ಸುಬ್ರಹ್ಮಣ್ಯ ಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
'''ಕಾರ್ತಿಕೇಯ'''ನು ([[ತಮಿಳು|ತಮಿಳಿನಲ್ಲಿ]] '''ಮುರುಗನ್''') [[ತಮಿಳು]] ಹಿಂದೂಗಳಲ್ಲಿ ಜನಪ್ರಿಯನಾಗಿರುವ ಒಬ್ಬ [[ಹಿಂದೂ]] [[ದೇವತೆ]], ಮತ್ತು ಪ್ರಮುಖವಾಗಿ ತಮಿಳು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಪೂಜಿಸಲ್ಪಡುತ್ತಾನೆ, ವಿಶೇಷವಾಗಿ [[ದಕ್ಷಿಣ ಭಾರತ]], [[ಸಿಂಗಾಪೂರ್]], [[ಶ್ರೀಲಂಕಾ]], [[ಮಲೇಷ್ಯಾ]] ಹಾಗೂ [[ಮಾರೀಷಸ್]]‌ಗಳಲ್ಲಿ. ಆದರೆ [[ಶ್ರೀಲಂಕಾ]]ದಲ್ಲಿ, [[ಹಿಂದೂ]]ಗಳು ಮತ್ತು [[ಬೌದ್ಧ]] ಧರ್ಮೀಯರು ಇಬ್ಬರೂ ಕಾರ್ತಿಕೇಯನಿಗೆ ಮುಡುಪಾಗಿರುವ ಮತ್ತು ದೇಶದ ದಕ್ಷಿಣದಲ್ಲಿರುವ ಒಂದು ಅತ್ಯಂತ ಪವಿತ್ರ ಬೌದ್ಧ ಮತ್ತು ಹಿಂದೂ ಕ್ಷೇತ್ರವಾದ [[ಕತರಗಾಮಾ]] ದೇವಸ್ಥಾನವನ್ನು ಪೂಜ್ಯಭಾವದಿಂದ ಕಾಣುತ್ತಾರೆ. ಹಾಗೆಯೆ [[ಮಲೇಷ್ಯಾ]]ದ ಪಿನಾಂಗ್, ಕ್ವಾಲ ಲುಂಪೂರ್‌ನ ಚೀನೀ ಜನರೂ ಸಹ ಮುರುಗನ್‌ನನ್ನು [[ತಾಯ್ಪೂಸಾಮ್]]‌ನ ಅವಧಿಯಲ್ಲಿ ಪೂಜಿಸುತ್ತಾರೆ.
 
[[ವರ್ಗ:ಪ್ರಾದೇಶಿಕ ಹಿಂದೂ ದೇವತೆಗಳು]] ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯಕ್ಷೆತ್ರ ಕೂಡಾ ಬಹಳ ಪ್ರಸಿದ್ದಿ ಪಡೆದಿದೆ.
ಪ್ರಾಕೃತಿಕ ಸೌಂದರ್ಯದ ಅದ್ಭುತ ರಮಣೀಯ ದೃಶ್ಯದಿಂದ ಕೂಡಿದ ಸುಬ್ರಹ್ಮಣ್ಯ ಗ್ರಾಮವು ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಇಲ್ಲಿಯ ಪಾವಿತ್ರತೆಯು ಹಾಗೂ ದೇವ ಸಾನ್ನಿದ್ಯವು ಅತಿ ವಿರಳ ಸ್ಥಳಗಳಲ್ಲಿ ಮಾತ್ರ ಕಾಣಬಹುದಾಗಿದ್ದು,, ಹೆಮ್ಮೆ ಪಡುವಂತಾಗಿದೆ.
ಇಲ್ಲಿಯ ದೇವಸ್ಥಾನವು ಊರಿನ ಮಧ್ಯದಲ್ಲಿದ್ದು ನದಿ - ಕಾಡು - ಪರ್ವತಗಳಿಂದ ಅಮೃತವಾಗಿದ್ದು ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಶ್ಯದಂತಿದೆ. ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ .
ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ . ಭಕ್ತಾದಿಗಳು ಮುಖ್ಯ ಗೋಪುರವಿರುವ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಿ ಒಳಸುತ್ತನ್ನು ಪೂರ್ವ ಬಾಗಿಲಿನಿಂದ ಮುಂದುವರಿಸುತ್ತಾರೆ . ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ದೇವರ ಮೂರ್ತಿಯಿದೆ . ಅದರ ಮೇಲಿನ ಹಂತದಲ್ಲಿ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತೆ ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ . ಭಕ್ತಾದಿಗಳು ಒಳ ಸುತ್ತನ್ನು ಪ್ರವೇಶಿಸುವಾಗ ತಮ್ಮ ಶರ್ಟು , ಬನಿಯಾನುಗಳನ್ನು ತೆಗೆಯಬೇಕಾಗುವುದು .