ಬಾಲಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯ ನೇ ಸಾಲು:
ಈ ಶ್ರಮಜೀವಿಗಳಿಗೆ ಒಬ್ಬನೇ ಮಗ ಬಾಲಕೃಷ್ಣ.ಇದ್ದಕ್ಕಿದ್ದಂತೆ ತಂದೆಯು ಕಾಯಿಲೆ ತೀವ್ರ ಸ್ವರೂಪ ಪಡೆದಾಗ ತಾಯಿ ಕಂಡ ಕಂಡಲ್ಲಿ ಬಿಕ್ಷೆ ಬೇಡಿ ಹಣ ಹೊಂದಿಸಲು ಶ್ರಮ ಪಟ್ಟಳು,ಅದೂ ಸಾಲದಾದಾಗ ಬೇರೆ ದಾರಿ ಕಾಣದೆ ಅರಸೀಕೆರೆಯ ಮಂಡಿ ವ್ಯಾಪಾರಿಯ ಉಪ ಪತ್ನಿಗೆ ಮಗು ಬಾಲಕೃಷ್ಣನನ್ನು ಎಂಟು ರೂಪಾಯಿಗೆ ಮಾರಿದಳು.ಆ ಸಾಕು ತಾಯಿ ಬಾಲಕನನ್ನು ಅರಸೀಕೆರೆಯ ಶಾಲೆಗೆ ಸೇರಿಸಿದಳು.
 
ಆದರೆ ಎಂಟನೆ ವಯಸ್ಸಿಗೆ ಬಾಲಣ್ಣನ ಶ್ರವಣಶಕ್ತಿ ಸಂಪೂರ್ಣ ಮಾಯವಾಯಿತು.ಕಲಿಕೆ ಕಷ್ಟವಾಯಿತು.ಲೋಯರ್ ಸೆಕಂಡರಿ ದಾಟುವುದೇ ಕಷ್ಟವಾದಾಗ ಕಳೆಯಕಲೆಯ ಕಡೆಗೆ ಆಸಕ್ತಿ ಹೊರಳಿತು.ಸ್ನೇಹಿತರ ಜೊತೆಗೂಡಿ ನಾಟಕವಾಡುವ ಹವ್ಯಾಸ ಬಲವಾಯಿತು.ಒಮ್ಮೆ ಸಾಕು ತಂದೆಯ ಜೇಬಿನಿಂದ ದುಡ್ಡು ಕದ್ದು ಸಿಕ್ಕಿ ಬಿದ್ದಾಗ ಸಾಕು ತಾಯಿ ಮನೆಯಿಂದಲೇ ದೂರ ಕಳುಹಿಸಿದಳು.
 
ಅಲ್ಲಿಗೆ ಇದ್ದ ಮನೆಯ ಋಣ ತೀರಿತು.ಜಗತ್ತೇ ಮನೆಯಾಯಿತು. ನಾಟಕ ಕಂಪೆನಿಯ ಗೇಟು ಕಾಯುವುದು,ಬೋರ್ಡು ಬರೆಯುವುದು,ಪೋಸ್ಟರ್ ಅಂಟಿಸುವುದು...ಹೀಗೆ ಆರಂಭವಾದ ಇವರ ವೃತ್ತಿಜೀವನ ಮುಂದೆ ರಂಗಭೂಮಿಯ ನಟನೆಗೆ ತಿರುಗಿತು.’ಕೃಷ್ಣಲೀಲಾ ’ ಇವರು ಅಭಿನಯಿಸಿದ ಮೊದಲ ನಾಟಕ.
ಚಾಮುಂಡೇಶ್ವರಿ,ಗುಬ್ಬಿ ಕಂಪೆನಿಗಳಲ್ಲಿ ಅಭಿನಯಿಸಿದ್ದ ಬಾಲಣ್ಣ ನೀಲಾಂಜನೆ,ಚಿತ್ರಾಂಗದೆ ಮುಂತಾದ ೫೦ ನಾಟಕಗಳನ್ನು ಬರೆದಿದ್ದಾರೆ.
 
==ಕನ್ನಡ ಚಿತ್ರರಂಗದಲ್ಲಿ ಬಾಲಕೃಷ್ಣ==
ವರ್ಷ [[:Category:ವರ್ಷ-೧೯೪೩ ಕನ್ನಡಚಿತ್ರಗಳು|೧೯೪೩ ರಲ್ಲಿ]] '''[[ರಾಧಾರಮಣ]]''' ಚಿತ್ರದ ಮೂಲಕ [[ಕನ್ನಡ ಚಿತ್ರರಂಗ]] ಪ್ರವೇಶಿಸಿದ ಇವರು ಸುಮಾರು ೫೧೦ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಹಾಸ್ಯ ನಟ,ಖಳ ನಟ,ಪೋಷಕ ನಟ ..-ಹೀಗೆ ಎಲ್ಲ ಬಗೆಯ ಪಾತ್ರಗಳಲ್ಲೂ ನಟಿಸಿ ಸೈ ಅನಿಸಿಕೊಂಡಿದ್ದಾರೆ.ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಚಿರಸ್ಮರಣೀಯ. [[ಕಣ್ತೆರೆದು ನೋಡು]],[[ಬಂಗಾರದ ಮನುಷ್ಯ]],[[ತ್ರಿಮೂರ್ತಿ]],[[ಸಂಪತ್ತಿಗೆ ಸವಾಲ್]], [[ಗಂಧದ ಗುಡಿ]], [[ಭಾಗ್ಯದ ಲಕ್ಷ್ಮಿ ಬಾರಮ್ಮ]] ಇವರು ಅಭಿನಯಿಸಿದ ಕೆಲವು ಪ್ರಮುಖ ಚಿತ್ರಗಳು.[[ಯಮಕಿಂಕರ]] ಅವರ ಅಭಿನಯದ ಕೊನೆಯ ಚಿತ್ರ.
"https://kn.wikipedia.org/wiki/ಬಾಲಕೃಷ್ಣ" ಇಂದ ಪಡೆಯಲ್ಪಟ್ಟಿದೆ