ಗೀತಪ್ರಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೬ ನೇ ಸಾಲು:
ಬೇಸರದಿಂದಲೇ ಬೆಂಗಳೂರಿಗೆ ಹಿಂತಿರುಗಿದರು ಗೀತಪ್ರಿಯ. ಇದಾಗಿ ಕೆಲದಿನಗಳಲ್ಲೇ ಅನಾಹುತವೊಂದು ನಡೆದುಹೋಯಿತು. ಕುಟುಂಬದ ಆಧಾರಸ್ತಂಭದಂತಿದ್ದ ಗೀತಪ್ರಿಯರ ತಂದೆ ಅನಾರೋಗ್ಯದಿಂದ ತೀರಿಕೊಂಡರು. ಮುಂದೆ, ಅನುಕಂಪದ ಆಧಾರದ ಮೇಲೆ ತಂದೆಯವರು ನೌಕರಿ ಮಾಡುತ್ತಿದ್ದ ಮೈಸೂರು ಲ್ಯಾನ್ಸರ್ಸ್ ಕಂಪನಿಯಲ್ಲೇ ಕೆಲಸಕ್ಕೆ ಸೇರಿಕೊಂಡರು ಗೀತಪ್ರಿಯ. ಆದರೆ, ಕೆಲವೇ ದಿನಗಳಲ್ಲಿ ಆ ಕಂಪನಿ ಕೂಡ ಮುಚ್ಚಿಹೋಯಿತು.
ಈ ಸಂದರ್ಭದಲ್ಲಿ ತಾಯಿ, ಇಬ್ಬರು ತಂಗಿಯರು ಹಾಗೂ ಮೂವರು ಸೋದರರನ್ನು ಸಾಕುವ ಹೊಣೆ ಗೀತಪ್ರಿಯರ ಮೇಲಿತ್ತು. ಆದರೆ ನೌಕರಿಯೇ ಇರಲಿಲ್ಲ. ಚಿಕ್ಕವಯಸ್ಸಿನ ತಂಗಿಯರು ಶ್ರೀರಾಮಪುರದ ಮನೆಯಲ್ಲಿ ಊದುಬತ್ತಿ ಹೊಸೆಯುವ ಕೆಲಸ ಮಾಡುತ್ತಿದ್ದರು. ಬದುಕಬೇಕೆಂದರೆ ಸಿಕ್ಕಿದ ಕೆಲಸ ಮಾಡಬೇಕು ಎಂದುಕೊಂಡ ಗೀತಪ್ರಿಯ-
ಏನೇ ಕಷ್ಟ ಬಂದರೂ ಸರಿ, ಅಮ್ಮನನ್ನು ಚನ್ನಾಗಿ ನೋಡ್ಕೋಬೇಕು ಎಂದು ನಾನು ಆಸೆಪಟ್ಟಿದ್ದೆ. ಆ ಕಾರಣದಿಂದಲೇ ಸಿಕ್ಕಿದ ಕೆಲಸವನ್ನೆಲ್ಲ ಮಾಡಿದೆ. ನನ್ನ ಕಷ್ಟ ನೋಡಿ ಅಮ್ಮ ಬಿಕ್ಕಳಿಸಿ ಅಳ್ತಾಇದ್ಲು. ಅದನ್ನ ಕಂಡಾಗಲೆಲ್ಲ ಕರುಳು ಕಿವಿಚಿದ ಹಾಗಾಗ್ತಿತ್ತು. ಈ ಎಲ್ಲ ನೋವನ್ನೂ ಮರೆತುಬಿಡೋಣ ಅಂದುಕೊಂಡು ಹೊರಗೆ ಬಂದರೆ, ಸುತ್ತಮುತ್ತಲಿನ ಜನರ ಚುಚ್ಚುಮಾತು ಕೇಳಬೇಕಿತ್ತು. ನಾನು ಚಿತ್ರರಂಗಕ್ಕೆ ಹೋಗುವ ಪ್ರಯತ್ನ ಮುಂದುವರಿಸುತ್ತಿದ್ದೆನಲ್ಲ? ಅದು ಗೊತ್ತಿದ್ದವರೆಲ್ಲ- `ಚಿಕ್ಕ ವಯಸ್ಸಿಗೇ ಬಣ್ಣದ ಗೀಳು ಅಂಟಿಸಿಕೊಂಡಿದಾನೆ. ಇವನು ಖಂಡಿತ ಉದ್ಧಾರ ಆಗೋದಿಲ್ಲ. ಹಾಳಾಗಿ ಹೋಗ್ತಾನೆ. ಇವನ ಮನೆ ಮಂದಿಯೆಲ್ಲ ಬೀದಿಗೆ ಬೀಳ್ತಾರೆ’ ಎಂದು ಹಂಗಿಸುತ್ತಿದ್ದರಂತೆ.ಮುಂದೆ, ೧೯೬೭ ರಲ್ಲಿ ವನಮಾಲ ಎಂಬಾಕೆ ಅಶ್ವತ್ಥ್, ರಾಜಾಶಂಕರ್, ಪಂಡರಿಭಾಯಿ, ಜಯಂತಿ ತಾರಾಗಣದ ಒಂದು ಸಿನಿಮಾ ನಿರ್ಮಾಣಕ್ಕೆ ಣಕ್ಕೆ ಮುಂದಾದರು. ಎಂ.ಎಸ್. ನಾಯಕ್ ಅವರಿಗೆ ನಿರ್ದೇಶನದ ಹೊಣೆ ಬಿತ್ತು. ಚಿತ್ರಕಥೆ -ಹಾಡು ಬರೆವ ಜವಾಬ್ಧಾರಿ ಇವರ ಹೆಗಲಿಗೇರಿತು.ಇವರು ಬರೆದ ಒಂದೇ ಬಳ್ಳಿಯ ಹೂಗಳು ಚಿತ್ರದ "ನೀನೆಲ್ಲಿ ನಡೆವೆ ದೂರ…"ಹಾಡು ಮಹಮ್ಮದ್ ರಫಿಯವರು ಹಾಡಿರುವ ಏಕೈಕ ಕನ್ನಡ ಗೀತೆ ಇದು. "ನಮನ"
|