ಹೊನ್ನಪ್ಪ ಭಾಗವತರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
೧೯೧೬ ರ ಜನವರಿ ೧೫ ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಜನಿಸಿದರು,ನೇಯ್ಗೆ ಮನೆತನದ ವ್ರತ್ತಿಯಾಗಿತ್ತು,ಐದನೆಯ ವಯಸ್ಸಿನಲ್ಲಿಯೇ ತಂದೆ ಚಿಕ್ಕಲಿಂಗಪ್ಪನವರನ್ನು ಕಳೆದುಕೊಂಡ ಹೊನ್ನಪ್ಪ ನವರಿಗೆ ತಾಯಿ ಹೇಳುತ್ತಿದ್ದ ಭಜನೆ,ಸಂಗೀತವೆಂದರೆ ಭಾರೀ ಆಕರ್ಷಣೆ.ಕೆಲ ವರ್ಷಾನಂತರ ಬೆಂಗಳೂರಿಗೆ ಬಂದ ಹೊನ್ನಪ್ಪ ನೌಕರಿ ಹಿಡಿದರು.ಮೊದಲು ಸಂಬಂಧ ಮೂರ್ತಿ ಭಾಗವತರ ಶಿಷ್ಯ ವ್ರತ್ತಿ ಹಿಡಿದರು,ನಂತರ ಹಾರ್ಮೋನಿಯಂ ಅರುಣಾಚಲಪ್ಪ ನವರಿಂದಲೂ ಶಿಷ್ಯ ವ್ರತ್ತಿ ಪಡೆದರು.
 
ಒಮ್ಮೆ ಸೇಲಂನಲ್ಲಿ ಹೊನ್ನಪ್ಪ ನವರ ಕಛೇರಿ ಏರ್ಪಾಡಾಯಿತು.ಆಗ ಎಂ.ಕೆ.ತ್ಯಾಗರಾಜ ಭಾಗವತರ್ ನಾಯಕರಾಗಿದ್ದ "ಅಂಬಿಕಾಪತಿ" ತಮಿಳು ಸಿನಿಮಾಕ್ಕೆ ನಾಯಕನ ಗೆಳೆಯನ ಪಾತ್ರಕ್ಕೆ ಕಲಾವಿದನನ್ನು ಹುಡುಕುತಿದ್ದರು.ಹೊನ್ನಪ್ಪನವರನ್ನು ಕಂಡ ನಂತರ ಆ ಪಾತ್ರಕ್ಕೆ ಇವರೇ ಸೂಕ್ತ ಎಂದು ನಿರ್ಧರಿಸಿದರು. ಸೇಲಂನಲ್ಲಿ ಅದ್ಭುತ ಕಚೇರಿ ಮಾಡಿದ ಕನ್ನಡಿಗ .ಹೊನ್ನಪ್ಪ ಎಲ್ಲರ ಮೆಚುಗೆಗೆ ಪಾತ್ರವಾದರು...ಹೊನ್ನಪ್ಪ ನವರನ್ನು ಸನ್ಮಾನಿಸಿ ಅವರ ಹೆಸರಿನ ಮುಂದೆ "ಭಾಗವತರ್"ಎಂಬ ಬಿರುದನ್ನೂ ಸೇರಿಸಿ ಗೌರವಿಸಿದರು.ಅಲ್ಲಿಂದ ಮುಂದೆ ಬೆಂಗಳೂರಿನ ಹೊನ್ನಪ್ಪನವರು "ಅಂಬಿಕಾಪತಿ"ಯ ಹೊನ್ನಪ್ಪ ಭಾಗವತರ್ ಆದರು."ನಮನ"
 
[[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗಕ್ಕೆ]] [[ಬಿ.ಸರೋಜಾದೇವಿ]] ಅವರನ್ನು ಪರಿಚಯಿಸಿದ ಗೌರವ ಇವರಿಗೆ ಸಲ್ಲುತ್ತದೆ.೧೯೬೦ರಲ್ಲಿ ಭಾಗವತರು "ನಾದಬ್ರಹ್ಮ ಸಂಗೀತ ವಿದ್ಯಾಲಯ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅನೇಕ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ.ಕರ್ನಾಟಕ ರಾಜ್ಯ ಚಲನಚಿತ್ರ ಸಲಹಾಮಂಡಳಿಯ ಸದಸ್ಯರಾಗಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದಾರೆ.
 
ಹೊನ್ನಪ್ಪ ಭಾಗವತರ್ ನಟಿಸಿದ ಮಹಾಕವಿ ಕಾಳಿದಾಸ ಮತ್ತು ಜಗಜ್ಯೋತಿ ಬಸವೇಶ್ವರ ಚಿತ್ರಗಳ ನಟನೆಗಾಗಿ ಕೇಂದ್ರ ಸರ್ಕಾರವು ಕ್ರಮವಾಗಿ ೧೯೫೫ ಮತ್ತು ೧೯೫೯ರಲ್ಲಿ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಿದೆ.೧೯೯೧ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಇವರ ಸಂಗೀತ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿದೆ. ಅದೇವರ್ಷವೇ ರಂಗ ಸಂಗೀತ ಕ್ಷೇತ್ರದ ಪ್ರಶಸ್ತಿಯೂ ಇವರಿಗೆ ಲಭಿಸಿದೆ."ನಮನ"
 
==ಹೊನ್ನಪ್ಪ ಭಾಗವತರ್ ನಟಿಸಿರುವ ಕೆಲವು ಚಿತ್ರಗಳು==
"https://kn.wikipedia.org/wiki/ಹೊನ್ನಪ್ಪ_ಭಾಗವತರ್" ಇಂದ ಪಡೆಯಲ್ಪಟ್ಟಿದೆ