ಗೀತಪ್ರಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
== '''ಗೀತಪ್ರಿಯ''' ==
 
ಹೆಸರಿನಲ್ಲೇ ಗೀತೆಯನ್ನು ಇಟ್ಕೊಂಡಿರೋರು ಗೀತಪ್ರಿಯ. ಕನ್ನಡ ಚಲನಚಿತ್ರರಂಗದ ಪ್ರಮುಖ ಗೀತರಚನಕಾರ ಹಾಗೂ ನಿರ್ದೇಶಕರ ಸಾಲಿಗೆ ಸೇರುವ ಮತ್ತೊಂದು ಹೆಸರು.ಜನನ [[೧೯೩೧]]ರ ಜೂನ್ ೧೫ರಂದು.ನಿಜವಾದ ಹೆಸರು "ಲಕ್ಷ್ಮಣರಾವ್ ಮೋಹಿತೆ".ಬಾಲ್ಯಮಿತ್ರ [[ವಿಜಯಭಾಸ್ಕರ್]] ಸಹಾಯದಿಂದ ೧೯೫೫ರಲ್ಲಿ [[ಶ್ರೀರಾಮಪೂಜಾ]] ಚಲನಚಿತ್ರಕ್ಕೆ ಗೀತೆ ಬರೆಯುವ ಅವಕಾಶ ದೊರಕಿತು.ವಿಜಯಭಾಸ್ಕರ್ ಅವರಿಂದಲೇ "ಗೀತಪ್ರಿಯ" ಎಂಬ ನಾಮಕರಣ.[[ಮಣ್ಣಿನಮಗ]] ಚಲಚಿತ್ರದಿಂದ ನಿರ್ದೇಶಕನ ಪಟ್ಟ ,ಜೊತೆಜೊತೆಗೆ ಹೆಸರು,ಪ್ರಶಸ್ತಿ.. ಎಲ್ಲವೂದಕ್ಕಿತು.ಚಿತ್ರಗೀತೆಗಳಲ್ಲಿ ಬಂಡಾಯದ ಬಾವುಟ ಹಾರಿಸಿದ ವ್ಯಕ್ತಿ ಗೀತಪ್ರಿಯ. ಅವರ ಗೀತೆಗಳಲ್ಲಿ ಅಡಗಿರುವ ಮಾನವ ಪ್ರೀತಿ, ಶೋಷಣೆಯ ಬಗ್ಗೆ ಆಕ್ರೋಶ, ಬಡವರ ಪರ ದನಿ, ದೇವರ ಮೇಲೆ ಸಿಟ್ಟು ಇವೆಲ್ಲವೂ ಜನಸಾಮಾನ್ಯರ ದನಿಯೇ ಆಗಿದೆ.
 
ಮಿಲಿಟರಿ ಪರಂಪರೆಯ ಕುಟುಂಬದಿಂದ ಬಂದವರು ಗೀತಪ್ರಿಯ. ಅವರ ತಂದೆ, ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಸೇನಾನಿ.ಮಹಾಯುದ್ಧದಲ್ಲಿ ಪಾಲ್ಗೊಂಡು ನಂತರದ ದಿನದಲ್ಲಿ ಬೆಂಗಳೂರು ದಂಡು ಪ್ರದೇಶಕ್ಕೆ ಬಂದು ನೆಲೆಸಿದವರು ಅದಕ್ಕೂ ಹಿಂದೆ, ಗೀತಪ್ರಿಯ ಅವರ ತಾತ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇಂಥ ಕೌಟುಂಬಿಕ ಹಿನ್ನೆಲೆಯಿಂದ ಬಂದ ಗೀತಪ್ರಿಯ, ಚಿತ್ರರಂಗದತ್ತ ವಾಲಿಕೊಂಡದ್ದು ಧರ್ಮ ಕರ್ಮ ಸಂಯೋಗ, ಅಷ್ಟೆ..ತಂದೆಯವರಿದ್ದ ಮಿಲಿಟರಿ ಕ್ಯಾಂಪ್ನಲ್ಲೇ ಅಧಿಕಾರಿಯಾಗಿದ್ದವರು-ಕವಿವರ್ಯ [http://kn.wikipedia.org/wiki/%E0%B2%AA%E0%B3%81.%E0%B2%A4%E0%B2%BF.%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%BE%E0%B2%9A%E0%B2%BE%E0%B2%B0%E0%B3%8D ಪು.ತಿ.ನ.]ಅವರಿಂದ ಪ್ರಭಾವಿತರಾಗಿ ಅವರಿಂದ ಕನ್ನಡ ಕಲಿತು,ಪು.ತಿ.ನ.ಪ್ರೇರಣೆಯಿಂದ ಮೊದಲನೆಯದಾಗಿ 'ಲವ ಕುಶ"ಎಂಬ ನಾಟಕ ಬರೆದರು.
"https://kn.wikipedia.org/wiki/ಗೀತಪ್ರಿಯ" ಇಂದ ಪಡೆಯಲ್ಪಟ್ಟಿದೆ