ್ ಮೋವಿ ಟೋನ್" ಎಂಬ ಸಂಸ್ಥೆಯನ್ನು ಸ್ಥಾಪಿಸಿ ನಂತರ ಕನ್ನಡದ ಮೊದಲ ವಾಕ್ಚಿತ್ರವಾದ "ಸತಿ ಸುಲೋಚನಾ" ಚಿತ್ರವನ್ನು ನಿರ್ಮಿಸಲು ಮುಂದಾದರಂತೆ."ನಮನ"
 
[[Category:ಕನ್ನಡ ಸಿನೆಮಾ|*]]
"https://kn.wikipedia.org/wiki/ಕನ್ನಡ_ಚಿತ್ರರಂಗ" ಇಂದ ಪಡೆಯಲ್ಪಟ್ಟಿದೆ