ಗೃಹಭಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
{{Cleanup}} - ತೆಗೆಯಲಾಗಿದೆ.
No edit summary
೧ ನೇ ಸಾಲು:
'''ಗೃಹಭಂಗ''' [[ಕನ್ನಡ|ಕನ್ನಡದ]] ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ [[ಎಸ್.ಎಲ್.ಭೈರಪ್ಪ|ಎಸ್.ಎಲ್.ಭೈರಪ್ಪನವರ]] ಒಂದು ಪ್ರಸಿಧ್ಧ ಕಾದಂಬರಿ. ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. [[ತಿಪಟೂರು]],[[ ಚೆನ್ನರಾಯಪಟ್ಟಣ]] ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆಯನ್ನು ಈ ಕಾದಂಬರಿ ಹೊಂದಿದೆ.
 
ಕಾದಂಬರಿಕಾರರು ತಮ್ಮ ಕಾದಂಬರಿಯ ಬಗ್ಗೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. - ''ಗೃಹಭಂಗ ಎಂಬುದು ಈ ಕೃತಿಯ ಕೇಂದ್ರಕಲ್ಪನೆಯಲ್ಲ. ಮೇಲೆ ಹೇಳಿದ ಅವಧಿಯಲ್ಲಿ ನಡೆಯಬಹುದಾದ ಜೀವನಚಿತ್ರಣದ ಪ್ರಯತ್ನವೇ ಇದರ ದೃಷ್ಟಿ. ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ; ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನ ದೃಷ್ಟಿಯು ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು.''
೧೪ ನೇ ಸಾಲು:
==ಗೃಹಭಂಗ ಕಿರುತೆರೆ ಧಾರಾವಾಹಿಯಾಗಿ==
 
''ಈ ಕೃತಿಯ ಟಿವಿ ರೂಪಾಂತರ[[ ೨೦೦೪]]-[[೨೦೦೫]] ರಲ್ಲಿ [[ಈ-ಟಿವಿ ಕನ್ನಡ|ಈಟಿವಿ]] ವಾಹಿನಿಯಲ್ಲಿ ಪ್ರಸಾರವಾಯಿತು. ಜೀವನದ ಏರಿಳಿತಗಳಿಂದ ಧೃತಿಗೆಡದೆ ಜೀವನವನ್ನು ಕೇವಲ ಜೀವನವಾಗಿಯೆ ಕಾಣುವಂತ ಓರ್ವ ಅತಿ ಸಾದಾರಣ ಗೃಹಿಣಿಯ ಕಥೆ. ಈ ಧಾರಾವಾಹಿಯ ನಿರ್ದೇಶಕರು ಗಿರೀಶ್ ಕಾಸರವಳ್ಳಿ ಹಾಗು ಮುಖ್ಯ ಪಾತ್ರದಲ್ಲಿ[[ ಮಾಳವಿಕಾ ಅವಿನಾಶ್]] ನಟಿಸಿದ್ದಾರೆ. ಇದರ ಶೀರ್ಷಿಕೆ ಗೀತೆಯನ್ನು[[ ರತ್ನಮಾಲಾ ಪ್ರಕಾಶ್]]] ಹಾಡಿದ್ದಾರೆ. ಗೀತೆಯ ಒಂದು ಸಾಲು - "ಎಲ್ಲ ಸಹಿಸಿ ಮುಂದೆ ಪಯಣ ಬದುಕೇ ವಿಸ್ಮಯರಂಗ..." ಈ ಕೃತಿಯ ಸಮಸ್ತ ಭಾವವನ್ನು ಪ್ರತಿಬಿಂಬಿಸುತ್ತಿದೆ ಎಂಬುದು ಧಾರಾವಾಹಿ ವೀಕ್ಷಿಸಿದವರ ಅಭಿಪ್ರಾಯವಾಗಿದೆ.
 
[[ ಗೃಹಭ೦ಗ ]] ಭೈರಪ್ಪನವರ ಜೀವನವನ್ನೆ ಬಿ೦ಬಿಸುತ್ತದೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ.
"https://kn.wikipedia.org/wiki/ಗೃಹಭಂಗ" ಇಂದ ಪಡೆಯಲ್ಪಟ್ಟಿದೆ