ವಿನಯ ಕುಮಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೧೦ ನೇ ಸಾಲು:
೨೦೦೪-೦೫ ರ ಸಾಲಿನ ರಣಜಿ ಪಂದ್ಯಾವಳಿಯಲ್ಲಿ ಪ್ರಥಮ ಬಾರಿ ಕರ್ನಾಟಕ ತಂಡಕ್ಕಾಗಿ ಆಯ್ಕೆಯಾದರು. ಪ್ರಥಮ ಋತುವಿನಲ್ಲೆ ೨೦ ಕ್ಕೂ ಹೆಚ್ಚು ವಿಕೆಟ್ ಕಬಳಿಸುವುದರ ಮೂಲಕ ಎಲ್ಲರ ಗಮನ ಸೆಳೆದರು. ಔಟ್ ಸ್ವಿಂಗರ್, ಲೆಗ್ ಕಟ್ಟರ್ ಹಾಗೂ ನಿಖರ ಎಸೆತಗಳು ಇವರ ಶಕ್ತಿ. ಇತ್ತೀಚಿಗೆ ಇನ್ ಸ್ವಿಂಗರ್ (ಬ್ಯಾಟುಗಾರನ ಕಡೆಗೆ - ಅಂದರೆ ಆಫ್ ಸೈಡಿನಿಂದ ಲಾಂಗ್ ಸೈಟಿಗೆ ತಿರುಗುವಂತೆ ಬೋಲ್ ಮಾಡಿದ ಚೆಂಡು) ಕೂಡ ರೂಡಿಸಿಕೊಂಡು, ೨೦೦೭-೦೮ ನೆಯ ಸಾಲಿನ ರಣಜಿ ಪಂದ್ಯಾವಳಿಗಳಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಕಬಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಇದನ್ನು ಗಮನಿಸಿದ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ತಂಡ, ಇವರಿಗೆ ತಮ್ಮ ತಂಡದಲ್ಲಿ ಸ್ಥಾನವನ್ನು ಕಲ್ಪಿಸಿ ಕೊಟ್ಟರು ಹಾಗು ಇವರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಉಪಯೊಗಿಸಿಕೊಂಡಿದ್ದಾರೆ.
== ಸಾಧನೆಗಳು==
೨೦೦೭-೦೮ ನೆಯ ಸಾಲಿನ ರಣಜಿ ಪಂದ್ಯಾವಳಿಗಳಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್(೪೦) ಕಬಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. "ಡೊಮೆಸ್ಟಿಕ್ ಬೌಲರ್ ಆಫ್ ದ ಇಯರ್ " ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಟಿ೨೦ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕಾಗಿ ಆಯ್ಕೆಯಾದರು. ಜಿಂಬಾಬ್ವೆ ವಿರುದ್ದ ನೆಡೆದ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಕಾಲಿರಿಸಿದ್ದಾರೆ.
|