ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
 
==ಹನುಮಪ್ಪನ ತೇರಿನ ವಿವರಗಳು ==
ಪ್ರತಿವರ್ಷವೂ ಚೈತ್ರ ಶುದ್ಧ ಚಿತ್ರ ಪೂರ್ಣಿಮೆಯದಿನ ಶ್ರೀ ಆಂಜನೇಯನಿಗೆ ಬ್ರಹ್ಮ ರಥೋತ್ಸವ (ಆನೆ ಉತ್ಸವ) ಜರುಗುವುದು. ಅಂಕುರಾರ್ಪಣದ ಬಳಿಕ ಕುದುರೆ ವಾಹನ, ಸಿಂಹವಾಹನ, ಇಂದ್ರಜಿತು ವಾಹನ, ನಂತರ ಆನೆ ವಾಹನೋತ್ಸವ ಅಥವ ಬ್ರಹ್ಮರಥೋತ್ಸವ ಜರುಗುತ್ತದೆ. ಆಂಜನೇಯ ಸ್ವಾಮಿಯ ಜಾತ್ರೆಯಂದು ಗುಡ್ಡದ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ಗ್ರಾಮಕ್ಕೆ ಬರಮಾಡಿಕೊಂಡು ಪೂಜೆ ಸಲ್ಲಿಸಿದ ನಂತರವೇ ಮೊದಲ ದಿನ ವಿಪ್ರಬಂಧುಗಳಿಂದವಿಶೇಷ ಪೂಜೆ-ಪ್ರಾರ್ಥನೆಗಳನಂತರ ಹಾಗೂ ಶ್ರೀಗುಡ್ಡದ ತಿಮ್ಮಪ್ಪನ ಉತ್ಸವಮೂರ್ತಿಗಳನ್ನು ಬ್ರಹ್ಮರಥದಲ್ಲಿ ಅಲಂಕೃತಗೊಳಿಸಿ ಗ್ರಾಮದ ಸುತ್ತಲೂ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತದೆ. ಆದಿನ ರಾತ್ರಿ ರಥಕ್ಕೆ ಎಣ್ಣೆ ಎರೆಯಲಾಗುತ್ತದೆ.
==[ತೇಜಿಕುಣಿತ==
ಮಾರನೆಯದಿನ, ದಾಸಯ್ಯನು, ಸೀಗೆಮರದ ಮುಳ್ಳಿನಮೇಲೆ ನಡೆಯುವ ಪರಿಪಾಠವಿದೆ. ಆದಿನ ಅವನು ಬೆಳಿಗ್ಯೆ ನಸುಕಿನಲ್ಲಿಯೇ ಎದ್ದು ಸ್ನಾನಾದಿವಿಧಿಗಳನ್ನು ಮುಗಿಸಿ, ಪೂರ್ತಿದಿನ ಉಪವಾಸದಿಂದಲೂ, ನೇಮದಿಂದಲೂ ಶುಚಿಯಿಂದಲೂ [[ಹನುಮಪ್ಪ]]ನನ್ನು ಆರಾಧಿಸಬೇಕು. ಬೆಳಗಿನ ಜಾವದಲ್ಲಿ ನಡೆಯುವ ಸೀಗೆ ಮೆಳೆ ತುಳಿಯುವ ವಿಧಿ ಬಹಳ ವಿಶೇಶವಾದದ್ದು. ಸುಮಾರು ೪ ಅಂಗುಲದ ಮಳೆಗಳಿಂದ, ಮುಳ್ಳಿನ ಹಾವಿಗೆಯಮೇಲೆ ನಡೆಯುವ ಕ್ರಿಯೆ ಅತ್ಯಂತ ವಿಸ್ಮಯದಾಯಕವಾಗಿದೆ. [[ತೇಜಿಕುಣಿತ]]ವೆಂಬ ಕುದುರೆ ಕುಣಿತವನ್ನು, ಆದಿನ ನೋಡಬಹುದು. ಆದಿನವೇ [[ಬ್ರಹ್ಮರಥೋತ್ಸವ]]ವನ್ನು ಅಲ್ಲಿನ ಬ್ರಾಹ್ಮಣ ಸಮಾಜದವರು ನಡೆಸಿಕೊಡುತ್ತಾರೆ. ಶ್ರೀ ಆಂಜನೇಯ ಸ್ವಾಮಿಉತ್ಸವಮೂರ್ತಿ ತೇಜಿಕುಣಿತದೊಂದಿಗೆ ಸೀಗೆ ಮೆಳೆಯ ಹತ್ತಿರ ಸಾಗುತ್ತದೆ. ಅಲ್ಲಿ ದಾಸಯ್ಯ (ಉಡೇದರ ತಿಮ್ಮಪ್ಪ)ಬಲಗಾಲಿಗೆ ಒಂದುಗುಂಡಿನ ಸರಪಳಿ ಬಿಗಿದಿರುತ್ತಾರೆ. ಆ ಸಮಯದಲ್ಲಿ ದಾಸಯ್ಯನಮೇಲೆ ದೇವರು ಬಂದಿರುತ್ತದೆ. ಆಗ ತೇಜಿ ದಾಸಯ್ಯನಿಗೆ ನಿವಾಳಿ ತೆಗೆದನಂತರ ಎಚ್ಚರಗೊಂಡ ದಾಸಯ್ಯ ಸೀಗೆ ಮೆಳೆಯನ್ನು ಬರಿಗಾಲಿನಲ್ಲಿ ಏರಲು ಹೋಗುತ್ತಾನೆ. ಅಲ್ಲಿ ನೆರೆದ ಹಲವು ಯುವಕರೂ ಸೀಗೆ ಮೆಳೆಯಮೇಲೆ ಏರುವುದನ್ನು ನಾವು ಕಾಣಬಹುದು. ಅವರಿಗೆಲ್ಲಾ ದೇಹಕ್ಕೆ ಹರಳೆಣ್ಣೆ ಹಚ್ಚಲಾಗುತ್ತದೆ. ಆದಿನದ ಬೆಳಿಗ್ಯೆ ರಥವನ್ನು ಅಲಂಕರಿಸಲಾಗುವುದು. ಈ ರಥದಲ್ಲಿ ಗುಡ್ಡದ ತಿಮ್ಮಪ್ಪ ಹಾಗೂ ಆಂಜನೇಯ ಸ್ವಾಮಿಪೂಜೆ-ಮಂಗಳಾರತಿ ಮಂಗಳವಾದ್ಯ ಗಳೊಂದಿಗೆ ಸಲ್ಲಿಸಲಾಗುವುದು.
 
==ಮೂರನೆಯದಿನ ಆ ಊರಿನ ಓಕಳಿ ಸೇವೆ ಜರುಗುತ್ತದೆ. ಊರಿನ ಮುಖ್ಯಸ್ಥರ ಮನೆಯಲ್ಲಿ ಊಟ==