ಪಿ. ಸುಶೀಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
 
 
'''ಪಿ.ಸುಶೀಲ''' ಅವರು ಆಂದ್ರಪ್ರದೇಶದ [[ವಿಜಯ ನಗರಂ]] ಎಂಬಲ್ಲಿ [[೧೯೩೫ ನವೆಂಬರ್ ೧೩ ]]ರಲ್ಲಿರಂದು ಜನಿಸಿದರು.
 
ಇವರು [[ದಕ್ಷಿಣ ಭಾರತ]]ದ ಪ್ರಸಿದ್ಧ ಹಿನ್ನಲೆ ಗಾಯಕಿಯರಲ್ಲಿ ಒಬ್ಬರು. [[ಕನ್ನಡ]], [[ತಮಿಳು]], [[ತೆಲುಗು]], [[ಮಲೆಯಾಳಂ]] ಭಾಷೆಗಳಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ.
 
ದಕ್ಷಿಣ ಭಾರತದ ಲತಾ ಮಂಗೇಶ್ಕರ್ ಎಂದೇ ಪ್ರಸಿದ್ದರಾದ ಇವರು [[ದಕ್ಷಿಣ ಭಾರತ]]ದ ಪ್ರಸಿದ್ಧ ಹಿನ್ನಲೆ ಗಾಯಕಿಯರಲ್ಲಿ ಒಬ್ಬರು. [[ಕನ್ನಡ]], [[ತಮಿಳು]], [[ತೆಲುಗು]], [[ಮಲೆಯಾಳಂ]] ಭಾಷೆಗಳಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ.
ತಕ್ಕ ಮಟ್ಟಿನ ಆಸ್ತಿವಂತ ಕುಟುಂಬದವರಾದ ತಂದೆ ಮುಕುಂದರಾವ್ ಪ್ರಸಿದ್ದ ಕ್ರಿಮಿನಲ್ ಲಾಯರ್.ತಾಯಿ ಶೇಷಮ್ಮನವರಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿಯಿತ್ತು.ಇವರ ಭಾಗದಿಂದಲೇ ಪ್ರಸಿದ್ದ ಗಾಯಕರಾದ ಘಂಟಸಾಲ ಮತ್ತು ದ್ವಾರಂ ವೆಂಕಟಸ್ವಾಮಿ ನಾಯ್ಡು ಬಾಲ್ಯದ ಆದರ್ಶವಾಗಿದ್ದರು.ಬಾಲ್ಯದಿಂದಲೂ ಹೆತ್ತವರಿಗೆ ಮಗಳು ಎಂ.ಎಸ್.ಸುಬ್ಬುಲಕ್ಷ್ಮಿಯಂತೆ ಶ್ರೇಷ್ಠ ಶಾಸ್ತ್ರೀಯ ಗಾಯಕಿಯಾಗಬೇಕು ಎಂಬ ಆಸೆ.ಮ್ಯೂಸಿಕ್ ಡಿಪ್ಲೋಮಾವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಪಿ.ಸುಶೀಲ ೧೯೫೧ ರಲ್ಲಿ ಮದ್ರಾಸಿನಲ್ಲಿ ಮಾತ್ರವಿದ್ದ ಸಂಗೀತ ವಿದ್ವಾನ್ ಪರೀಕ್ಷೆಗೆ ಅಧ್ಯಯನದಲ್ಲಿರುವಾಗಲೇ ಆಗಾಗ ಆಕಾಶವಾಣಿಗೆ ಕಾರ್ಯಕ್ರಮ ನೀಡುತ್ತಿದ್ದರು.ಆಗ ಇವರ ಪ್ರತಿಭೆಯನ್ನು ಗುರುತಿಸಿದ ಖ್ಯಾತ ಸಂಗೀತ ನಿರ್ದೇಶಕ ಪೆಂಡ್ಯಾಲ ನಾಗೇಶ್ವರ ರಾವ್ "ಪೆಟ್ರ ತಾಳಿ " ತಮಿಳು ಸಿನಿಮಾದಲ್ಲಿ ಹಾಡಿಸಿದರು.ಎ.ಎಂ. ರಾಜಾ ಅವರ ಜೊತೆಗಿನ ಯುಗಳಗೀತೆ.ಅಲ್ಲಿಂದ ಮುಂದೆ ಪಿ.ಸುಶೀಲ ಹಿಂತಿರುಗಿ ನೋಡಲಿಲ್ಲ ಇದ್ದ ಎಲ್ಲ ಅವಕಾಶಗಳನ್ನು ಬಳಸಿಕೊಂಡು ನಲವತ್ತು ಸಾವಿರ ಹಾಡುಗಳ ಒಡತಿಯಾದರು.ಸಂಗೀತ ಪ್ರೇಮಿಯಾದ ಪತಿ ಮೋಹನರಾವ್ ಬೆಂಬಲದಿಂದಲೇ ಇಷ್ಟೊಂದು ಹಾಡುಗಳನ್ನೂ ಹಾಡಿದರು.ಇವರ ಒಬ್ಬನೆ ಮಗನ ಹೆಸರು ಜಯಕೃಷ್ಣ, ಸೊಸೆ ಸಂಧ್ಯಾ ಸಂಗೀತ ಪ್ರೇಮಿ ಮತ್ತು ಸ್ವತಹ ಹಿನ್ನೆಲೆ ಗಾಯಕಿ.ಕನ್ನಡದಲ್ಲಿ ಮೊದಲು ಹಾಡಿದ ಚಿತ್ರ ೧೯೫೨ರಲ್ಲಿ ತೆರೆ ಕಂಡ "ಮಾಡಿದ್ದುಣ್ಣೋ ಮಾರಾಯ",ಇದರ ಹಾಡುಗಳು ಪ್ರಸಿದ್ದವಾಗಲಿಲ್ಲವಾದರೂ ನಂತರ ಬಂದ "ರತ್ನಗಿರಿ ರಹಸ್ಯ"ದ "ಅಮರಾ ಮಧುರಾ ಪ್ರೇಮ.." ಗೀತೆ ಸಾಕಷ್ಟು ಪ್ರಸಿದ್ದವಾಯಿತು,೬೦-೭೦ರ ದಶಕದ ಹಲವಾರು ಸುಂದರ ಸುಮಧುರ ಕನ್ನಡ ಗೀತೆಗಳನ್ನು ಹಾಡಿದ ಪಿ.ಸುಶೀಲ ಇವರಿಗೆ ಐದು ರಾಷ್ಟ್ರ ಪ್ರಶಸ್ತಿ ಸೇರಿದಂತೆ ಭಾರತ ಸರಕಾರದ ಉನ್ನತ ನಾಗರೀಕ ಗೌರವ "ಪದ್ಮಭೂಷಣ" ಸಿಕ್ಕಿದೆ.ಎಂ.ಎಸ್.ವಿಶ್ವನಾಥ್ ರಿಂದ ಹಿಡಿದು ಎ.ಆರ್.ರೆಹಮಾನ್ ರವರೆಗೆ ಎಲ್ಲಾ ತಲೆಮಾರಿನ ಸಂಗೀತ ನಿರ್ದೇಶಕರ ಗೀತೆಗಳನ್ನು ಹಾಡಿದ ಅನುಭವ ಈ ಮೇರು ಗಾಯಕಿಗಿದೆ.ಲತಾ ಮಂಗೇಶ್ಕರ್ ಅಭಿಮಾನಿಯಾದ ಪಿ.ಸುಶೀಲ ಮೊದಲ ಸಲ ರಾಷ್ಟ್ರ ಪ್ರಶಸ್ತಿ ಪಡೆಯಲು ದೆಹಲಿಗೆ ತೆರಳಿದಾಗ ಉಂಟಾದ ಪರಿಚಯ ಮುಂದೆ ಅವರ ಕುಟುಂಬದೊಂದಿಗೂ ಆತ್ಮೀಯತೆ ಬೆಳೆಯಿತು. ಇಂದಿಗೂ ಪಿ.ಸುಶೀಲರನ್ನು "ದೀದಿ" ಎಂದೇ ಕರೆಯುತ್ತೀದ್ದಾರೆ.ಇನೂರ ಐವತ್ತಕ್ಕೂ ಮಿಕ್ಕಿ ಸನ್ಮಾನ ಲಭಿಸಿದೆ. ೨೦೧೦ ನವೆಂಬರ್ ೧೩ ರಂದು ತಮ್ಮ ೭೫ನೇ ಜನ್ಮ ದಿನ ಆಚರಿಸಿದ ಪಿ.ಸುಶೀಲರ ನೂರು ವರುಷ ಬಾಳಲಿ ಎಂದು ಹಾರೈಸೋಣ.ನಮನ
 
==ಪಿ.ಸುಶೀಲ ಗಾಯನದಲ್ಲಿನ ಕನ್ನಡ ಚಲನಚಿತ್ರಗಳು==
೨೦ ನೇ ಸಾಲು:
* [[ಅಮರಶಿಲ್ಪಿ ಜಕಣಾಚಾರಿ]]
* [[ಎಡಕಲ್ಲು ಗುಡ್ಡದ ಮೇಲೆ]]
ಇವರು ತಮ್ಮ ಸ್ವಂತ ವೆಬ್ಸೈಟನ್ನು ಹೊಂದಿದ್ದಾರೆ http://psusheela.com/
 
 
 
"https://kn.wikipedia.org/wiki/ಪಿ._ಸುಶೀಲ" ಇಂದ ಪಡೆಯಲ್ಪಟ್ಟಿದೆ