ಅಪರ್ಣಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವರ್ಗ, ವಿಕೀಕರಣ
No edit summary
೧ ನೇ ಸಾಲು:
{{ದ್ವಂದ್ವ|ಈ ಲೇಖನ ಕನ್ನಡ ನಟಿ ಅಪರ್ಣಾ ಅವರ ಬಗ್ಗೆ. ಅಪರ್ಣ ಹೆಸರು [[ಪಾರ್ವತಿ]]ಗೂ ಅನ್ವಯಿಸುತ್ತದೆ.}}
ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿರುವ '''ಅಪರ್ಣಾ''' [[ಆಕಾಶವಾಣಿ]] ಮತ್ತು ಕಿರುತೆರೆಯ ಕಲಾವಿದೆ. [[ಕಣಗಾಲ್ ಪುಟ್ಟಣ್ಣ]]ನವರ ‘[[ಮಸಣದ ಹೂವು]]’ ಚಿತ್ರದಿಂದ ಬೆಳಕಿಗೆ ಬಂದವರು. [[ಕನ್ನಡ ದೂರದರ್ಶನ]]ದ ಎಳವೆಯ ದಿವಸಗಳಿಂದ ಈ ತನಕವೂ ಕಾರ್ಯಕ್ರಮಗಳನ್ನು ನಿರೂಪಿಸುತ್ತ ಬೆಳೆದವರು, ಕಿರುತೆರೆಯನ್ನು ಬೆಳೆಸಿದವರು. ಈವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ‘ಟೀವಿ’ಯೇತರ ದೇಖಾವೆ(ಷೋ)ಗಳನ್ನು ನಿರ್ವಹಿಸಿರುವವರು. ೨೦೦೪ರಿಂದ ಮತ್ತೆ ಅಭಿನಯದತ್ತ ಗಮನ ಹರಿಸಿ, ಜನಪ್ರಿಯ ಧಾರಾವಾಹಿ ‘ಮುಕ್ತ’ದ ಮುಖೇನ ಶೀಲಾ ಪ್ರಸಾದ್ ಪಾತ್ರವಾಗಿ ಮನೆ ಮಾತಾದವರು. ‘ಪ್ರೀತಿಯಿಲ್ಲದ ಮೇಲೆ’ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಗುರುತಿಸಿಕೊಂಡವರು. ಸದ್ಯಕ್ಕೆ ಝೀ-ವಾಹಿನಿಯ ‘ಜೋಗುಳ’ ಸರಣಿಯಲ್ಲಿ ಪ್ರಧಾನಭೂಮಿಕೆಯಲ್ಲಿದ್ದಾರೆ. ಕನ್ನಡಪ್ರಭ ಸಾಪ್ತಾಹಿಕದ ‘ಸಖೀಗೀತ’ದ ಅಂಕಣಕಾರ್ತಿ. ‘ಪ್ರೀತಿಯಿಲ್ಲದ ಮೇಲೆ’ಯ ಪಲ್ಲವಿಯ ಪಾತ್ರಕ್ಕೆ ಶ್ರೇಷ್ಠನಟಿ ಪ್ರಶಸ್ತಿ, ನಿರೂಪಣೆಗಾಗಿ ಝೀ-ವಾಹಿನಿಯಿಂದ ಅತ್ಯುತ್ತಮ ಪ್ರಶಸ್ತಿ, ಕಿರುತೆರೆಯ ಮಾಧ್ಯಮದ ‘ಈವರೆಗಿನ’ ಕೆಲಸಕ್ಕೆ ಸರ್ವೋಚ್ಛ ಪ್ರಶಸ್ತಿಯನ್ನು ಪಡೆದಿದ್ದಾರೆ.
೨೦೦೫ರಲ್ಲಿ ಇವರು ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ.ಅಪರ್ಣ ಅವರ ತಂದೆ ಕೆ.ಎಸ್‌.ನಾರಾಯಣಸ್ವಾಮಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು.ನಮನ
 
[[ವರ್ಗ:ಕಿರುತೆರೆ ನಟರು]]
"https://kn.wikipedia.org/wiki/ಅಪರ್ಣಾ" ಇಂದ ಪಡೆಯಲ್ಪಟ್ಟಿದೆ