ಬಿ.ವಿಠ್ಠಲಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು ಇನ್ನಷ್ಟು ಅನುವಾದ |
ಚುNo edit summary |
||
೨೫ ನೇ ಸಾಲು:
ಅದೇ ಸ್ನೇಹಿತರೊಂದಿಗೆ ಅವರು ಮೈಸೂರಿಗೆ ತೆರಳಿ ಮಹಾತ್ಮ ಪಿಕ್ಚರ್ಸ್ ಹೆಸರಿನಲ್ಲಿ ಒಂದು ಚಿತ್ರ ನಿರ್ಮಾಣ ಕಂಪನಿಯನ್ನು ಸ್ಥಾಪಿಸಿದರು. ೧೯೪೪ ರಿಂದ ೧೯೫೩ ರ ಅವಧಿಯಲ್ಲಿ ೧೮ ಕನ್ನಡ ಚಿತ್ರಗಳನ್ನು ನಿರ್ಮಿಸಿದರು. ಅವುಗಳಲ್ಲಿ ನಾಗ ಕನ್ಯಾ, ಜಗನ್ ಮೋಹಿನಿ, ಶ್ರೀನಿವಾಸ ಕಲ್ಯಾಣ ಮುಂತಾದವು ತುಂಬ ಯಶಸ್ವಿ ಯಾದವು. ಈ ಅವಧಿಯಲ್ಲಿ ಒಬ್ಬೊಬರಾಗಿ ಪಾಲುದಾರರು ಕಂಪನಿಯನ್ನು ಬಿಟ್ಟು ಒನೆಗೆ ಅದರಲ್ಲಿ ಶಂಕರಸಿಂಗ್ ಮತ್ತು ವಿಠ್ಠಲಾಚಾರ್ಯರಷ್ಟೇ ಉಳಿದರು. ಈ ಚಿತ್ರಗಳಲ್ಲಿ ಕೆಲವನ್ನು ವಿಠ್ಠಲಾಚಾರ್ಯರೂ ,ಕೆಲವನ್ನು ಶಂಕರಸಿಂಗರೂ ಇನ್ನು ಕೆಲವನ್ನು ಉಳಿದವರೂ ನಿರ್ದೇಶಿಸಿದರು.
೧೯೫೩ರಲ್ಲಿ ಕೆಲವೊಂದು ತಪ್ಪುಕಲ್ಪನೆಗಳಿಂದಾಗಿ ವಿಠ್ಠಲಾಚಾರ್ಯರೂ ಶಂಕರಸಿಂಗರಿಂದ ಬೇರೆಯಾಗಿ . ವಿಠ್ಠಲ್ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಮ್ಮದೇ ಕಂಪನಿಯನ್ನು ಮಾಡಿಕೊಂಡು ತಮ್ಮ ಮೊದಲ ಚಿತ್ರ ರಾಜ್ಯಲಕ್ಷ್ಮಿಯನ್ನು ನಿರ್ದೇಶಿಸಿ ತಯಾರಿಸಿದರು.
೧೯೫೪ ರಲ್ಲಿ, ಅವರು ಬಾರಿಗೆ ಕನ್ಯಾ ಧನ ಎಂಬ ಆ ಕಾಲಕ್ಕೆ ಕ್ರಾಂತಿಕಾರಿಯಾದ ಒಂದು ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದರು. ಅದನ್ನೇ ತೆಲುಗು ಭಾಷೆಯಲ್ಲಿ ರೀಮೇಕ್ ಮಾಡಬಯಸಿ ಮದ್ರಾಸ್ ಗೆ ಹೋದರು. ತಮ್ಮ ಸಾವಿನ ತನಕ ಅಲ್ಲಿಯೇ ನೆಲೆಸಿದರು. ಇನ್ನೂ ಎರಡು ಕನ್ನಡ ಚಲನಚಿತ್ರಗಳನ್ನು ತಯಾರಿಸಿದ ಮಾಡಿದ ನಂತರ, ಅವರು ಕೇವಲ ತೆಲುಗು ಚಲನಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅವರು ಇತರ ನಿರ್ಮಾಪಕರಿಗಾಗಿ ಕೂಡ ಚಲನಚಿತ್ರಗಳನ್ನು ನಿರ್ದೇಶಿಸಿದರು.
|