[[Imageಚಿತ್ರ:Krishna meets parents.jpg|thumb|200px|right|[[ರಾಜ ರವಿವರ್ಮ]] ಅವರಿಂದ [[ಕೃಷ್ಣ]] ಮತ್ತು [[ಬಲರಾಮ]] ತಮ್ಮ ತಂದೆ [[ವಸುದೇವ]] ಮತ್ತು ತಾಯಿ ದೇವಕಿಯನ್ನು ಭೇಟಿಮಾಡುವ ದೃಷ್ಯದ ಚಿತ್ರೀಕರಣ]]
[[ಹಿಂದೂ ಪುರಾಣ]]ದಲ್ಲಿ '''ದೇವಕಿ''' [[ಉಗ್ರಸೇನ]] ಮಹಾರಾಜನ ತಮ್ಮನಾದ ದೇವಕನ ಮಗಳು. ಉಗ್ರಸೇನನ ಮಗ [[ಕಂಸ]]. ಉಗ್ರಸೇನ [[ಮಥುರೆ]]ಯ ರಾಜ್ಯದ ಸೇನಾಪತಿಯಾಗಿದ್ದ. ಮಥುರೆಯ ಮಹರಾಜನು ಶಾಪಗ್ರಸ್ತನಾಗಿ ಕಾಡಿಗೆ ಹೋಗುವಾಗ ಅವನ ಮಗನಾದ [[ವಸುದೇವ]]ನನ್ನು ಉಗ್ರಸೇನನ ಸುಪ್ರರ್ದಿಯಲ್ಲಿಟ್ಟು ಉಗ್ರಸೇನನಿಗೆ ಪಟ್ಟ ಕಟ್ಟುತ್ತಾನೆ. ಉಗ್ರಸೇನ ದೇವಕಿಯನ್ನು ವಸುದೇವನಿಗೆ ಕೊಟ್ಟು ಮದುವೆ ಮಾಡುತ್ತಾನೆ. ವಸುದೇವ ಮತ್ತು ದೇವಕಿಯ ಎಂಟನೇ ಮಗನೇ [[ಕೃಷ್ಣ]]. ವಸುದೇವ ಮತ್ತು ದೇವಕಿಯ ಮದುವೆ ಸಂದರ್ಭದಲ್ಲಿ ಆದ ಅಶರೀರ ವಾಣಿಯಲ್ಲಿ ಕಂಸನು ದೇವಕಿಯ ಅಷ್ಟಮ ಗರ್ಭದಲ್ಲಿ ಹುಟ್ಟುವ ಸಂತಾನದಿಂದ ಕೊಲ್ಲಲ್ಪಡುತ್ತಾನೆ ಎಂದು ಹೇಳುತ್ತದೆ. ಇದರಿಂದ ಕೋಪಗೊಂಡ ಕಂಸನು ವಸುದೇವ ಮತ್ತು ದೇವಕಿಯರನ್ನು ಬಂಧಿಸಿ ಕರಾಗೃಹಲ್ಲಿರಿಸುತ್ತಾನೆ.