ಫೆರಿಟ್ ಒರ್ಹಾನ್ ಪಾಮುಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ನೋಬೆಲ್ ಪ್ರಶಸ್ತಿ ವಿಜೇತ ಟರ್ಕಿ ಬರಹಗಾರ
Content deleted Content added
(~~~~)
( ಯಾವುದೇ ವ್ಯತ್ಯಾಸವಿಲ್ಲ )

೧೭:೦೯, ೧೨ ಅಕ್ಟೋಬರ್ ೨೦೧೧ ನಂತೆ ಪರಿಷ್ಕರಣೆ

ಒಬ್ಬ ಕಾದಂಬರಿಕಾರ ಹಾಗು 'ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ತೌಲನೊಕ ಸಾಹಿತ್ಯದ ಪ್ರಾಧ್ಯಾಪಕ'ರಾಗಿ ದುಡಿಯುತ್ತಿರುವ 'ಒರ್ಹಾನ್ ಪಾಮುಕ್' ಹುಟ್ಟಿ ಬೆಳೆದದ್ದು ಇಸ್ತಾಂಬುಲ್ ಶಹರಿನ ಒಂದು ಶ್ರೀಮಂತ ಕುಟುಂಬದಲ್ಲಿ. ಅವರ ಕುಟುಂಬದಲ್ಲಿ ಪಾಶ್ಚಾತ್ಯ ಸಂಸ್ಕ್ರುತಿಗೆ ಹೆಚ್ಚಿಗೆ ಆದ್ಯತೆ ಕೊಡುತ್ತಿದ್ದರು. ಅದಲ್ಲದೆ ಇಸ್ತಾಂಬುಲ್ ಪಟ್ಟಣವೂ ಇಸ್ಲಾಂ ಮತ್ತು ಪಾಶ್ಚಾತ್ಯ ಸಂಸ್ಕ್ರುತಿಯ ಆಗರವಾಗಿತ್ತು. ಪಾಮುಕ್ ರವರ ಕೃತಿಗಳಲ್ಲಿ ಈ ಸಂಗಮ ಕೊಡುಕೊಳ್ಳುವಿಕೆಯ ಕಥನ ಪ್ರಧಾನವಾಗಿ ಕಾಣಬರುತ್ತದೆ.

ವಿದ್ಯಾಭ್ಯಾಸ

ಮೂಲತಃ ಒಬ್ಬ ಇಂಜಿನಿಯರ್. ಆದರೆ ಅದನ್ನು ಮದ್ಯದಲ್ಲೇ ಕೈಬಿಟ್ಟು, ಪತ್ರಿಕೋದ್ಯಮದ ಕಡೆವಾಲಿದರು. ೯೮೨ ರಲ್ಲಿ ಅವರು ಪ್ರಕಟಿಸಿದ ಕಾದಂಬರಿ 'ಕೆವ್ ಡೆಟ್ ಬೇ ವ್ ಒಗುಲ್ಲರಿ' ದೇಶಈಯ ಪ್ರಶಸ್ತಿಯೊಂದನ್ನು ಗಲಿಸಿದರು. ೧೯೮೩ ರಲ್ಲಿ ಬರೆದ ಎರಡನೆಯ ಕಾದಂಬ್ರಿ'ಸೀಸ್ಸಿವ್ ಎವ್'ಸಹಿತ ಪ್ರಶಸ್ತಿಗೆ ಪಾತ್ರವಾಯಿತು.

'ಬೆಯಾಜ್ ಕಾಲೆ'

ಹೆಸರನ್ನು ತಂದುಕೊಟ್ಟ ಕಾದಂಬರಿ,'ಬೆಯಾಜ್ ಕಾಲೆ' (ಬಿಳಿಯ ಕೋಟೆ ಮನೆ) ೧೯೮೫ ರಲ್ಲಿ ಬರೆದದ್ದು. ಇದು ಟರ್ಕಿದೇಶದ ಸಾಂಸ್ಕೃತಿಕ ಕಥನವೆನ್ನುವಷ್ಟು ವಸ್ತುನಿಷ್ಠವಾಗಿದೆ. ಈ ಕೃತಿಯ ನಿರೂಪಕ ೧೭ ನೆಯ ಶತಮಾನದ ಇಟಲಿದೇಶದ ಯುವ ವಿದ್ವಾಂಸ. ಈತ ತುರುಷ್ಕರ ದಂಡನಾಯಕ,'ಹೋಜಾ' ಎಂಬುವರ ಗುಲಾಮರಾಗಿದ್ದರು. ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಸಿಲುಕಿದ್ದ 'ಹೋಜಾ' ತನ್ನ ಗುಲಾಮನ ಹತ್ತಿರವೇ ಶಿಷ್ಯವೃತ್ತಿಯನ್ನು ಅಭ್ಯಾಸಮಾಡಿದ.

ಕಾದಂಬರಿಗಳು

'ದ ಬ್ಲ್ಯಾಕ್ ಬುಕ್' 'ಮೈ ನೇಮ್ ಈಸ್ ರೆಡ್' 'ನ್ಯೂ ಲೈಫ್' 'ಸ್ನೋ' 'ಮ್ಯೂಸಿಯಮ್ ಆಫ್ ಇನೊಸೆನ್', ಇವು ಪಾಮುಕ್ ಬರೆದ ಕೆಲವು ಕಾದಂಬರಿಗಳ ಇಂಗ್ಲೀಷ್ ಅನುವಾದಗಳು.' ಟರ್ಕಿಯಲ್ಲಿ ಹಿಂದೆ ನಡೆದ ೩೦ ಸಾವಿರ ಕುರ್ಡಿಷ್ ಜನರ ಹತ್ಯೆ ಮತ್ತು ೧೦ ಲಕ್ಷ ಆರ್ಮೇನಿಯನ್ನರ ಹತ್ಯೆಗೆ 'ಒರ್ಹಾನ್ ಪಾಮುಕ್' ಹೇಳಿಕೆ ನೀಡಿದ ಕಾರಣ ಅವರ ವ್ರುದ್ಧ ಸರಕಾರ ಕಾನೂನು ಕ್ರಮ ಜರುಗಿಸಿ ಸೆರೆಮನೆವಾಸ ವಿಹಿಸಲು ಮುಂದಾಯಿತು. ಆಗ ಜಗತ್ತಿನ ಮುಖ್ಯ ಸಾಹಿತಿಗಳು ಅದರ ಪರವಾಗಿ ತರ್ಕಿಯ ಸರಕಾರಕ್ಕೆ ಪತ್ರ ಬರೆದಿದ್ದರು. ಟರ್ಕಿ ಸರಕಾರ ಕೊನೆಗೆ ಪಾಮುಕ್ ರವರನ್ನು ಶಿಕ್ಷಿಸುವ ವಿಚಾರವನ್ನು ಕೈಬಿಟ್ಟರು. ಒರ್ಹಾನ್ ಪಾಮುಕ್ ಇಂದಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಪ್ರಮುಖ ಕಾದಂಬರಿಕಾರರಲ್ಲಿ ಮುಖ್ಯರೆಂದು ಪರಿಗಣಿಸಲ್ಪಟ್ಟಿದ್ದಾರೆ.