ಆರ್.ನಾಗೇಂದ್ರರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
'''ಆರ್. ನಾಗೇಂದ್ರರಾಯರು'''(ಆರೆನ್ನಾರ್) ಕನ್ನಡ ಚಿತ್ರರಂಗದ ಆರಂಭಿಕ ವರ್ಷಗಳಲ್ಲಿನ ಹೆಸರಾಂತ ನಿರ್ದೇಶಕರು, ನಿರ್ಮಾಪಕರೊಲ್ಲಬ್ಬರು. '''ಆರ್.ಎನ್.ಆರ್. ಪಿಕ್ಚರ್ಸ್''' ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿ, ಹಲವಾರು ಯಶಸ್ವಿ ಕನ್ನಡ ಚಿತ್ರಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಇವುಗಳಲ್ಲಿ [[ಮಹಾತ್ಮ ಕಬೀರ್]], [[ವಿಜಯನಗರದ ವೀರಪುತ್ರ]] ಹಾಗು [[ನಮ್ಮ ಮಕ್ಕಳು]] ಚಿತ್ರಗಳು ಪ್ರಮುಖವಾದವುಗಳು.
=='ಆರ್.ನಾಗೇಂದ್ರರಾಯರು ಜನಿಸಿದ್ದು, ಹೊಳಲ್ಕೆರೆಯಲ್ಲಿ==
[[ಕನ್ನಡ]] [[ಚಿತ್ರರಂಗ]]ದ 'ಭೀಷ್ಮಾಚಾರ್ಯ'ರೆಂದೇ ಪ್ರಸಿದ್ಧರಾಗಿದ್ದ ನಾಗೇಂದ್ರರಾಯರು ಹುಟ್ಟಿದ್ದು [[ಚಿತ್ರದುರ್ಗ]] ಜಿಲ್ಲೆಯ ಹೊಳಲ್ಕೆರೆಯಲ್ಲಿ. ತಂದೆ '[[ರಟ್ಟೆಹಳ್ಳಿ ಕೃಷ್ಣರಾವ್]].' ತಾಯಿ, '[[ರುಕ್ಮಿಣೀದೇವಿ]].' ವೃತ್ತಿ [[ರಂಗಭೂಮಿ]]ಯಲ್ಲಿ ಪುರುಷರೇ ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದ ಕಾಲದಲ್ಲಿ, '[[ಆರೆನ್ನಾರ್]]' ಪ್ರಸಿದ್ಧರಾಗಿದ್ದು ಸೀತೆ, ಚಂದ್ರಮತಿ, ಶಕುಂತಲೆ, ಮುಂತಾದ ಸ್ತ್ರೀಪಾತ್ರಗಳಿಂದ. ಕನ್ನಡ ಚಲನಚಿತ್ರಗಳಲ್ಲಿ ಪೋಷಕನಟ, ನಾಯಕನಟ, ಖಳನಟನಾಗಿ ವೈವಿಧ್ಯಮಯ ಹಾಗೂ, ನೆನಪಿನಲ್ಲುಳಿಯುವ ಪಾತ್ರಗಳನ್ನು ಮಾಡಿದ್ದಾರೆ. 1943 ರಲ್ಲೇ ಡಬ್ಬಿಂಗ್ ತಂತ್ರಜ್ಞಾನಕ್ಕೆ ಓಂಕಾರ ಹಾಕಿದ ಖ್ಯಾತಿ ಆರ್. ನಾಗೇಂದ್ರರಾವ್ ಅವರದು. ‘ಸತ್ಯ ಹರಿಶ್ಚಂದ್ರ’ ಚಿತ್ರವನ್ನು ನಾಗೇಂದ್ರರಾವ್ ಅವರು ತಮಿಳಿಗೆ ಡಬ್ ಮಾಡಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಡಬ್ ಮಾಡಿದ ಯಶಸ್ಸನ್ನುಮೊಟ್ಟಮೊದಲಿಗೆ ಕನ್ನಡಿಗರದಾಗಿಸಿದರು.
|