ಸುವರ್ಣ ನ್ಯೂಸ್ ಕನ್ನಡ ದಿನಪತ್ರಿಕೆಯಾದ ಕನ್ನಡಪ್ರಭದ[http://%E0%B2%95%E0%B2%A8%E0%B3%8D%E0%B2%A8%E0%B2%A1%E0%B2%AA%E0%B3%8D%E0%B2%B0%E0%B2%AD ಕನ್ನಡಪ್ರಭ]ದ ಅಂಗ ಸಂಸ್ಥೆ. ಇದು ತನ್ನ ನೇರ ದಿಟ್ಟ ನಿರಂತರವಾದ ವಾರ್ತಾಪ್ರಸಾರದಿಂದ ಜನ ಮೆಚ್ಚುಗೆಗಳಿಸಿದೆ. ಇದರ ಅಧ್ಯಕ್ಷರಾಗಿ ರಾಜ್ಯಸಭಾ ಸಂಸದ ಶ್ರೀ ರಾಜೀವ್ ಚಂದ್ರಶೇಖರ್ ಕಾರ್ಯನಿರ್ವಹಿಸುತ್ತಿದ್ದು ತನ್ನ ಸಹೋದರ ಸಂಸ್ಥೆ ಸುವರ್ಣ ಮನರಂಜನಾ ವಾಹಿನಿಯನ್ನು ಹೊಂದಿದೆ. ಇದು ಎಷಿಯಾನೆಟ್ಏಶಿಯಾನೆಟ್ ಸಮೂಹದ ಭಾಗವಾಗಿದ್ದು ಪ್ರಸ್ತುತ [http://www.vbhat.in ಶ್ರೀ ವಿಶ್ವೇಶ್ವರ ಭಟ್] ಇವರು ಮುಖ್ಯ ಸಂಪಾದಕರಾಗಿ, ಶ್ರೀ ಹಮೀದ್ ಪಾಳ್ಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ತನ್ನ ಬ್ರೇಕ್ ಫಾಸ್ಟ್ ನ್ಯೂಸ್, ಲಂಚ್ ನ್ಯೂಸ್, ನಿಮಿಷ ಹತ್ತು ಸುದ್ದಿ ಐವತ್ತು, ಸುವರ್ಣ ಸುದ್ದಿ @೯ ಪಿ ಎಂ, ಬೆಂಗಳೂರು ಫಸ್ಟ್ ಮತ್ತು ಉತ್ತರ ಕರ್ನಾಟಕದ ಸೊಗಡು ಹೊಂದಿರುವ ಚಹಾ ಚೂಡ ಸುದ್ದಿ ನೋಡಾ, ರೈಟ್ ಕ್ಲಿಕ್, ಕಟ್ಟೆಚ್ಚರ ಹೀಗೆ ಹತ್ತು ಹಲವು ಜನ ಮನ್ನಣೆ ಹೊಂದಿರುವ ಹಲವಾರು ಕಾರ್ಯಕ್ರಮಗಳ ಪ್ರಸಾರ ಮಾಡುತ್ತಿದೆ.
೨೦೧೧ರ ಕನ್ನಡ ರಾಜ್ಯೋತ್ಸವದ ಬಳಿಕ ಜನ ಸಾಮಾನ್ಯರೆಡೆಗೆ ಮನ ಮುಟ್ಟುವಂತೆ ಬರುತ್ತಿದ್ದು ಕನ್ನಡವನ್ನು ತನ್ನ ವಾರ್ತೆಗಳಲ್ಲಿ ಬಳಸಿಕೊಳ್ಳುತ್ತಿದ್ದು ಕನ್ನಡಿಗರ ಜೀವನಾಡಿಯಲ್ಲಿ ನಿರಂತರವಾಗಿ ಹರಿಯುತ್ತಿದೆ.