ಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Robot: Adding ko:구루 (산스크리트어)
ಚು r2.7.3) (Robot: Adding tr:Guru; cosmetic changes
೩ ನೇ ಸಾಲು:
{{Cleanup-rewrite|date=August 2009}}
 
'''ಗುರು''' ({{lang-sa|गुरु}},ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು (ಶಿಕ್ಷಕ) ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ. ಸಂಸ್ಕೃತದಲ್ಲಿ ಗು ಅಂದರೆ ಅಂಧಕಾರ ಮತ್ತು ರು ಅಂದರೆ ಬೆಳಕು. ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಇದರ ಮೂಲರೂಪದಲ್ಲಿ ಈ ’ಗುರು’ ಪರಂಪರೆಯ ತತ್ವವು ಭೂಮಿಯಲ್ಲಿಯ ಒಂದು ದೈವಿಕ ಮೂರ್ತರೂಪ(ಸಾಧು) ಎಂದಾಗುತ್ತದೆ. ’ಗುರು’ ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ.<ref name="mahesh">[[ಪರಮಹಂಸ ಸ್ವಾಮಿ ಮಹೇಶ್ವರಾನಂದ]], ದ ಹಿನ್ ಪವರ್ಸ್ ಇನ್ ಹ್ಯೂಮನ್ಸ್, ಐಬೆರಾ ವೆರ್ಲಾಗ್ , ಪುಟಗಳು 70. ISBN 3-85052-197-4</ref> ತಂದೆ ತಾಯಂದಿರು, ಶಿಕ್ಷಕರು<ref name="mahesh"/>, ಕೆಲವು ಜ್ಞಾನಾರ್ಜನೆಗೆ ಸಹಾಯಕವಾಗುವಂತಹ ವಸ್ತುಗಳು (ಉದಾಹರಣೆಗೆ ಪುಸ್ತಕ)ಮತ್ತು ಪ್ರತಿ ವ್ಯಕ್ತಿಯಲ್ಲಿರುವ ಬೌದ್ಧಿಕ ಶಿಸ್ತು ಈ ಮೂಲತತ್ವವನ್ನು ಪ್ರತಿಬಿಂಬಿಸುವ ಇತರ ಕೊಂಡಿಗಳು ಎಂದು ಹೇಳಬಹುದಾಗಿದೆ.<ref>ವೇರಿಯಸ್ ''ಗುರು: ದ ಗೈಡಿಂಗ್ ಲೈಟ್'' (2009) ಪು.11. [[ಚಿನ್ಮಯ ಮಿಷನ್]] ವೆಸ್ಟ್ ISBN 978-1-60827-000-2</ref> [[ಧಾರ್ಮಿಕ]] ಅರ್ಥದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ [[ಹಿಂದು ]] ಮತ್ತು [[ಸಿಖ್ಖ್ ಧರ್ಮ]]ದಲ್ಲಿ ಹಾಗೂ ಇನ್ನೀತರ ಕೆಲವು [[ಭಾರತೀಯ ಧರ್ಮ]]ಗಳಲ್ಲಿ ಹಾಗೂ ಕೆಲವು [[ಹೊಸ ಧಾರ್ಮಿಕ ಪಂಥದ ಚಳುವಳಿ]]ಗಳಲ್ಲಿ ಈ ಶಬ್ದವನ್ನು ಬಳಸಲಾಗುತ್ತದೆ. ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು [[ಆತ್ಮಜ್ಞಾನ]]ವನ್ನು ಹೊಂದಲು ಒಂದು ಪೂರ್ವ ತಯಾರಿ ಎಂದು ಹೇಳಲಾಗುತ್ತದೆ. ಗುರು ನಾನಕ್, ಸಿಖ್ ಧರ್ಮದ ಸ್ಥಾಪಕರು ಹೇಳಿದರು: "ಸಾವಿರಾರು ಸೂರ್ಯ ಚಂದ್ರ ಹುಟ್ಟಿ ಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದುಹಾಕಲ್ಪಡುತ್ತದೆ." <ref>[[ಪರಮಹಂಸ ಸ್ವಾಮಿ ಮಹೇಶ್ವರಾನಂದ]], ದ ಹಿನ್ ಪವರ್ಸ್ ಇನ್ ಹ್ಯೂಮನ್ಸ್, ಐಬೆರಾ ವೆರ್ಲಾಗ್ , ಪುಟಗಳು 155. ISBN 3-85052-197-4</ref>
ಸಂಸ್ಕೃತದಲ್ಲಿ "ಗುರು" ಎಂಬ ಪದವನ್ನು [[ಹಿಂದುತ್ವ]]ದಲ್ಲಿ ದೈವಸ್ವರೂಪಿ ವ್ಯಕ್ತಿತ್ವದ [[ಬೃಹಸ್ಪತಿ]]ಗೆ ಹೇಳಲಾಗುತ್ತದೆ. [[ವೈದಿಕ ಜ್ಯೋತಿಷ್ಯ ಶಾಸ್ತ್ರ]]ದಲ್ಲಿ, ಗುರು ಅಥವಾ ಬೃಹಸ್ಪತಿಯು ಕಲಿಕೆಯ ಮೇಲೆ ಪ್ರಭಾವ ಬೀರುತ್ತಾರೆ ಎಂದು ನಂಬಲಾಗಿದೆ.{{Clarify|date=July 2009}} ಆದಾಗ್ಯೂ, [[ಹಿಂದಿ]]ಯಂತಹ ಹಲವಾರು [[ಭಾರತೀಯ ಭಾಷೆ]]ಗಳಲ್ಲಿ, ಪಾಶ್ಚಾತ್ಯರ Thursday ''ಬೃಹಸ್ಪತಿವಾರ'' ಅಥವಾ ''ಗುರುವಾರ'' (''ವಾರ'' ಅಂದರೆ ಸಪ್ತಾಹದ ಒಂದು ದಿನ) ಎಂದು ಕರೆಯಲ್ಪಡುತ್ತದೆ.{{Citation needed|date=July 2009}} ಇತ್ತೀಚಿನ ದಿನಗಳಲ್ಲಿ [[ಭಾರತ]]ದಲ್ಲಿ, "ಗುರು" ಎಂಬ ಶಬ್ದವು ವ್ಯಾಪಕವಾಗಿ "ಶಿಕ್ಷಕ" ಎಂಬ ಸಾಮಾನ್ಯ ಅರ್ಥದ ಜೊತೆ ಬಳಸಲ್ಪಡುತ್ತದೆ. ಪಾಶ್ಚಾತ್ಯ ಬಳಕೆಯಲ್ಲಿ, ಗುರು ಎಂಬ ಶಬ್ದದ ಅರ್ಥವು ಅನುಯಾಯಿಗಳನ್ನು ಹೊಂದುವ ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಗೂ ಕೂಡಾ ಬಳಸಬಹುದಾಗಿದೆ. ಅವರು ತತ್ವಶಾಸ್ತ್ರದ ಅಥವಾ ಯಾವುದಾದರೂ ಧಾರ್ಮಿಕ ಪಂಥಕ್ಕೆ ಸೇರಬೇಕೆಂದೇನಿಲ್ಲ.<ref name="Forsthoefel and Humes">ಫೋರ್ಸ್ಟ್‌ಥೊಯೆಫೆಲ್, ಟಿ. ಮತ್ತು ಸಿ. ಹುಮ್ಸ್. ''ಗುರುಸ್ ಇನ್ ಅಮೆರಿಕಾ '' (2005) ಪು.3. ಸನ್ನಿ ಪಬ್ಲಿಷರ್ಸ್ ISBN 0-7914-6574-8</ref> ಇನ್ನೂ ಹೆಚ್ಚಾಗಿ ಪಾಶ್ಚಾತ್ಯರು, ಒಬ್ಬ ವ್ಯಕ್ತಿಯು ಪ್ರಾಪಂಚಿಕವಾದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಜ್ಞಾನ,ನೈಪುಣ್ಯತೆಯನ್ನು ಹೊಂದಿದ್ದರೂ ಕೂಡ ’ಗುರು’ ಎಂಬ ಶಬ್ದವನ್ನು ಬಳಸುತ್ತಾರೆ. ಉದಾಹರಣೆಗೆ ’ವ್ಯವಹಾರ’ ಪ್ರಪಂಚಕ್ಕೆ ಕುರಿತಾದ ಉತ್ತಮ ಜ್ಞಾನ ಹೊಂದಿರುವ ವ್ಯಕ್ತಿಯನ್ನು ’ಗುರು’ ಎಂದು ಕರೆಯಲಾಗುತ್ತದೆ.(eg:management Guru)
 
೯ ನೇ ಸಾಲು:
 
'ಗುರು' ಶಬ್ದವು ''ಗು'' ಮತ್ತು ''ರು'' ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. ’ಗು’ ಎಂದರೆ ’ಅಂಧಕಾರ’ ಎಂದರ್ಥವಿದೆ. ’ರು’ ಎಂದರೆ ’ನಾಶಪಡಿಸುವವನು’ ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಎಂದಾಗುತ್ತದೆ. [[ಅದ್ವಯಾ-ತಾರಕಾ ಉಪನಿಷದ್]] ಪ್ರಕಾರ (ಪದ್ಯಪಾದ 16){{Citation needed|date=April 2010}} ಗುರು ಎಂದರೆ ಆತ್ಮಾಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ. {{quotation|The syllable gu means shadows<br />The syllable ru, he who disperses them,<br />Because of the power to disperse darkness<br />the guru is thus named.|Advayataraka [[Upanishad]] 14—18, verse 5}}
’ಗುರು’ ಎಂಬ ನಾಮಪದದ ಅರ್ಥವು ಸಂಸ್ಕೃತದಲ್ಲಿ ’ಶಿಕ್ಷಕ’ ಅಥವಾ ಆಧ್ಯಾತ್ಮ ಬೋಧಕ ಎಂದಾಗುತ್ತದೆ. ಹಾಗೆಯೇ ಸಂಸ್ಕೃತದಿಂದ ಈ ಶಬ್ದವನ್ನು ತೆಗೆದುಕೊಂಡಿರುವ ಹಿಂದಿ, ಮರಾಠಿ, [[ಬೆಂಗಾಲಿ]], [[ಗುಜರಾತಿ]] ಮತ್ತು [[ನೇಪಾಲಿ]] ಭಾಷೆಗಳಲ್ಲಿಯೂ ಕೂಡ ಇದೇ ಅರ್ಥವನ್ನು ಇದು ನೀಡುತ್ತದೆ. ಅಲ್ಲದೆ ಸಂಸ್ಕೃತದಿಂದ ಪ್ರಭಾವಿತವಾಗಿರುವ [[ಇಂಡೋನೇಷಿಯನ್]] ಮತ್ತು [[ಮಲಾಯ್ಸ್]] ಭಾಷೆಗಳಲ್ಲಿಯೂ ಕೂಡ ಇದೇ ಅರ್ಥವನ್ನು ಇದು ನೀಡುತ್ತದೆ. ಒಂದು ನಾಮಪದವಾಗಿ ಈ ಶಬ್ದವು ಅರಿವಿನ ([[ಜ್ಞಾನ]]) ವಿತರಕ ಎಂಬ ಅರ್ಥವನ್ನು ನೀಡುತ್ತದೆ. ಒಂದು ಗುಣವಾಚಕದಂತೆ, ಇದು ’ಸಮೃದ್ಧ ವ್ಯಕ್ತಿತ್ವದ’ ಅಥವಾ ’ಪ್ರಭಾವಿ ವ್ಯಕ್ತಿತ್ವದ’ ಅಂದರೆ "ಜ್ಞಾನದಿಂದ ಸಮೃದ್ಧವಾಗಿರುವ’ "<ref name="tirha">[[ತಿರ್ಷಾ, ಬಿ. ಬಿ.]] ''ಎ ಟೇಸ್ಟ್ ಆಫ್ ಟ್ರಾನ್ಸೆಂಡೆನ್ಸ್'' , (2002) ಪು. 161, ಮಂಡಲಾ ಮುದ್ರಣಾಲಯ. ISBN 1-886069-71-9 <blockquote>"ಗುರು: ಆಧ್ಯಾತ್ಮಿಕ ಬೋಧಕ; ಸಂಪೂರ್ಣವಾದ ಜ್ಞಾನ ಹೊಂದಿರುವ ಮತ್ತು ದಿವ್ಯವಾದ ಜ್ಯೋತಿಯಿಂದ ಅಜ್ಞಾನವನ್ನು ಹೋಗಲಾಡಿಸುವವನು."</blockquote></ref> ಸಮೃದ್ಧ ಬುದ್ಧಿವಂತಿಕೆ, <ref name="lipner">ಲಪ್ನರ್, ಜೂಲುಯಸ್ ಜೆ.,''ದೇರ್ ರಿಲಿಜಿಯಸ್ ಆ‍ಯ್‌೦ಡ್ ಪ್ರಾಕ್ಟೀಸಸ್'' p.192, Routledge (UK), ISBN 0-415-05181-9</ref>"ಆಧ್ಯಾತ್ಮಿಕ ಜ್ಞಾನದಿಂದ ಸಮೃದ್ಧವಾಗಿರುವ"<ref name="cornille">ಕಾರ್ನಿಲ್ಲೆ, ಸಿ. ''ದ ಗುರು ಇನ್ ಇಂಡಿಯನ್ ಕ್ಯಾಥೋಲಿಸಿಜಂ'' (1991) ಪು.207. ಪೀಟರ್ಸ್ ISBN 90-6831-309-6</ref>, "ಪವಿತ್ರಗ್ರಂಥಗಳ ಅರಿತುಕೊಳ್ಳುವಿಕೆ, ಉತ್ತಮ ಬರವಣಿಗೆ ಹಾಗೂ ಉನ್ನತ ಅರಿವು ಇರುವ ಸಮೃದ್ಧ ವ್ಯಕ್ತಿತ್ವದ,"<ref name="hopkins">{0ಹಾಪ್ಕಿನ್ಸ್, ಜೆಫ್ರಿ {1}ರಿಫ್ಲೆಕ್ಷನ್ ಆನ್ ರಿಯಾಲಿಟಿ (2002) ಪು. 72. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ. ISBN 0-520-21120-0</ref> ಅಥವಾ "ಜ್ಞಾನ ಸಂಪತ್ತಿನ ಸಮೃದ್ಧತೆ ಇರುವ"<ref name="varene">ವಾರೆನ್, ಜೀನ್. ''ಯೋಗಾ ಆ‍ಯ್‌೦ಡ್ ದ ಹಿಂದು ಟ್ರೇಡಿಶನ್'' (1977). ಪು.226. ಚಿಕಾಗೋ ವಿಶ್ವವಿದ್ಯಾಲಯ ಮುದ್ರಣಾಲಯ. ISBN 0-226-85116-8</ref> ಎಂಬ ಅರ್ಥಗಳನ್ನು ನೀಡುತ್ತದೆ. ಈ ಶಬ್ದವು ತನ್ನ ಮೂಲವನ್ನು ಸಂಸ್ಕೃತದ ''ಗ್ರಿ'' ಯಲ್ಲಿ ಹೊಂದಿದೆ ಮತ್ತು ಶಬ್ದ ''ಗುರ್‌'' ಗೆ ಸಂಬಂಧವನ್ನು ಹೊಂದಿದೆ, ಅದರ ಅರ್ಥ "ಮೇಲೇರಿಸು, ಮೇಲಕ್ಕೆ ಎತ್ತು, ಅಥವಾ ಒಂದು ಪ್ರಯತ್ನವನ್ನು ಮಾಡು’ ಎಂಬುದಾಗಿದೆ.<ref name="Lowitz">{{cite book|title=Sacred Sanskrit Words''|first=Leza A.|last=Lowitz|pages=85|publisher=Stone Bridge Press|year=2004|id=1-880-6568-76}}</ref> ಸಂಸ್ಕೃತದ'' ಗುರು'' ಶಬ್ದವು ಲ್ಯಾಟಿನ್‌ನ ''ಗ್ರೇವಿಸ್'' ’ಭಾರ;ಪ್ರಮುಖ, ತೂಕವಾಗಿರುವ, ಗಂಭೀರ <ref>{{cite book |title=The Barnhart Dictionary of Etymology|first=Robert K.|last=Barnhart|pages=447|publisher=H.W. Wilson Co.|year=1988|id=ISBN 0-8242-0745-9}}</ref> ಮತ್ತು ಗ್ರೀಕ್‌ನ ''ಬ್ಯಾರಸ್'' ’ಭಾರ’ ಶಬ್ದಗಳ ಜೊತೆ [[ಸಜಾತೀಯ ಸಂಬಂಧ]]ವನ್ನು ಹೊಂದಿದೆ. ಈ ಮೂರು ಶಬ್ದಗಳು [[ಪ್ರೋಟೋ-ಇಂಡೋ-ಯುರೋಪಿಯನ್]] [[ಮೂಲ]]ದ ''*gʷerə-'' ದಿಂದ, ವಿಶಿಷ್ಟವಾಗಿ *''gʷr̥ə-'' ದ ಜೀರೋ-ಗ್ರೇಡ್‌ನಿಂದ ತೆಗೆದುಕೊಳ್ಳಲಾಗಿದೆ.<ref>{{cite book |title=''The American Heritage Dictionary of the English Language''|publisher=Houghton Mifflin|edition=4th |year=2000|id=ISBN 0-395-82517-2 |page=2031}}</ref> "ಗುರು" ಶಬ್ದದ ಒಂದು ಸಾಂಪ್ರದಾಯಿಕ ಪದ ವ್ಯುತ್ಪತ್ತಿಯು ಅಂಧಕಾರ ಮತ್ತು ಬೆಳಕಿನ ನಡುವಣ ಅನ್ಯೋನ್ಯ ಕ್ರಿಯೆಯಾಗಿದೆ. ಗುರುವನ್ನು "ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸುವ ವ್ಯಕ್ತಿ" ಎಂಬುದಾಗಿ ನೋಡಲಾಗುತ್ತದೆ.<ref name="dict">ಗ್ರಿಮ್ಸ್, ಜಾನ್. ''ಎ ಕಾನ್ಸೈಸ್ ಡಿಕ್ಷನರಿ ಆಫ್ ಇಂಡಿಯನ್ ಫಿಲಾಸಫಿ: ಸಂಸ್ಕೃತ್ ಟರ್ಮ್ಸ್ ಡಿಫೈನ್ಡ್ ಇನ್ ಇಂಗ್ಲೀಶ್.'' (1996) ಪು.133. ಸನ್ನಿ ಮುದ್ರಣಾಲಯ. ISBN 0-7914-3067-7 <blockquote>"ಗುರು ಎಂಬ ಶಬ್ದದ ವ್ಯುತ್ಪತ್ತಿಯ ಮೂಲ [[ಗುರು ಗೀತಾ]]ದ ಸೂಕ್ತಿಯಿಂದ ಬಂದಿದೆ : ''ಗು'' ಕತ್ತಲೆಗೆ ಆಧಾರ; ''ರು'' ಎಂದರೆ ಅದನ್ನು ಹೋಗಲಾಡಿಸುವವನು. "ಗುರು" ಶಬ್ದವು ಹೃದಯದಲ್ಲಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವಿಕೆ ಸೂಚಿಸುತ್ತದೆ (ಗುರು ಗೀತಾ [[ಮಾರ್ಕಂಡೇಯ ಪುರಾಣ]]ದ ಆಧ್ಯಾತ್ಮಿಕ ಉಲ್ಲೇಖವಾಗಿದೆ,ಗುರುವಿನ ಲಕ್ಷಣ ಮತ್ತು ಗುರು/ಶಿಷ್ಯ ಸಂಬಂಧದ ಮೇಲೆ ಶಿವ ಮತ್ತು ಪಾರ್ವತಿಯ ನಡುವಿನ ಸಂಭಾಷಣೆ ಒಳಗೊಂಡಿದೆ.) [...] ''ಗು'' ಮತ್ತು ''ರು'' ವಿನ ಅರ್ಥವನ್ನು ''ಪಾಣಿನಿ-ಸೂತ್ರದ ಗು ಸಂವರನೆ'' ಮತ್ತು ''ರು ಹಿಂಸನೆ'' ಯಲ್ಲೂ ಗುರುತಿಸಬಹುದು, ಮರೆಮಾಚುವುದು ಮತ್ತು ಅದರ ರದ್ದು ಮಾಡುವಿಕೆಯನ್ನು ಸೂಚಿಸುತ್ತದೆ.</blockquote></ref><ref name="dict2">ಐಬಿಡ್. <blockquote>"ಗುರು:ಅಜ್ಞಾನವನ್ನು ಹೋಗಲಾಡಿಸುವವನು, ಬೆಳಕನ್ನು ದಯಪಾಲಿಸುವವನು '"</blockquote></ref><ref name="krs">[[ಕ್ರಿಷ್ಣಮೂರ್ತಿ, ಜೆ.]] ''ದ ಅವೇಕನಿಂಗ್ ಆಫ್ ಇಂಟಲಿಲಿಜೆನ್ಸ್.'' (1987) ಪು.139. ಹಾರ್ಪರ್ ಕಾಲಿನ್ಸ್. ISBN 0-06-064834-1</ref> ಕೆಲವು ವಿಷಯಗಳಲ್ಲಿ ಇದು ಈ ಅಂಶಗಳು ( ''ಗು'' ({{lang|sa|गु}}) ಮತ್ತು ''ರು'' ({{lang|sa|रु}}) ಅನುಕ್ರಮವಾಗಿ ಅಂಧಕಾರ ಮತ್ತು ಬೆಳಕುಗಳಿಗೆ ಸಮಾನವಾಗಿ ನಿಲ್ಲುತ್ತದೆ.<ref name="murray">ಮುರ್ರೆ,ಥಾಮಸ್ ಆರ್. ''ಮಾರಲ್ ಡೆವಲಪ್ಮೆಂಟ್ ಥಿಯರೀಸ್ - ಸೆಕ್ಯುಲರ್ ಆ‍ಯ್‌೦ಡ್ ರಿಲಿಜಿಯಸ್: ಎ ಕಂಪ್ಯಾರೆಟಿವ್ ಸ್ಟಡಿ.'' (1997). ಪು. 231. ಗ್ರೀನ್‌ವುಡ್ ಮುದ್ರಣಾಲಯ <blockquote>[...] 'ಶಬ್ದವು ''ಗು'' (ಕತ್ತಲೆ) ಮತ್ತು ''ರು'' (ಬೆಳಕು) ಎಂಬ ಎರಡರ ಸಂಯೋಜನೆಯಾಗಿದೆ,ಹಾಗಾಗಿ ಇವೆರಡು ಜೊತೆಯಾಗಿ ’ದಿವ್ಯವಾದ ಬೆಳಕು ಎಲ್ಲಾ ಅಜ್ಞಾನವನ್ನು ತೊಡೆದು ಹಾಕುತ್ತದೆ ಎಂಬ ಅರ್ಥ ಕೊಡುತ್ತವೆ’.</blockquote><blockquote>ಅಜ್ಞಾನದ ಕತ್ತೆಲೆಯು ಗುರುವಿನ ಬೆಳನಿಂದ ಚದುರಿ ಹೋಗುತ್ತದೆ.</blockquote></ref> [[ರೀಂಡರ್ ಕ್ರೆನೊನ್‌ಬೊರ್ಗ್]] ಪ್ರಕಾರ‍ ’''ಗುರು'' ’ ಶಬ್ದಕ್ಕೂ ಅಂಧಕಾರ ಬೆಳಕು ಮುಂತಾದವುಗಳಿಗೆ ಏನೂ ಸಂಬಂಧವಿಲ್ಲ. ಅವನು ಇದನ್ನು [[ಜನಪದೀಯ ಪದವ್ಯುತ್ಪತ್ತಿ]] ಎಂಬುದಾಗಿ ವರ್ಣಿಸುತ್ತಾನೆ.<ref name="kraneborg2002">ಕ್ರಾನೆನ್‌ಬೊರ್ಗ್,ರೀಂಡರ್ (ಡಚ್ ಭಾಷೆ) ''Neohindoeïstische bewegingen in Nederland : een encyclopedisch overzicht'' ಪುಟ 50 (En: ''ನಿಯೋ-ಹಿಂದು ಮೊಮೆಂಟ್ಸ್ ಇನ್ ದ ನೆದರ್ಲ್ಯಾಂಡ್ಸ್'' , ಕಾಂಪೆನ್ ಕಾಕ್ ಕೊಪ್‌ನಿಂದ ಪ್ರಕಟಣೆ. (2002) ISBN 90-435-0493-9 ಕ್ರಾನೆನ್‌ಬೊರ್ಗ್,ರೀಂಡರ್ (ಡಚ್ ಭಾಷೆ) Neohindoeïstische bewegingen in Nederland : een encyclopedisch overzicht (En: ನಿಯೋ-ಹಿಂದು ಮೊಮೆಂಟ್ಸ್ ಇನ್ ದ ನೆದರ್ಲ್ಯಾಂಡ್ಸ್{/1}, ಕಾಂಪೆನ್ ಕಾಕ್ ಕೊಪ್‌ನಿಂದ ಪ್ರಕಟಣೆ. (2002) ISBN 90-435-0493-9 ಪುಟ 50<br />ಡಚ್ ಮೂಲ: "ಎ. De goeroe als geestelijk raadsman Als we naar het verschijnsel goeroe in India kijken, kunnen we constateren dat er op zijn minst vier vormen van goeroeschap te onderscheiden zijn. De eerste vorm is die van de 'geestelijk raadsman'. Voordat we dit verder uitwerken eerst iets over de etymologie. Het woord goeroe komt uit het Sanskriet, wordt geschreven als 'guru' en betekent 'zwaar zijn', 'gewichtig zijn', vooral in figuurlijk opzicht. Zo krijgt het begrip 'guru' de betekenis van 'groot', 'geweldig' of 'belangrijk', en iets verdergaand krijgt het aspecten van 'eerbiedwaardig' en 'vererenswaardig'. Al vrij snel word dit toegepast op de 'geestelijk leraar'. In allerlei populaire literatuur, ook in India zelf, wordt het woord 'guru' uiteengelegd in 'gu' en 'ru', als omschrijvingen voor licht en duister; de goeroe is dan degene die zijn leerling uit het materiële duister overbrengt naar het geestelijk licht. Misschien doe een goeroe dat ook inderdaad, maar het heeft niets met de betekenis van het woord te maken, het is volksetymologie."<br />ಇಂಗ್ಲೀಶ್ ಅನುವಾದ "ಎ. ಗುರು ಆಧ್ಯಾತ್ಮಿಕ ಸಲಹೆಗಾರ: ನಾವು ಭಾರತದಲ್ಲಿನ ಗುರುಗಳ ಸಂಗತಿ ಗಮನಿಸಿದರೇ ಕನಿಷ್ಠ ನಾಲ್ಕು ಪ್ರಕಾರದ ಗುರುಗಳ ವ್ಯತ್ಯಾಸವನ್ನು ಕಾಣಬಹುದು. ಮೊದಲ ಪ್ರಕಾರ "ಆಧ್ಯಾತ್ಮಿಕ ಸಲಹೆಗಾರ." ಇದನ್ನು ವಿವರಿಸುವುದಕ್ಕಿಂತ ಮೊದಲಿಗೆ,ಮೊದಲಿಗೆ ವ್ಯುತ್ಪತಿಯ ಬಗ್ಗೆ ಒಂದಿಷ್ಟು. ''ಗುರು'' ಎಂಬ ಶಬ್ದವು ಸಂಸ್ಕೃತದಿಂದ ಬಂದಿದೆ ಮತ್ತು ’ಗುರು’ ಎಂದರೆ ‘ಸಮೃದ್ಧ ವಾಗಿರು’‘ ತೂಕವಾಗಿರು’, ಮುಖ್ಯವಾಗಿ ಅಲಂಕಾರಿಕವಾಗಿ ಎಂಬ ಅರ್ಥ ಬರುವಂತೆ ಬರೆಯಲಾಗಿದೆ. ಗುರು ಪರಿಕ್ಪನೆಯು ’ದೊಡ್ಡ’ ‘ಉನ್ನತ’ಅಥವಾ ‘ಪ್ರಮುಖ’ಎಂಬ ಅರ್ಥ ಪಡೆಯುತ್ತದೆ ಮತ್ತು ಹೆಚ್ಚಿನದಾಗಿ ‘ಗಣ್ಯ’ ಮತ್ತು ‘ಗೌರವಾರ್ಹ’ ಎಂಬರ್ಥ ಪಡೆಯುತ್ತದೆ. ಕೂಡಲೇ ‘ಆಧ್ಯಾತ್ಮಿಕ ಸಲಹೆಗಾರರಿಗೂ ಇದು ಅನ್ವಯಿಸುತ್ತದೆ'. ವಿವಿಧ ಪ್ರಸಿದ್ಧ ಸಾಹಿತ್ಯದಲ್ಲಿ, ಭಾರತದಲ್ಲಿ ಅವಳು ಕೂಡ, 'ಗುರು' ಶಬ್ದವು ‘ಗು’ಮತ್ತು ‘ರು’ ಎಂಬ ಭಾಗದಲ್ಲಿ,ಬೆಳಕು ಮತ್ತು ಕತ್ತಲೆಗೆ ವಿವರಣೆ ಇರುವಂತೆ: ಪ್ರಾಪಂಚಿಕ ಕತ್ತಲೆಯೊಳಗಿನಿಂದ ಆಧ್ಯಾತ್ಮಿಕ ಬೆಳಕಿಗೆ ಶಿಷ್ಯರನ್ನು ತರುವ ವ್ಯಕ್ತಿಯೇ ಗುರು. ಗುರು ನಿಶ್ಚಯವಾಗಿಯೂ ಇದನ್ನು ಮಾಡಬಹುದು, ಆದರೆ ಇದು ಆ ಶಬ್ದದ ಅರ್ಥಕ್ಕೇನೂ ಸಂಬಂಧಪಟ್ಟಿಲ್ಲ, ಇದು ಜಾನಪದ ವ್ಯುತ್ಪತ್ತಿ." </ref> "ಗುರು" ಶಬ್ದದ ಮತ್ತೊಂದು ಪದವ್ಯುತ್ಪತ್ತಿಯು ’ಗುರು ಗೀತಾ’ದಲ್ಲಿ ಕಂಡುಬಂದಿತು, ''ಗು'' ಅನ್ನು "ಗುಣಗಳನ್ನು ಮೀರಿ" ಮತ್ತು ''ರು'' ಅನ್ನು "ಆಕಾರ ರಹಿತ" ಎಂಬುದಾಗಿ ಒಳಗೊಂಡಿತು, "ಗುಣಗಳನ್ನು ಅತಿಶಯಿಸುವ ಪೃವೃತ್ತಿಯನ್ನು ಅನುಗ್ರಹಿಸುವವನನ್ನು ಗುರು ಎಂದು ಹೇಳಬಹುದು" ಎಂಬುದಾಗಿ ಅದು ಹೇಳಿತು.<ref name="gurugita">''ಗುರುಗೀತ'' ಸಂಪುಟ. 46 ''gukāram ca gunatitam rukāram rupavarjitam gunatitasvarupam ca yo dadyātsa guruh smrtah'' </ref> "ಗು" ಮತ್ತು "ರು" ಗಳ ಅರ್ಥವನ್ನು ಮರೆಮಾಚುವ ಮತ್ತು ಇದರ ತೊಡೆದುಹಾಕುವಿಕೆಯನ್ನು ಸೂಚಿಸುವ [[ಸೂತ್ರ]]ಗಳಿಗೆ ಗುರುತಿಸಲ್ಪಟ್ಟಿದೆ.<ref name="dict"></ref> ''ಪಾಶ್ಚಾತ್ಯ ರಹಸ್ಯವಾದ ಮತ್ತು ಧಾರ್ಮಿಕತೆಯ ವಿಜ್ಞಾನ'' , ಪಿರೆ ರಿಫಾರ್ಡ್‌ನು "ಅತೀಂದ್ರಿಯ" ಮತ್ತು "ವೈಜ್ಞಾನಿಕ" ಪದವ್ಯುತ್ಪತ್ತಿಗಳ ನಡುವೆ ಒಂದು ಭೇದವನ್ನು ಮಾಡುತ್ತಾನೆ, ’ಗುರು’ ಶಬ್ದದ ಮೊದಲಿನ ಪದವ್ಯುತ್ಪತ್ತಿಯ ಉದಾಹರಣೆಯನ್ನು ಎತ್ತಿ ಹೇಳುತ್ತ, ಅದರಲ್ಲಿ ವ್ಯುತ್ಪತ್ತಿಯು ''ಗು'' ("ಅಂಧಕಾರ") ಮತ್ತು ''ರು'' (’ಹೊರ ಹಾಕು’) ಎಂಬುದಾಗಿ ತೋರಿಸಲ್ಪಟ್ಟಿದೆ; ನಂತರ ಅವನು ’ತೂಕವಾಗಿರುವ’ ಅರ್ಥದ ಜೊತೆ ಗುರುವಿನಿಂದ ನಿದರ್ಶನವನ್ನು ನೀಡುತ್ತಾನೆ.<ref name="wesr">ರಿಫಾರ್ಡ್,ಪಿಯರೆ ಎ. ''ವೆಸ್ಟರ್ನ್ ಎಸೊಟೆರಿಸಿಜಂ ಆ‍ಯ್‌೦ಡ್ ದ ಸೈನ್ಸ್ ಆಫ್ ರಿಲಿಜನ್ '' Faivre ಎ. &amp; [[ಹನೆಗ್ರಾಫ್ ಡಬ್ಲ್ಯೂ.]] (ಎಡಿಶನ್ಸ್.) ಪೀಟರ್ಸ್ ಪಬ್ಲಿಷರ್ಸ್( 1988), ISBN 90-429-0630-8</ref>
 
== ಹಿಂದುತ್ವದಲ್ಲಿ (ಹಿಂದೂ ಧರ್ಮದಲ್ಲಿ) ಗುರು ==
೧೬ ನೇ ಸಾಲು:
{{quotation|Acquire the transcendental knowledge from a Self-realized master by humble reverence, by sincere inquiry, and by service. The wise ones who have realized the Truth will impart the Knowledge to you.'' <ref>[[Bhagavad Gītā]], c4 s34</ref>}} ಈ ಮೇಲೆ ನಮೂದಿಸಲ್ಪಟ್ಟ ವಾಕ್ಯದಲ್ಲಿ, ''ಗುರು'' ಶಬ್ದವು ಹೆಚ್ಚು ಅಥವಾ ಕಡಿಮೆ ಪರ್ಯಾಯವಾಗಿ ''[[ಸದ್ಗುರು]]'' (ಪದಶಃ : ''ನಿಜವಾದ ಶಿಕ್ಷಕ'' ) ಮತ್ತು ''ಸತ್ಪುರುಷ'' ಎಂಬ ಅರ್ಥದ ಜೊತೆ ಬಳಸಲ್ಪಡುತ್ತದೆ. [[ಸ್ವಾಮಿ]]ಯನ್ನೂ ಕೂಡ ಹೋಲಿಸಿ ನೋಡಿ. ಒಬ್ಬ ಗುರುವಿನ ಅನುಯಾಯಿಯನ್ನು ಒಬ್ಬ ''[[ಶಿಷ್ಯ]]'' ಅಥವಾ ''[[ಚೇಲಾ]]'' ಎಂದು ಕರೆಯಲಾಗುತ್ತದೆ. ಅನೇಕ ವೆಳೆ ಒಬ್ಬ ಗುರುವು [[ಆಶ್ರಮ]]ದಲ್ಲಿ ಅಥವಾ ಒಂದು ''[[ಗುರುಕುಲ]]'' ದಲ್ಲಿ (ಗುರುವಿನ ವಾಸಸ್ಥಾನ) ಅವನ ಅನುಯಾಯಿಗಳ ಜೊತೆ ವಾಸಿಸುತ್ತಾನೆ. ಗುರುವಿನ ಸಂದೇಶವನ್ನು ಕೊಂಡೊಯ್ಯುವ ಅನುಯಾಯಿಯಿಂದ ವ್ಯಾಪಿಸಲ್ಪಡುವ ಒಬ್ಬ ಗುರುವಿನ ವಂಶಾವಳಿಯು ಗುರು ''[[ಪರಂಪರೆ]]'' ಅಥವಾ ಅನುಯಾಯಿಗಳ (ಶಿಷ್ಯರ) ಉತ್ತರಾಧಿಕಾರ ಎಂದು ಕರೆಯಲ್ಪಡುತ್ತದೆ. [[ಬಿಎಪಿಎಸ್ ಸ್ವಾಮಿನಾರಾಯಣ್ ಸಂಸ್ಥೆ]]ಯಂತಹ ಕೆಲವು ಹಿಂದೂ ಧಾರ್ಮಿಕ ಪಂಥಗಳು, ದೇವರ ಸಾಕಾರ ರೂಪದಂತೆ ಬದಲಾಯಿಸಲ್ಪಟ್ಟ ಒಬ್ಬ ಜೀವಂತ ಗುರುವಿನ ಜೊತೆ ಒಂದು ವೈಯುಕ್ತಿಕ ಸಂಬಂಧವು [[ಮೋಕ್ಷ]]ವನ್ನು ಸಾಧಿಸುವುದಕ್ಕೆ ಬಹಳ ಪ್ರಮುಖವಾಗಿದೆ. ಗುರು ಅಂದರೆ ಅವನ ಅಥವಾ ಅವಳ ಅನುಯಾಯಿಗಳನ್ನು [[ಜೀವನ್ಮುಕ್ತ]]ವಾಗುವಂತೆ ಮಾಡಲು ನಿರ್ದೇಶಿಸುವ ಒಬ್ಬ ವ್ಯಕ್ತಿ, ಈ ರೀತಿಯಾಗಿ ವಿಮೋಚನೆಗೊಂಡ ಆತ್ಮವು ಅವನ ಅಥವಾ ಅವಳ ಜೀವಿತಾವಧಿಯಲ್ಲಿ ಮೋಕ್ಷವನ್ನು ಸಾಧಿಸಲು ಸಮರ್ಥವಾಗುತ್ತದೆ.
 
== ಗುರುವಿನ ಪಾತ್ರ ==
ಗುರುವಿನ ಪಾತ್ರವು ''[[ವೇದಾಂತ]]'' , [[ಯೋಗ]], ''[[ತಂತ್ರ]]'' ಮತ್ತು ''[[ಭಕ್ತಿ]]'' ಸ್ಕೂಲ್‌ಗಳಂತಹ ಹಿಂದೂ ಸಂಪ್ರದಾಯದ ಶಬ್ದಗಳ ಮೂಲ ಅರ್ಥದಲ್ಲಿ ಮುಂದುವರೆಯುತ್ತ ಹೋಗುತ್ತದೆ. ವಾಸ್ತವವಾಗಿ, ಭೂಮಿಯ ಮೇಲೆ ಒಬ್ಬ ಗುರುವು ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ನಿರ್ದೇಶಕ ಎಂಬುದು ಈಗ ಹಿಂದೂಮತದ ಒಂದು ಸಾಮಾನ್ಯ ಭಾಗವಾಗಿದೆ. ಕೆಲವು ಹೆಚ್ಚು ಮೋಡಿಯ ಸಂಪ್ರದಾಯಗಳಲ್ಲಿ ಗುರುವು ತನ್ನ ವಿದ್ಯಾರ್ಥಿಗಳಲ್ಲಿ ಸುಪ್ತ ಆಧ್ಯಾತ್ಮಿಕ ಜ್ಞಾನಗಳನ್ನು ಜಾಗೃತಗೊಳಿಸುತ್ತಾನೆ ಎಂಬುದಾಗಿ ನಂಬಲಾಗಿದೆ. ಈ ರೀತಿಯಾಗಿ ಮಾಡುವ ಕ್ರಿಯೆಯನ್ನು ''[[ಶಕ್ತಿಪಥ]]'' ಎಂದು ಕರೆಯುತ್ತಾರೆ. ಹಿಂದೂಮತದಲ್ಲಿ, ಗುರುವು ಸಾಧುವಿನ ಗುಣಗಳನ್ನು ಹೊಂದಿರುವ ಗೌರವಾನ್ವಿತ ವ್ಯಕ್ತಿ, ಅವನ ಅಥವಾ ಅವಳ ಅನುಯಾಯಿಗಳ ಮನಸ್ಸನ್ನು ಬೆಳಗಿಸುವ, ಒಬ್ಬ ವ್ಯಕ್ತಿಯು ಯಾರಿಂದ ಮೊದಲಿನ ಮಂತ್ರವನ್ನು ತೆಗೆದುಕೊಳ್ಳುತ್ತಾನೋ ಅಂತಹ ಶಿಕ್ಷಕ, ಮತ್ತು ವಿಧಿವತ್ತಾದ ನಡವಳಿಕೆ ಮತ್ತು ಧಾರ್ಮಿಕ ಅನುಷ್ಥಾನಗಳಲ್ಲಿ ನಿರ್ದೇಶನವನ್ನು ನೀಡುವ ಒಬ್ಬ ವ್ಯಕ್ತಿ ಎಂಬುದಾಗಿ ಪರಿಗಣಿಸಲಾಗಿದೆ. ವಿಷ್ಣು ಸ್ಮೃತಿ ಮತ್ತು [[ಮನು ಸ್ಮೃತಿ]]ಗಳು ಶಿಕ್ಷಕ, ತಾಯಿ ಮತ್ತು ತಂದೆಯನ್ನು ಒಬ್ಬ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರುವ ಅತಿ ಹೆಚ್ಚು ಪೂಜನೀಯ ವ್ಯಕ್ತಿಗಳು ಎಂಬುದಾಗಿ ಪರಿಗಣಿಸುತ್ತವೆ. ಹಿಂದೂ ಸಂಪ್ರದಾಯದಲ್ಲಿನ ಕೆಲವು ಪ್ರಭಾವಶಾಲಿ ಗುರು ಯಾರೆಂದರೆ [[ಆದಿ ಶಂಕರಾಚಾರ್ಯ]], [[ಶ್ರೀ ಚೈತನ್ಯ ಮಹಾಪ್ರಭು]], ಮತ್ತು [[ಶ್ರೀ ರಾಮಕೃಷ್ಣ]]. 20ನೆಯ ಶತಮಾನದಲ್ಲಿ [[ಯೋಗ]]ದ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋದ ಇತರ ಗುರುಗಳ ಹೆಸರುಗಳು ಈ ಕೆಳಗಿನಂತಿವೆ: [[ಶ್ರೀ ಅರಬಿಂದೋ ಘೋಷ್]], [[ಶ್ರೀ ರಮಣ ಮಹರ್ಷಿ]], [[ಸತ್ಯ ಸಾಯಿ ಬಾಬಾ]], [[ಶ್ರೀ ಚಂದ್ರಶೇಖರೇಂದ್ರ ಸರಸ್ವತಿ (ಕಾಂಚಿಯ ಋಷಿ)]], [[ಸ್ವಾಮಿ ಶಿವಾನಂದ]], [[ಪರಮಹಂಸ ಯೋಗಾನಂದ]], [[ಸ್ವಾಮಿ ಚಿನ್ಮಯಾನಂದ]], [[ಸ್ವಾಮಿ ವಿವೇಕಾನಂದ]] ಮತ್ತು [[ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ]]. [[ಹಿಂದೂ ಗುರುಗಳ ಯಾದಿ]]ಯನ್ನೂ ನೋಡಿ. ಭಾರತೀಯ ಸಂಸ್ಕೃತಿಯಲ್ಲಿ, ಗುರು ಅಥವಾ ಒಬ್ಬ ಶಿಕ್ಷಕ ([[ಆಚಾರ್ಯ]])ರ ಜೊತೆಯಿಲ್ಲದ ಒಬ್ಬ ವ್ಯಕ್ತಿಯನ್ನು ಒಮ್ಮೆ ಅನಾಥ ಅಥವಾ ಅದೃಷ್ಟಹೀನ ವ್ಯಕ್ತಿ ಎಂಬಂತೆ ನೋಡಲಾಯಿತು. ಸಂಸ್ಕೃತದಲ್ಲಿ ''ಅನಾಥ'' ಎಂಬ ಶಬ್ದವು "ಒಬ್ಬ ಗುರುವನ್ನು ಹೊಂದಿಲ್ಲದ ವ್ಯಕ್ತಿ" ಎಂಬುದನ್ನು ಸೂಚಿಸುತ್ತದೆ. ಆಚಾರ್ಯನು ''ಜ್ಞಾನ'' ವನ್ನು (knowledge) ''ಶಿಕ್ಷಣ'' ದ (ಬೋಧನೆ,instruction) ಮೂಲಕ ನೀಡುವವನಾಗಿದ್ದಾನೆ. ಒಬ್ಬ ಗುರುವು ''[[ದೀಕ್ಷೆ]]'' ಯ ''ವಿಧಿ'' ಯನ್ನೂ ನೀಡುತ್ತಾನೆ, ದೀಕ್ಷೆ ಅಂದರೆ ಒಬ್ಬ ಗುರುವಿನ ಕೃಪೆಯಿಂದ ಅವನ ಅನುಯಾಯಿಯ ಆಧ್ಯಾತ್ಮಿಕ ಜಾಗೃತಿ ಎಂಬುದಾಗಿದೆ. ದೀಕ್ಷೆಯು ಒಬ್ಬ ಗುರುವಿನ ದೈವಿಕ ಶಕ್ತಿಗಳನ್ನು ಅವನ ಅನುಯಾಯಿಗಳ ಮೇಲೆ ಅನುಗ್ರಹಿಸುವ ಒಂದು ಪದ್ಧತಿ ಎಂಬುದಾಗಿ ಪರಿಗಣಿಸಲಾಗಿದೆ, ಆ ದೀಕ್ಷೆಯ ಮೂಲಕ ಅನುಯಾಯಿಯು ದೈವಿಕತೆಯ ಮಾರ್ಗದಲ್ಲಿ ನಿರಂತರವಾಗಿ ಪ್ರಗತಿಯನ್ನು ಹೊಂದುತ್ತಾನೆ. "ಗುರು" ಎಂಬ ವಿಷಯವು ಅತಿ ಹಳೆಯದಾದ [[ಉಪನಿಷತ್ತು]]ಗಳ ಕಾಲದಿಂದಲೂ ಇತ್ತು ಎಂಬುದಾಗಿ ಕಂಡುಹಿಡಿಯಲಾಗಿದೆ, ಅಲ್ಲಿ ಭೂಮಿಯ ಮೇಲಿನ ದೈವಿಕತೆಯ ಶಿಕ್ಷಕ ಎಂಬ ಆಲೋಚನೆಯು ಮೊದಲಿನ [[ಬ್ರಾಹ್ಮಣ]] ಸಂಘಟನೆಗಳಿಂದ ಅಭಿವ್ಯಕ್ತಿಗೊಳ್ಳಲ್ಪಟ್ಟಿತು. ಗುರು ಎಂಬ ಶಬ್ದವು ಒಬ್ಬ ಸೌಂದರ್ಯದ ಕಲೋಪಾಸಕ ಅಥವಾ ಸೌಂದರ್ಯದ ಬಗೆಗೆ ಶಿಕ್ಷಣವನ್ನು ನೀಡುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನೂ ನೀಡುತ್ತದೆ. ಗುರುಗಳು ತಮ್ಮ ಅಧಿಕರಕ್ಕಾಗಿ ಮೂರ್ತಿಪೂಜೆಗೆ ಮೊರೆಹೋಗುವುದಿಲ್ಲ, ಅಥವಾ ಅವರು ದೇವರ ಇಚ್ಛೆಯನ್ನು ಪ್ರಕಟಿಸುವ ಧರ್ಮೋಪದೇಶಕರೂ ಅಲ್ಲ. ವಾಸ್ತವವಾಗಿ, ಹಿಂದೂಮತದ ಕೆಲವು ಪ್ರಕಾರಗಳಲ್ಲಿ ಒಮ್ದು ತಿಳುವಳಿಕೆಯಿದೆ, ಅದೇನೆಂದರೆ ಭಕ್ತರು ಗುರು ಮತ್ತು ದೇವರ ಜೊತೆ ತೋರಿಸಲ್ಪಟ್ಟರೆ, ಮೊದಲಿಗೆ ಭಕ್ತನು ಗುರುವಿಗೆ ಗೌರವವನ್ನು ತೋರಿಸುತ್ತಾನೆ ಏಕೆಂದರೆ ಗುರುವು ಅವನನ್ನು ದೇವರೆಡೆಗೆ ಕರೆದೊಯ್ಯುವ ಒಂದು ಸಾಧನವಾಗಿದ್ದಾನೆ.<ref>ರಾನಡೆ, ರಾಮ್‌ಚಂದ್ರಾ ದತ್ತಾತ್ತೇಯ ''ಮಿಸ್ಟಿಸಿಜಂ ಇನ್ ಇಂಡಿಯಾ: ದ ಪೋಯಟ್-ಸೇಂಟ್ಸ್ ಆಫ್ ಮಹಾರಾಷ್ಟ್ರಾ'' , ಪುಪು.392, ಸನ್ನಿ ಮುದ್ರಣಾಲಯ, 1983. ISBN 0-87395-669-9</ref><ref>ಮಿಲ್ಸ್, ಜೇಮ್ಸ್ ಎಚ್ ಮತ್ತು ಸೇನ್, ಸತದ್ರು (ಎಡಿಶನ್.), ''ಕಾನ್‌ಫ್ರಾಂಟಿಂಗ್ ದ ಬಾಡಿ: ದ ಪಾಲಿಟಿಕ್ಸ್ ಆಫ್ ಫಿಜಿಕಾಲಿಟಿ ಇನ್ ಕಲೋನಿಯಲ್ ಆ‍ಯ್‌೦ಡ್ ಪೋಸ್ಟ್-ಕಲೋನಿಯಲ್ ಇಂಡಿಯಾ'' , ಪುಪು.23, ಅಥೇನ್ಸ್ ಮುದ್ರಣಾಲಯ (2004), ISBN 1-84331-032-5</ref><ref name="isbn0-8133-2508-0">{{cite book |author=Poewe, Karla O.; Hexham, Irving |title=New religions as global cultures: making the human sacred |publisher=Westview Press |location=Boulder, Colo |year=1997 |pages=106 |isbn=0-8133-2508-0 |oclc= |doi=}}<br />"ಗುರುಗಳು ಪ್ರವಾದಿಗಳಲ್ಲ ಅವರು ಮನಸ್ಸೆ ದೇವರೆಂದು ಸ್ಪಷ್ಟಪಡಿಸುತ್ತಾರೆ ಮತ್ತು ಪವಿತ್ರ ಗ್ರಂಥಗಳ ಪ್ರಾರ್ಥನೆಯಲ್ಲಿ ಪ್ರತಿಪಾದಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ, ತಾವು ದೇವರಿಗಿಂತ ದೊಡ್ಡವರೆಂದು ಹೇಳುತ್ತಾರೆ ಏಕೆಂದರೆ ಅವರು ದೇವರಗೆ ಮಾರ್ಗದರ್ಶನ ಮಾಡುತ್ತಾರೆ. ಗುರುಗಳು ಸಂಪೂರ್ಣವಾದ ಸಾರ ಮತ್ತು ಏಕವಾಗಿ ಇರುವಿಕೆಯನ್ನು ಅರಿತು ,ಅವರು ದಿವ್ಯವಾದ ಶಕ್ತಿ ಒದಗಿಸುತ್ತಾರೆ ಮತ್ತು ಭೋಧಕ ಜನರ ಸಾಮರ್ಥ್ಯ ಮತ್ತು ಈ ಜಗತ್ತಿನ ವಿಷಯವನ್ನು ಹಂಚಿಕೊಳ್ಳುತ್ತಾರೆ".</ref> ಕೆಲವು ಸಂಪ್ರದಾಯಗಳು "ಗುರು, ದೇವರು ಮತ್ತು ಸ್ವಯಂ" (ಸ್ವಯಂ ಅಂದರೆ ಆತ್ಮ, ವ್ಯಕ್ತಿಯಲ್ಲ) ಇವು ಒಂದೇ ಎಂಬುದಾಗಿ ಹೇಳುತ್ತವೆ. ಭಾರತದಲ್ಲಿನ [[ಸಾಧು]]ಗಳು ಮತ್ತು ಕವಿಗಳು ಗುರು ಮತ್ತು ದೇವರ ನಡುವಣ ಸಂಬಂಧದ ಬಗೆಗೆ ಈ ಕೆಳಗಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ:
 
೭೭ ನೇ ಸಾಲು:
== ಬೌದ್ಧ ಧರ್ಮದಲ್ಲಿ ಗುರು ==
{{Buddhism|terse=1}}
[[ತೆರವಾಡಾ]] ಬೌದ್ಧ ಸಂಪ್ರದಾಯದಲ್ಲಿ ಒಬ್ಬ ಶಿಕ್ಷಕನು ಮೌಲ್ಯವನ್ನು ಹೊಂದಿರುವ ಮತ್ತು ಯೋಗ್ಯವಾದ ಅಮೂಲ್ಯ ಘನತೆಯ ಗೌರವಾನ್ವಿತ ಮಾರ್ಗದರ್ಶಿಯಾಗಿರುತ್ತಾನೆ ಮತ್ತು ಈತನು [[ಜ್ಞಾನೋದಯ]] ಮಾರ್ಗದ ಸ್ಪೂರ್ತಿಯ ಮೂಲವಾಗಿರುತ್ತಾನೆ, ಆದರೂ ಒಬ್ಬ ಶಿಕ್ಷಕನನ್ನು ಸಾಮಾನ್ಯವಾಗಿ ಗುರು ಎಂದು ಪರಿಗಣಿಸಲಾಗುವುದಿಲ್ಲ ಅದರೆ ಆತನನ್ನು ಒಬ್ಬ ಆಧ್ಯಾತ್ಮಿಕ ಸ್ನೇಹಿತ ಅಥವಾ ಬೌದ್ಧರ ಕಲ್ಪನೆಯಲ್ಲಿ [[ಕಲ್ಯಾಣ-ಮಿತ್ತತಾ]] ಎಂದು ಗುರುತಿಸಲಾಗುತ್ತದೆ. [[ಟಿಬೇಟಿಯನ್ ಸಂಪ್ರದಾಯ]]ದಲ್ಲಿ ಗುರುವನ್ನು ಆಧ್ಯಾತ್ಮಿಕ ಸಾಧನೆಗೆ ಮತ್ತು ಕ್ರಮಿಸುವ ಮಾರ್ಗದ ತಳಹದಿಗೆ ಮೂಲ ಬೇರು ಆದ [[ಬುದ್ಧ]]ನ ರೂಪದಲ್ಲಿ ನೋಡಲಾಗುತ್ತದೆ. ಶಿಕ್ಷಕನಿಲ್ಲದೆ ಯಾವುದೇ ಅನುಭವ ಅಥವಾ ಅಂತರ್ದೃಷ್ಟಿ ಸಾಧ್ಯವಿಲ್ಲ ಎಂಬುದು ಪ್ರತಿಪಾದಿತ ಘೋಷಣೆಯಾಗಿದೆ. ಟಿಬೇಟಿಯನ್ ಪಠ್ಯಗಳಲ್ಲಿ ಗುರುವಿನ ಸಚ್ಚಾರಿತ್ರ್ಯತೆಯ ಗುಣಗಾನದ ಮೇಲೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿರುತ್ತದೆ. ಗುರುವಿನಿಂದ ಹರಸಲ್ಪಟ್ಟ ನಂತರ ಅನುಯಾಯಿಗಳು [[ಬೋಧಿಸತ್ವ]] ಅಥವಾ [[ಬುದ್ಧ]]ನ ಮೂರ್ತರೂಪಗಳು ಎಂದು ಗುರುತಿಸಲ್ಪಡುತ್ತಾರೆ, ಈ ಅನುಯಾಯಿಗಳು ನೈಜತೆಯ ಸತ್ಯ ಸ್ವರೂಪದ ಅನುಭವವನ್ನು ಪಡೆದುಕೊಳ್ಳುವ ಮಾರ್ಗದಲ್ಲಿ ಮುಂದುವರಿಯವಹುದು. ಅನುಯಾಯಿಗಳು [[ವಜ್ರಾಯಣ]] [[ಬೌದ್ಧ ಧರ್ಮ]]ದ ನಾಲ್ಕು ತಳಹದಿಯ ಅಂತಿಮ ಅನುಗ್ರಹವಾದ ಗುರುವಿಗೆ ಅದ್ಭುತ ಮೆಚ್ಚುಗೆಯನ್ನು ಮತ್ತು ಶ್ರದ್ಧೆಯನ್ನು ತೋರಿಸುತ್ತಾರೆ. [[ದಲಾಯಿ ಲಾಮಾ]] ಅವರು ಗುರುವಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತ: ''"ಶಿಕ್ಷಣದಲ್ಲಿ ನಂಬಿಕೆ ಇಟ್ಟು ಗುರುವಿನ ಮೌಲ್ಯವನ್ನು ನಿರ್ಧರಿಸುವಾಗ: ಕುರುಡು ನಂಬಿಕೆಯನ್ನು ಇಡಬೇಡಿ ಅದರ ಜೊತೆಗೆ ಅಂಧ ವಿಮರ್ಶೆಯನ್ನು ಕೂಡ"'' ಎಂದು ಹೇಳಿದ್ದರು.<ref name="urlThe Teacher - The Guru">{{cite web |url=http://buddhism.kalachakranet.org/spiritual_teacher_guru.html |title=The Teacher - The Guru |work= |accessdate=}}</ref> ಅವರು ’ಬುದ್ಧನೊಂದಿಗೆ ಜೀವಿಸುವುದು’ ಎಂಬ ಪದ ಚೈನಾದ ಪದವಾದ ''huo fuo'' ನ ಭಾಷಾಂತರವಾಗಿತ್ತು ಎಂಬುದನ್ನು ಕೂಡ ಗುರುತಿಸಿದ್ದರು. ಟಿಬೇಟಿನಲ್ಲಿ ಅವರು ಕಾರ್ಯಕಾರಿಯಾದ ಪದವೆಂದರೆ ಅದು ''ಲಾಮಾ'' ಅಂದರೆ ಅದು "ಗುರು" ಎನ್ನುವ ಅರ್ಥ ಕೊಡುತ್ತದೆ ಎಂದು ಹೇಳಿದ್ದರು. ಒಬ್ಬ ಗುರು ಅವಶ್ಯವಾಗಿ ಬುದ್ಧನೇ ಆಗಿರಬೆಕೆಂದೇನೂ ಇಲ್ಲ ಆದರೆ ಆತನು ಜ್ಞಾನ ಸಂಪತ್ತಿನಿಂದ ತುಂಬಿರಬೇಕು. ಬಳಸಿಕೊಳ್ಳಲಾದ ''ವಜ್ರ'' ಎಂಬ ಪದವೂ ಕೂಡ ಬೋಧಕ ಎಂಬ ಅರ್ಥವನ್ನು ಕೊಡುತ್ತಿತ್ತು.<ref name="vajra"></ref> [[ತಾಂತ್ರಿಕ]] ಶಿಕ್ಷಣವು ಗುರುವನ್ನು ಅಂತರ್ ಚಕ್ಷುವಿನ ಮೂಲಕ ನೋಡುವ ಮತ್ತು ಗುರುವನ್ನು ಭಜಿಸುವ ಮೂಲಕ ನಿವೇದನೆಯನ್ನು ಮಾಡಿಕೊಳ್ಳುವ [[ಗುರು ಯೋಗ]]ದ ಪ್ರಯೋಗಗಳನ್ನು ಒಳಗೊಂಡಿದೆ. ಗುರುವು ''[[ವಜ್ರ]]'' ಗುರು ಎಂದು ಪರಿಚಿತವಾಗಿದೆ (ಸಾಹಿತ್ಯಿಕವಾಗಿ ವಜ್ರ ()ಡೈಮಂಡ್ ಎಂದು ಕರೆಯಲಾಗಿದೆ).<ref name="vajra">{{cite book |author=Strong, John S. |title=The experience of Buddhism: sources and interpretations |publisher=Wadsworth Pub. Co |location=Belmont, CA |year=1995 |pages= 76 |isbn=0-534-19164-9 }}</ref> ವಿಧ್ಯಾರ್ಥಿಯು ನಿರ್ಧಿಷ್ಟವಾದ [[ತಂತ್ರ]]ವನ್ನು ಅಭ್ಯಾಸ ಮಾಡುವದಕ್ಕಿಂತ ಮುನ್ನ ಉಪಕ್ರಮ ಅಥವಾ ಕ್ರಿಯಾವಿಧಿಗಳ [[ಅಧಿಕೃತ ಸ್ಥಿತಿ]] ಬಹಳ ಅವಶ್ಯಕ. ಗುರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಉಪಕ್ರಮಗಳನ್ನು ನೆರವೇರಿಸುವುದಿಲ್ಲ, ಆದರೆ ಗುರುವಿನ ವ್ಯಕ್ತಿತ್ವದಲ್ಲಿ ಅವರದೇ ಆದ ಬುದ್ಧನ ಸ್ವರೂಪಗಳು ಪ್ರತಿಬಿಂಬಿಸುತ್ತವೆ. ಅನುಯಾಯಿಗಳಿಗೆ ಗುರುವಿನೊಂದಿಗೆ ಆಧ್ಯಾತ್ಮಿಕ ಕೊಂಡಿಯನ್ನು ಉಳಿಸಿಕೊಂಡು ಹೋಗುವ [[ಸಮಯ]] ಅಥವಾ ಶಪಥ ಮತ್ತು ಒಡಂಬಡಿಕೆಯನ್ನು ಮಾಡಿಕೊಳ್ಳುವಂತೆ ಕೇಳಿಕೊಳ್ಳಲಾಗುತ್ತದೆ, ಮತ್ತು ಈ ಕೊಂಡಿಯನ್ನು ಮುರಿದುಕೊಂಡರೆ ಗಂಭೀರವಾದ ಅವನತಿ ಒದಗುತ್ತದೆ ಎಂದು ಕೂಡ ಹೇಳಲಾಗುತ್ತದೆ.
{{See also|Tibetan Buddhism}}
 
೯೩ ನೇ ಸಾಲು:
{{See also|Guru-shishya tradition|Gurukula}}
 
== ಪಾಶ್ಚಾತ್ಯ ಸಾಂಸ್ಕೃತಿಕ ದೃಷ್ಟಿಕೋನದಲ್ಲಿ ಗುರುವಿನ ಅವಲೋಕನ ==
 
ಸ್ಥಾಪಿತ ಧರ್ಮ್ಮಗಳ ಪರ್ಯಾಯವಾಗಿ, ಯುರೋಪ್ ಹಾಗೂ USA ನಲ್ಲಿನ ಭಾರತೀಯ ಮೂಲವಲ್ಲದ ಕೆಲವು ಜನರು ಜೀವನದ ಅರ್ಥದ ಬಗ್ಗೆ ಉತ್ತರಗಳನ್ನು ಹುಡುಕಲು ಮತ್ತು ತಿಳಿವಳಿಕೆ ಹಾಗೂ ವೇದಾಂತಗಳಿಂದ ಮುಕ್ತವಾದ ಹೆಚ್ಚು ನೇರ ಅನುಭವ ಪಡೆಯಲು ಭಾರತೀಯ ಆಧ್ಯಾತ್ಮಿಕ ಮಾರ್ಗದರ್ಶಿಗಳತ್ತ ಹಾಗೂ ಗುರುಗಳತ್ತ ನೋಡುವರು. ಹಲವು ಧಾರ್ಮಿಕ ಪಂಥಗಳ ಗುರುಗಳು ಪಶ್ಚಿಮ ಯುರೋಪ್ ಹಾಗೂ USAಗೆ ಪ್ರಯಾಣಿಸಿ ತಮ್ಮ ಅನುಯಾಯಿಗಳನ್ನು ಸ್ಥಾಪಿಸಿದ್ದಾರೆ. ಇವರಲ್ಲಿ ಮೊದಲಿಗ ಎಂದರೆ [[ಸ್ವಾಮಿ ವಿವೇಕಾನಂದ]], ಇವರು 1893ರಲ್ಲಿ [[ಶಿಕಾಗೊದ ಇಲಿನಿಯೊಸ್‌]]ನ [[ವರ್ಲ್ಡ್ ಪಾಲಿಯಮೆಂಟ್ ಒಫ್ ರಿಲಿಜಿಯನ್ಸ್‌]]‌ನಲ್ಲಿ ಮಾತನಾಡಿದರು. 1960 ಹಾಗೂ 1970ರ ದಶಕಗಳಲ್ಲಿ ಪ್ರಮುಖವಾಗಿ ಹಲವು ಗುರುಗಳು ಪಶ್ಚಿಮ ಯುರೋಪ್ ಹಾಗೂ USAನಲ್ಲಿ ಯುವ ಅನುಯಾಯಿಗಳನ್ನು ಪಡೆದುಕೊಂಡರು. ಅಮೇರಿಕಾದ ಸಮಾಜಶಾಸ್ತ್ರಜ್ಞ [[ಡೆವಿಡ್ G. ಬ್ರೊಂಲೆ]]ರ ಅನುಸಾರ ಇದಕ್ಕೆ ಮುಖ್ಯ ಕಾರಣ 1965ರಲ್ಲಿ [[ಚೈನೀಸ್ ಎಕ್ಸಕ್ಲೂಷನ್ ಆಕ್ಟ್‌]]ನ (ಸಂಯುಕ್ತ ರಾಷ್ಟ್ರಗಳು) ರದ್ದುಗೊಳಿಸುವಿಕೆ, ಇದು USA ನಲ್ಲಿ ಏಷಿಯದ ಗುರುಗಳ ಪ್ರವೇಶವನ್ನು ಅನುಮತಿಸಿತು.<ref name="bromley1989">[[ಗ್ರೂಮ್ಲಿ,ಡೇವಿಡ್ ಡಿ.]], ಪಿ.ಎಚ್‌ಡಿ. &amp; [[ಆ‍ಯ್‌ನ್‌ಸನ್ ಶುಪೆ]], ಪಿ.ಎಚ್‌ಡಿ., ''ಪಬ್ಲಿಕ್ ರಿಯಾಕ್ಷನ್ ಅಗೇನಸ್ಟ್ ನ್ಯೂ ರಿಲಿಜಿಯಸ್ ಮೂವ್‌‍ಮೆಂಟ್ಸ್ '' ''ಕಲ್ಟ್ಸ್ ಆ‍ಯ್‌೦ಡ್ ನ್ಯೂ ರಿಲಿಜಿಯಸ್ ಮೂವ್‌ಮೆಂಟ್ಸ್: ಎ ರಿಪೋರ್ಟ್ ಆಫ್ ದ ಕಮಿಟಿ ಆನ್ ಸೈಕಿಯಾಟ್ರಿ ಆ‍ಯ್‌೦ಡ್ ರಿಲಿಜನ್ ಆಫ್ ದ ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್'' ನಲ್ಲಿ ಲೇಖನ ಪ್ರಕಟವಾಯಿತು, ಮಾರ್ಕ್ ಗಲಾಂಟರ್‌,ಎಂ.ಡಿ.,ಯವರಿಂದ ಸಂಪಾದನೆ (1989) ISBN 0-89042-212-5</ref> ಡಚ್‌ನ ಭಾರತಜ್ಞ ಆಲ್‌ಬರ್ಟಿನ ನಗ್ಟೆರೆನ್‌ರ ಅನುಸಾರ, ಈ ರದ್ದುಗೊಳಿಸುವಿಕೆ ಹಲವು ಇತರ ಕಾರಣಗಳಲ್ಲಿ ಒಂದಾಗಿತ್ತು, ’ಪೂರ್ವದ’ ಕ್ಷೋಭೆಯ ಎಲ್ಲ ಕಾರಣಗಳಲ್ಲಿ ಇನ್ನು ಎರಡು ಪ್ರಮುಖ ಕಾರಣಗಳೆಂದರೆ: ಯುದ್ಧದ ನಂತರದ ಸಾಂಸ್ಕೃತಿಕ ತಳಿಗಳ ಬೆರಕೆ ಹಾಗೂ ಪಶ್ಚಿಮದ ಸ್ಥಾಪಿತ ಮೌಲ್ಯಳ ಬಗ್ಗೆ ಸಾಮಾನ್ಯ ಅಸಮಾಧಾನ.<ref name="nugteren1997">[[ನಗ್‌ತರೆನ್,ಅಲ್ಬರ್ಟಿನಾ (Tineke)]] ಡಾ. (([[ಟಿಲ್‌ಬರ್ಗ್ ವಿಶ್ವವಿದ್ಯಾಲಯ]]ದಲ್ಲಿ ಫಿನಾಮಿನಾಲಜಿ ಮತ್ತು ಭಾರತೀಯ ಧರ್ಮಗಳ ಇತಿಹಾಸದ ಧರ್ಮಶಾಸ್ತ್ರಗಳಲ್ಲಿ ಫ್ಯಾಕಲ್ಟಿ ಮತ್ತು ಸಹಾಯಕ ಪ್ರೋಫೆಸರ್) ''ತಾಂತ್ರಿಕ್ ಇನ್‌ಫ್ಲೂಯನ್ಸಸ್ ಇನ್ ವೆಸ್ಟರ್ನ್ ಎಸೊಟೆರಿಸಿಜಂ'' ,ಈ ಲೇಖನವು 1997 [[ಸೆಸ್‌ನೂರ್]] ಸಭೆ ಮತ್ತು ''ನ್ಯೂ ರಿಲಿಜನ್ಸ್ ಇನ್ ಎ ಪೋಸ್ಟ್ ಮಾಡರ್ನ್ ವರ್ಲ್ಡ್ '' ಪುಸ್ತಕದಲ್ಲಿ ಪ್ರಕಟವಾಯಿತು ಮಿಕಾಯೆಲ್ ರೋಥ್‌ಸ್ಟೇನ್ ಮತ್ತು ರೀಂಡರ್ ಕ್ರಾನೆನ್‌ಬರ್ಗರಿಂದ ಸಂಪಾದನೆ ರೆನ್ನರ್ ಸ್ಟಡೀಸ್ ಇನ್ ನ್ಯೂ ರಿಲಿಜನ್ [[ಆರ್ಹಸ್ ವಿಶ್ವವಿದ್ಯಾಲಯ]] ಮುದ್ರಣಾಲಯ (2003) ISBN 87-7288-748-6</ref> [[ಅಲ್‌ಬರ್ಟ ವಿಶ್ವವಿದ್ಯಾಲಯ]] ಹಾಗೂ ಕ್ರೆನನ್‌ಬೊರ್ಗ್‌ನ (1974) [[ಸಮಾಜಶಾಸ್ತ್ರಜ್ಞ]] [[ಸ್ಟಿಫನ್ A. ಕೆಂಟ್‌]]ರ ಅನುಸಾರ, 1970ರ ದಶಕದಲ್ಲಿ [[ಹಿಪ್ಪಿ]]ಗಳು ಸೇರಿ ಹಲವು ಯುವಜನರು ಗುರುಗಳತ್ತ ಸೆಳೆಯಲು ಕಾರಣ, ಮಾದಕ ಪದಾರ್ಥಗಳು ಅವರ ಅಸ್ತಿತ್ವವನ್ನು ತರ್ಕಾತೀತದತ್ತ ಒಯ್ಯದು ತೆರೆಯುತ್ತಿದೆ ಎಂದು ಅವರಿಗೆ ಅನಿಸತೊಡಗಿತು ಅಥವಾ ಈ ಮಾದಕ ಪದಾರ್ಥಗಳ ಬಳಕೆ ಮಾಡದೆ ಅವರು ''ಮೇಲ್ಮಟ್ಟ'' ವನ್ನೇರಲು ಬಯಸಿದರು.<ref name="kranenborg1974">ಕ್ರಾನೆನ್‌ಬರ್ಗ್, ರೀಂಡರ್ (ಡಚ್ ಭಾಷೆ) ''Zelfverwerkelijking: oosterse religies binnen een westerse subkultuur'' (ಇಂಗ್ಲೀಶ್: [[ಸೆಲ್ಫ್-ರಿಯಲೈಸೆಶನ್]]: ಈಸ್ಟರ್ನ್ ರಿಲಿಜನ್ಸ್ ಇನ್ ಎ ವೆಸ್ಟರ್ನ್ ಸಬ್-ಕಲ್ಚರ್'', ಕಾಂಪೆನ್ ಕಾಕ್‌ನಿಂದ ಪ್ರಕಟಗೊಂಡಿತು (1974)'' </ref><ref name="kent2001">[[ಕೇಂಟ್,ಸ್ಫೀಫನ್ ಎ.]] ಡಾ.ಫ್ರಾಮ್ ಸ್ಲೋಗನ್ಸ್ ಟು ಮಂತ್ರಾಸ್: ಸೋಶಿಯಲ್ ಪ್ರೊಟೇಸ್ಟ್ ಆ‍ಯ್‌೦ಡ್ [[ರಿಲಿಜಿಯಸ್ ಕನ್ವರ್ಷನ್]] [[ವಿಯೆಟ್ನಾಂ ಯುದ್ಧ]] ಕಾಲ''ದ ನಂತರದಲ್ಲಿ [[Syracuse ವಿಶ್ವವಿದ್ಯಾಲಯ]] ಮುದ್ರಣಾಲಯ ISBN 0-8156-2923-0 (2001)'' </ref> ಕೆಂಟ್‌ರ ಪ್ರಕಾರ, ಇದು USAನಲ್ಲಿ ಹಲವು ಬಾರಿ ಘಟಿಸಲು ಕಾರಣವೆಂದರೆ ಕೆಲವು [[ವಿಯಟ್‌ನಾಮ್ ಯುದ್ಧ]] ವಿರೋಧಿ ವಿದ್ರೋಹಿಗಳು ಹಾಗೂ ರಾಜಕೀಯ ಕಾರ್ಯಕರ್ತರು ಸಮಾಜವನ್ನು ರಾಜಕೀಯ ಹಾದಿಯಲ್ಲಿ ಬದಲಿಸುವ ಆಶೆಯಿಂದ ಬೆಸೊತ್ತು ಅಥವಾ ಮೋಹವಿಮೋಚನೆಗೊಂಡರು ಮತ್ತು ಅದರ ಬದಲಾಗಿ ಧಾರ್ಮಿಕ ಹಾದಿಯತ್ತ ತಿರುಗಿದರು.<ref name="kent2001"/> ಕೆಲವು ಗುರುಗಳು ಹಾಗೂ ಅವರ ನಾಯಕತ್ವದ ಗುಂಪುಗಳು [[ವಿರೋಧ ಪಕ್ಷಗಳನ್ನು ಆಕರ್ಷಿಸಿತು]]. ಈ ತರಹದ ಒಂದು ಗುಂಪಿನ ಉದಾಹರಣೆ ಎಂದರೆ 1966ರಲ್ಲಿ [[A.C. ಭಕ್ತಿವೆದಾಂತ ಸ್ವಾಮಿ ಪ್ರಭುಪದ]]ರು ಸ್ಥಾಪಿಸಿದ [[ಹರೆ ಕೃಷ್ಣ]] ಚಳುವಳಿ ([[ISKCON]]), ಇದರ ಹಲವು ಅನುಯಾಯಿಗಳು ಸ್ವ-ಇಚ್ಛೆಯಿಂದ ಆಗ್ರಹಪೂರ್ವಕವಾದ [[ಭಕ್ತಿ ಯೋಗ]]ದ ಸಂನ್ಯಾಸಿ ಜೀವನಶೈಲಿಯನ್ನು ಪೂರ್ಣ-ಕಾಲದ ಆಧಾರದ ಮೇಲೆ ಸ್ವೀಕರಿಸಿದರು, ಇದು ಆ ಸಮಯದ ಜನಪ್ರಿಯ ಸಂಪ್ರದಾಯಕ್ಕೆ ಪೂರ್ತಿಯಾಗಿ ವಿಭಿನ್ನವಾಗಿತ್ತು.<ref>ಬರೆಟ್, ಡಿ. ವಿ. ದ ನ್ಯೂ ಬಿಲೀವರ್ಸ್ - ಎ ಸರ್ವೆ ಆಫ್ ಸೆಕ್ಟ್ಸ್, ಕಲ್ಟ್ಸ್ ಆ‍ಯ್‌೦ಡ್ ಆಲ್ಟರ್ನೆಟೀವ್ ರಿಲಿಜನ್ಸ್ 2001 ಯುಕೆ, ಕ್ಯಾಸೆಲ್ &amp; ಕಂ. ISBN 0-304-35592-5 [[ಇಸ್ಕಾನ್]] ಪುಟ 287,288ರಲ್ಲಿ ಪ್ರವೇಶ<br />"ಭಕ್ತರು ಸುಖವಾದ ಸಮಯವನ್ನು ಹೊಂದಿರುವುದಿಲ್ಲ. ಅವರು ದೇವಸ್ಥಾನಗಳಲ್ಲಿ ಬದುಕಲು ಆಯ್ಕೆ ಮಾಡಿಕೊಳ್ಳುತ್ತಾರೆ – ಈಗ ಅವರ ಸಂಖ್ಯೆ ಅಲ್ಪ - [[ಹರೇ ಕೃಷ್ಣ]] ಮಂತ್ರವನ್ನು ದಿನಕ್ಕೆ 1,728 ಬಾರಿ ಪಠಿಸುತ್ತಾರೆ. […] ಆಶ್ರಮದಲ್ಲಿ ವಾಸಿಸುವವರಾದರೆ – 1970ರ ದಶಕಕ್ಕಿಂತ ತುಂಬಾ ಕಡಿಮೆ – ಪೂಜಿಸಲು ನಾಲ್ಕು ಗಂಟೆಗೆ ಏಳುತ್ತಾರೆ. ಎಲ್ಲಾ ಸದಸ್ಯರಿಗೂ ಮಾಂಸ, ಮೀನು ಮತ್ತು ಮೊಟ್ಟೆ ;ಮದ್ಯ, ತಾಂಬಾಕು, ಮಾದಕವಸ್ತು, ಟೀ ಮತ್ತು ಕಾಫಿ; ಜೂಜು,ಸ್ಪರ್ಧೆಗಳು,ಆಟಗಳು, ಮತ್ತು ಕಾದಂಬರಿಗಳು; ಮತ್ತು ಮದುವೆ ಹೊರತಾಗಿ ಜನ್ಮ ನೀಡಲು ಸೆಕ್ಸ್ […] ಇದೊಂದು ಬೇಡಿಕೆಯ ಜೀವನ ವಿಧಾನ. ಹೊರಗಿನವರು ಆಶ್ಚರ್ಯ ಪಡುತ್ತಾರೆ ಯಾಕೆ ಜನರು ಸೇರಿಕೊಳ್ಳುತ್ತಾರೆಂದು."</ref> ಕ್ರೆನನ್‌ಬರ್ಗ್‌ರ ಅನುಸಾರ (1984), [[ಜಿಸಸ್]] ಹಿಂದು ಸೂತ್ರೀಕರಣ ಹಾಗೂ ಗುರುವಿನ ಗುಣಲಕ್ಷಣಗಳಿಗೆ ಸರಿಹೊಂದುತ್ತಾರೆ.<ref name="kranenborg1984">ಕ್ರಾನೆನ್‌ಬರ್ಗ್, ರೀಂಡರ್ (ಡಚ್ ಭಾಷೆ) Een nieuw licht op de kerk? Bijdragen van nieuwe religieuze bewegingen voor de kerk van vandaag (ಇಂಗ್ಲೀಶ್: ಚರ್ಚ್ ಮೇಲೆ ಹೊಸ ದೃಷ್ಟಿಕೋನ? ಇಂದಿನ ಚರ್ಚ್‌ಗಳಿಗೆ ಹೊಸ ಧಾರ್ಮಿಕ ಚಳುವಳಿಯ ಕೊಡುಗೆಗಳು), the Hague Boekencentrum (1984) ISBN 90-239-0809-೦ ಪುಪು 93-99</ref>''''
೧೩೭ ನೇ ಸಾಲು:
ಅವರು ಐಹಿಕ ಸಂಪತ್ತನ್ನು ಹೊಂದಲು ಅಥವಾ ಶೇಖರಿಸಲು ಅಥವಾ ಮಾರುಕಟ್ಟೆಯಲ್ಲಿ ಚರ್ಚಿಸಲು ಅಥವಾ ಮನುಷ್ಯರ ಅಹಂನ್ನು ಸಂತೋಷ ಪಡಿಸಲು ಆಸಕ್ತರಾಗಿರುವುದಿಲ್ಲ.
ಅವರು ಶಿಷ್ಟಾಚಾರದ ಕುರಿತಾಗಿಯೂ ಇರುವುದಿಲ್ಲ. ಒಂದು ನಮೂನೆಯಲ್ಲಿ, ಅವರ ಸಂದೇಶಗಳು ತೀವ್ರ ಸ್ವಭಾವದವಾಗಿರುತ್ತದೆ, ನಮ್ಮ ಉದ್ದೇಶವನ್ನು ಅನ್ವೇಶಿಸಿಸುತ್ತವೆ, ನಮ್ಮ ಅಹಂನ ಭಾವೋದ್ರೇಕವನ್ನು ಇಲ್ಲವಾಗಿಸುತ್ತದೆ, ನಮ್ಮ ಆಧ್ಯಾತ್ಮಿಕ ಕುರುಡಿನಿಂದ ಹೊರಬರಲು ಸಹಾಯಕವಾಗುತ್ತದೆ, ನಮ್ಮ ಸುತ್ತಲಿನವರೊಂದಿಗೆ ಶಾಂತಿಯಿಂದಿರುವಂತೆ ಮಾಡುತ್ತದೆ, ಮತ್ತು ಕೊನೆಯದಾಗಿ ಮಾನವ ಸ್ವಾಭಾವದ ತಿರುಳಾದ ಆತ್ಮವನ್ನು ಅರಿಯಲು ಸಹಾಯಕವಾಗುತ್ತದೆ.
ಸಂಪ್ರದಾಯ ಬದ್ಧವಾದ ಬದುಕಿನ ಅನುಸರಣೆಗಾಗಿ ತಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಲು ಬಯಸುವವರಿಗೆ ಈ ರೀತಿಯ ಸಂದೇಶವು ಕ್ರಾಂತಿಕಾರಿ, ವಿನಾಶಕಾರಕ ಮತ್ತು ಗಾಢವಾಗಿ ಗೊಂದಲದ ಮೂಲಕ ಮಹತ್ತರ ಬದಲಾವಣೆಯನ್ನುಂಟು ಮಾಡುತ್ತದೆ."<ref name="feuerstein2003">[[Feuerstein, ಜಾರ್ಜ್]] ಡಾ. ''ದ ಡೀಪರ್ ಡೈಮೆನ್ಶನ್ ಆಫ್ ಯೋಗ: ಥಿಯರಿ ಆ‍ಯ್‌೦ಡ್ ಪ್ರ್ಯಾಕ್ಟೀಸ್'' , ಶಂಭಲಾ ಪಬ್ಲಿಕೆಶನ್ಸ್, ಬಿಡುಗಡೆಯಾಗಿದೆ (2003) ISBN 1-57062-928-5</ref> ಅವನ ''ಎನ್‌ಸೈಕ್ಲೊಪೀಡಿಕ್‌ ಡಿಕ್ಷನರಿ ಆಫ್ ಯೋಗ'' ದಲ್ಲಿ (1990), ಡಾ.ಫಾಯುರ್‌ಸ್ಟೀನ್‌ ಬರೆಯುವಂತೆ ಪಶ್ಚಿಮದಲ್ಲಿನ ''ಯೋಗ'' ದ ಆವದು, ಆಧ್ಯಾತ್ಮಿಕ ಶಿಷ್ಯತ್ವದ ಸೂಕ್ತತೆಯ ಮತ್ತು ಆಧ್ಯಾತ್ಮಿಕ ಅಧಿಕಾರದ ವಂಶಪಾರಂಪರತೆಯ ಬಗ್ಗೆ ಪ್ರಶ್ನೆಯು ಉದ್ಭವಿಸುತ್ತದೆ.<ref name="feuerstein1990"></ref>
* ಮನಃಶಾಸ್ತ್ರದ ಬ್ರಿಟಿಷ್‌ ಪ್ರಾಧ್ಯಾಪಕ [[ಆ‍ಯ್‌೦ಥೋನಿ ಸ್ಟೋರ್‌]]ನ ''ಫೀಟ್‌ ಆಫ್‌ ಕ್ಲೇ: ಎ ಸ್ಟಡಿ ಆಫ್‌ ಗುರೂಸ್‌'' ಪುಸ್ತಕದಂತೆ, (ಅವನಿಂದ ಭಾಷಾಂತರಗೊಂಡ "revered teacher"‌) ಗುರು ಎಂಬ ಪದವನ್ನು ಯಾರು ವಿಶೇಷ ಜ್ಞಾನವನ್ನು ಹೊಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೋ ಹಾಗೂ ಅವರ ವಿಶೇಷ ಜ್ಞಾನದಿಂದ ಜನರು ಹೇಗೆ ಶಾಂತಿಯುತ ಜೀವನವನ್ನು ಸಾಗಿಸಲು ಅದು ಸಹಾಯಕವಾಗುತ್ತದೆ ಎಂಬುದನ್ನು ಹೇಳಿಕೊಳ್ಳುತ್ತಾರೋ ಅವರಿಗೆ ಈ ಶಬ್ದ ಸಂಬಂಧಿಸಿದ್ದು ಎಂದು ಹೇಳುತ್ತಾರೆ. ಗುರುಗಳು ಸಾಮಾನ್ಯವಾದ ಸ್ವಭಾವ ಲಕ್ಷಣಗಳನ್ನು (ಉದಾ: ಒಂಟಿಯಾಗಿ) ಹೊಂದಿರುತ್ತಾರೆ ಮತ್ತು ಕೆಲವೊಬ್ಬರು ಸ್ವಲ್ಪ ಮಟ್ಟಿಗಿನ [[ಸ್ಕ್ರಿಜೊಫಿನಿಯಾ ರೋಗ]]ದಿಂದ ಬಳಲುತ್ತಿರುತ್ತಾರೆ ಎಂದು ಎಂದು ವಾದಿಸಿತ್ತಾನೆ. ನಿರಂಕುಶವಾದ ಗುರುಗಳು, [[ಸಂಶಯಗ್ರಸ್ತ]], [[ವಾಕ್ಪಟುತ್ವವುಳ್ಳವರು]], ಅಥವಾ ಯಾರು ಅವರ ಅನುಯಾಯಿಗಳ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಾರೊ, ಅವರು ಹೆಚ್ಚು ಅವಿಶ್ವಾಸನೀಯ ಮತ್ತು ಅಪಾಯಕರವಾಗಿರುತ್ತಾರೆ ಎಂದು ಅವನು ವಾದಿಸುತ್ತಾನೆ. ಸ್ಟೊರ್‌, ನಕಲಿ ಗುರುಗಳನ್ನು ಗುರುತಿಸಲು ಐಲೀನ್‌ ಬಾರ್ಕರ್ಸ್‌ನ ಪಟ್ಟಿಯನ್ನು ಪರಾಮರ್ಶಿಸಲು‌ ತಿಳಿಸುತ್ತಾನೆ. ಅವನು ಕೆಲವು ಗುರುಗಳು ವೈಯಕ್ತಿಕವಾದ ದಿವ್ಯಜ್ಞಾನವನ್ನು ಹೊಂದಿರುವುದಾಗಿ ಆರೋಪಿಸಿಕೊಳ್ಳುತ್ತಾರೆ. ಮತ್ತು ಮುಕ್ತಿಗಾಗಿ ಹೊಸ ಆಧ್ಯಾತ್ಮಿಕ ದಾರಿಯನ್ನು ತಾವು ಹೇಳಿಕೊಡುವುದಾಗಿ ಹೇಳುತ್ತಾರೆ. ಸ್ಟೊರ್‌ ಬರೆದಿರುವ ಗುರುಗಳ ಕುರಿತಾದ ವಿಮರ್ಶಾ ಗ್ರಂಥವು ಗುರುವು ತನ್ನ ಶಿಷ್ಯ ಅಥವಾ ಶಿಷ್ಯೆಯ ಮೇಲಿನ ಅಧಿಕಾರಶಾಹಿ ಮನೋಭಾವದಿಂದ ಅವರನ್ನು ದುರ್ಬಳಕೆ ಮಾಡಿಕೊಳ್ಳಬಹುದಾದ ಸಂಭವನೀಯತೆಯ ಅಪಾಯವನ್ನೂ ವಿವರಿಸುತ್ತಾನೆ. ಆದಾಗ್ಯೂ ಸ್ಟೋರ್‌ ಆ ರೀತಿ ಮಾಡುವುದನ್ನು ನಿಗ್ರಹಿಸುವ, ನೈತಿಕವಾಗಿ ಶ್ರೇಷ್ಠವಾದ ಶಿಕ್ಷಕರಿರುವುದನ್ನು ನಿಜವೆಂದು-ಒಪ್ಪಿಕೊಳ್ಳುತ್ತಾನೆ. ಅವನು ವ್ಯಕ್ತಿ ಆದರ್ಶಿತ ನಂಬಿಕೆಯ ವ್ಯವಸ್ಥೆಯನ್ನು ಕೆಲವು ಗುರುಗಳು ಪ್ರೊತ್ಸಾಹಿಸುತ್ತಾರೆ ಮತ್ತು ಅವರು ಮನೊವ್ಯಾದಿಯಿಂದ ನರಳುತ್ತಿರುವ ಸಂದರ್ಭದಲ್ಲಿ ಅವರ ಮನಸಿಗೆ ತೋಚುವ ಕಲ್ಪನೆಗಳನ್ನು ಇತರರು ನಂಬುವಂತೆ ಮಾಡುತ್ತಾರೆ. ಸ್ಟೋರ್‌ ’ಗುರು’ ಎಂಬ ಪದವನ್ನು ವಿಭಿನ್ನ ವ್ಯಕ್ತಿಗಳಾದ [[ಜೀಸಸ್‌]], [[ಮೊಹಮ್ಮದ್]]‌, [[ಬುದ್ಧ]], [[ಗುರ್ಜಿಫ್]]‌, [[ರುಡಾಲ್ಫ್ ಸ್ಟೈನರ್]], [[ಕಾರ್ಲ್ ಜಂಗ್]]‌, [[ಸಿಗ್ಮಂಡ್‌ ಫ್ರೈಡ್]]‌, [[ಜಿಮ್‌ ಜಾನ್ಸ್‌]] ಮತ್ತು [[ಡೆವಿಡ್‌ ಕೊರೆಶ್‌]]ರಿಗೆ ಅನ್ವಯಿಸುತ್ತಾನೆ.<ref name="storr1996">ಸ್ಟೋರ್ ಆ‍ಯ್‌೦ಟನಿ ಡಾ. ''ಫೀಟ್ ಆಫ್ ಕ್ಲೇ :ಎ ಸ್ಟಡಿ ಆಫ್ ಗುರುಸ್'' 1996 ISBN 0-684-83495-2</ref> ಬೆಲ್ಜಿಯಂನ ಭಾರತಜ್ಞ [[ಕೋಯನ್‌ರಾಡ್ ಎಲ್ಸ್ಟ್‌]]ನು ಪ್ರವಾದಿ ಎಂಬ ಪದವನ್ನು ತಪ್ಪಿಸಿ ಅದರ ಬದಲಾಗಿ ಅನೇಕರಿಗೆ ಗುರು ಎಂಬ ಪದವನ್ನು ಬಳಸಿದ್ದಕ್ಕಾಗಿ ಸ್ಟೋರ್ಸ್‌ನ ಪುಸ್ತಕವನ್ನು ಟೀಕಿಸುತ್ತಾನೆ. ಎಲ್ಸ್ಟ್‌ನು, ಸ್ಟೋರ್ಸ್‌‌ನ ವಾದವನ್ನು ಪಾಶ್ಚಾತ್ಯರ ಪರ ಹಾಗೂ ಕ್ರಿಶ್ಚಿಯನ್‌ರ ಪರ ಎಂದು ಪ್ರತಿಪಾದಿಸುತ್ತಾನೆ. ಒಬ್ಬ [[ಮನಶಾಸ್ತ್ರಜ್ಞ]] ಮತ್ತು ಬುದ್ಧ ಧರ್ಮ ಅನುಸರಿಸುವವರಾದ [[ರಾಬ್‌ ಪ್ರೀಸ್‌]]‌, ತನ್ನ ''ದಿ ನೋಬಲ್‌ ಇಂಪರ್‌ಫೆಕ್ಷನ್‌'' ಪುಸ್ತಕದಲ್ಲಿ ಶಿಕ್ಷಕ/ಅನುಯಾಯಿ ಸಂಬಂಧವು ಅಮೂಲ್ಯವಾದದ್ದು ಮತ್ತು ಫಲಭರಿತವಾದ ಅನುಭವವಾಗಿದೆ, ಈ ವಿಧಾನವು ಆಧ್ಯಾತ್ಮಿಕ ಶಿಕ್ಷಕರಿಗೆ ಹಾಗೂ ಅದರ ಹಾನಿಗಳಿಗೆ ಸಂಬಂಧ ಪಟ್ಟುದುದಾಗಿದೆ. ಇದು ಸಂಭಾವ್ಯ ಸಾಧ್ಯ ಹಾನಿಯೆಂದರೆ ಪಾಶ್ಚಿಮಾತ್ಯರಲ್ಲಿನ ಗುರು/ಶಿಷ್ಯರ ನಡುವಿನ ''ಸರಳ ಗೌರವಯುತ'' ಸಂಬಂಧದ ಪರಿಣಾಮ, ಅದರೊಂದಿಗೆ ಪೂರ್ವದ ಶಿಕ್ಷಕರ ಪಾಶ್ಚಿಮಾತ್ಯ ಮನಃಶಾಸ್ತ್ರದ ಸ್ವಭಾವವನ್ನು ಅಥಮಾಡಿಕೊಳ್ಳುವಿಕೆಯ ಲೋಪದ ಫಲವಾಗಿದೆ.
ಪ್ರೀಸ್ ಹೆಚ್ಚಿನ ಪಾಶ್ಚಿಮಾತ್ಯ ಮನಃಶಾಸ್ತ್ರದ ದೃಷ್ಟಿಕೋನದಿಂದ ಗುರು/ಶಿಷ್ಯರ ಸಂಬಂಧದ ಬೆಳವಣಿಗೆ ವಿವರಿಸಲು [[ವರ್ಗಾವಣೆ]]/[[ದೀಕ್ಷೆ]]ಯನ್ನು ಪರಿಚಯಿಸುತ್ತಾನೆ. ಅವನು ಬರೆಯುತ್ತಾನೆ: "''ಸರಳವಾಗಿ ಹೇಳುವುದಾದರೆ ದೀಕ್ಷೆ ಎಂಬುದು ಪ್ರಜ್ಞಾಪೂರ್ವಕವಲ್ಲದೆ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ತನ್ನೊಳಗಿನ ವಿಶೇಷ ಶಕ್ತಿಯನ್ನು ವರ್ಗಾವಣೆ ಮಾಡುವ ಕ್ರಿಯೆಯಾಗಿದೆ.'' " ಈ ಪರಿಕಲ್ಪನೆಯು ಬೆಳವಣಿಗೆಯಲ್ಲಿ ಪ್ರೀಸ್ ಬರೆಯುತ್ತಾನೆ, ನಾವು ಒಳಗಿನ ಗುಣಗಳನ್ನು ಇನ್ನೊಬ್ಬರಿಗೆ ವರ್ಗಾಯಿಸುವಾಗ, ಅ ಪರಿಣಾಮದ ಕಲ್ಪನೆ ಮಾಡುವಂತೆ ನಾವು ಆ ಮನುಷ್ಯನಿಗೆ ಶಕ್ತಿಯನ್ನು ಕೊಡಬಹುದು, ಶ್ರೇಷ್ಟವಾದ ಸಾಮರ್ಥ್ಯ ಮತ್ತು ಸ್ಪೂರ್ತಿಯನ್ನು ಹೊತ್ತೊಯ್ಯುವ ಸಾಮರ್ಥ್ಯದೊಂದಿಗೆ ಹೆಚ್ಚಿನ ಅಪಾಯವೂ ಇದೆ: "ಈ ಶಕ್ತಿಯನ್ನು ಬೇರೆಯವರಿಗೆ ಕೊಡುವಾಗ ಅವರು ನಮ್ಮ ಮೇಲೆ ನಿರ್ಧಿಷ್ಟವಾದ ಹಿಡಿತ ಮತ್ತು ಪ್ರಭಾವವನ್ನು ಹೊಂದುತ್ತಾರೆ.ನಾವು [[ಮೂಲವ್ಯಕ್ತಿಯ]] ಶಕ್ತಿಯಿಂದ ಸೂರೆಗೊಳ್ಳು ಅಥವಾ ಮಂತ್ರಮುಗ್ಧಗೊಂಡಾಗ ಇದನ್ನು ವಿರೋಧಿಸುವುದು ಕಷ್ಟವಾಗುತ್ತದೆ.<ref name="ref_preece">ಪ್ರೀಸ್,ರೋಬ್ ''ದ ನೋಬಲ್ ಇಂಪರ್ಫೆಕ್ಷನ್: ದ ಚಾಲೇಂಜ್ ಆಫ್ ಇಂಡಿವಿಜುವೇಶನ್ ಇನ್ ಬುದ್ಧಿಸ್ಟ್ ಲೈಫ್‌‌'' ನಲ್ಲಿ "ಗುರು-ಶಿಷ್ಯ ಸಂಬಂಧ" ಮುದ್ರಾಸ್ ಪಬ್ಲಿಕೆಶನ್ಸ್</ref>
೨೮೧ ನೇ ಸಾಲು:
[[te:గురువు]]
[[th:คุรุ]]
[[tr:Guru]]
[[uk:Гуру]]
[[uz:Guru]]
"https://kn.wikipedia.org/wiki/ಗುರು" ಇಂದ ಪಡೆಯಲ್ಪಟ್ಟಿದೆ