ಬೆಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
[[ಚಿತ್ರ:DSC03552.jpg|200px|thumb|right|ಕೊಡಗಿನ ಬ್ರಹ್ಮಗಿರಿ ಸಾಲುಗಳು ]]
ಭೂಮಿಯ ಮೇಲ್ಮೈಯಲ್ಲಿ ಉಬ್ಬಿದ್ದು ಒಂದು ನಿರ್ದಿಷ್ಟ ಶಿಖರವಿರುವ ಪ್ರದೇಶಕ್ಕೆ
ಬೆಟ್ಟಕ್ಕೆ ಕುಂದ, ಕೊಂಡ, ಗಿರಿ, ಗೋತ್ರ , ಮಲೆ, ಎಂಬಿತ್ಯಾದಿ ಹೆಸರುಗಳೂ ಇವೆ. ಸಣ್ಣ ಬೆಟ್ಟಕ್ಕೆ ಗುಡ್ಡ, ದಿಬ್ಬ, ದಿಣ್ಣೆ, ಬೋರೆ, ಎಂದು ಮೊದಲಾದ ಹೆಸರುಗಳಿವೆ. ಇಲ್ಲಿಯೂ ಬೆಟ್ಟ ಮತ್ತು ಗುಡ್ಡಕ್ಕಿರುವ ವ್ಯತ್ಯಾಸವು ಸ್ಪಷ್ಟವಾಗಿಲ್ಲದೆ ವಸ್ತುನಿಷ್ಠವಾಗಿದೆ.
ಭೂಮಿಯ ಮೇಲಿನ ಅಗಾಧ ಬಿರುಕುಗಳು, ಸವಕಳಿ, ಹಿಮಪ್ರವಾಹ, ಭೂಮಿಯೊಳಗಿನ ಪದರಗಳ ಚಲನೆ, ಮುಂತಾದ ಅನೇಕ ರೀತಿಯ ಭೌಗೋಳಿಕ ಘಟನೆಗಳಿಂದ ಬೆಟ್ಟಗಳು ನಿರ್ಮಾಣಗೊಂಡಿವೆ.
ಬೆಟ್ಟಗಳು ಹಲವಾರು ನದಿಗಳ ಉಗಮ ಸ್ಥಾನಗಳೂ ಆಗಿವೆ. ಹಲವಾರು ಜನವಸಹಾತುಗಳೂ ಮಲೆಗಳಲ್ಲಿ ನಿರ್ಮಾಣಗೊಂಡಿವೆ. ಬಹುತೇಕ ದೇವಸ್ಥಾನಗಳು ಹಿಂದಿನಕಾಲದಲ್ಲಿ ಬೆಟ್ಟಗಳ ಮೇಲೆಯೇ ಕಟ್ಟಲ್ಪಡುತ್ತಿದ್ದವು. ಒಂದೇ ಕಲ್ಲಿನ ಬೆಟ್ಟವನ್ನು ಕಡಿದು ಶ್ರವಣಬೆಳಗೊಳದ ಗೊಮಟೇಶ್ವರನ ದೇವಸ್ಥಾನ ಜನಪ್ರಸಿದ್ಧವಾಗಿರುವಂತೆಯೇ ಏಳು ಕೊಂಡಗಳ ಸ್ವಾಮಿಯೆನಿಸಿಕೊಂಡಿರುವ ವೆಂಕಟೇಶ್ವರನ ದೇವಸ್ಥಾನವೂ ಇದೆ.
ರಾಜರು ಗಿರಿಗಳ ಮೇಲೆ ಕೋಟೆಗಳನ್ನು ರಚಿಸಿಕೊಂಡು ಉತ್ತಮ ರಕ್ಷಣಾವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಚಿತ್ರದುರ್ಗದ ಕೋಟೆ, ಟಿಪ್ಪುವಿನ ಸಾವನದುರ್ಗದ ಕೋಟೆ, ಇವುಗಳಲ್ಲಿ ಕೆಲವು. ಕಾಡುಗಳಿಂದ ಮುಚ್ಚಲ್ಪಟ್ಟ ಗಿರಿ-ಬೆಟ್ಟಗಳಲ್ಲಿದ್ದು ನಡೆಸುವ ಗೆರಿಲ್ಲಾ ಯುದ್ಧತಂತ್ರವು ಭಾರತದ ಬಹಳೆಡೆ ಪ್ರಚಲಿತವಾಗಿತ್ತು. ಅಕ್ಬರನ ವಿರುದ್ಧ ರಾಣಾ ಪ್ರತಾಪನ ಮತ್ತು ಟಿಪ್ಪುವಿನ ವಿರುದ್ಧ ಕೊಡಗಿನ ವೀರರ ಕದನಗಳು ಕೆಲವು ಉದಾಹರಣೆಗಳು.
[[ಚಿತ್ರ:DirkvdM orosi hill plantation.jpg|thumb|right|ಬೆಟ್ಟಗಳಲ್ಲಿ ತೋಟಗಳು]]
೨೭ ನೇ ಸಾಲು:
ಕಾಫಿ, ಚಹಾ, ಏಲಕ್ಕಿ, ಕರಿಮೆಣಸು, ಮೊದಲಾದವುಗಳನ್ನು ಬೆಟ್ಟ-ಗುಡ್ಡಗಳಲ್ಲಿ ಬೆಳೆಸುತ್ತಾರೆ. ಕಾಫಿಯನ್ನು ಅರಬ್ಬಿನಿಂದ ಭಾರತಕ್ಕೆ ಮೊದಲು ತಂದು ಚಿಕ್ಕಮಗಳೂರಿನ ಬೆಟ್ಟಗಳಲ್ಲಿ ಬಳಿಕ ಕೊಡಗು, ಕೇರಳಗಳಲ್ಲಿ ಬೆಳೆಸಿದರು. ಚಹಾವನ್ನು ಚೀನಾದಿಂದ ತಂದು ಅಸ್ಸಾಮಿನಲ್ಲೂ, ನೀಲಗಿರಿಬೆಟ್ಟಗಳಲ್ಲೂ ಬೆಳೆಸಿದರು.
ಕಡಿದಾದ ಬೆಟ್ಟಗಳನ್ನೇರುವ ಚಾರಣವು ಇತ್ತೀಚೆಗಿನ ಒಂದು ಜನಪ್ರಿಯ ಸಾಹಸ. ಮಲೆಗಳ ಸುತ್ತು-ಬಳಸಿನ ರಸ್ತೆಗಳಲ್ಲಿ ಓಟದ ಸ್ಪರ್ಧೆ, ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ಓಡಿಸುವದು ಇನ್ನೊಂದು ಬಗೆಯ ಪೈಪೋಟಿ. ಗಿರಿ-ಕಂದರಗಳಲ್ಲಿರುವ ಮೈದಾನಗಳಲ್ಲಿ ನಡೆಯುವ ಗಾಲ್ಫ್ ಆಟಗಳೂ ವಿಶೇಷ ಸ್ಪರ್ಧಾತ್ಮಕವಾಗಿರುತ್ತವೆ.
|