ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
[[ಚಿತ್ರ:Hanuman.jpeg|thumb|right|200px|'ತಾಳ್ಯದ ಆಂಜನೇಯಸ್ವಾಮಿ']]
ತಾಳ್ಯ, ಚಿತ್ರದುರ್ಗ ಜಿಲ್ಲೆಯ ಇತರ ಹಳ್ಳಿಗಳಂತೆ, ಕುಡಿಯುವ ನೀರಿನವ್ಯವಸ್ಥೆಯೂ ಇಲ್ಲದ ಒಂದು ಅತ್ಯಂತ ಚಿಕ್ಕಹಳ್ಳಿಯಾಗದೆ ಇರಲು ಕಾರಣ, ಇಲ್ಲಿಯ ವಿಶಾಲವಾದ ಕೆರೆಯ ಅಸ್ತಿತ್ವದಿಂದ. ಹೋಬಳಿ ಕೇಂದ್ರವಾದ ತಾಳ್ಯದ ಸುತ್ತಮುತ್ತಲೂ ಅನೇಕ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು ಅರ್ಥಚಂದ್ರಾಕೃತಿಯ ಮಾದರಿಯ ಭೂಭಾಗದಲ್ಲಿ ಗ್ರಾಮದ ಪೂರ್ವದಿಕ್ಕಿನಲ್ಲಿ ಸುಂದರವಾದ ಹಾಗೂ ವಿಶಾಲವಾದ ಕೆರೆಯನ್ನು ಹೊಂದಿದೆ. ಈ ಕೆರೆಯು ೧೮೦ ಎಕರೆ ೨೩ ಗುಂಟೆ ವಿಸ್ತೀರ್ಣವನ್ನು ಹೊಂದಿದ್ದು ಇದರ ಅಂಕು-ಡೊಂಕಾದ ಏರಿ ೭೦೦-೮೦೦ ಮೀಟರ್ ವ್ಯಾಪ್ತಿ ಹೊಂದಿದೆ. ಈ ಕೆರೆ ಬತ್ತಿದ ದಿನಗಳೇ ಅಪರೂಪವೆಂದು ಗ್ರಾಮದ ಜನ ನೆನೆಸಿಕೊಳ್ಳುತ್ತಾರೆ. ಇಂಥ ತಾಣದಲ್ಲಿ ಹನುಮಪ್ಪ ಅಥವಾ ಆಂಜನೇಯಸ್ವಾಮಿಯ ದೇವಸ್ಥಾನವಿದ್ದು ಜಿಲ್ಲೆಯಲ್ಲಿ ಪ್ರಸಿದ್ಧಿಯಾಗಿದೆ. ತಾಳ್ಯದ ತೇರು ಸಾಮಾನ್ಯವಾಗಿ ಎಪ್ರಿಲ್ ತಿಂಗಳಿನಲ್ಲಿ ಅಂದರೆ, ಬೆಂಗಳೂರಿನಲ್ಲಿ ಕರಗವಾಗುವ ಸಮಯದಲ್ಲಿ ನಡೆಯುತ್ತದೆ.ಹೊಳಲ್ಕೆರೆ ಚಿತ್ರದುರ್ಗ ಬಸ್ ಮಾರ್ಗದಲ್ಲಿ ಸಿಗುವ ಶಿವಗಂಗ ಗ್ರಾಮದಿಂದ ೮ ಕಿ.ಮೀ.ದೂರದಲ್ಲಿದೆ. ತಾಳ್ಯ ಗ್ರಾಮದ ಆರಂಭದಲ್ಲೇ ಆಂಜನೇಯ ಸ್ವಾಮಿಯ ಗುಡಿಯಿದೆ.
[[ಚಿತ್ರ:Image (56) (1).jpg|thumb|right|
==ದೇವಸ್ಥಾನದ ವೈಶಿಷ್ಟ್ಯಗಳು==
ಸುಮಾರು ೪೦೦ ವರ್ಷಗಳ ಹಿಂದೆ, ಚಿತ್ರದುರ್ಗದ ಪಾಳೇಗಾರರು ಆಂಜನೇಯ ಸ್ವಾಮಿಗೆ ನಡೆದು ಕೊಳ್ಳುತ್ತಿದ್ದರು ಎನ್ನುವುದನ್ನು ಬಿಟ್ಟರೆ, ಈ ದೇವಾಲಯ ಸ್ಥಾಪಕರಾರು ಎನ್ನುವುದಕ್ಕೆ ಯಾವ ಆಧಾರಗಳು ದೊರೆತಿಲ್ಲ. ಅಜಾನುಬಾಹುವಾಗಿ ನಿಂತಿರುವ ಸ್ವಾಮಿಯ ವಿಗ್ರಹ, ಸುಮಾರು ೧೧ ಅಡಿ ಎತ್ತರವಿದೆ. ಪಕ್ಕದಲ್ಲಿ ದಶಾವತಾರದ ಭಂಗಿಗಳಿವೆ. ಅಷ್ಟದಿಕ್ಪಾಲಕರು, ಆದಿಶಕ್ತಿ, ಮತ್ತು ಶ್ರೀರಾಮ ಪಟ್ಟಾಭಿಷೇಕ, 'ರಾಮಾಯಣದ ಅರಣ್ಯಕಾಂಡದ ಚಿತ್ರಣ'ಗಳು ಸುಂದರವಾಗಿಮೂಡಿಬಂದಿವೆ. ಸಭಾಂಗಣದ ಕಂಭಗಳಲ್ಲಿ ಶಿವ,ಪಾರ್ವತಿ,ನಂದಿ ಗರುಡ, ಲಿಂಗ, ಮತ್ತು ಮಾರುತಿಯ ಕೆತ್ತನೆಗಳಿವೆ. ಹತ್ತಿರದಲ್ಲೇ ಇರುವ 'ಹಾಲುರಾಮೇಶ್ವರ ಮಟ್ಟಿ'ಯಿಂದ 'ಮಲಸಿಂಗನಹಳ್ಳಿ'ಯ 'ಕಿಟ್ಟದಹಳ್ಳಿ'ಯ ಮೂರ್ತಿಗಳು ಒಂದೇ ಬೃಹತ್ ಬಂಡೆಯಿಂದ ನಿರ್ಮಿಸಲ್ಪಟ್ಟಿವೆ. 'ತಾಳ್ಯದ ಮೂರ್ತಿ'ಯು 'ವೀರ ಭಾವ'ವನ್ನು ಹೊಂದಿದ್ದು, 'ಕಿಟ್ಟದ ಹಳ್ಳಿಯ ಮೂರ್ತಿ', 'ಶಿಶು'ವಿನಂತೆ ಮತ್ತು ಮಲಸಿಂಗನಹಳ್ಳಿಮೂರ್ತಿ, 'ನರ'ನಂತೆ ಕಾಣಬರುತ್ತದೆ. ಗರ್ಭಗುಡಿಯ ಬಾಗಿಲಿಗೆ ಹಿತ್ತಾಳೆಯಲ್ಲಿ ಮಾಡಿಸಿದ ರಾಮಾಯಣದ ಚಿತ್ತಾರಗಳನ್ನು ಹೊರಸೂಸುವ ತಗಡನ್ನು ೧೯೧೬ ರಲ್ಲಿ ಅಳವಡಿಸಿದ್ದಾರೆ. ಮಹಾದ್ವಾರದ ಬಳಿ 'ಬಾಣಪ್ಪ ದೇವರ ಚಿಕ್ಕಗುಡಿ'ಯಿದೆ. ಈ ದೇವತೆ ಭೂತ ಪ್ರೇತ ಪಿಶಾಚಿಗಳ, ಮತ್ತು ರೋಗಗಳನ್ನು ವಾಸಿಮಾಡಲು, ಕಷ್ಟಗಳನ್ನು ಪರಿಹರಿಸಲು 'ನಂದನ ಹೊಸೂರಿನ ರಾಜ'ನು ದಾಸಯ್ಯನಿಗೆ ನೀಡಿದ ಚಿತ್ರಹಿಂಸೆಗಳನ್ನೇ ಜಾತ್ರೆಯ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಆಚರಿಸುತ್ತಾರೆ. ಜಾತಿ ಭೇದವಿಲ್ಲದೆ ಎಲ್ಲರೂ ಭಾಗವಹಿಸಿ ಕಾಣಿಕೆಗಳನ್ನು ಸಮರ್ಪಿಸುತ್ತಾರೆ.
|