ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:1-Shimoga visit (2012-13) HP 156.JPG||thumb|right|300px|'ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ' (೨೦೧೩)]]
[[ಚಿತ್ರ:1-Shimoga visit (2012-13) HP 142.JPG|thumb|right|300px|'ತಾಳ್ಯದ ಆಂಜನೇಯಸ್ವಾಮಿ']]
ತಾಳ್ಯ, ಚಿತ್ರದುರ್ಗ ಜಿಲ್ಲೆಯ ಇತರ ಹಳ್ಳಿಗಳಂತೆ, ಕುಡಿಯುವ ನೀರಿನವ್ಯವಸ್ಥೆಯೂ ಇಲ್ಲದ ಒಂದು ಅತ್ಯಂತ ಚಿಕ್ಕಹಳ್ಳಿಯಾಗದೆ ಇರಲು ಕಾರಣ, ಇಲ್ಲಿಯ ವಿಶಾಲವಾದ ಕೆರೆಯ ಅಸ್ತಿತ್ವದಿಂದ. ಹೋಬಳಿ ಕೇಂದ್ರವಾದ ತಾಳ್ಯದ ಸುತ್ತಮುತ್ತಲೂ ಅನೇಕ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು ಅರ್ಥಚಂದ್ರಾಕೃತಿಯ ಮಾದರಿಯ ಭೂಭಾಗದಲ್ಲಿ ಗ್ರಾಮದ ಪೂರ್ವದಿಕ್ಕಿನಲ್ಲಿ ಸುಂದರವಾದ ಹಾಗೂ ವಿಶಾಲವಾದ ಕೆರೆಯನ್ನು ಹೊಂದಿದೆ. ಈ ಕೆರೆಯು ೧೮೦ ಎಕರೆ ೨೩ ಗುಂಟೆ ವಿಸ್ತೀರ್ಣವನ್ನು ಹೊಂದಿದ್ದು ಇದರ ಅಂಕು-ಡೊಂಕಾದ ಏರಿ ೭೦೦-೮೦೦ ಮೀಟರ್ ವ್ಯಾಪ್ತಿ ಹೊಂದಿದೆ. ಈ ಕೆರೆ ಬತ್ತಿದ ದಿನಗಳೇ ಅಪರೂಪವೆಂದು ಗ್ರಾಮದ ಜನ ನೆನೆಸಿಕೊಳ್ಳುತ್ತಾರೆ. ಇಂಥ ತಾಣದಲ್ಲಿ ಹನುಮಪ್ಪ ಅಥವಾ ಆಂಜನೇಯಸ್ವಾಮಿಯ ದೇವಸ್ಥಾನವಿದ್ದು ಜಿಲ್ಲೆಯಲ್ಲಿ ಪ್ರಸಿದ್ಧಿಯಾಗಿದೆ. ತಾಳ್ಯದ ತೇರು ಸಾಮಾನ್ಯವಾಗಿ ಎಪ್ರಿಲ್ ತಿಂಗಳಿನಲ್ಲಿ ಅಂದರೆ, ಬೆಂಗಳೂರಿನಲ್ಲಿ ಕರಗವಾಗುವ ಸಮಯದಲ್ಲಿ ನಡೆಯುತ್ತದೆ.ಹೊಳಲ್ಕೆರೆ ಚಿತ್ರದುರ್ಗ ಬಸ್ ಮಾರ್ಗದಲ್ಲಿ ಸಿಗುವ ಶಿವಗಂಗ ಗ್ರಾಮದಿಂದ ೮ ಕಿ.ಮೀ.ದೂರದಲ್ಲಿದೆ. ತಾಳ್ಯ ಗ್ರಾಮದ ಆರಂಭದಲ್ಲೇ ಆಂಜನೇಯ ಸ್ವಾಮಿಯ ಗುಡಿಯಿದೆ.
೮ ನೇ ಸಾಲು:
ಪ್ರತಿವರ್ಷವೂ ಚೈತ್ರ ಶುದ್ಧ ಚಿತ್ರ ಪೂರ್ಣಿಮೆಯದಿನ ಶ್ರೀ ಆಂಜನೇಯನಿಗೆ ಬ್ರಹ್ಮ ರಥೋತ್ಸವ (ಆನೆ ಉತ್ಸವ) ಜರುಗುವುದು. ಅಂಕುರಾರ್ಪಣದ ಬಳಿಕ ಕುದುರೆ ವಾಹನ, ಸಿಂಹವಾಹನ, ಇಂದ್ರಜಿತು ವಾಹನ, ನಂತರ ಆನೆ ವಾಹನೋತ್ಸವ ಅಥವ ಬ್ರಹ್ಮರಥೋತ್ಸವ ಜರುಗುತ್ತದೆ. ಆಂಜನೇಯ ಸ್ವಾಮಿಯ ಜಾತ್ರೆಯಂದು ಗುಡ್ಡದ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ಗ್ರಾಮಕ್ಕೆ ಬರಮಾಡಿಕೊಂಡು ಪೂಜೆ ಸಲ್ಲಿಸಿದ ನಂತರವೇ ಮೊದಲ ದಿನ ವಿಪ್ರಬಂಧುಗಳಿಂದವಿಶೇಷ ಪೂಜೆ-ಪ್ರಾರ್ಥನೆಗಳನಂತರ ಹಾಗೂ ಶ್ರೀಗುಡ್ಡದ ತಿಮ್ಮಪ್ಪನ ಉತ್ಸವಮೂರ್ತಿಗಳನ್ನು ಬ್ರಹ್ಮರಥದಲ್ಲಿ ಅಲಂಕೃತಗೊಳಿಸಿ ಗ್ರಾಮದ ಸುತ್ತಲೂ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತದೆ. ಆದಿನ ರಾತ್ರಿ ರಥಕ್ಕೆ ಎಣ್ಣೆ ಎರೆಯಲಾಗುತ್ತದೆ.
=='ತೇಜಿಕುಣಿತ'==
[[ಚಿತ್ರ:1-Shimoga visit (2012-13) HP 145.JPG|thumb|right|300px|'ತೇಜೀ ಕುಣಿತದ ಪರಿಕ್ರಮ']]
ಮಾರನೆಯದಿನ, ದಾಸಯ್ಯನು, ಸೀಗೆಮರದ ಮುಳ್ಳಿನಮೇಲೆ ನಡೆಯುವ ಪರಿಪಾಠವಿದೆ. ಆ ದಿನ ಅವನು ಬೆಳಿಗ್ಯೆ ನಸುಕಿನಲ್ಲಿಯೇ ಎದ್ದು ಸ್ನಾನಾದಿವಿಧಿಗಳನ್ನು ಮುಗಿಸಿ, ಪೂರ್ತಿದಿನ ಉಪವಾಸದಿಂದಲೂ, ನೇಮದಿಂದಲೂ ಶುಚಿಯಿಂದಲೂ [[ಹನುಮಪ್ಪ]]ನನ್ನು ಆರಾಧಿಸಬೇಕು. ಬೆಳಗಿನ ಜಾವದಲ್ಲಿ ನಡೆಯುವ ಸೀಗೆ ಮೆಳೆ ತುಳಿಯುವ ವಿಧಿ ಬಹಳ ವಿಶೇಷವಾದದ್ದು. ಸುಮಾರು ೪ ಅಂಗುಲದ ಮಳೆಗಳಿಂದ, ಮುಳ್ಳಿನ ಹಾವಿಗೆಯಮೇಲೆ ನಡೆಯುವ ಕ್ರಿಯೆ ಅತ್ಯಂತ ವಿಸ್ಮಯದಾಯಕವಾಗಿದೆ. [[ತೇಜಿಕುಣಿತ]]ವೆಂಬ ಕುದುರೆ ಕುಣಿತವನ್ನು, ಆದಿನ ನೋಡಬಹುದು. ಆದಿನವೇ [[ಬ್ರಹ್ಮರಥೋತ್ಸವ]]ವನ್ನು ಅಲ್ಲಿನ ಬ್ರಾಹ್ಮಣ ಸಮಾಜದವರು ನಡೆಸಿಕೊಡುತ್ತಾರೆ. ಶ್ರೀ ಆಂಜನೇಯ ಸ್ವಾಮಿಉತ್ಸವಮೂರ್ತಿ ತೇಜಿಕುಣಿತದೊಂದಿಗೆ ಸೀಗೆ ಮೆಳೆಯ ಹತ್ತಿರ ಸಾಗುತ್ತದೆ. ಅಲ್ಲಿ ದಾಸಯ್ಯನ (ಉಡೇದರ ತಿಮ್ಮಪ್ಪ)ಬಲಗಾಲಿಗೆ ಒಂದುಗುಂಡಿನ ಸರಪಳಿ ಬಿಗಿದಿರುತ್ತಾರೆ. ಆ ಸಮಯದಲ್ಲಿ ದಾಸಯ್ಯನಮೇಲೆ ದೇವರು ಬಂದಿರುತ್ತದೆ. ಆಗ ತೇಜಿ ದಾಸಯ್ಯನಿಗೆ ನಿವಾಳಿ ತೆಗೆದನಂತರ ಎಚ್ಚರಗೊಂಡ ದಾಸಯ್ಯ, ಸೀಗೆ ಮೆಳೆಯನ್ನು ಬರಿಗಾಲಿನಲ್ಲಿ ಏರಲು ಹೋಗುತ್ತಾನೆ. ಅಲ್ಲಿ ನೆರೆದ ಹಲವು ಯುವಕರೂ ಸೀಗೆ ಮೆಳೆಯಮೇಲೆ ಏರುವುದನ್ನು ನಾವು ಕಾಣಬಹುದು. ಅವರೆಲ್ಲರ ದೇಹಕ್ಕೆ ಹರಳೆಣ್ಣೆ ಹಚ್ಚಲಾಗುತ್ತದೆ. ಆದಿನದ ಬೆಳಿಗ್ಯೆ ರಥವನ್ನು ಅಲಂಕರಿಸಲಾಗುವುದು. ಈ ರಥದಲ್ಲಿ 'ಗುಡ್ಡದ ತಿಮ್ಮಪ್ಪ' ಹಾಗೂ 'ಆಂಜನೇಯ ಸ್ವಾಮಿ'ಗೆ, ಪೂಜೆ-ಮಂಗಳಾರತಿ ಮಂಗಳವಾದ್ಯಗಳೊಂದಿಗೆ ಸಲ್ಲಿಸಲಾಗುವುದು.
==ಮೂರನೆಯದಿನ ಆ ಊರಿನ ಓಕಳಿ ಸೇವೆ ಜರುಗುತ್ತದೆ. ಊರಿನ ಮುಖ್ಯಸ್ಥರ ಮನೆಯಲ್ಲಿ ಊಟ==