ಕಲ್ಪನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆnumberEdit ಉಪಯೋಗಿಸಿ ಇಂಗ್ಲ...
೧ ನೇ ಸಾಲು:
[[Image:Kalpana.jpg|thumb|right|ಕಲ್ಪನಾ]]
''''ಮಿನುಗುತಾರೆ ಕಲ್ಪನಾ'''(೧೮-೭-೧೯೪೩-/೧೩-೫-೧೯೭೯)'' ಎನಿಸಿ [[ಕನ್ನಡ]] ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ, ನಟಿ ಕಲ್ಪನಾ ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ [[ಮಂಗಳೂರು|ಮಂಗಳೂರಿನವರು]]. [[ಕನ್ನಡ ಚಿತ್ರರಂಗ|ಚಿತ್ರರಂಗವನ್ನು]] ಪ್ರವೇಶಿಸುವ ಮೊದಲು ಅವರ ಹೆಸರು '''ಶರತ್ ಲತಾ'''.ಹುಟ್ಟಿದ್ದು [[೧೯೪೩|೧೯೪೩ರ]] [[ಜುಲೈ ೧೮]] ರಂದು. ಇವರ ಮಾತ್ರುಭಾಷೆ. [http://%E0%B2%A4%E0%B3%81%E0%B2%B3%E0%B3%81 [ತುಳು]].. ತಂದೆ ಕೃಷ್ಣಮೂರ್ತಿ,ತಾಯಿ ಜಾನಕಮ್ಮ. ಕಲ್ಪನಾ ಬಾಲ್ಯದಲ್ಲೇ ಕಲಾವಿದೆಯಾಗುವ ಕನಸು ಕಂಡವರು. ಅವರ ಕುಟುಂಬದಲ್ಲಿ ಯಾರೂ ಕಲಾವಿದರಿರಲಿಲ್ಲ. ಅಂತಹ ಕನಸಿಗೆ ಇಂಬು ನೀಡವವರೂ ಇರಲಿಲ್ಲ. ಅದೊಂದು ಅದಮ್ಯ ಬಯಕೆ. ಕಲ್ಪನಾ ಛಲವಾದಿ, ತನ್ನ ಕನಸನ್ನು ಹೇಗಾದರೂ ನನಸಾಗಿಸಿ ಕೊಳ್ಳ ಬೇಕು ಎಂಬ ಕನಸು ಕಂಡರು.
 
ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ನಾಟಕ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿ ಚಿತ್ರರಂಗದ ಮಿನುಗುತಾರೆ ಎನಿಸಿದ್ದ ಕಲ್ಪನಾ ಅಭಿನಯದ ಮೊದಲ ಕನ್ನಡ [[ಚಲನಚಿತ್ರ]] [[:Category:ವರ್ಷ-೧೯೬೩ ಕನ್ನಡಚಿತ್ರಗಳು|೧೯೬೩ರಲ್ಲಿ]] [[ಬಿ.ಆರ್. ಪಂತುಲು]] ನಿರ್ದೇಶನದಲ್ಲಿ ಬಂದ [[ಸಾಕು ಮಗಳು]] ಚಿತ್ರ.೧೯೬೭ರಲ್ಲಿ ಬಿಡುಗಡೆಯಾದ ಚಿತ್ರ ಬೆಳ್ಳಿಮೋಡ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. [[ಬೆಳ್ಳಿ ಮೋಡ]], [[ಗೆಜ್ಜೆ ಪೂಜೆ]], [[ಶರಪಂಜರ]], [[ಎರಡು ಕನಸು]], [[ಗಂಧದ ಗುಡಿ]] ಮೊದಲಾದ ಚಲನಚಿತ್ರಗಳಲ್ಲಿ ಕಲ್ಪನಾ ಅತ್ಯಂತ ಉತ್ತಮವಾಗಿ ಅಭಿನಯಿಸಿದ್ದಾರೆ.
[[ಬೆಳ್ಳಿ ಮೋಡ]], [[ಗೆಜ್ಜೆ ಪೂಜೆ]], [[ಶರಪಂಜರ]], [[ಎರಡು ಕನಸು]], [[ಗಂಧದ ಗುಡಿ]] ಮೊದಲಾದ ಚಲನಚಿತ್ರಗಳಲ್ಲಿ ಕಲ್ಪನಾ ಅತ್ಯಂತ ಉತ್ತಮವಾಗಿ ಅಭಿನಯಿಸಿದ್ದಾರೆ.
 
ಸ್ತ್ರೀ ನಾಟಕ ಮಂಡಳಿ ಮುಖಾಂತರ ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ, ಮಿನುಗುತಾರೆ. ಕಲ್ಪನಾಗೆ, ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳತ್ತ ಆಸಕ್ತಿ. ಮುಖಕ್ಕೆ ಬಣ್ಣ ಬಳಿಸಿಕೊಳ್ಳುವ ಹಂಬಲ. ಅವರ ಅಭಿನಯಕ್ಕೆ ವೇದಿಕೆ ಕಲ್ಪಿಸಿದ್ದು ರಂಗಭೂಮಿಯ "ಗುಡಿಗೇರಿ ಬಸವರಾಜು".
 
3ಸಲ೩ ಸಲ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದ ಕಲ್ಪನಾಗೆ ಪುಸ್ತಕ ಓದುವ ಹವ್ಯಾಸವೂ ಇತ್ತು.
 
ಈಕೆಯ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ಮಾತುಗಳೂ ಇದ್ದವು, ವಾಸ್ತವವಾಗಿ ಕಲ್ಪನಾಳಿಗೆ ಹತ್ತಿರವಿರುವವರು ಹೇಳುವ ಮಾಹಿತಿಯಂತೆ . ಕಲ್ಪನಾರಿಗೆ ಚರ್ಮದ ಸಮಸ್ಯೆ ಇತ್ತು. ಚರ್ಮ ಪೊರೆ (ಮೇಲ್ಪದರ) ಬಿಟ್ಟಂತಾಗುತ್ತಿತ್ತು. (ಹುರುಪು-ಗ್ರಾಮೀಣಭಾಷೆಯಲ್ಲಿ ಅದು ಉರುಪೆ). ಚಿತ್ರಗಳಲ್ಲಿ ಅರ್ಧ ತೋಳು ತೊಟ್ಟು ಅಭಿನಯಿಸಬೇಕಾದ ಸನ್ನಿವೇಶಗಳೆಲ್ಲಾ ಬಹಳ ಹಿಂಸೆ. ಗ್ಲ್ಯಾಮರ್ ನಟಿಗೆ, ಇದರ ಬಗ್ಗೆ ದುಃಖವೂ ಇತ್ತು. ಎಷ್ಟೋ ಬಾರಿ ಅತ್ತಿದ್ದೂ ಉಂಟು. ಅದಕ್ಕೇ, ಹೆಚ್ಚು ಚಿತ್ರಗಳಲ್ಲಿ ತುಂಬು ತೋಳಿನ ಅಂಗಿಯನ್ನೇ ಧರಿಸಿದ್ದಾರೆ. ಎಷ್ಟು ಮೇಕಪ್ ಮಾಡಿಕೊಂಡರೂ ಆ ತೊಂದರೆ ಹೋಗುತ್ತಿರಲಿಲ್ಲ. ಆದರೆ ಕಲ್ಪನಾರಿಗೆ, ಆ ಸತ್ಯವನ್ನು ಹೇಳಲಾಗದೇ ನುಂಗಿಕೊಳ್ಳುವ ಅನಿವಾರ್ಯತೆ ಬದುಕಿಗಿತ್ತು. ಒಮ್ಮೆ ಈ ಸಂಗತಿ ಬಯಲಾದರೆ ತನ್ನ ತಾರಾಮೌಲ್ಯಕ್ಕೆ ಧಕ್ಕೆಯಾದೀತೆಂಬ ಭಯ…ಎಲ್ಲವೂಭಯ. ಎಲ್ಲವೂ ಒಟ್ಟಾಗಿ ಅವರ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ವದಂತಿಗೆ ಕಾರಣವಾಗಿತ್ತು.
 
೩-೫-೧೯೭೯ ರಂದು ಕಲ್ಪನಾ ಆತ್ಮ ಹತ್ಯೆ ಮಾಡಿಕೊಂಡರು,. ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಸುಮಾರು ೨-೩೦ರ ವೇಳಗೆ ಸಂಕೇಶ್ವರದಲ್ಲಿ ‘ಕುಮಾರ ರಾಮ’ ನಾಟಕ ನಡೆದಿತ್ತು. ಅದರಲ್ಲಿ ಗುಡಗೇರಿ ಬಸವರಾಜು ಕುಮಾರ ರಾಮನಾಗಿದ್ದರೆ ಕಲ್ಪನಾ ಮಲತಾಯಿಯ ಪಾತ್ರದಲ್ಲಿದ್ದರು. ನಾಟಕದಲ್ಲಿ ಭಾಗವಹಿಸುವಾಗಲೇ ಕಲ್ಪನಾ ಅನ್ಯಮನಸ್ಕರಾಗಿದ್ದರು. ನಾಟಕದಲ್ಲಿ ಕುಮಾರ ರಾಮ ತನಗೆ ‘ಹಸಿವಾಗಿದೆ’ ಎಂದಾಗ ‘ರೊಟ್ಟಿ ತಿನ್ನು’ ಎಂದು ಹೇಳುವ ಬದಲು ‘ಹುಲ್ಲು ತಿನ್ನು’ ಎಂದು ಹೇಳಿದ್ದರು. ಜನ ಬಿದ್ದು ಬಿದ್ದು ನಕ್ಕರು. ಇದರಿಂದ ಅವಮಾನಿತನಾದ ಬಸವರಾಜ ‘ ಹೌದು ನಾನು ಹಸು, ಹಲ್ಲು ಕೊಡು’ ಎಂದು ಹೇಳುತ್ತಾ ವೇದಿಕೆಯ ತುಂಬಾ ಓಡಾಡಲು ಆರಂಭಿಸಿದರು. ಜನ ಇನ್ನಷ್ಟು ಕೇಕೆ ಹಾಕಲು ಆರಂಭಿಸಿದಾಗ ಅಪಮಾನಗೊಂಡ ಬಸವರಾಜ್ ನಾಟಕವನ್ನು ಅಲ್ಲಿಗೇ ನಿಲ್ಲಿಸಿದರು. ಪರದೆ ಬಿದ್ದ ನಂತರ ನೇರವಾಗಿ ಕಲ್ಪನಾರ ಕಡೆ ಧಾವಿಸಿ ಕೆನ್ನೆಗೆ ಹೊಡೆದರು. ಇದರಿಂದ ವಿಚಲಿತರಾದ ಅವರು ವೇಷ ಕೂಡ ಬದಲಾಯಿಸದೆ ನೇರವಾಗಿ ಗೋಟೂರು ಪ್ರವಾಸಿ ಧಾಮಕ್ಕೆ ಬಂದು ಆತ್ಮ ಹತ್ಯೆ ಮಾಡಿಕೊಂಡರು ಎಂದು ಒಂದೆಡೆ ಬರೆಯುತ್ತಾರೆ ಸಿನಿಮಾ ಕುರಿತ ಸಂವೇದನಾಶೀಲ ಬರಹಗಾರ ಎನ್.ಎಸ್. ಶ್ರೀಧರಮೂರ್ತಿಯವರು..ಪೋಸ್ಟ್ ಮಾರ್ಟಂ ವರದಿ ಪ್ರಕಾರ ಕಲ್ಪನಾ ೫೬ ನಿದ್ದೆ ಮಾತ್ರೆಗಳನ್ನು ನುಂಗಿದ್ದರು. ಮಾನಸಿಕವಾಗಿ ವಿಚಲಿತರಾದಾಗಲೆಲ್ಲ ನಿದ್ದೆ ಮಾತ್ರೆ ನುಂಗುವ ಹವ್ಯಾಸ ಅವರಿಗಿತ್ತು. ಹಿಂದೆ ಎರಡು ಮೂರು ಬಾರಿ ಹೀಗೆ ಸಾವಿನ ಅಂಚನ್ನು ಮುಟ್ಟಿ ಬಂದಿದ್ದರು ಈ ಸಲ ನಿದ್ರಾ ಮಾತ್ರೆಗಳ ಪ್ರಮಾಣ ಅವರನ್ನು ಸೀದಾ ಯುಮಪುರಿಗೇ ಕರೆದುಕೊಂಡು ಹೋಗಿತ್ತು. ಕಲ್ಪನಾ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಒಲವನ್ನು ಇಟ್ಟು ಕೊಂಡಿದ್ದರು. ಪುಸ್ತಕ ಪ್ರೇಮಿಯಾಗಿದ್ದರು. ಒಳ್ಳೆಯ ಕವಿತೆಗಳನ್ನು ಬರೆದಿದ್ದರು. ಅಂಕಣಗಳನ್ನು ಬರೆದಿದ್ದರು. ‘ಯಾವ ಜನ್ಮದ ಮೈತ್ರಿ’ ಚಿತ್ರದ ಪಾತ್ರ ವಿವಾದಕ್ಕೆ ಸಿಲುಕಿದಾಗ ದಾಖಲೆಗಳೊಂದಿಗೆ ತಾವೇ ಸಮರ್ಥಿಸಿಕೊಂಡಿದ್ದರು ಮೊದಲಾದ ಹಲವು ಅಂಶಗಳು ಚರಿತ್ರೆಯಲ್ಲಿ ದಾಖಲಾಗಲಿಲ್ಲ.
 
ಸುಮಾರು ಇಪ್ಪತ್ತೇಳು ಕನ್ನಡ ಚಿತ್ರಗಳಲ್ಲಿ ಬಹುಮುಖ ಪ್ರತಿಭೆಯಾಗಿ ಮಿಂಚಿದ ಮಿನುಗುತಾರೆ ತಮಿಳು ಭಾಷೆಯಲ್ಲೂ ಕಂಡರು ಅದರಲ್ಲಿ ಮುಖ್ಯವಾಗಿ "ಮಡ್ರಾಸ್ ಟು ಪಾಂಡಿಚರಿ" ಚಿತ್ರವು ಕಲ್ಪನಾ ಅವರನ್ನು ಯಶಸ್ಸಿನ ಶಿಖರವನ್ನೇರಿಸಿತು ಆ ಚಿತ್ರ ಹಿಂದಿ ಭಾಷೆಗೂ ರಿಮೇಕ್ ಆಗಿ ಅಮಿತಾಬ್ , ಅರುಣಾ ಇರಾನಿ ಮುಖ್ಯಭೂಮಿಕೆಯಲ್ಲಿ ತೆರೆಕಂಡು ಯಶಸ್ಸು ಗಳಿಸಿತು. ಇಡೀ ಚಿತ್ರೋಧ್ಯಮದಲ್ಲಿ ಅತ್ಯುತ್ತಮ ಪ್ರತಿಭೆಯಾಗಿ , ಅವರ ಮಾತಿನ ಶೈಲಿ ,ಚುರುಕು ಚಟುವಟಿಕೆ , ಅಸಾಂಪ್ರದಾಯಿಕ ಜೀವನ ಶೈಲಿ , ಅವರ ಉಡುಗೆ ತೊಡುಗೆ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟವು. ಆ ಕಾಲದ (೧೯೬೫ -೭೫)ಮಾಡ್ರನ್‍ ಉಡುಗೆಯನ್ನು ತೊಟ್ಟು ತನ್ನದೇ ಆದ ಟ್ರೆಂಡ್ ಹುಟ್ಟುಹಾಕಿಕೊಂಡಾಕೆ , ದೊಡ್ಡ ದೊಡ್ಡ ಓಲೆಗಳು ಅದಕ್ಕೆ ಒಪ್ಪುವಂತಹ ದೊಡ್ಡ ದೊಡ್ಡ ಉಂಗುರಗಳು , ಗಿಡ್ಡ ಸೆರಗು , ಹಾರದಂತಹ ಸರಗಳು , ಗಿಡ್ಡ ಗಿಡ್ಡ ತೋಳಿನ ಬೌಸುಗಳನ್ನು ಧರಿಸಿ ತಮ್ಮದೇ ಆದ ಟ್ರೆಂಡ್ ಪ್ರಾರಂಭಿಸಿದ ಈ ಚೆಲುವೆಯ ಅಭಿನಯ ಕಂಡು ಬೆರಗಾಗದವರಿಲ್ಲ. ಹಣ್ಣೆಲೆ ಚಿಗುರಿದಾಗ , ಶರಪಂಜರ , ಬೆಳ್ಳಿಮೋಡ ಚಿತ್ರಗಳಲ್ಲಿ ಅತ್ಯದ್ಭುತ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡು ಕನ್ನಡ ಚಿತ್ರೋಧ್ಯಮದಲ್ಲಿ ರಾಣಿಯಂತೆ ಶೋಭಿಸಿದ ಕಲ್ಪನಾ ಬಣ್ಣದ ಜಗತ್ತಿನಲ್ಲಿ ತಮ್ಮ ಚಿನ್ನದಂತಹ ಜೀವನವನ್ನು ತಮ್ಮ ಕೈಯಾರ ಹಾಳುಮಾಡಿಕೊಂಡರು ಮಿನುಗು ತಾರೆ ಅಂದಿಗು,ಇಂದಿಗು,ಎಂದೆಂದಿಗೂ ಮಿನುಗು ತಾರೆಗೆ ಸರಿ ಸಾಟಿಯಾರಿಲ್ಲ,ಮಿನುಗುತಾರೆ ಆಕಾಶದಲ್ಲೆಂದೆದೂ ಮಿನುಗುತ್ತಿರುತ್ತಾರೆ.."ಕಲ್ಪನಾ ವಿಲಾಸ" ಎಂಬ ಹೆಸರಿನ ನಟಿ ಕಲ್ಪನಾರ ಜೀವನ ಚರಿತ್ರೆಯ ಪುಸ್ತಕವೊಂದಿದೆ."ನಮನ"
"https://kn.wikipedia.org/wiki/ಕಲ್ಪನಾ" ಇಂದ ಪಡೆಯಲ್ಪಟ್ಟಿದೆ