ತೀ. ನಂ. ಶ್ರೀಕಂಠಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೪ ನೇ ಸಾಲು:
ಪ್ರೊಫೆಸರ್ '''ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ''' [[ಕನ್ನಡ]]ದ ಪ್ರಮುಖ ಸಾಹಿತಿಗಳಲ್ಲೊಬ್ಬರು, ಹಾಗೂ ಕನ್ನಡದ ಶ್ರೇಷ್ಠ ವಿದ್ವಾಂಸ ಹಾಗೂ ವಿಮರ್ಶಕರಾಗಿದ್ದರು. ಸೃಜನಶೀಲ ಲೇಖಕರಾಗಿದ್ದ ಅವರ ಸಂಶೋಧನಾತ್ಮಕ ಬರವಣಿಗೆಗಳಲ್ಲಿಯೂ ಕಾವ್ಯಸ್ಪರ್ಶವನ್ನು ಕಾಣಬಹುದಾಗಿತ್ತು. ಅವರು [[ಮೈಸೂರು ವಿಶ್ವವಿದ್ಯಾಲಯ]]ದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿದ್ದುದಲ್ಲದೆ ಕಲಾನಿಕಾಯದ ಡೀನ್ ಆಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರೂ ಆಗಿದ್ದರು. ಅವರು ಆದರ್ಶ ಪ್ರಾಧ್ಯಾಪಕರು ಮತ್ತು ಶ್ರೇಷ್ಠ ವಾಗ್ಮಿಯೆಂದು ಪ್ರಸಿದ್ಧರಾಗಿದ್ದರು. ಇಂದು ಜೀವನದ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಜನ ಮೇಧಾವಿಗಳು ತೀ.ನಂ.ಶ್ರೀ ಅವರ ಶಿಷ್ಯರಾಗಿದ್ದವರು. ತೀ.ನಂ.ಶ್ರೀ ಅವರು ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ, ಛಂದಸ್ಸು, ಕಾವ್ಯ, ಪ್ರಬಂಧ ಸಾಹಿತ್ಯ, ಅನುವಾದ ಸಾಹಿತ್ಯ, ಗ್ರಂಥ ಸಂಪಾದನೆ ಮತ್ತು ಭಾಷಾವಿಜ್ಞಾನ - ಈ ವಿಷಯಗಳಲ್ಲಿ ವಿಶೇಷವಾದ ತಜ್ಞತೆಯನ್ನು ಪಡೆದಿದ್ದು, ಈ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದ್ದಾರೆ. "ಒಲುಮೆ" ಕನ್ನಡದ ಮೊಟ್ಟಮೊದಲನೆಯ ಪ್ರೇಮಗೀತೆಗಳ ಸಂಕಲನವಾಗಿದ್ದು, [[ಕೆ.ಎಸ್.ನರಸಿಂಹಸ್ವಾಮಿ]] ಅವರ "ಮೈಸೂರು ಮಲ್ಲಿಗೆ" ಸಂಕಲನದ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. "ನಂಟರು" ಕನ್ನಡದ ಮಹತ್ವದ ಲಲಿತ ಪ್ರಬಂಧಗಳ ಸಂಕಲನಗಳಲ್ಲೊಂದು. ರಾಕ್ಷಸನ ಮುದ್ರಿಕೆ ವಿಶಾಖ ದತ್ತನ [[ಮುದ್ರಾರಾಕ್ಷಸ]], ನಾಟಕದ ಯಶಸ್ವಿ ಭಾಷಾಂತರ ಮಾತ್ರವಾಗಿರುವುದಲ್ಲದೆ, ಸೃಜನಶೀಲ ರೂಪಾಂತರವೂ ಆಗಿದೆ.
==ಜನನ==
'''ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯನವರು''', ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ [[ತೀರ್ಥಪುರ]]ವೆಂಬ, ಸಾಧಾರಣ ಹಳ್ಳಿಯ ಶ್ಯಾನುಭೋಗರ ಮಗನಾಗಿ, ೧೯೦೬ ರಲ್ಲಿ, ಜನಿಸಿದರು. ಇದು ಹಳ್ಳಿಯಾದಾಗ್ಯೂ, ಐತಿಹಾಸಿಕ ಸ್ಥಳವೆಂದು ಪ್ರಸಿದ್ಧಿಯಾಗಿತ್ತು. ವಿಜಯನಗರ ಸಾಮ್ರಾಜ್ಯ ಒಡೆದಮೇಲೆ, ತಲೆಯೆತ್ತಿಕೊಂಡ ಹಲವಾರು ಪಳೆಯಪಟ್ಟುಗಳಲ್ಲಿ ಒಂದಾದ [[ಹಾಗಲವಾಡಿ]], ಚರಿತ್ರೆಯಮೂಲಕ ಚಿರಪರಿಚಿತವಾದ ಜಾಗ. ಇದು, ಚಿಕ್ಕನಾಯಕನಹಳ್ಳಿಯ ಪೂರ್ವಕ್ಕೆ,
==ಕಂದಾಯ ಇಲಾಖೆಯಲ್ಲಿ ಸಿಕ್ಕ ನೌಕರಿ==
[[ಎಮ್.ಸಿ.ಎಸ್]] ಪರೀಕ್ಷೆ ಮುಗಿಸಿ, ಶ್ರೀರಂಗಪಟ್ಟಣದಲ್ಲಿ, ಕಂದಾಯದ ಇಲಾಖೆಯಲ್ಲಿ ಪ್ರೊಬೇಷನರ್ ಪದವಿಗೆ ಸೇರಿದರು. ಈ ವೄತ್ತಿ ಅವರಿಗೆ ಸಮಾಧಾನ ಕೊಡಲಿಲ್ಲ. ಮೈಸೂರಿನ ಇಂಟರ್ ಮೀಡಿಯೇಟ್ ಕಾಲೇಜ್ ಗೆ ಸೇರಿದರು. ೧೯೨೬ ರಲ್ಲಿ, ಜಯಲಕ್ಷ್ಮಿಯವರನ್ನು ಮದುವೆಯಾದರು. ೧೯೨೯ ರಲ್ಲಿ ಇಂಗ್ಲೀಷ್ ಎಮ್.ಎ ನಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಮಹಾರಾಜ ಕಾಲೇಜ್ ನಲ್ಲಿ ಉಪ-ಪ್ರಾಧ್ಯಾಪಕ ಕೆಲಸ ಸಿಕ್ಕಿತು. ತಂದೆಯರು ಅದೇ ಸಮಯದಲ್ಲಿ, ನಿಧನರಾದರು. ಪ್ರಥಮ ಕೃತಿ ಒಲುಮೆ ಪ್ರಕಟ. ೧೯೩೧ ರಲ್ಲಿ ಮಗಳು ನಾಗರತ್ನ,ಜನಿಸಿದಳು . ೧೯೩೨ ರಲ್ಲಿ ಎಮ್. ಎ. ಕನ್ನಡ ಶುರುವಾಯಿತು. ಆನಂತರದಲ್ಲಿ ಹುಟ್ಟಿದ ೨ ಗಂಡುಮಕ್ಕಳು, ಶೈಶವದಲ್ಲೇ ಮರಣ ಹೊಂದಿದರು. ೧೯೪೨,ರಲ್ಲಿ ಮಗ, ನಾಗಭೂಷಣನ ಜನನ. ಆ ಹೊತ್ತಿನಲ್ಲೇ ತೀ. ನಂ. ಶ್ರೀ ಯವರ ಸಹೋದರಿ ಮರಣಹೊಂದಿದರು. ೧೯೪೩ ರಲ್ಲಿ, ಅವರನ್ನು ಸಾಕಿ-ಸಲಹಿದ ಸೊದರತ್ತೆ, ಲಕ್ಷೀದೇವಮ್ಮನವರು ನಿಧನರಾದರು.
|