ಗಿರೀಶ್ ಕಾಸರವಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
[[Image:Girishkasaravalli.jpg|right|thumb|ಗಿರೀಶ್ ಕಾಸರವಳ್ಳಿ]]
ಗಿರೀಶ್ ಕಾಸರವಳ್ಳಿ ಭಾರತದ ಅತ್ಯಂತ ಪ್ರತಿಭಾನಿತ್ವ [[ಚಲನಚಿತ್ರ]] ನಿರ್ದೇಶಕರಲ್ಲೊಬ್ಬರು. ಮೂಲತಃ [[ಕರ್ನಾಟಕ]] ರಾಜ್ಯದ ಶಿವಮೊಗ್ಗದವರಾದ ಗಿರೀಶ್ ಕಾಸರವಳ್ಳಿಯವರು ತಮ್ಮ ೨೭ ವರ್ಷಗಳ ವೃತ್ತಿ ಜೀವನದಲ್ಲಿ ಕೇವಲ ೧೦ [[ಕನ್ನಡ]] ಚಿತ್ರಗಳನ್ನು ಮಾತ್ರ ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗು ಅ೦ತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿದೆ. ಸಮಾನಾಂತರ ಚಿತ್ರ ಆಂದೋಲನದ ಬಾವುಟವನ್ನು ಹಾರಿಸುತ್ತ ಶ್ರೀಯುತರು ಜನಪ್ರಿಯ ಅಥವಾ ವಾಣಿಜ್ಯಮಯ ಚಿತ್ರಗಳಿಂದ ಮೊದಲಿನಿಂದಲು ದೂರ ಇದ್ದಾರೆ. ಪುಣೆಯಲ್ಲಿರುವ ಭಾರತೀಯ ದೂರದರ್ಶನ ಹಾಗು ಚಲನಚಿತ್ರ ಸಂಸ್ಥೆಯಿಂದ( [[ಎಫ್ ಟಿ ಐ ಐ)]] ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು ತಮ್ಮ ಪದವಿಪ್ರಾಪ್ತಿಗಾಗಿ ಮಾಡಿದ ಚಿತ್ರ ''ಅವಶೇಷ''ಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ, ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು. ೧೯೭೭ರಲ್ಲಿ ತಮ್ಮ ಪ್ರಥಮ ಚಲನಚಿತ್ರ ಘಟಶ್ರಾದ್ಧಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ [[ಸ್ವರ್ಣ ಕಮಲ]] ಪ್ರಶಸ್ತಿಯನ್ನು ಪಡೆದನಂತರ ಇನ್ನೂ ೩ ಸ್ವರ್ಣಕಮಲಗಳನ್ನು (ಒಟ್ಟಾರೆ ೪) ಪಡೆದು [[ಸತ್ಯಜಿತ್ ರೇ]]( ೬ ಸ್ವರ್ಣ ಕಮಲಗಳು) ನಂತರ ಅತಿ ಹೆಚ್ಚು ಸ್ವರ್ಣ ಕಮಲಗಳನ್ನು ಪಡೆದವರಾಗಿದ್ದಾರೆ. ಗಿರೀಶ್ ಕಾಸರವಳ್ಳಿಯವರ ಪತ್ನಿ [[ವೈಶಾಲಿ ಕಾಸರವಳ್ಳಿ]] ಕನ್ನಡ ಚಲನಚಿತ್ರ ನಟಿ ಹಾಗು [[ದೂರದರ್ಶನ]] ಧಾರಾವಾಹಿಗಳ ನಿರ್ದೇಶಕಿ. [[ನೀನಾಸಂ]] ರಂಗಶಾಲೆಯ ಸಂಸ್ಥಾಪಕ [[ಕೆ.ವಿ.ಸುಬ್ಬಣ್ಣ]] ಗಿರೀಶ್ ಕಾಸರವಳ್ಳಿಯವರ ಹತ್ತಿರದ ಸಂಬಂಧಿ.
 
==ಚಿತ್ರಗಳು==
"https://kn.wikipedia.org/wiki/ಗಿರೀಶ್_ಕಾಸರವಳ್ಳಿ" ಇಂದ ಪಡೆಯಲ್ಪಟ್ಟಿದೆ