ಶನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಶನೀಶ್ವರ ಮತ್ತು ರಾಜ ದಶರಥ: (ಋಷ್ಯ ಶೃಂಗ) (ಶಾಂತಾ) ಸೇರಿಸಿದೆ ~~~
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆnumberEdit ಉಪಯೋಗಿಸಿ ಇಂಗ್ಲ...
೨೩ ನೇ ಸಾಲು:
}}
 
([[ಸಂಸ್ಕೃತ]] '''ಸನಿ ''' शनि) [[ಹಿಂದೂ]] ಜ್ಯೋತಿಷ್ಯ ಶಾಸ್ತ್ರ , ಅಥವಾ ''[[ಜ್ಯೋತಿಸ]] '' ದಲ್ಲಿನ 9 ಪ್ರಥಮ ದಿವ್ಯ [[ನವಗ್ರಹ|ನವಗ್ರಹಗಳಲ್ಲಿ]] ''''ಶನಿ'''' ಯು ಒಬ್ಬನು. [[ಶನಿಗ್ರಹ|ಶನಿಗ್ರಹದಲ್ಲಿ]] ಶನಿಯು ಸಶರೀರನಾಗಿದ್ದಾನೆ. ಶನಿಯು ಶನಿವಾರದ ದೇವರು; ಭಾರತೀಯ ಭಾಷೆಗಳಲ್ಲಿ ಶನಿಯು ವಾರದ [[ಏಳನೇ]] ದಿನ ಅಥವಾ ಶನಿವಾರ ಆಗಿದೆ.
 
''ಶನಿ '' (शनि) ಶಬ್ದದ ವ್ಯುತ್ಪತ್ತಿ ಈ ರೀತಿ ಇದೆ : ''ಶನಯೇ ಕ್ರಮತಿ ಸ :'' (शनये क्रमति सः) ಅಂದರೆ, ಯಾರು ನಿಧಾನವಾಗಿ ಚಲಿಸುತ್ತಾರೋ ಅವರು , ಶನಿಗ್ರಹವು [[ಸೂರ್ಯ|ಸೂರ್ಯನನ್ನು]] ಒಂದು ಸುತ್ತು ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ಸಮಯ 30೩೦ ವರ್ಷಗಳು. ಶನಿಯನ್ನು '''ಶನೈಶ್ವರ ''' (शनैश्वर) '''ಶನಿ ಭಗವಾನ್ ''' , '''ಶನೀಶ್ವರ ''' , '''ಸನೀಸ್ವರ ''' , '''ಶನೀಶ್ವರನ್ ''' , '''ಶನಿ ದೇವ ''' ಮುಂತಾದ ಹೆಸರುಗಳಲ್ಲಿಯೂ ಕರೆಯುತ್ತಾರೆ.
 
ಶನಿಯು [[ಸೂರ್ಯ]] [[ದೇವ]] ನ ಪುತ್ರ.( ಹಿಂದೂ ಸೂರ್ಯ ದೇವರು )ಹಾಗು ಸೂರ್ಯನ ಹೆಂಡತಿ ಛಾಯ.(ನೆರಳಿನ ದೇವತೆ ) ಹೀಗಾಗಿ 'ಛಾಯಾಪುತ್ರ' ಎಂದೂ ಕರೆಯಲಾಗುತ್ತದೆ. ಹಿಂದೂಗಳ ಸಾವಿನ ದೇವತೆ [[ಯಮ]] ನ ಹಿರಿಯ ಸಹೋದರ ಶನಿ. ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು.
ಆಸಕ್ತಿಯ ವಿಷಯವೆಂದರೆ , ಸೂರ್ಯನ ಇಬ್ಬರು ಮಕ್ಕಳು ಶನಿ ಮತ್ತು [[ಯಮ]] ನ್ಯಾಯ ದೇವತೆಗಳೇ. ಒಬ್ಬರು ತಮ್ಮ ಜೀವನದ ಆಗು-ಹೋಗುಗಳನ್ನು ಗಮನಿಸಿ,ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ,ಆದರೆ ಯಮನು ,ಒಬ್ಬ ವ್ಯಕ್ತಿಯು ಸತ್ತನಂತರ ಫಲಿತಾಂಶವನ್ನು ನೀಡುತ್ತಾನೆ.<ref>Effectuation of Shani Adoration pg. 10 at http://books.google.com/books?id=RnzLgxvmOFkC&amp;pg=PA9&amp;dq=shani+karma&amp;cd=2#v=onepage&amp;q=shani%20karma&amp;f=false</ref>
 
ತಿಳಿದು ಬಂದ ಒಂದು ವಿಷಯವೆಂದರೆ, ಶನಿಯು ಮಗುವಾಗಿದಾಗ, ಸೂರ್ಯಗ್ರಹಣವಾಗಿದ್ದು, ಬಿಟ್ಟ ಕಣ್ಣಿನಿಂದ ಮೊದಲ ಬಾರಿಗೆ ನೋಡಿದ್ದರಿಂದಾಗಿ ಶನಿಯ ಪ್ರಭಾವ ಎಂತಹದೆಮ್ಬುದು ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ತಿಳಿಯುತ್ತದೆ. ಈತನು ಒಬ್ಬ ಮಹಾನ್ ಉಪಾಧ್ಯಾಯ. ಶನಿದೇವ , ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ. ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು,ಹಾಗು ಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ. ಈತನು ಕಪ್ಪು ಬಂನದವನಾಗಿದ್ದು,ಕಪ್ಪು ಬಟ್ಟೆಯನ್ನು ಧರಿಸಿದವನು , ಕೈಯಲ್ಲಿ ಕತ್ತಿಯನ್ನು ಹಿಡಿದವನಾಗಿದ್ದ್ದು,ಬಾಣ ಹಾಗು ಎರಡು ಚಾಕು ಹೊಂದಿದ್ದು,ಕಪ್ಪಗಿನ ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ.<ref>ಮೈಥಾಲಜಿ ಆಫ್ ದಿ ಹಿಂದುಸ್ ಬೈ ಚಾರ್ಲ್ಸ್ ಕೋಲೆಮನ್ ಪುಟ .134೧೩೪</ref>
 
== ಹಿಂದೂ ಧರ್ಮಗ್ರಂಥಗಳಲ್ಲಿ ==
೩೮ ನೇ ಸಾಲು:
ಶನಿ ಭಗವಾನನು ಕಪ್ಪು ಬಣ್ಣದವನಾಗಿದ್ದು,ಅಂದವಾದ ಮುಖ ಹೊಂದಿದವನಾಗಿದ್ದು,ಈತನು (ಎಣ್ಣೆ ಮಾರುವ) ಜಾತಿಯಾದ ''ಟೆಲಿ '' ಜಾತಿಗೆ ಸೇರಿದವನಾಗಿದ್ದು,ಈತನು ''ಕಾಲ -ಭೈರವ '' ನನ್ನು ಪೂಜಿಸುವವನಾಗಿದ್ದಾನೆ. ಶನಿ ಮಹಾತ್ಮನ ಹುಟ್ಟಿದ ಕಥೆಯನ್ನು ಕೇಳಿದ , ವಿಕ್ರಮಾದಿತ್ಯನು ನಕ್ಕು ಗೇಲಿ ಮಾಡುತ್ತಾನೆ. ಶನಿಯು ವಿಕ್ರಮಾದಿತ್ಯನ ಅಪಹಾಸ್ಯವನ್ನು ಕಂಡು ಶಾಪವನ್ನು ನೀಡುತ್ತಾನೆ. ಇದರಿಂದಾಗಿ ವಿಕ್ರಮಾದಿತ್ಯನ ಜೀವನ ಕಷ್ಟದಲ್ಲಿ ಸಿಲುಕಿ, ಶನಿಯನ್ನು ರೇಗಿಸಿದ ಫಲವನ್ನು ಅನುಭವಿಸುತ್ತಾನೆ. ವಿಕ್ರಮಾದಿತ್ಯನು ತನ್ನ ರಾಜ್ಯವನ್ನು ಕಳೆದುಕೊಳ್ಳುತ್ತಾನೆ,ಕಳ್ಳತನದ ಆರೋಪವನ್ನು ಎದುರಿಸುತ್ತಾನೆ,ಆತನ ಕೈ-ಕಾಲುಗಳನ್ನು ನೆರೆಯ ರಾಜ ಕತ್ತರಿಸಿ ಹಾಕುತ್ತಾನೆ. ಕೊನೆಗೆ , ವಿಕ್ರಮಾದಿತ್ಯನು ಶನಿಯನ್ನು ಪ್ರಾರ್ಥಿಸಲಾಗಿ,ವಿಕ್ರಮಾದಿತ್ಯನ ಪ್ರಾರ್ಥನೆಗೆ ಭಕ್ತಿಗೆಮೆಚ್ಚಿ,ಅವನ ಹಳೆಯ ಜೀವನಕ್ಕೆ ತಂದು ನಿಲ್ಲಿಸುತ್ತಾನೆ. ಕಥೆಯ ಕಡೆಯ ಭಾಗದಲ್ಲಿ, ''[[ಬೃಹಸ್ಪತಿ]] '' (ದೇವರುಗಳ ಗುರು ) ಮತ್ತು [[ಶಿವ]] ''ಮುಂತಾದ '' ಹಲವು ದೇವತೆಗಳ, ಹಲವು ಅನುಭವಗಳ ಬಗ್ಗೆ,ದೇವತೆಗಳ - ದೆವ್ವಗಳ ಬಗ್ಗೆ ಅನುಭವವನ್ನು ತಿಳಿಸುತ್ತಾ, ಅನುಭವದ ಮಾತು ಕೇಳಿಸಿ, ಕಷ್ಟದ ಕಾಲದಲ್ಲಿ ''ಶನಿ ಮಹಾತ್ಮೆ '' ಯಾ ಒತ್ತಡದ ಬೆಲೆ ಹಾಗು ಧೃಡ ಯತ್ನ ,ಸಂಪೂರ್ಣ ಧ್ಯಾನತೆ (ಭಕ್ತಿ ) ಮತ್ತು ನಂಬಿಕೆ,ವಿಶ್ವಾಸ ಹಾಗು ಯಾವುದೇ ಕಾರಣಕ್ಕೂ ಜೀವನದಲ್ಲಿ ಆತ್ಮ ವಿಶ್ವಾಸವನ್ನು ಎಂತಹ ಕಷ್ಟ ಕಾಲದಲ್ಲಿಯೂ,ಕಳೆದುಕೊಳ್ಳಬಾರದು ಎಂಬ ಬಗ್ಗೆ ತಿಳಿ ಹೇಳಲಾಗಿದೆ.
 
[[ಬ್ರಹ್ಮ ವೈವರ್ತ ಪುರಾಣ|ಬ್ರಹ್ಮ ವೈವರ್ತ ಪುರಾಣದಲ್ಲಿ]] ಹೇಳಿರುವಂತೆ,[[ಗಣೇಶ|ಗಣೇಶನು]] ಹುಟ್ಟಿದ ಸ್ವಲ್ಪ ಹೊತ್ತಿಗೆ , ನವಗ್ರಹಗಳು ಅವನನ್ನು ನೋಡಲು ಬಂದ ಸಂದರ್ಭದಲ್ಲಿ ಶನಿಯು ದಿಟ್ಟಿಸಿ ನೋಡಿದ್ದರಿಂದ,ಅವರು ತಮ್ಮ ತಲೆಗಳನ್ನೇ ಕಳೆದುಕೊಳ್ಳುತ್ತಾರೆ.<ref>ಕ್ರಿಶನ್ , ಯುವರಾಜ್ , ''ಗಣೇಸ : ಅನ್ರವೆಲ್ಲಿಂಗ್ ಅನ್ ಎನಿಗ್ಮ '' (1999೧೯೯೯) ಪುಟ . 137೧೩೭. ಭಾರತೀಯ ವಿದ್ಯಾ ಭವನ .</ref>
 
== ಶನೀಶ್ವರ ಮತ್ತು ಹನುಮಂತ ==
೭೫ ನೇ ಸಾಲು:
ಶನಿ ಭಗವಾನನ ಬೆಂಬಲವನ್ನು ಪಡೆಯಲು ಬಳಸುವ ಒಂದು ಸಾಮಾನ್ಯ ಮಂತ್ರ : ಓಂ ಶಂ ಶನೈಸ್ಕಾರ್ಯಯೇ ನಮಃ . ಶನಿಯನ್ನು ಸಂತೃಪ್ತನಾಗಿಸಲು ಇನ್ನೊಂದು ಮಂತ್ರ : ಆಮ್ ಪ್ರಾಂಗ್ ಪ್ರೀಂಗ್ ಪ್ರೌಂಗ್ ಶಾ ಶನಯೇ ನಮಃ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ , ಛಾಯಾ -ಮಾರ್ತಂಡಂ -ಸಂಭೂತಂ , ತಮ್ ನಮಾಮಿ ಶನೈಶ್ಚರಂ .
 
ಕೆಲವು ಭಕ್ತರು 'ಓಂ ಶಂ ಶನೈಸ್ಕಾರ್ಯಯೇ ನಮಃ ' ಎಂದು ಪ್ರತಿದಿನ 108೧೦೮ ಸಾರ್ತಿ ಪಠಿಸುತ್ತಾರೆ. ಹಾಗೆಯೇ ,ವೇದ ಪುಸ್ತಕಗಳನ್ನು ಓದಿ ಅಭ್ಯಸಿಸುತ್ತಾರೆ,ನಂತರ ಶನಿ ಶ್ಲೋಕವನ್ನು , ನವಗ್ರಹ ಸುಕ ದಿಂದ ಪ್ರಾರಂಭಿಸಿ 'ಶನ್ನೋ ...'
# ತಿಲಾಭಿಷೇಕಂ ಅನ್ನು ಶನಿತ್ರಯೋದಶಿಯಂದು, ಶನಿಜಯಂತಿಯಂದು (ಪುಷ್ಯ ಮಾಸ ಬಹುಳ ಅಷ್ಟಮಿ ) ಮತ್ತು ಶನಿ- ಅಮಾವಾಸ್ಯೆ ದಿನಗಳಂದು ಮಾಡಿಸಿ .
# ಕರಿ ಎಳ್ಳನ್ನು ಬ್ರಾಹ್ಮಣರಿಗೆ ದಾನ ಮಾಡಿ (1 ಕೆಜಿ 900೯೦೦ ಗ್ರಾಂಗಳು )
# ಕಪ್ಪು ಹಸುವಿಗೆ (ಕಪಿಲ ಗೋವು ) ಕರಿ ಎಳ್ಳು , ಬೆಲ್ಲದ ಮಿಶ್ರಣವನ್ನು ತಿನ್ನಿಸಿ .
# ಶನಿವಾರದಂದು ಉಪವಾಸ (ದ್ರವಾಹಾರ )ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ (ಶ್ರಾವಣ ಮಾಸದಲ್ಲಿ ಕಡ್ಡಾಯ )
# ಕಾಗೆಗಳಿಗೆ ಆಹಾರ (ಬೆಳಗಿನ ಹೊತ್ತು )
# ದೈಹಿಕ ಅಂಗವಿಕಲರಿಗೆ ಆಹಾರ .
# ನವಗ್ರಹ ಪ್ರದಕ್ಷಿಣೆ (19೧೯ ಸುತ್ತು )/ನಡೆಯುವುದು , ಓಡುವುದು .
# ಹೆಸರಾಂತ ದೇವಸ್ಥಾನಗಳ ಭೇಟಿ ( 2/1/2 ವರ್ಷಕ್ಕೆ ಒಂದು ಸಾರ್ತಿ ) ಮಂದಪಲ್ಲಿ , ಶನಿ ಸಿಂಗನಪುರ , ತಿರುನಲ್ಲರ್ , ನರ್ಸಿನ್ ಗೋಲೆ , ವೆಂಕಥಳ ಮತ್ತು ವೀರಣ್ಣ ಪಲೇಮ್ (ಪರ್ಚುರ್ ಮಂಡಲಂ , ಪ್ರಕಾಶಂ ಜಿಲ್ಲೆ ).
# ಪ್ರತಿದಿನ ಮನೆಯ ಮುಖ್ಯ ದ್ವಾರದ ಮುಂದೆ , ಸೂರ್ಯ ಮುಳುಗಿದ ಮೇಲೆ ಎರಡು ಎಳ್ಳೆಣ್ಣೆಯ ದೀಪಗಳನ್ನು ಹಚ್ಚಿಡಬೇಕು.
# ದಶರಥ ಮಹಾರಾಜನಿಂದ ರಚಿಸಲ್ಪಟ್ಟ ಶನಿ ಸ್ತೋತ್ರದ ಪಠಣ.
# ಜ್ಯೇಷ್ಥಾದೇವಿ , ಶನೀಶ್ವರ ಸ್ವಾಮಿಯವರ ಮದುವೆ (ಶ್ರಾವಣ ಪೂರ್ಣಿಮ ದಿನ ).
# ಶನಿ ಜಪಂ, 19000೧೯೦೦೦ ಮೂಲಮಂತ್ರದ ಜೊತೆಗೆ , ಪುನರ್ ಚರಣ , ಹವನಂ , ದಾನಂ .
# ಶನಿಚಾರ ವ್ರಥಂ , ಹೋಮ ಪ್ರತಿ ಶನಿವಾರ ಶ್ರಾವಣ ಮಾಸದಲ್ಲಿ .
# ಶನೈಚರ ಧೀಕ್ಷ : ಶ್ರಾವಣ ಶುದ್ಧ ವಿದಿಯಿಂದ ಶ್ರಾವಣ ಬಹುಳ ಷಷ್ಠಿಯವರೆಗೆ .
೯೭ ನೇ ಸಾಲು:
 
== ಜ್ಯೋತಿಷ್ಯ ಶಾಸ್ತ್ರದಲ್ಲಿ ==
[[ವೇದಗಳ ಜ್ಯೋತಿಷ್ಯ ಶಾಸ್ತ್ರ]] ಪ್ರಕಾರ ,9 [[ನವಗ್ರಹ]] ಗಳಲ್ಲಿ ಶನಿಭಗವಾನ್ ಒಬ್ಬನು. ಶನಿಯು ತುಂಬಾ ಶಕ್ತಿಯುತವಾದ ನಿಷ್ಟುರ ಮಾತಿನ ಉಪಾಧ್ಯಾಯನಾಗಿದ್ದು,ಸಹನೆ,ಶ್ರಮ,ಪ್ರಯತ್ನ,ಅನುಭವಗಳ ಪ್ರತೀಕವಾಗಿದ್ದಾನೆ.ಅಡೆತಡೆಗಳನ್ನು,ದುರಾದೃಷ್ಟಗಳನ್ನು,ತರುವವನೂ ಆಗಿದ್ದಾನೆ. ಆದರೂ ,ಜಾತಕದಲ್ಲಿ ಇವನ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ,ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ,ಆರೋಗ್ಯಕರ ಜೀವನವಾಗಿರುತ್ತದೆ,ಎಲ್ಲವೂ ಧನಾತ್ಮಕವಾಗಿರುತ್ತದೆ. ವಾಸ್ತವವಾಗಿ , [[ಹಿಂದೂ|ಹಿಂದೂಜ್ಯೋತಿಷಿಗಳು]] ನಂಬುವಂತೆ ,ಯಾರ ಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ,ಅವರಿಗೆ ಬೇರೆ ಯಾವುದೇ 'ಗ್ರಹ' ಗಳು ಶನಿಯು ನೀಡುವಂತೆ ಒಳ್ಳೆಯದನ್ನು ನೀಡಲಾರರು. ಅದೇ ಶನಿಯು "ಕೆಟ್ಟ ಸ್ಥಾನ"ದಲ್ಲಿ ಕುಳಿತಿದ್ದರೆ ,ಎಲ್ಲ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ. ಜ್ಯೋತಿಷ್ಯವನ್ನು ನಂಬುವ ಹಿಂದೂಗಳು ಶನಿಯ ಬಗ್ಗೆ ಬಹಳ ಭಯ ಹಾಗು ಹೆದರಿಕೆಯಿದ್ದು,ಆತನು ಕೆಟ್ಟ ಸ್ಥಾನದಲ್ಲಿ ಕುಳಿತಾಗ ಆಗುವ ಅನಾಹುತಗಳಿಗೆ ಹೆದರುತ್ತಾರೆ. ಆದರೂ ಒಂದು ವಿಷಯ ಜ್ಞಾಪಕದಲ್ಲಿಟ್ಟುಕೊಳ್ಳಬಹುದೆಂದರೆ, ಯಾವುದೇ ಸುಖ ಅಥವಾ ದುಃಖಕ್ಕೆ ಶನಿಯ ಪ್ರಭಾವದಿಂದ ಮನುಷ್ಯನಿಗೆ ನೆರವಾದ ಕಾರಣವಾಗಿರದೆ,ಮನುಷ್ಯ ತಾನು ಮಾಡಿದ ಸ್ವಂತ [[ಕರ್ಮ]] ದ ನೇರ ಫಲವಾಗಿರುತ್ತದೆ ಹಾಗು ಅದು ಶನಿಯ "ಮುಖಾಂತರ" ಘಟಿಸುತ್ತದೆ ಅಷ್ಟೇ. ಮನುಷ್ಯ ತಾನು ಮಾಡಿದ ಕೆಟ್ಟ [[ಕರ್ಮ]] ದ ಫಲದನುಸಾರ,ಶನಿಯ "ಸ್ಥಾನ-ಕೆಟ್ಟದಾಗಿ " ಕಷ್ಟಗಳು ಬರುತ್ತವೆ.ಹಾಗೆಯೇ ಒಳ್ಳೆಯದೂ ಸಹ . ಶನಿಯ ಪ್ರಭಾವದಿಂದ ಬರುವ ಖಾಯಿಲೆಗಳೆಂದರೆ-ಕೊಳೆಯುವಿಕೆ,ರಕ್ತ ಸರಬರಾಜಿನಲ್ಲಿನ ಏರು-ಪೇರು, ಕ್ಷಯ ರೋಗ ,ಮುಂತಾದವು.
ಮಾನಸಿಕವಾಗಿ,ಸಂಕುಚಿತ ಮನೋಭಾವ, ಕೆಳಮಟ್ಟದ ಚಿಂತನೆ. ಈ ಖಾಯಿಲೆಗಳನ್ನು ಶನಿಯ ನಿಯಮ ಮತ್ತು ಷರತ್ತುಗಳನ್ವಯವೇ ಸುಧಾರಿಸಲು ಸಾಧ್ಯ.
 
ಶನಿ ಗ್ರಹವು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಕಾಲಾವಧಿಯು 30೩೦ ವರ್ಷಗಳು.ಅಂದರೆ,ಎಲ್ಲಾ 12೧೨ ''ರಾಶಿ '' ಗಳನ್ನೂ ಅಥವಾ ಚಂದ್ರ ಚಿನ್ಹೆಯನ್ನು ದಾಟಲು 30೩೦ ವರ್ಷದ ಅವಧಿ ಬೇಕಾಗುತ್ತದೆ. ಅಂದರೆ ಪ್ರತಿಯೊಂದು [[ರಾಶಿ]] ಯಲ್ಲಿ ಶನಿಭಗವಾನ್ ಎರಡೂವರೆ ವರ್ಷ ಕಾಲವನ್ನು ಕಳೆಯುತ್ತಾನೆ. ಅಥವಾ ಚಂದ್ರ ಚಿನ್ಹೆ. [[ಹಿಂದೂ|ಹಿಂದೂಜ್ಯೋತಿಷ್ಯ]] ಶಾಸ್ತ್ರದ ಪ್ರಕಾರ, ಚಂದ್ರಚಿನ್ಹೆಯ ಮುಖಾಂತರದ ಈ ಚಲನೆಯ ಶನಿಯ ಅವಧಿಯು ಮುಖ್ಯವಾದುದಾಗಿದೆ.ಹಾಗು ಜಾತಕದ ತಿಳುವಳಿಕೆಗೆ ಇದರ ಅಗತ್ಯವಿರುತ್ತದೆ. ಒಬ್ಬ ವ್ಯಕ್ತಿಯ ಹುಟ್ಟಿದ [[ರಾಶಿ]] /ಚಂದ್ರಚಿನ್ಹೆ ಯ ಹಿಂದಿನ ಮನೆಯ [[ರಾಶಿ|ರಾಶಿಯ]] ಪ್ರವೇಶವಾದಾಗ,ಶನಿಯ ಪ್ರಭಾವವು ಪ್ರಾರಂಭವಾಗಿ , ಹುಟ್ಟಿದ [[ರಾಶಿ]] /ಚಂದ್ರಚಿನ್ಹೆ ಯ ಮುಂದಿನ ಮನೆ ಪ್ರವೇಶದೊಂದಿಗೆ ಶನಿಯ ಪ್ರಭಾವವು ನಿಲ್ಲುತ್ತದೆ. ಒಟ್ಟು ಅವಧಿಯ 7.5 ವರ್ಷ (2.5 ವರ್ಷ × 3) ವನ್ನು ''ಸಾಡೇ ಸಾತಿ '' ಅಥವಾ "ಏಳರಾಟ ಶನಿ" ಎಂದು,ಈ ಅವಧಿಯು ಅತ್ಯಂತ ತ್ರಾಸದಾಯಕವಾದುದಾಗಿದೆ. ಶನಿ ಮಹಾದೆಶೆಯು ಮನುಷ್ಯನಲ್ಲಿ ನಡೆಯುವಾಗ ಆತನ ಪ್ರಭಾವವು ಉನ್ನತ ಮಟ್ಟದಲ್ಲಿ ನಿಶ್ಚಿತವಾಗುತ್ತದೆ. ಹೇಳಿಕೆಯಂತೆ ,ಶನಿಯ ಪ್ರಭಾವದಿಂದ ರಾಜನೂ ಸಹ 'ಪಾಪರ್' ಆಗಿ ಬೀದಿಗೆ ಬೀಳುವ ಸಂದರ್ಭ ಆ ಸಮಯದಲ್ಲಿ ಬರಬಹುದು.
 
ಶನಿಯು ಮಕರ (ಕಾಪ್ರಿಕಾರ್ನ್ ) ಮತ್ತು ಕುಂಭ (ಅಕ್ವೆರೀಸ್ )ರಾಶಿಯ ಅಧಿಪತಿ,ತುಲಾ (ಲಿಬ್ರ )ರಾಶಿಯಲ್ಲಿ ಸಬಲನಾದರೆ, ಮೇಷ (ಏರೀಸ್ )ರಾಶಿಯಲ್ಲಿ ದುರ್ಬಲನಾಗಿರುತ್ತಾನೆ. ಬುಧ , ಶುಕ್ರ , ರಾಹು , ಕೇತು ಗ್ರಹಗಳು ಶನಿಯೊಂದಿಗೆ ಸ್ನೇಹದಿಂದ್ದಿದ್ದರೆ, ಸೂರ್ಯ , ಚಂದ್ರ ಮತ್ತು ಗುರು ಗ್ರಹಗಳು ಶತ್ರುಗ್ರಹಗಳಾಗಿವೆ. ಗುರು ಅಥವಾ ಗುರುಗ್ರಹ ಶನಿಯೊಂದಿಗೆ ಯಾವುದೇ ಪ್ರಭಾವವನ್ನು ಹೊಂದಿರುವುದಿಲ್ಲ. [[ಪುಷ್ಯ]] , [[ಅನುರಾಧ|ಅನುರಾಧಮತ್ತು]] [[ಉತ್ತರ - ಭಾದ್ರಪದ]] [[ನಕ್ಷತ್ರ|ನಕ್ಷತ್ರಗಳಿಗೆ]] ಒಡೆಯ ಶನಿ ಮಹಾರಾಜ.
೧೧೨ ನೇ ಸಾಲು:
ಶನಿ ಮಹಾರಾಜನು ನೀಡುವ ಕಷ್ಟಗಳಿಗಿಂತ,ಆತನು ನೀಡುವ ಒಳ್ಳೆಯ ವರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾನೆ. ಆಶೀರ್ವಾದದ ದೃಷ್ಟಿಯಿಂದ ಶನಿ ಮಹಾರಾಜನಷ್ಟು ಬೇರೆ ಯಾವ ಗ್ರಹಗಳೂ ಹೋಲಿಕೆಗೆ ಸಿಗಲು ಸಾಧ್ಯವಿಲ್ಲ. .ಆತನು ತನ್ನ ದೆಶೆಯ ಕೊನೆಯಲ್ಲಿ ವರವನ್ನು ನೀಡುತ್ತಾನೆ.ಈತನ ಆದಿ -ದೇವತೆಯು ಪ್ರಜಾಪತಿ ಮತ್ತು ಪ್ರತ್ಯಾದಿ - ದೇವತೆಯು ಯಮ . ಶನಿ ಮಹಾರಾಜನು ಒಬ್ಬ ವ್ಯಕ್ತಿಯ ಸಹನೆಯನ್ನು ಪರೀಕ್ಷಿಸುತ್ತಾನೆ.ನಮ್ಮಲ್ಲಿನ ಕೆಟ್ಟ ಗುಣಗಳು ಒಳ್ಳೆಯ ಗುಣಗಳಾಗಿ ಪರಿವರ್ತನೆಯಾಗಲು ಆಶಾಭಂಗವನ್ನು ಸೃಷ್ಟಿಸುತ್ತಾನೆ,ಹಾಗು ಕಾರ್ಯವನ್ನು ತಡ ಮಾಡುತ್ತಾನೆ. ಕೊನೆಯಲ್ಲಿ ಒಬ್ಬ ವ್ಯಕ್ತಿಯು ತಾನು ಮಾಡಿದ ತಪ್ಪನ್ನು ಅರಿಯಲು ಅನುವು ಮಾಡಿಕೊಡುತ್ತಾನೆ. ,ಶಿಕ್ಷೆಯನ್ನು ಕೊಡುವ ಮೂಲಕ ಮುಗ್ಧತೆಯನ್ನು ತೊಡೆದು ಹಾಕುತ್ತಾನೆ.ಇದರಿಂದಾಗಿ ಆತ್ಮ ಪರಿಶುದ್ಧವಾಗಿ ,ವ್ಯಕ್ತಿಯು ಬದಲಾಗಿ ತಾಮ್ರ ಚಿನ್ನವಾಗಿ ಪರಿವರ್ತನೆ ಹೊಂದುತ್ತದೆ.ಅಂತರಂಗದಲ್ಲಿ ಅಂದರೆ ,ನಿಜವಾದ ಸತ್ಯವನ್ನು ಅರ್ಥ ಮಾಡಿಕೊಳ್ಳ ಲಾರಂಭಿಸುತ್ತಾನೆ.ಬೇಜವಾಬ್ದಾರಿತನದಿಂದ ಮಾಡಿದ ತಪ್ಪುಗಳನ್ನು ಅರಿಯುತ್ತಾನೆ. ಶನಿಯ ಮಹಾದೆಶೆ ಮುಗಿಯುತ್ತಾ ಬಂದಂತೆ, ಮನುಷ್ಯ ತನ್ನ ಹಿಡಿತದಲ್ಲಿ ಯಾವುದೂ ಇಲ್ಲ ಎಂದು ತಿಳಿಯುತ್ತಾ ಬರುತ್ತಾನೆ. .ಎಲ್ಲವೂ ದೈವನಿಯಾಮಕವಾಗಿದ್ದು,ದೇವರು ನಿಜವಾದ ಸಾಧಕನಾಗಿದ್ದು,ಮಾನವ ಆತನ ದೂತರು ಮಾತ್ರ.
ಶನಿ ಮಹಾರಾಜನು ನಮ್ಮನ್ನು ಅತ್ಯಂತ ಪರಿಶುದ್ಧನನ್ನಾಗಿಸುತ್ತಾನೆ.ಎಲ್ಲಾ ಸುಳ್ಳುಗಳು ನಾಶವಾಗುತ್ತಾ ಹೋಗುತ್ತವೆ.ಸತ್ಯವಷ್ಟೇ ನಿಜ.ಅದು ತನ್ನ ಹೊಳಪನ್ನು ಉಳಿಸಿಕೊಳ್ಳುವುದೇ ನಿಜ ಸಂದೇಶವಾಗಿದೆ.
ಸಂಖ್ಯಾ ಶಾಸ್ತ್ರದ ಪ್ರಕಾರ 8 ರ ಸಂಖ್ಯೆಯಂದು ಹುಟ್ಟಿದವರು ಶನಿಗೆ ಅಧೀನರಾಗುರುತ್ತಾರೆ.
ಯಾವುದೇ ತಿಂಗಳು, ದಿನಾಂಕ 8 ಮತ್ತು 26೨೬ ರಂದು ಹುಟ್ಟಿದವರು ಕಷ್ಟಗಳನ್ನು ಜೀವನದಲ್ಲಿ ಎದುರಿಸಬೇಕಾದದ್ದು ಅನಿವಾರ್ಯ.
.ಈ ಕಷ್ಟಗಳಿಗೆ ಒಂದು ಕಾರ್ಯ-ಕಾರಣ ಗುರಿಯಿದ್ದು,ಅವನ್ನು ಗುರುತಿಸುವುದು ಮುಖ್ಯವಾಗಿದ್ದು,ಜೀವನದಲ್ಲಿ ಅದರ ಕಾರಣವನ್ನು ಕಂಡುಕೊಳ್ಳಬೇಕಾಗುತ್ತದೆ.
ಶನಿಯನ್ನು ಸಂತೃಪ್ತಿಗೊಳಿಸುವ ಉಪಾಯವೆಂದರೆ,ತಾನು ಮಾಡಿದ ತಪ್ಪುಗಳ ಜವಾಬ್ದಾರಿಯನ್ನು ಹೊರಳು ಸಿದ್ಧನಿರಬೇಕು,ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಬೇಕು,ಕಷ್ಟ ಪಡಬೇಕು. ಶನಿವಾರದಂದು ನೀಲಿ ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು ಹಾಗು ಬಡವರಿಗೆ ಸಹಾಯ ಮಾಡಬೇಕು.
 
== ಶನಿ ಮಹಾರಾಜನ ದೇವಾಲಯಗಳು ==
'''"ತಿರುನಲ್ಲರ್ ನ ಶ್ರೀ ಶನೀಶ್ವರ ದೇವಸ್ಥಾನ "''' ನವಗ್ರಹಗಳಿಗೆ ಆಧಾರವಾಗಿ 9 ದೇವಸ್ಥಾನಗಳ ಸಮೂಹವೇ ಇದೆ. ಅಂತಹ ಒಂದು ಗುಂಪು, ಕುಂಭ ಕೋಣಂ ನಗರ ಅಥವಾ ಮಾಯಿಲದುತುರೈ ,ಭಾರತದ ತಮಿಳು ನಾಡಿನಲ್ಲಿದೆ. ಈ ಗುಂಪಿನಲ್ಲಿ ಶನಿ ಮಹಾರಾಜನ ದೇವಸ್ಥಾನವು ತಿರುನಲ್ಲರ್ ನಲ್ಲಿದೆ . ಈ ದೇವಸ್ಥಾನವು ದರ್ಬಾರಣ್ಯೇಶ್ವರನಿಗೆ ಮೀಸಲಾಗಿದೆ.ಈತ ಶಿವನ ಮತ್ತೊಂದು ರೂಪ.ಇಲ್ಲಿ ಶನಿಯು ಗೋಡೆಯ ಹಿಂದೆ ನೆಲೆಸಿದ್ದಾನೆ. ಈ ದೇವಸ್ಥಾನದಲ್ಲಿ , ಶನಿ ಮಹಾರಾಜನು ಬೇರೆಯವರಿಗೆ ಸಹಾಯಕನಾಗಿ/ರಕ್ಷಕನಾಗಿ ನಿಂತಿದ್ದಾನೆ. ತಿರುನಲ್ಲರ್ ಪಾಂಡಿಚೆರಿಗೆ ತುಂಬಾ ಹತ್ತಿರದಲ್ಲಿದೆ , ಶನೀಶ್ವರನು ಇಲ್ಲಿ ಹೆಸರುವಾಸಿ . ಕೋಟ್ಯಾಂತರ ಭಕ್ತರು ಇಲ್ಲಿಗೆ ಭೇಟಿ ನೀಡಿ ,ಶನಿ ಗ್ರಹದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ.
 
ಮಹಾರಾಜನು ಇಲ್ಲಿ ಎಷ್ಟು ಶಕ್ತಿಶಾಲಿಯೆಂದರೆ ,ಯಾವುದೇ ವ್ಯಕ್ತಿಯು, ಶನಿ ದೆಶೆಯಿಂದ ನರಳುತ್ತಿದ್ದಾರೆ,ಅವರು ಇಲ್ಲಿಗೆ ಬಂದು, 'ನಳ ತೀರ್ಥ'ದಲ್ಲಿ ಸ್ನಾನ ಮಾಡಿ,ಬಟ್ಟೆಯನ್ನು ಒದ್ದೆ ಮಾಡಿಕೊಂಡು, ಶ್ರೀ ಶನೀಶ್ವರನ ದರ್ಶನ ಮಾಡಿದರೆ,ಎಲ್ಲಾ ಕೆಟ್ಟ ಕಷ್ಟಗಳು, ಶನಿ ದೆಶೆಯಿಂದ ಮುಕ್ತವಾಗುವ ಇಲ್ಲವೇ ಕಡೆಯ ಪಕ್ಷ ಅಷ್ಟರ ಮಟ್ಟಿಗಾದರೂ ಕಡಿಮೆ ಆಗುತ್ತವೆ.
೧೨೯ ನೇ ಸಾಲು:
'''''ಶನೀಶ್ವರ ಇಳಿದುಬರುವುದು :'' '''
 
ಪ್ರತಿ ಶನಿವಾರ ಬೆಳಿಗ್ಗೆ ಸುಮಾರು 10೧೦:30೩೦ ರ ಸುಮಾರಿಗೆ ,ಪೂಜಾರಿಯು ಆರತಿ ಮಾಡಿದ ನಂತರ ,ದೇವ ಶನೀಶ್ವರನು ಪೂಜಾರಿಯ ಮೈ-ಮೇಲೆ ''''ಸ್ವಾಮಿ ''' ')ಇಳಿದು ಬರುತ್ತಾನೆ. ತತ್ ಕ್ಷಣ ,ಇಡೀ [[ದೇವಾಲಯ]] ದ ಆವರಣ ಬದಲಾಗುತ್ತಾದೆ. ಯಾರೇ ಆಗಲೀ ಈ ಬದಲಾವಣೆ ನೋಡಿ -ಅನುಭವಿಸಬಹುದು. ಅನಂತರ ''''ಸ್ವಾಮಿ ''' 'ಯು , '''ಬಹಳ ಮೊನಚಾದ,ಮೇಲ್ಮುಖವಾಗಿರುವ ಉದ್ದವಾದ ಕಬ್ಬಿಣದ ಮೊಳೆಗಳಿಂದ ''' ನಿರ್ಮಿತವಾದ ,ಮುಳ್ಳಿನ ತರದ ಕುರ್ಚಿಯ ಮೇಲೆ ಕೂರುತ್ತಾನೆ. ಕೈ-ಕಾಲು ವಿರಮಿಸುವ ಜಾಗದಲ್ಲಿ ಸಂಪೂರ್ಣವಾಗಿ ಮೊಳೆಯನ್ನು ಮೇಲ್ಮುಖವಾಗಿ ಹೊಡೆಯಲಾಗಿದ್ದು , ಶನೀಶ್ವರನು ಸ್ವಾಮಿಯ ಮೇಲೆ ಇಳಿದು ಬಂದ ಮೇಲೆ ,ಇಡೀ ದಿನ ಸ್ವಾಮಿಯು ಆ ಕುಎಚಿಯ ಮೇಲೆ ಕೂರುತ್ತಾನೆ.ಬಹಳಷ್ಟು ಸಮಯ ಕಣ್ಣು ಮುಚ್ಚಿರುತ್ತದೆ. ಕೆಲವು ಶನಿವಾರಗಳಂದು,ಕುರ್ಚಿಯ ಮೇಲೆ ಸತತವಾಗಿ 12೧೨ ರಿಂದ 13೧೩ ಗಂಟೆಗಳ ಕಾಲ ಯಾವುದೇ ತೊಂದರೆ,ಅನಾನುಕೂಲವಿಲ್ಲದೆ ಕುಳಿತಿರುತ್ತಾನೆ.
 
ಅನಂತರ ಭಕ್ತರು ನಿಶ್ಯಬ್ದದಿಂದ 'ಸ್ವಾಮಿ'ಯ ಮುಂದೆ ಕೂರುತ್ತಾರೆ. ಬಂದವರು ಒಂದು ಜೊತೆ ಹಳದಿ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ತರಲು ಹೇಳಲಾಗುತ್ತದೆ,ಅವರ ಸರದಿಗಾಗಿ ಕಾಯುತ್ತಾ ಕೂರುತ್ತಾರೆ. ಸ್ವಾಮಿ ಒಬ್ಬರಾದ ಮೇಲೆ ಒಬ್ಬರು ಬರುವಂತೆ ಕರೆಯುತ್ತಾನೆ. ಭಕ್ತರು ಬಂದು ಒಂದು ಜೊತೆ ನಿಂಬೆಹಣ್ಣನ್ನು ಸ್ವಾಮಿಯ ಮುಂದೆ ಇಡುತ್ತಾರೆ. ಸ್ವಾಮಿಯು ಬಂದ ಭಕ್ತರ ಕೇಳಿಕೆಯನ್ನು,ಸಮಸ್ಯೆಯನ್ನು ,ತೊಂದರೆಗಳನ್ನು ಅಥವಾ ದುಃಖಗಳನ್ನು ,ಏನೇನು ಹೇಳುತ್ತಾರೋ ,ಅದನ್ನು ಕೇಳಿಸಿಕೊಳ್ಳುತ್ತಾನೆ. ಸ್ವಾಮಿಯು ನಂತರ ಅವರ ಸಮಸ್ಯೆಗಳಿಗೆ, ಒತ್ತಡಕ್ಕೆ , ಕಾರಣ /ಘಟನೆಗಳನ್ನು ತಿಳಿಸುತ್ತಾ ಹೋಗುತ್ತಾನೆ. ಅದು '[[ಪ್ರಾರಬ್ಧ]] 'ಆಗಿದ್ದು,ಹಳೇ ಹಿಂದಿನ ಜೀವನದ ಕರ್ಮವಾಗಿದ್ದು, (ಕೆಲಸ ) ಈ [[ಜನ್ಮ|ಜನ್ಮಕ್ಕೂ]] ಸೇರಿ ಬಂದಿರಬಹುದೆಂದು ,ಅಂದರೆ ಸಂಸ್ಕೃತದಲ್ಲಿ , ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ "ಜೀವನ " ಎಂದರ್ಥ. ಅಥವಾ ಸ್ವಾಮಿಯ ವಿವರಣೆಯಂತೆ ,ಅವನ ಅಥವಾ ಅವಳ ಸಮಸ್ಯೆಯು ಇಂದಿನ ಹುಟ್ಟಿನ ಕರ್ಮವಾಗಿರಬಹುದು,ಎಂದು ಹೇಳುತ್ತಾನೆ. ಕೆಲವು ಸಂದರ್ಭಗಳಲ್ಲಿ, ವಾಮಾಚಾರ [[ತಂತ್ರ]] [[(ಬ್ಲಾಕ್ ಮ್ಯಾಜಿಕ್ )|(ಬ್ಲಾಕ್ ಮ್ಯಾಜಿಕ್ )ವಾಗಿರಬಹುದು]] ,ಅಂದರೆ ಅದು ಅವರನ್ನು ಕಂಡರೆ ಆಗದವರು,ಶತ್ರುಗಳು ಮಾಡಿಸಿದ್ದಿರಬಹುದು. ಕೆಲವು ಸಾರ್ತಿ [[ಆತ್ಮ]] (ಉತ್ತೇಜಕ )ಸತ್ತು ಹೋದವರದ್ದು,ಇಂದಿನ ಜೀವಂತ ವ್ಯಕ್ತಿಗಳ ದೇಹವನ್ನು ಪ್ರವೇಶಿಸಿ ತೊಂದರೆ ಮತ್ತು ಕಷ್ಟಗಳನ್ನು ಕೊಡುತ್ತಿರುವುದಾಗಿರಬಹುದು. 'ಸ್ವಾಮಿ 'ಯು ಕಣ್ಣು ಮುಚ್ಚಿ ಸಮಾಧಾನದಿಂದ ಎಲ್ಲವನ್ನೂ ಆಲಿಸುತ್ತಾನೆ,ನಂತರ ನಿಶ್ಯಬ್ದದಿಂದ್ದಿದ್ದು, ಅವರಿಗೆ ''ಪ್ರಕ್ಷಾಲನ '' ,"ಶುಚಿತ್ವ "ಮಾಡಿ, ಪ್ರಾಯಶ್ಚಿತ: ''[[ಸಂಸ್ಕೃತ ಮತ್ತು ತೆಲುಗು]] '' ನಲ್ಲಿ ಅಥವಾ "ಪಶ್ಚಾತಾಪ "/ಪರಿಹಾರವನ್ನು ಯಜ್ಞ , ಪೂಜಾ , ದಾನ , ಉಪವಾಸ , ಮುಂತಾದವುಗಳ ಮೂಲಕ ಹೇಳಲಾಗುತ್ತದೆ.ಹಲವು ಸಾವಿರ ಜನ ಹೇಳುವಂತೆ,ತಮ್ಮ ಪ್ರಾರ್ಥನೆಯನ್ನು "ಶನೀಶ್ವರ "ನು 'ಸ್ವಾಮಿ 'ಯ ಮುಖಾಂತರ ಉತ್ತರಿಸುತ್ತಾನೆ.
೧೫೬ ನೇ ಸಾಲು:
ಮುಂಬೈನಲ್ಲಿ ಶ್ರೀ ಶನೀಶ್ವರರ ದೇವಸ್ಥಾನಗಳು :
ಮುಂಬೈನಲ್ಲಿ ಹಲವಾರು ಶ್ರೀ ಶನೀಶ್ವರಸ್ವಾಮಿ ದೇವಸ್ಥಾನಗಳು ಇವೆ.
# ಶಂಕೇಶ್ವರ ನಗರದ, ಮಾಂಪಡ ರಸ್ತೆಯಲ್ಲಿ ದೊಂಬಿವ್ಲಿಯಲ್ಲಿ ಒಂದು ಸುಂದರ ಶನಿ ದೇವಾಲಯವಿದೆ. ಆರತಿ ಮತ್ತು ಪ್ರತಿ ಶನಿವಾರ ರಾತ್ರಿ 8 ರ ಸುಮಾರಿಗೆ ಸಾವಿರಾರು ಭಕ್ತರು ಸೇರಿ,ದೇವ ಶನಿಯ ಆರತಿ ಹಾಗು ಸ್ತೋತ್ರವನ್ನು ಮಾಡುತ್ತಾರೆ.
# ಶ್ರೇಯಸ್ ಸಿನಿಮಾ ಮಂದಿರದ ಬಳಿ ,(ಪಶ್ಚಿಮ )ಘಾಟ್ಕೊಪರ್ ಹತ್ತಿರ ,ನಾಗೇಶ್ವರ ಪಾರ್ಶ್ವನಾಥಜಿ ಜೈನ ದೇವಾಲಯದ ಪಕ್ಕ,ಇನ್ನೊಂದು ಮಂದಿರವು ಇದೆ.
# ವಿಠಲವಾಡಿ ( ಕೇಂದ್ರ-ರೈಲು )ರೈಲು-ನಿಲ್ದಾಣದ ಬಳಿ,(ಪೂರ್ವ ) ಕಲ್ಯಾಣ- ಕಟೆಮನೆವ್ಲಿ ಬಳಿಯಲ್ಲಿ ಶ್ರೀ ಶನಿ ಮಂದಿರ ಇದೆ.
# ಶ್ರೀ ಶನಿ ಮಂದಿರವು, ಸರ್ವೀಸ್ ರಸ್ತೆ , ಪೂರ್ವ ಖಾರ್, ಪಶ್ಚಿಮ ಎಕ್ಸ್ ಪ್ರೆಸ್ ರಾಷ್ಟ್ರೀಯ ಹೆದ್ದಾರಿ ,ಸುಮಾರು 500೫೦೦ ಮೀಟರ್ ವಕೊಲ ಸಿಗ್ನಲ್ ಗೆ ಮುಂಚಿತವಾಗಿ, ಮುಂಬೈನಿಂದ ಉಪನಗರಗಳಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ.
# ಬೋರಿವಲಿ (ಪೂರ್ವ ),ಸವರ್ಪದ ರಾಷ್ಟ್ರೀಯ ಉದ್ಯಾನದಿಂದ 15೧೫ ನಿಮಿಷದ ನಡೆಗೆಯಷ್ಟು ದೂರದಲ್ಲಿ ಶ್ರೀ ಶನಿ ಮಂದಿರ ಇದೆ.
# ಜೋಗೇಶ್ವರಿ (ಪೂರ್ವ )ಮೇಘವಾಡಿಯಲ್ಲಿರುವ ಶನಿ ದೇವಾಲಯದಲ್ಲಿ ,ಭಕ್ತರು ಶನಿ ಮಹಾತ್ಮನ ಕಥೆಯನ್ನು ಮಧ್ಯಾಹ್ನ 12೧೨ ರಿಂದ ಸಂಜೆ 6 ರ ವರೆಗೆ ಶನಿವಾರದ ಸಂಜೆಗಳಲ್ಲಿ ಕೇಳುವ ವ್ಯವಸ್ಥೆಯಿದೆ.
# ಸೆಕ್ಟರ್ -11೧೧, ನೆರುಲ್ (ಪೂರ್ವ ), ನವಿಮುಂಬೈ ಬಳಿ ಮತ್ತೊಂದು ದೇವಾಲಯವಿದೆ..
# ಬಟ್ಟಿಪಡದಲ್ಲಿ ಶ್ರೀ ಶನಿ ಮಂದಿರ , ಬಂಡುಪ್ ( ಪಶ್ಚಿಮ), ಮುಂಬೈ.
 
ಭಾರತದ ಹಲವಾರು ಕಡೆಗಳಲ್ಲಿ , [[ನವಗ್ರಹ|ನವಗ್ರಹಗಳಿಗಾಗಿ]] ಒಂಭತ್ತು ಸಮೂಹ ದೇವಾಲಯಗಳಿದ್ದು, ಅಂತಹ ಒಂದು ಗುಂಪಿನ ದೇವಸ್ಥಾನವು [[ಭಾರತದ]] ,[[ತಮಿಳು ನಾಡು]] [[ರಾಜ್ಯದ]] ,[[ಕುಂಭಕೋಣಂ]] ನಗರದ ಬಳಿ ಇದೆ. [[ತಿರುನಲ್ಲರ್|ತಿರುನಲ್ಲರ್‌ನಲ್ಲಿ]] ಶನಿ ಮಹಾತ್ಮನ ಪವಿತ್ರ ದೇವಾಲಯ ಇದೆ. ಈ ದೇವಸ್ಥಾನವು ದರ್ಬಾರಣ್ಯೇಶ್ವರನಿಗೆ ಮೀಸಲಾಗಿದೆ.[[ಶಿವ]] ನ ಪ್ರತಿರೂಪ ಇದಾಗಿದೆ. ಶನಿ ಮಹಾತ್ಮನು ಗೋಡೆಯ ಹಿಂದೆ ಇರುತ್ತಾನೆ. ಈ ದೇವಾಲಯದಲ್ಲಿ , ಶನಿ ಮಹಾತ್ಮನು ಕೊಡುಗೆ ನೀಡುವವನಾಗಿರುತ್ತಾನೆ. [[ತಿರುನಲ್ಲರ್|ತಿರುನಲ್ಲರ್‌ಗೆ]] ಹತ್ತಿರದಲ್ಲಿ [[ಪಾಂಡಿಚೆರಿ]] ಇದೆ,ಮತ್ತು ಇಲ್ಲಿ ಶನೀಶ್ವರನಿಗೆ ಬಹಳ ಪ್ರಾಮುಖ್ಯತೆ ಇದೆ. ಶನಿ ದೆಶೆ ನಡೆಯುವ ಸಂದರ್ಭದಲ್ಲಿ ಸಾವಿರಾರು ಭಕ್ತರು ಬಂದು ಇಲ್ಲಿ ದರ್ಶನವನ್ನು ಪಡೆಯುತ್ತಾರೆ.
 
ಬೇರೆ ಬೇರೆ ಸ್ಥಳಗಳಲ್ಲಿನ ದೇವಾಲಯಗಳು :ಫತೆಹ್ ಪುರ್ ಬೆರಿಯಲ್ಲಿರುವ, [[ಶನಿಧಾಮ್|ಶನಿಧಾಮ್‌ನ]]- ಶನಿ ದೇವಾಲಯ, ಚತ್ತರ್ ಪುರ್ ದೇವಾಲಯದಿಂದ ಸುಮಾರು 6&nbsp;ಕಿ. ಮಿ. ದೂರ ಮತ್ತು ಕುತುಬ್ ಮಿನಾರ್ ನಿಂದ 16೧೬&nbsp;ಕಿ ಮಿ ದೂರದಲ್ಲಿ , ಭಾರತದ, ದಕ್ಷಿಣ ದೆಹಲಿಯ ಮೆಹ್ರುಲಿ ಬಳಿ ,ದೇವಾಲಯಿದೆ. ವಿಶ್ವದಲ್ಲಿಯೇ ಅತಿ ಎತ್ತರವಾದ (21೨೧ ಅಡಿ ಎತ್ತರ ) ಶನಿ ವಿಗ್ರಹವಿದ್ದು, ಅಷ್ಟಧಾತು ಮತ್ತು ಪ್ರಾಕೃತಿಕ ಕಪ್ಪು ಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಹಲವು ಭಕ್ತರು ಪ್ರತಿ ಶನಿವಾರ ಬಂದು ಪ್ರಾರ್ಥನೆ ಮಾಡುತ್ತಾರೆ. ಶನಿ ಅಮಾವಾಸ್ಯೆಯ ದಿನ ,ಕಾಳಸರ್ಪ,ಸಾಡೇ ಸಾತಿ ಮತ್ತು ಧೈಯಗಳಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ,ಶನಿಯನ್ನು ಸಂತೃಪ್ತಿ ಗೊಳಿಸಲು ವಿಶೇಷ ದಿನಗಳಲ್ಲಿ ಮುಖ್ಯ ಪೂಜೆಯನ್ನು ಮಾಡಲಾಗುತ್ತದೆ.
 
'''ವಾಡ ತಿರುನಲ್ಲರ್ ಶ್ರೀ ಶನೀಶ್ವರ ದೇವಾಲಯ ''' - ಈ ದೇವಾಲಯವು ಭಾರತದ ಚೆನ್ನೈನ, ಪಶ್ಚಿಮ ಮಾಮ್ಬಳಂ , ವೆಂಕಟಾಚಲಂ ಬೀದಿಯಲ್ಲಿ ನೆಲೆಯಾಗಿದೆ. ಈ ದೇವಸ್ಥಾನದಲ್ಲಿ ಶ್ರೀ ಶನಿ ಭಗವಾನನು ತನ್ನ ಹೆಂಡತಿ , ಶ್ರೀ ನೀಲಾಂಬಿಕೆ ಜೊತೆಗಿರುವುದನ್ನು ಕಾಣಬಹುದು. ಈ ದೇವಸ್ಥಾನದಲ್ಲಿ ಶ್ರೀ ವಿನಾಯಕ , ಶ್ರೀ ದುರ್ಗಾ ಮತ್ತು ಶ್ರೀ ಪಂಚಮುಖ ಹನುಮಾನ್ ವಿಗ್ರಹಗಳಿವೆ.
 
ಮತ್ತೊಂದು ದೇವಸ್ಥಾನ ಮದುರೈನ , ಥೇಣಿಯಿಂದ 20೨೦ ಕಿ.ಮಿ. ದೂರದಲ್ಲಿ ಕುಚನೂರ್ ಬಳಿ ಇದೆ. ಇಲ್ಲಿಯ ಮಹಾತ್ಮನು [[ಸ್ವಯಂಭು]] (ಸ್ವತಹ -ಕಾಣಿಸಿಕೊಂಡ ) ಸ್ವಯಂ ಉದ್ಭವ ಮೂರ್ತಿಯಾಗಿದೆ.ಈ ನಗರದ ಹೆಸರು , ಕುಬ್ಜನ್ ಎಂಬ ಹೆಸರಿನಿಂದ ಬಂದುದಾಗಿದೆ. ಶನಿಯ ಮತ್ತೊಂದು ಹೆಸರು (ಕುಬ್ಜನೂರ್ )ಆಗಿದ್ದು,ಸಾಮಾನ್ಯವಾಗಿ ಕುಚ್ಚನೂರ್ ಎಂದು ಹೇಳಲಾಗುತ್ತದೆ. ಇಲ್ಲಿ ವಿಶೇಷವಾಗಿ ಗುರು ಭಗವಾನ್ ವಿಗ್ರಹವಿದ್ದು,ಉತ್ತರಾಭಿಮುಖವಾಗಿದೆ.ಹೊಸ ಆಂಜನೇಯನ ದೇವಸ್ಥಾನವನ್ನು ಕಟ್ಟಲಾಗಿದೆ. ಶನಿ ಭಗವಾನ್ ದೇವಾಲಯದ ವಿಶೇಷವೆಂದರೆ, ಪ್ರಸಾದವನ್ನು ಮೊದಲು ಕಾಗೆಗಳಿಗೆ ನೀಡಿ ನಂತರ ಭಕ್ತರಿಗೆ ಪ್ರಸಾದವನ್ನು ನೀಡಲಾಗುತ್ತದೆ.ಕಾಗೆಗಳು ಪ್ರಸಾದವನ್ನು ತಿರಸ್ಕರಿಸಿದರೆ, ಮತ್ತೊಮ್ಮೆ ಶನಿಮಹಾತ್ಮನಿಗೆ ನೀಡಿ ಮತ್ತೊಮ್ಮೆ ಕಾಗೆಗಳಿಗೆ ನೀಡಲಾಗುತ್ತದೆ.ಆಗ ಅವು ಪ್ರಸಾದವನ್ನು ಸ್ವೀಕರಿಸುತ್ತವೆ. ಇಲ್ಲಿನ ವಿಗ್ರಹವು ಸ್ವಯಂಭು ಉದ್ಭವ ಲಿಂಗವಾಗಿದ್ದು,ಕೇಸರೀ ಬಣ್ಣದ ಮಿಶ್ರಣ {ತಮಿಳಿನಲ್ಲಿ ಸಿಂಧೂರ} ವನ್ನು ಹಚ್ಚಲಾಗಿದೆ.ವಿಗ್ರಹಕ್ಕೆ 6 ಕಣ್ಣುಗಳಿದ್ದು , ನೋಡಲು ಸುಂದರವಾಗಿದೆ.ಒಮ್ಮೆ ಅವನ ದರ್ಶನ ಪಡೆದ ಮೇಲೆ ,ನಮ್ಮ ಎಲ್ಲಾ ತೊಂದರೆ,ಸಮಸ್ಯೆಗಳಿಂದ ದೂರಾಗುತ್ತೇವೆ.
 
[[ಅದಂಬಕ್ಕಂ|ಅದಂಬಕ್ಕಂನ]] ಇ.ಬಿ.ಕಾಲೋನಿಯಲ್ಲಿ ,ದೇವಿ ನಾಗಮುತ್ತು ಮಾರಿಯಮ್ಮ ದೇವಾಲಯದ ಒಳಗೆ ವಿಶ್ವರೂಪ ಸರ್ವಮಂಗಳ ಶನೀಶ್ವರ ಭಗವಾನ್ ಸನ್ನಿಧಿಯು ಇದೆ.
೧೭೭ ನೇ ಸಾಲು:
''' ಸಿಂಗಪೂರ್ ನ ಪಯ ಲೇಬರ್ ಈಶ್ವರನ ದೇವಸ್ಥಾನದ ಒಳಗಿನ ಶನೀಶ್ವರರ ಸನ್ನಿಧಿ :''' ಪಯ ಲೇಬರ್ ನಲ್ಲಿರುವ ಶಿವನ ದೇವಾಲಯದಲ್ಲಿ ಶನೀಶ್ವರ ಭಗವಾನನ ಪೂರ್ಣವಾಗಿ ನಿಂತಿರುವ ವಿಗ್ರಹದ ಪ್ರತ್ಯೇಕ ಸನ್ನಿಧಿ ಇದೆ. ( ಅಲ್ಜುನಿಯದ್ ಎಂ ಆರ್ ಟಿ ಬಳಿ, ಇಳಿದು ಮತ್ತು ಕೆಲವು ನಿಮಿಷಗಳ ನಡಿಗೆ ). ಶನಿ ಭಾಗವಣನ ಜೊತೆಗೆ ಎರಡೂ ಕಡೆ ದೀಪ ಮಂಟಪವಿದ್ದು, - ಗೋಡೆಯಲ್ಲಿ ನೂರಾರು ಎಣ್ಣೆ -ದೀಪಗಳನ್ನು ಇಡುವ ವ್ಯವಸ್ಥೆಯಾಗಿದೆ.ಶನಿವಾರದಂದು ಹೋದಾಗ ,ಒಂದು ಸುಂದರ ದೀಪಗಳನ್ನು ಹಚ್ಚಿದ ನೋಟವನ್ನು ಕಾಣಬಹುದಾಗಿದೆ.ಭಕ್ತರು ಎಳ್ಳೆಣ್ಣೆಯಲ್ಲಿ ದೀಪವನ್ನು ಹಚ್ಚಿ, ಓಂ ಶನೀಶ್ವರಾಯ ನಮಃ ಎಂದು ಸ್ತುತಿಸುತ್ತಾರೆ.:
 
'''ಶ್ರೀ ಶನೈಶ್ಚರ ದೇವಾಲಯ , ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ , ಬಾಜ್ಪೆ , ಮಂಗಳೂರು , ಕರ್ನಾಟಕ , ಇಂಡಿಯಾ ''' (0824೦೮೨೪- 2252573೨೨೫೨೫೭೩) ಯಾವ ಭಕ್ತರಿಗೆ ಶನಿ ದೋಷ ಇದೆಯೋ ಅಥವಾ ಯಾರು ಶನಿ ಮಹಾದೆಶೆಯಲ್ಲಿ ಇರುತ್ತಾರೋ ಅವರು ಈ ದೇವಸ್ಥಾನಕ್ಕೆ ಬಂದು, ಎಳ್ಳು ಎಣ್ಣೆ ಸೇವೆಯನ್ನು ( ಕನ್ನಡದಲ್ಲಿ ಎಳ್ಳು ಅಂದರೆ ಸೇಸಮೆ - ಎಣ್ಣೆ ಅಂದರೆ ತೈಲ) ಪ್ರತೀ ಶನಿವಾರದಂದು ಭಕ್ತಿಯಿಂದ ಸಲ್ಲಿಸುತ್ತಾರೆ. ಎಳ್ಳು ಎಣ್ಣೆ ಸೇವೆಯಿಂದ ಶನೀಶ್ವರನು ಸಂತೃಪ್ತನಾಗುತ್ತಾನೆ,ಎಂಬ ನಂಬಿಕೆಯಿದೆ.
 
ಶ್ರೀ ಶನೈಶ್ಚರ ದೇವಾಲಯದ ಗರ್ಭಗುಡಿಯಲ್ಲಿ ಮಹಾ ಗಣೇಶ ,ತಾಯಿ ದುರ್ಗಾ ಮತ್ತು ಮಹಾ ಶನೈಶ್ವರ ವಿಗ್ರಹಗಳನ್ನು ಕೆತ್ತಲಾಗಿದೆ.
೧೯೬ ನೇ ಸಾಲು:
 
== ಜೈನತತ್ವದಲ್ಲಿ ಶನಿ ==
ಯಾರು ದೇವನಾದ ಮುನಿಸುವರತನನ್ನು ಪ್ರಾರ್ಥಿಸುತ್ತಾರೋ ಅವರು ಶನಿಯಿಂದ ರಕ್ಷಿಸಲ್ಪಡುತ್ತಾರೆ, ಹಾಗೆಯೇ ಅವರು ದೇವ ಮುನಿಸುವರತ ಸ್ವಾಮಿಯ ಭಕ್ತರಾಗಿರಬೇಕು- 20ನೇ೨೦ನೇ ಜೈನ ತೀರ್ಥಂಕರ ).
 
== ಶನಿ ತೀರ್ಥಯಾತ್ರೆಗಳು ==
೨೨೫ ನೇ ಸಾಲು:
* ಶ್ರೀ ಶನೀಶ್ವರ ದೇವಸ್ಥಾನ- ಹೊಸೂರು ಮುಖ್ಯ ರಸ್ತೆ , ಹೊಸ ರಸ್ತೆ ಮುಂದೆ , ಬಸಾಪುರ ಹಳ್ಳಿ , ಬೆಂಗಳೂರು , ಕರ್ನಾಟಕ , ಇಂಡಿಯಾ
* ಶ್ರೀ ಶನೀಶ್ವರ ದೇವಸ್ಥಾನ - ವೈಟ್ ಫೀಲ್ಡ್ , ಸವನ ಹೋಟೆಲ್ ಹತ್ತಿರ ,ಬೆಂಗಳೂರು ,ಇಂಡಿಯಾ
* ಶ್ರೀ ಅಭಯ ಶನೀಶ್ವರ ದೇವಸ್ಥಾನ (1956೧೯೫೬)- ರಾಮಮೂರ್ತಿ ನಗರ ,ಭಾರತ
* ಶ್ರೀ ಶನೈಶ್ಚರ ದೇವಸ್ಥಾನ - ರಾಮಮೂರ್ತಿ ನಗರ ,ಬೆಂಗಳೂರು ,ಭಾರತ
* ಶ್ರೀ ಶನೈಶ್ವರ ದೇವಾಲಯ - ಹೆಬ್ಬಾಳ್ , ಹೆಬ್ಬಾಳ್ ಫ್ಲಯ್ ಓವರ್ ಕೆಳಗೆ ,ಬೆಂಗಳೂರು ,ಭಾರತ
"https://kn.wikipedia.org/wiki/ಶನಿ" ಇಂದ ಪಡೆಯಲ್ಪಟ್ಟಿದೆ