ನಾವಲ್ ಹರ್ಮುಸ್ ಜಿ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೩ ನೇ ಸಾಲು:
'[[ಜಮ್ಸೆಟ್ಜಿ ನುಝರ್ವಾನ್ಜಿ ಟಾಟ]]' ರವರ ನೇರ ವಂಶಾವಳಿಯಲ್ಲಿ ಬರದಿದ್ದರೂ ದೂರದಿಂದ ಸಂಬಂಧಿಗಳೆಂದು ಹೇಳಬಹುದು. ಟಾಟಾ ಸಾಮ್ರಾಜ್ಯದಲ್ಲಿ ಅವರು ಪಾದಾರ್ಪಣೆಮಾಡುವ ಯೋಗ ಅವರಿಗೆ ದೈವವಶದಿಂದ ದೊರೆಯಿತು. ಆದರೆ ನಾವಲ್ ಆ ಅವಕಾಶಗಳನ್ನು ದೇವರವರವೆಂದೇ ಪರಿಗಣಿಸಿ, ತಮ್ಮ ಶುದ್ಧಮನಸ್ಸಿನಿಂದ 'ಟಾಟಾ ಕೈಗಾರಿಕಾ ಸಾಮ್ರಾಜ್ಯ'ದ ಏಳಿಗೆಗಾಗಿ ತಮ್ಮ ತನು-ಮನಗಳನ್ನು ಮುಡಿಪಾಗಿಟ್ಟರು.
==ಜನನ, ಬಾಲ್ಯ, ವಿದ್ಯಾಭ್ಯಾಸ==
'[[ನಾವಲ್ ಹರ್ಮುಸ್ ಜಿ ಟಾಟಾ]]' ರವರ ಬಾಲ್ಯದ ೪ ನೇ ವರ್ಷದಲ್ಲೇ ತಂದೆಯವರ ವಿಯೋಗವಾಯಿತು. ಹತ್ತಿರದ ಸಂಬಂಧಿಗಳ ನೆರವಿನಿಂದ, [[ನವಸಾರಿಪಟ್ಟಣ]]ಕ್ಕೆ ಹೋದರು. ಕೊನೆಗೆ [[ಸೂರತ್]] ಪಟ್ಟಣದಲ್ಲಿ ನೆಲೆಯೂರಬೇಕಾಯಿತು. ತಾಯಿಯವರ ಹೊಲಿಗೆ, ಹಾಗೂ ಕಸೂತಿಕೆಲಸಗಳಲ್ಲಿ ದೊರೆತ ಹಣದಿಂದ ಜೀವನ ನಿರ್ವಹಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಆ ಪರಿವಾರಕ್ಕೆ ದಿಕ್ಕಾದವರು, [[ಸರ್ ದೊರಾಬ್ ಟಾಟಾ]]ರವರು. [[ಜೆ.ಎನ್.ಪೆಟಿಟ್ ಪಾರ್ಸಿ ಅನಾಥಾಲಯ]]ದಲ್ಲಿ, ಭರ್ತಿಮಾಡಿದರು. ಸನ್, ೧೯೧೮ ರಲ್ಲಿ, [[ಸರ್. ರತನ್ ಟಾಟಾ]]ರವರು, ತಮ್ಮ ೪೭ ನೇ ವಯಸ್ಸಿನಲ್ಲಿ ಅಚಾನಕ್ [[ಇಂಗ್ಲೆಂಡ್]] ನಲ್ಲಿ ನಿಧನರಾದರು. ಅವರ 'ಅಂತ್ಯಕ್ರಿಯೆ'ಗಳನ್ನು ಮಾಡುವ ಗಂಡುಸಂತಾನವಿಲ್ಲದೆ,[[ಲೇಡಿ ನವಾಜ್ ಬಾಯಿ]]ಯವರು, [[ನಾವಲ್ ಹರ್ಮುಸ್ ಜಿ]] ಯವರನ್ನು ದತ್ತುತೆಗೆದುಕೊಂಡರು. ಬೊಂಬಾಯಿ ವಿಶ್ವವಿದ್ಯಾಲಯದಿಂದ ಎಕೊನಾಮಿಕ್ಸ್ ನಲ್ಲಿ ಪದವಿಗಳಿಸಿದ ಬಳಿಕ ಇಂಗ್ಲೆಂಡ್ ಗೆ ಹೋಗಿ ಅಕೌಂಟಿಂಗ್ ನಲ್ಲಿ ಪ್ರಶಿಕ್ಷಣ ಪಡೆದರು. ಸನ್, ೧೯೩೦ ರಲ್ಲಿ '[[ಟಾಟ ಸಂಸ್ಥೆಗೆ ಪಾದಾರ್ಪಣೆ]]'ಮಾಡಿದರು. 'ಕಾಗದ-ಪತ್ರ ವಿಲೇವಾರಿ ಕಾರಕೂನ'ನಾಗಿ, ೧೩೦ ರೂಪಾಯಿಗಳ ವೇತತದಿಂದ ಪ್ರಾರಂಭಿಸಿದ
* ಸನ್ ೧೯೬೮ ರಲ್ಲಿ, ’ಸರ್ ಜೆಹಂಗೀರ್ ಮೆಡಲ್ ಫಾರ್ ಇನ್ ಡಸ್ಟ್ರಿ ಯಲ್ ಪೀಸ್’
* ಸನ್, ೧೯೬೯ ರಲ್ಲಿ ಭಾರತಸರಕಾರದ ’ಪದ್ಮಭೂಷಣ ಪ್ರಶಸ್ತಿ’
==ಕಾರ್ಮಿಕರ ಹಿತಾಸಕ್ತಿಗಳನ್ನು ಬಲ್ಲ ಉದ್ಯೋಗಪತಿ==
=='ನಾವಲ್ ಹರ್ಮುಸ್ ಜಿ ಟಾಟಾ'ರವರ ಆಸಕ್ತಿಗಳು==
'ಜ್ಯೋತಿಷ್ಯ ಶಾಸ್ತ್ರ'ದಲ್ಲಿ ಒಲವು, ರಾಜಕೀಯದಲ್ಲಿ ಅತ್ಯಂತ ಆಸಕ್ತಿ,ಶಾಖಾಹಾರಿ, ವ್ಯವಸ್ಥಿತ ಶಿಸ್ತಿನ ಜೀವನ. ವಿಶ್ವದ ಆರ್ಥಿಕ-ಸಾಮಾಜಿಕ, ಕಾರ್ಮಿಕರ ಸಮಸ್ಯೆಗಳಲ್ಲಿ ತೊಡಗಿದ್ದಾಗ್ಯೂ, ಎಲ್ಲರೊಡನೆಯೂ ನಗುನಗುತ್ತ ತಾಳ್ಮೆಯಿಂದ ವರ್ತಿಸುತ್ತಿದ್ದರು. ಟಾಟ ವಾಣಿಜ್ಯ ವ್ಯಾಪಾರ, ಇಂಜಿನಿಯರಿಂಗ್, ಚೆಮಿಕಲ್ಸ್, ಮತ್ತು ಗ್ರಾಹಕರ ಆವಶ್ಯಕತೆಯ ದಿನನಿತ್ಯದ ಸಾಮಾನುಗಳ ತಯಾರಿಕೆ, ಸಂಪರ್ಕ, ದೂರವಾಣಿ, ವಲಯಗಳಲ್ಲಿ ಹೆಚ್ಚು ಪ್ರಗತಿ ಸಾಧಿಸಿದಂತೆ, ಕಾರ್ಮಿಕರ ಸಮಸ್ಯೆಗಳೂ ಹೆಚ್ಚಾಗಿದ್ದವು. ನಾವಲ್ ಅವಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರು. ಒಬ್ಬ ಅಸಹಾಯಕ, ಹಾಗೂ ನಿರ್ಗತಿಕನಾಬೆಳೆದು ಬಂದು ವಿಧಿಯ ಪವಾಡದಿಂದ ಹಂತ ಹಂತವಾಗಿ ಪ್ರಗತಿಯ ಪಥವೇರಿದ ವಾವಲ್ ಹರ್ಮುಸ್ ಟಾಟರವರು, ಜೀವನದ ಕಟು ಸತ್ಯಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ’[[ನಾನು ಮೊದಲು ಭಾರತೀಯ ನಂತರ, ನಂತರ ಒಬ್ಬ ಉದ್ಯೋಗಪತಿ ಎನ್ನುತ್ತಿದ್ದರು]]'. ಭಾರತ ದೇಶದ ಭ್ಯವ್ಯ ಪರಂಪರೆ, ಹಾಗೂ ಸಂಸ್ಕೃತಿಗಳನ್ನು ಆಳವಾಗಿ ಪ್ರೀತಿಸಿ, ಗೌರವಿಸುತ್ತಿದ್ದರು.
==ಮರಣ==
'ನಾವಲ್ ಟಾಟ ರವರು, ಮೇ, ೧೯೮೯ ರಲ್ಲಿ, ದೈವಧೀನರಾದರು.
|