ಕಲ್ಪನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೧ ನೇ ಸಾಲು:
ಈಕೆಯ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ಮಾತುಗಳೂ ಇದ್ದವು, ವಾಸ್ತವವಾಗಿ ಕಲ್ಪನಾಳಿಗೆ ಹತ್ತಿರವಿರುವವರು ಹೇಳುವ ಮಾಹಿತಿಯಂತೆ . ಕಲ್ಪನಾರಿಗೆ ಚರ್ಮದ ಸಮಸ್ಯೆ ಇತ್ತು. ಚರ್ಮ ಪೊರೆ (ಮೇಲ್ಪದರ) ಬಿಟ್ಟಂತಾಗುತ್ತಿತ್ತು.(ಹುರುಪು-ಗ್ರಾಮೀಣಭಾಷೆಯಲ್ಲಿ ಅದು ಉರುಪೆ). ಚಿತ್ರಗಳಲ್ಲಿ ಅರ್ಧ ತೋಳು ತೊಟ್ಟು ಅಭಿನಯಿಸಬೇಕಾದ ಸನ್ನಿವೇಶಗಳೆಲ್ಲಾ ಬಹಳ ಹಿಂಸೆ. ಗ್ಲ್ಯಾಮರ್ ನಟಿಗೆ, ಇದರ ಬಗ್ಗೆ ದುಃಖವೂ ಇತ್ತು. ಎಷ್ಟೋ ಬಾರಿ ಅತ್ತಿದ್ದೂ ಉಂಟು. ಅದಕ್ಕೇ, ಹೆಚ್ಚು ಚಿತ್ರಗಳಲ್ಲಿ ತುಂಬು ತೋಳಿನ ಅಂಗಿಯನ್ನೇ ಧರಿಸಿದ್ದಾರೆ.ಎಷ್ಟು ಮೇಕಪ್ ಮಾಡಿಕೊಂಡರೂ ಆ ತೊಂದರೆ ಹೋಗುತ್ತಿರಲಿಲ್ಲ. ಆದರೆ ಕಲ್ಪನಾರಿಗೆ, ಆ ಸತ್ಯವನ್ನು ಹೇಳಲಾಗದೇ ನುಂಗಿಕೊಳ್ಳುವ ಅನಿವಾರ್ಯತೆ ಬದುಕಿಗಿತ್ತು. ಒಮ್ಮೆ ಈ ಸಂಗತಿ ಬಯಲಾದರೆ ತನ್ನ ತಾರಾಮೌಲ್ಯಕ್ಕೆ ಧಕ್ಕೆಯಾದೀತೆಂಬ ಭಯ…ಎಲ್ಲವೂ ಒಟ್ಟಾಗಿ ಅವರ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ವದಂತಿಗೆ ಕಾರಣವಾಗಿತ್ತು.
೩-೫-೧೯೭೯ ರಂದು ಕಲ್ಪನಾ ಆತ್ಮ ಹತ್ಯೆ ಮಾಡಿಕೊಂಡರು,ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಸುಮಾರು ೨-೩೦ರ ವೇಳಗೆ ಸಂಕೇಶ್ವರದಲ್ಲಿ ‘ಕುಮಾರ ರಾಮ’ ನಾಟಕ ನಡೆದಿತ್ತು. ಅದರಲ್ಲಿ ಗುಡಗೇರಿ ಬಸವರಾಜು ಕುಮಾರ ರಾಮನಾಗಿದ್ದರೆ ಕಲ್ಪನಾ ಮಲತಾಯಿಯ ಪಾತ್ರದಲ್ಲಿದ್ದರು. ನಾಟಕದಲ್ಲಿ ಭಾಗವಹಿಸುವಾಗಲೇ ಕಲ್ಪನಾ ಅನ್ಯಮನಸ್ಕರಾಗಿದ್ದರು. ನಾಟಕದಲ್ಲಿ ಕುಮಾರ ರಾಮ ತನಗೆ ‘ಹಸಿವಾಗಿದೆ’ ಎಂದಾಗ ‘ರೊಟ್ಟಿ ತಿನ್ನು’ ಎಂದು ಹೇಳುವ ಬದಲು ‘ಹುಲ್ಲು ತಿನ್ನು’ ಎಂದು ಹೇಳಿದ್ದರು. ಜನ
ಸುಮಾರು ಇಪ್ಪತ್ತೇಳು ಕನ್ನಡ ಚಿತ್ರಗಳಲ್ಲಿ ಬಹುಮುಖ ಪ್ರತಿಭೆಯಾಗಿ ಮಿಂಚಿದ ಮಿನುಗುತಾರೆ ತಮಿಳು ಭಾಷೆಯಲ್ಲೂ ಕಂಡರು ಅದರಲ್ಲಿ ಮುಖ್ಯವಾಗಿ "ಮಡ್ರಾಸ್ ಟು ಪಾಂಡಿಚರಿ" ಚಿತ್ರವು ಕಲ್ಪನಾ ಅವರನ್ನು ಯಶಸ್ಸಿನ ಶಿಖರವನ್ನೇರಿಸಿತು ಆ ಚಿತ್ರ ಹಿಂದಿ ಭಾಷೆಗೂ ರಿಮೇಕ್ ಆಗಿ ಅಮಿತಾಬ್ , ಅರುಣಾ ಇರಾನಿ ಮುಖ್ಯಭೂಮಿಕೆಯಲ್ಲಿ ತೆರೆಕಂಡು ಯಶಸ್ಸು ಗಳಿಸಿತು. ಇಡೀ ಚಿತ್ರೋಧ್ಯಮದಲ್ಲಿ ಅತ್ಯುತ್ತಮ ಪ್ರತಿಭೆಯಾಗಿ , ಅವರ ಮಾತಿನ ಶೈಲಿ ,ಚುರುಕು ಚಟುವಟಿಕೆ , ಅಸಾಂಪ್ರದಾಯಿಕ ಜೀವನ ಶೈಲಿ , ಅವರ ಉಡುಗೆ ತೊಡುಗೆ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟವು. ಆ ಕಾಲದ (೧೯೬೫ -೭೫)ಮಾಡ್ರನ್ ಉಡುಗೆಯನ್ನು ತೊಟ್ಟು ತನ್ನದೇ ಆದ ಟ್ರೆಂಡ್ ಹುಟ್ಟುಹಾಕಿಕೊಂಡಾಕೆ , ದೊಡ್ಡ ದೊಡ್ಡ ಓಲೆಗಳು ಅದಕ್ಕೆ ಒಪ್ಪುವಂತಹ ದೊಡ್ಡ ದೊಡ್ಡ ಉಂಗುರಗಳು , ಗಿಡ್ಡ ಸೆರಗು , ಹಾರದಂತಹ ಸರಗಳು , ಗಿಡ್ಡ ಗಿಡ್ಡ ತೋಳಿನ ಬೌಸುಗಳನ್ನು ಧರಿಸಿ ತಮ್ಮದೇ ಆದ ಟ್ರೆಂಡ್ ಪ್ರಾರಂಭಿಸಿದ ಈ ಚೆಲುವೆಯ ಅಭಿನಯ ಕಂಡು ಬೆರಗಾಗದವರಿಲ್ಲ. ಹಣ್ಣೆಲೆ ಚಿಗುರಿದಾಗ , ಶರಪಂಜರ , ಬೆಳ್ಳಿಮೋಡ ಚಿತ್ರಗಳಲ್ಲಿ ಅತ್ಯದ್ಭುತ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡು ಕನ್ನಡ ಚಿತ್ರೋಧ್ಯಮದಲ್ಲಿ ರಾಣಿಯಂತೆ ಶೋಭಿಸಿದ ಕಲ್ಪನಾ ಬಣ್ಣದ ಜಗತ್ತಿನಲ್ಲಿ ತಮ್ಮ ಚಿನ್ನದಂತಹ ಜೀವನವನ್ನು ತಮ್ಮ ಕೈಯಾರ ಹಾಳುಮಾಡಿಕೊಂಡರು ಮಿನುಗು ತಾರೆ ಅಂದಿಗು,ಇಂದಿಗು,ಎಂದೆಂದಿಗೂ ಮಿನುಗು ತಾರೆಗೆ ಸರಿ ಸಾಟಿಯಾರಿಲ್ಲ,ಮಿನುಗುತಾರೆ ಆಕಾಶದಲ್ಲೆಂದೆದೂ ಮಿನುಗುತ್ತಿರುತ್ತಾರೆ.."ಕಲ್ಪನಾ ವಿಲಾಸ" ಎಂಬ ಹೆಸರಿನ ನಟಿ ಕಲ್ಪನಾರ ಜೀವನ ಚರಿತ್ರೆಯ ಪುಸ್ತಕವೊಂದಿದೆ."ನಮನ"
|