ವೇದಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: es:Vedānta
ಚು robot Modifying: zh:吠檀多; cosmetic changes
೧ ನೇ ಸಾಲು:
{{Other uses|Vedanta (disambiguation)}}
[[Fileಚಿತ್ರ:Shri Aadi Gaudapadacharya.JPG|thumb|right|ಆದಿ ಗುರು ಶ್ರೀ ಗೌಡಪಾದಾಚಾರ್ಯ, ಶ್ರೀ ಶಂಕರಾಚಾರ್ಯರ ಹಿರಿಯ ಗುರುಗಳು ಜೊತೆಗೆ ಶ್ರೀ ಗೌಡಪಾದಾಚಾರ್ಯ ಮಠವನ್ನು ಸ್ಥಾಪಿಸಿದ್ದಾರೆಂದು ನಂಬಲಾಗಿದೆ ]]
[[Fileಚಿತ್ರ:Adi shankara.jpg|right|thumb|230 px|ಆದಿ ಶಂಕರಾಚಾರ್ಯರ ಪ್ರತಿಮೆ, ವೇದಾಂತದ ಅತ್ಯಂತ ಪ್ರಭಾವಶಾಲಿ ನಿರೂಪಕ.]]
 
{{Hindu philosophy}}
೮ ನೇ ಸಾಲು:
ವೇದಾಂತವು ಎರಡು ಸರಳ ಪ್ರತಿಪಾದನೆಗಳ ಮೇಲೆ ಆಧರಿಸಿದೆ:
 
# ಮಾನವ ಸ್ವಭಾವವು ದೈವದತ್ತವಾದುದು.
# ಮಾನವಸ್ವಭಾವವು ದೈವದತ್ತವಾದುದು ಎಂಬುದನ್ನು ಅರಿಯುವುದೇ ಮಾನವ ಜನ್ಮದ ಗುರಿಯಾಗಿರಬೇಕು.
 
ವೇದಾಂತದ ಗುರಿಯು ಆತ್ಮಸಾಕ್ಷಾತ್ಕಾರದ ಸ್ಥಿತಿ ಅಥವಾ [[ಬ್ರಹ್ಮಾಂಡದ ಪ್ರಜ್ಞೆ]] ಹೊಂದುವುದೇ ಆಗಿದೆ. ಐತಿಹಾಸಿಕವಾಗಿ ಹಾಗು ಇತ್ತೀಚಿಗೆ, ಈ ಸ್ಥಿತಿಯನ್ನು ಯಾರು ಬೇಕಾದರೂ ಅನುಭವಿಸಬಹುದೆಂದು ಭಾವಿಸಲಾಗಿದೆ, ಆದರೆ ಇದನ್ನು ಬರವಣಿಗೆಯ ಮೂಲಕ ಸಮರ್ಪಕವಾಗಿ ತಿಳಿಯಪಡಿಸಲು ಸಾಧ್ಯವಿಲ್ಲ.
 
ವೇದಾಂತವನ್ನು '''ಉತ್ತರಾ ಮೀಮಾಂಸ''' ಎಂದು ಸಹ ಕರೆಯಲಾಗುತ್ತದೆ. ಇದು 'ದ್ವಿತೀಯ ಶೋಧನೆ' ಅಥವಾ 'ಹೆಚ್ಚಿನ ಶೋಧನೆ' ಎಂಬ ಅರ್ಥವನ್ನು ನೀಡುತ್ತದೆ. ಇದನ್ನು ಹಲವು ಬಾರಿ ಪೂರ್ವ ಮೀಮಾಂಸ, 'ಹಿಂದಿನ ಶೋಧನೆ' ಯ ಜೊತೆಗೆ ತಾಳೆ ಹಾಕಲಾಗುತ್ತದೆ. ಪೂರ್ವ ಮೀಮಾಂಸವನ್ನು, ಸಾಧಾರಣವಾಗಿ [[ಮೀಮಾಂಸ]] ಎಂದು ಸರಳವಾಗಿ ಕರೆಯಲಾಗುತ್ತದೆ. ಇದು ಹೋಮ-ಹವನಾದಿಗಳಲ್ಲಿ ಪಠಿಸಲಾಗುವ ವೇದ [[ಮಂತ್ರ]] ಗಳ ಬಗ್ಗೆ (ವೇದಗಳಲ್ಲಿ ಬರುವ [[ಸಂಹಿತ]] ದ ಭಾಗ) ಹಾಗು [[ಬ್ರಾಹ್ಮಣ]] ರ ಬಗ್ಗೆ ವಿವರಣೆಯನ್ನು ನೀಡುತ್ತದೆ. ಈ ನಡುವೆ ವೇದಾಂತವು [[|{{IAST|Āraṇyaka}}]]ನ ಅಧಿಕೃತ ಉಪದೇಶಗಳ ಬಗ್ಗೆ ವಿವರವಾಗಿ ಪ್ರತಿಪಾದಿಸುತ್ತದೆ ("ಅರಣ್ಯಕೊಪನಿಶತ್ತು"), ಹಾಗು [[ ಉಪನಿಷತ್ತು]]ಗಳನ್ನು ಸುಮಾರು 9ನೇ ಶತಮಾನ BCಯಿಂದ ಇಂದಿನವರೆಗೂ ರಚಿಸಲಾಗುತ್ತಿದೆ.
 
== ಇತಿಹಾಸ ==
ಈ ಸಾಂಪ್ರದಾಯಿಕ ವೇದವು ಪ್ರತಿಪಾದಿಸಿದ ''ಕರ್ಮ ಕಾಂಡ'' ,<ref>ಘನಶ್ಯಾಮದಾಸ್ ಬಿರ್ಲಾ ''ಅಲೈವ್ ಇನ್ ಕೃಷ್ಣ: ಲಿವಿಂಗ್ ಮೇಮೊರೀಸ್ ಆಫ್ ದಿ ವೇದಿಕ್ ಕ್ವೆಸ್ಟ್ (ಪ್ಯಾಟ್ರನ್ಸ್ ಆಫ್ ವರ್ಲ್ಡ್ ಸ್ಪಿರಿಚ್ಯುಆಲಿಟಿ)'' (ನ್ಯೂಯಾರ್ಕ್: ಪ್ಯಾರಗನ್ ಹೌಸ್, 1986) ಪುಟ.37. ISBN 0-913757-65-9
 
೨೩ ನೇ ಸಾಲು:
[[ಸಂಸ್ಕೃತ]] ದ ಹಿಂದಿನ ಗ್ರಂಥಗಳಲ್ಲಿ 'ವೇದಾಂತ'ವನ್ನು ಉಪನಿಷತ್ತು ಗಳು ಎಂದು ಸೂಚಿಸಲಾಗುತ್ತಿತ್ತು. ಈ [[ಉಪನಿಷತ್ತುಗಳು]]ವೇದ ಗ್ರಂಥಗಳ ಅತ್ಯಂತ ಚಿಂತನೆಯ ಹಾಗು ತಾತ್ವಿಕ ಅಂಶಗಳನ್ನು ಒಳಗೊಂಡಿದೆ. ಆದಾಗ್ಯೂ, ಹಿಂದೂಧರ್ಮದ ಮಧ್ಯಯುಗದ ಅವಧಿಯಲ್ಲಿ, ವೇದಾಂತ ಎಂಬ ಪದವನ್ನು ಉಪನಿಷತ್ತುಗಳನ್ನು ವ್ಯಾಖ್ಯಾನಿಸುವ ತತ್ವಶಾಸ್ತ್ರದ ಪರಂಪರೆ ಎಂದು ಕರೆಯಲಾಗುತ್ತಿತ್ತು. ಸಾಂಪ್ರದಾಯಿಕ ವೇದಾಂತವು ಧಾರ್ಮಿಕ ಗ್ರಂಥದ ಪುರಾವೆ, ಅಥವಾ [[ಶಬ್ದ ಪ್ರಮಾಣ]] ವನ್ನು ಜ್ಞಾನದ ಅತ್ಯಂತ ವಿಶ್ವಾಸಾರ್ಹ ಮಾರ್ಗವೆಂದು ಪರಿಗಣಿಸುತ್ತದೆ. ಆದರೆ ಗ್ರಹಿಕೆ ಅಥವಾ [[ಪ್ರತ್ಯಕ್ಷಾ]], ಹಾಗು ತಾರ್ಕಿಕ ನಿರ್ಣಯ, ಅಥವಾ [[ಅನುಮಾನ]] ವನ್ನು ಅಮುಖ್ಯ ಅಂಶವೆಂದು ಪರಿಗಣಿಸಲಾಗುತ್ತದೆ (ಆದರೆ ಇದು ಕ್ರಮಬದ್ಧ).
 
=== ನಿಯಮಬದ್ಧತೆ ===
ವೇದಾಂತದ ಉದ್ದೇಶಗಳನ್ನು ವ್ಯವಸ್ಥಿತವಾಗಿ ಒಂದು ಸುಸಂಬದ್ಧ ಪ್ರಬಂಧವನ್ನಾಗಿ [[ಬಾದರಾಯಣ]] ತಮ್ಮ [[ವೇದಾಂತ ಸೂತ್ರ]] ದಲ್ಲಿ ಸುಮಾರು 200 BCEಯಲ್ಲಿ ರಚನೆ ಮಾಡಿದರು<ref>{{
Citation
೪೪ ನೇ ಸಾಲು:
ಆದಾಗ್ಯೂ, ಇಡೀ ವೇದಾಂತದಲ್ಲಿ ಸುಸಂಗತವಾದದ್ದೆಂದರೆ ಇದು ಧಾರ್ಮಿಕ ಕ್ರಿಯೆಯನ್ನು ಧ್ಯಾನದ ಮೂಲಕ ವ್ಯಕ್ತಿಯ ಸತ್ಯಶೋಧನೆಯ ಪರವಾಗಿ ಬಿಟ್ಟು ಬಿಡಬೇಕೆಂದು ಪ್ರೇರೇಪಣೆ ನೀಡುತ್ತದೆ. ನೈತಿಕ ಪ್ರೇಮ, ಜ್ಞಾನದ ಅರಿವಿನ ಪ್ರಭಾವಗಳಿಂದ ಶೋಧಕನಿಗೆ ಅನಂತ ಆನಂದವು ಕಾದಿರುತ್ತದೆ. ಹೆಚ್ಚುಕಡಿಮೆ ಅಸ್ತಿತ್ವದಲ್ಲಿರುವ ಹಿಂದೂಧರ್ಮದ ಎಲ್ಲ ಪಂಥಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವೇದಾಂತದ ಚಿಂತಕರು ಅಭಿವೃದ್ಧಿ ಪಡಿಸಿದ ಚಿಂತನಾ ವ್ಯವಸ್ಥೆಯ ಪ್ರಭಾವಕ್ಕೊಳಪಟ್ಟಿವೆ. ಹಿಂದೂ ಧರ್ಮವು ಬಹುಮಟ್ಟಿಗೆ ತನ್ನ ಅಸ್ತಿತ್ವಕ್ಕೆ ಕಾರಣವಾದ ಸುಸಂಬದ್ಧ ಹಾಗು ತಾರ್ಕಿಕವಾಗಿ ಮುಂದುವರಿದ ವೇದಾಂತದ ವ್ಯವಸ್ಥೆಗೆ ಋಣಿಯಾಗಿದೆ.
 
== ಆಧಾರ ಗ್ರಂಥಗಳು ==
ವೇದಾಂತದ ಎಲ್ಲ ರೂಪಗಳನ್ನು ಪ್ರಾಥಮಿಕವಾಗಿ [[ಉಪನಿಷತ್ತು]]ಗಳಿಂದ ತೆಗೆದುಕೊಳ್ಳಲಾಗಿದೆ. ಇದು ತತ್ವಶಾಸ್ತ್ರ ಹಾಗು ಬೋಧಕಾರ್ಹವಾದ [[ವೈದಿಕ]] ಗ್ರಂಥಗಳ ಒಂದು ಸಂಗ್ರಹ. ಉಪನಿಷತ್ತುಗಳು ವೇದಗಳ ವ್ಯಾಖ್ಯಾನಗಳು, ಅದರ ಭಾವಿಸಲ್ಪಟ್ಟ ಗುರಿ ಹಾಗು ಸಾರ{{Citation needed|April 2010|date=April 2010}}, ಈ ಪ್ರಕಾರ ವೇದಾಂತ ಅಥವಾ "ವೇದದ ಗುರಿ" ಎಂದು ಕರೆಯಲಾಗಿದೆ. ಇದನ್ನು ಎಲ್ಲ ವೇದಗಳ ತಳಹದಿಯ ಸಾರ ಎಂದು ಪರಿಗಣಿಸಲಾಗಿದೆ. ಇವುಗಳು ವೇದಾಂತದ ಬೆನ್ನೆಲುಬಾಗಿ ರೂಪಗೊಂಡರೂ, ವೈದಿಕ ಚಿಂತನೆಯ ಭಾಗಗಳು ಕೆಲವು ಹಿಂದಿನ [[ಅರಣ್ಯಕ]] ಗಳಿಂದ ಕೂಡ ಹುಟ್ಟಿಕೊಂಡಿದೆ.
 
ಉಪನಿಷತ್ತುಗಳಲ್ಲಿ ಕಂಡುಬಂದಂತಹ ಪ್ರಾಥಮಿಕ ತತ್ವ, ಒಂದು ಪರಮ ಸತ್ಯವನ್ನು [[ಬ್ರಹ್ಮನ್]] ಎಂದು ಕರೆಯಲಾಗಿದೆ. ಇದೇ ವೇದಾಂತದ ಪ್ರಮುಖ ಮೂಲತತ್ವ. ಉಪನಿಷತ್ತುಗಳನ್ನು ಆಧರಿಸಿದ [[ಬ್ರಹ್ಮ ಸೂತ್ರ]]ಗಳ ಗ್ರಂಥಕರ್ತ, [[ವ್ಯಾಸ]] ಋಷಿಗಳು ಈ ತತ್ವದ ಪ್ರಮುಖ ಪ್ರತಿಪಾದಕರು. [[ಬ್ರಹ್ಮನ್]] ನ ಕಲ್ಪನೆಯು - ಅನಂತ, ಸ್ವಯಂಭು, ಸರ್ವಾಂತರ್ಯಾಮಿ ಹಾಗು ಅಲೌಕಿಕ ಶ್ರೇಷ್ಠತೆ ಹಾಗು ಅಂತಿಮ ಸತ್ಯ ಇವೆಲ್ಲವೂ ಎಲ್ಲ ಜೀವಿಗಳ ಅತ್ಯುತ್ಕೃಷ್ಟ ತಳಹದಿಯಾಗಿದೆ - ಇದು ಹೆಚ್ಚಿನ ವೇದಾಂತ ಪರಂಪರೆಗಳಿಗೆ ಕೇಂದ್ರ ಬಿಂದು. [[ದೇವರು]] ಅಥವಾ [[ಈಶ್ವರ]]ಎಂಬ ಪರಿಕಲ್ಪನೆಯೂ ಸಹ ಇದೆ ಹಾಗು ವೇದಾಂತದ ಉಪ-ಪರಂಪರೆಗಳು ಪ್ರಮುಖವಾಗಿ ಹೇಗೆ ದೇವರ ಜೊತೆ ಬ್ರಹ್ಮನ್‌ನ ಗುರುತಿಸುತ್ತಾರೆ ಎಂಬುದರ ಮೇಲೆ ವ್ಯತ್ಯಾಸವನ್ನು ಹೊಂದಿರುತ್ತವೆ.
 
ಉಪನಿಷತ್ತುಗಳ ಸಾರಗಳು ಸಾಮಾನ್ಯವಾಗಿ ಗೂಢವಾದ ಭಾಷೆಯ ಆಸರೆಯನ್ನು ಹೊಂದಿರುತ್ತದೆ, ಇದು ಹಲವು ವಿಧದ ವ್ಯಾಖ್ಯಾನಗಳಿಗೆ ಮುಕ್ತವಾಗಿ ತೆರೆದುಕೊಂಡಿರುತ್ತದೆ. ಕಾಲಾನುಕ್ರಮದಲ್ಲಿ, ಹಲವಾರು ವಿದ್ವಾಂಸರು [[ ಉಪನಿಷತ್ತು]]ಗಳು ಹಾಗು ಇತರ ಗ್ರಂಥಗಳಾದ [[ ಬ್ರಹ್ಮ ಸೂತ್ರ]]ಗಳನ್ನು ತಮ್ಮ ತಿಳಿವಳಿಕೆಯಂತೆ ಹಾಗು ಕಾಲದ ಆಧಾರದ ಮೇಲೆ ವ್ಯಾಖ್ಯಾನಿಸಿದ್ದಾರೆ. ಈ ಆಧಾರ ಗ್ರಂಥಗಳಲ್ಲಿ ಒಟ್ಟು ಆರು ಪ್ರಮುಖ ವ್ಯಾಖ್ಯಾನಗಳಿವೆ. ಅದರಲ್ಲಿ, ಮೂರು (ಅದ್ವೈತ, ವಿಶಿಷ್ಟಾದ್ವೈತ ಹಾಗು ದ್ವೈತ) ವ್ಯಾಖ್ಯಾನಗಳು ಭಾರತ ಹಾಗು ಹೊರದೇಶಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಈ ವೇದಾಂತದ ಚಿಂತನೆಯ ಪರಂಪರೆಗಳನ್ನು [[ಶ್ರೀ ಆದಿ ಶಂಕರ,]] [[ಶ್ರೀ ರಾಮಾನುಜ]] ಹಾಗು [[ಶ್ರೀ ಮಧ್ವಾಚಾರ್ಯ]] ರು ಕ್ರಮವಾಗಿ ಸ್ಥಾಪನೆ ಮಾಡಿದ್ದಾರೆ.
ಆದಾಗ್ಯೂ, ಶಂಕರರಿಗೂ ಮುಂಚೆ ಬಂದ ಬೌದ್ಧ ಗ್ರಂಥಕರ್ತ, ಭವ್ಯ, ತಮ್ಮ ಮಧ್ಯಮಾಕಹೃದಯ ಕಾರಿಕ ದಲ್ಲಿ ವೇದಾಂತ ತತ್ವಶಾಸ್ತ್ರವನ್ನು "[[ಭೇಧಾಭೇದ]]" ಎಂದು ವಿವರಿಸಿರುವುದನ್ನು ಗಮನಿಸಬಹುದು. ಇತರ ವೇದಾಂತ ಪರಂಪರೆಯ ಪ್ರತಿಪಾದಕರೂ ಸಹ ತಮ್ಮ ಬರವಣಿಗೆಯನ್ನು ಹಾಗು ತಮ್ಮ ಚಿಂತನೆಯನ್ನು ಅಭಿವೃದ್ಧಿಪಡಿಸಿದರು. ಆದಾಗ್ಯೂ ಇವರ ಚಿಂತನೆಗಳು [[ಭಾರತ]]ದಲ್ಲಿ ಕೇವಲ ಸಣ್ಣ ಗುಂಪುಗಳ ಅನುಯಾಯಿಗಳ ವಲಯಗಳ ಹೊರಗೆ ಹೆಚ್ಚಿನ ವ್ಯಾಪಕತೆಯನ್ನು ಗಳಿಸಿಲ್ಲ.
 
೫೫ ನೇ ಸಾಲು:
ವಾಸ್ತವವಾಗಿ, ಇದನ್ನೇ ಸ್ವತಃ "ಉಪನಿಷತ್ತು" ಎಂದು ಕರೆಯಲಾಗುತ್ತದೆ ಹಾಗು ಈ ಪ್ರಕಾರವಾಗಿ ಎಲ್ಲ ಪ್ರಮುಖ ವೇದಾಂತದ ಗುರುಗಳು ( ಉದಾಹರಣೆಗೆ ಶಂಕರ, ರಾಮಾನುಜ, ಹಾಗು ಮಧ್ವಾಚಾರ್ಯ) ಖುದ್ದು ತಾವುಗಳೇ ವ್ಯಾಪಕವಾದ ವ್ಯಾಖ್ಯಾನಗಳನ್ನು ಉಪನಿಷತ್ತುಗಳು ಹಾಗು ಬ್ರಹ್ಮ ಸೂತ್ರಗಳ ಮೇಲೆ ಮಾತ್ರವಲ್ಲದೆ ಗೀತೆಯ ಮೇಲೂ ರಚಿಸಿದ್ದಾರೆ. ಈ ಪ್ರಕಾರವಾಗಿ, ಹಿಂದಿನ ಹಾಗು ಇಂದಿನ ವೇದಾಂತಿಗಳು, ವೇದಾಂತದ ಚಿಂತನೆ ಹಾಗು ಅಭ್ಯಾಸದ ಅಭಿವೃದ್ಧಿಗಾಗಿ ನಿಸ್ಸಂಶಯವಾಗಿ ಗೀತೆಗೆ ಸ್ಪಷ್ಟ ಮಹತ್ವ ನೀಡಿದ್ದಾರೆ.{{Citation needed|date=September 2007}}
 
== ವೇದಾಂತದ ಉಪ-ಪರಂಪರೆಗಳು ==
=== ಅದ್ವೈತ ವೇದಾಂತ ===
 
[[ಅದ್ವೈತ ವೇದಾಂತ]] ವನ್ನು [[ಆದಿ ಶಂಕರ]] ರು ಪ್ರತಿಪಾದಿಸಿದ್ದಾರೆ ಹಾಗು ಅವರ ಹಿರಿಯ ಗುರುಗಳಾದ [[ಗೌಡಪಾದ]]ರು ಇದನ್ನು [[ಅಜಾತಿವಾದ]] ಎಂದು ವಿವರಿಸುತ್ತಾರೆ. ವೇದಾಂತದ ಈ ಪರಂಪರೆಯಲ್ಲಿ, ಬ್ರಹ್ಮನ್ ಏಕಮೇವ ಸತ್ಯವಾಗಿದೆ, ಹಾಗು ಹೊರನೋಟಕ್ಕೆ ಕಾಣುವ ಜಗತ್ತು, ಕೇವಲ ಮಿಥ್ಯ. ಬ್ರಹ್ಮನ್ ಏಕಮೇವ ಸತ್ಯವಾದುದರಿಂದ, ಅದು ಯಾವುದೇ ರೀತಿಯ ಲಕ್ಷಣಗಳನ್ನು ಹೊಂದಿರುವುದಿಲ್ಲ. ಬ್ರಹ್ಮನ್ ನ ಭ್ರಾಮಕ ಶಕ್ತಿಯಾದ [[ಮಾಯಾ]] ಈ ಜಗತ್ತಿನ ಹುಟ್ಟಿಗೆ ಕಾರಣವಾಗಿದೆ. ಈ ಸತ್ಯದ ಬಗೆಗಿನ ಅಜ್ಞಾನವೇ ಜಗತ್ತಿನ ಎಲ್ಲ ಸಂಕಟಗಳಿಗೆ ಕಾರಣವಾಗಿದೆ ಅಲ್ಲದೆ ಬ್ರಹ್ಮನ್ ಬಗೆಗಿನ ಸಂಪೂರ್ಣ ಜ್ಞಾನದಿಂದ ವಿಮೋಚನೆಯನ್ನು ಹೊಂದಬಹುದಾಗಿದೆ. ಒಬ್ಬ ವ್ಯಕ್ತಿಯು ಬ್ರಹ್ಮನ್ ನನ್ನು ತನ್ನ ಮನಸ್ಸಿನ ಮೂಲಕ ಕಾಣಲು ಪ್ರಯತ್ನಿಸಿದರೆ, ಮಾಯೆಯ ಪ್ರಭಾವದಿಂದ, ಜಗತ್ತಿನಿಂದ ಹಾಗು ವ್ಯಕ್ತಿಯಿಂದ ಬೇರ್ಪಟ್ಟ ಬ್ರಹ್ಮನ್ ದೇವರ([[ಈಶ್ವರ]]) ರೂಪದಲ್ಲಿ ಕಂಡುಬರುತ್ತಾನೆ. ವಾಸ್ತವವಾಗಿ, ವೈಯುಕ್ತಿಕ ಆತ್ಮ ''ಜೀವಾತ್ಮನ್'' (ನೋಡಿ [[ಆತ್ಮನ್]]) ಹಾಗು ಬ್ರಹ್ಮನ್ ನಡುವೆ ಯಾವುದೇ ವ್ಯತ್ಯಾಸವು ಕಂಡುಬರುವುದಿಲ್ಲ. ಈ ಅಭಿನ್ನತೆಯ ಸತ್ಯವನ್ನು ಅರಿತರೆ ಅದೇ ವಿಮೋಚನೆಗೆ ಕಾರಣವಾಗುತ್ತದೆ ( ಅದೆಂದರೆ ಅ-ದ್ವೈತ, "ಅದ್ವೈತ").
೬೨ ನೇ ಸಾಲು:
ಈ ರೀತಿಯಾಗಿ, ವಿಮೋಚನೆಯ ಮಾರ್ಗವನ್ನು ಅಂತಿಮವಾಗಿ ಕೇವಲ ಜ್ಞಾನ ಸಂಪಾದನೆಯಿಂದ ಮಾತ್ರ ಪಡೆಯಲು ಸಾಧ್ಯ(''ಜ್ಞಾನ'' ).<ref name="Vedanta">[http://www.hindupedia.com/en/Vedanta ವೇದಾಂತ] ಹಿಂದೂಪೀಡಿಯಾನಲ್ಲಿ, ದಿ ಹಿಂದೂ ಎನ್ಸೈಕ್ಲೋಪೀಡಿಯಾ </ref>
 
=== ವಿಶಿಷ್ಟಾದ್ವೈತ ===
[[ವಿಶಿಷ್ಟಾದ್ವೈತ]] ವನ್ನು [[ರಾಮಾನುಜ]] ರು ಪ್ರತಿಪಾದಿಸುವುದರ ಜೊತೆಗೆ ''ಜೀವಾತ್ಮನ್'' [[ಬ್ರಹ್ಮನ್]] ನ ಒಂದು ಭಾಗ. ಹೀಗಾಗಿ ಇದು ಸದೃಶವಾಗಿದೆಯೇ ಹೊರತು ತದ್ರೂಪವಲ್ಲ. ಅದ್ವೈತದೊಂದಿಗಿನ ಪ್ರಮುಖ ವ್ಯತ್ಯಾಸವೆಂದರೆ, ವಿಶಿಷ್ಟಾದ್ವೈತದಲ್ಲಿ, [[ಬ್ರಹ್ಮನ್]] ಲಕ್ಷಣಗಳನ್ನು ಹೊಂದಿದ್ದಾನೆಂದು ಪ್ರತಿಪಾದಿಸಲಾಗಿದೆ. ಇದರಲ್ಲಿ ವೈಯುಕ್ತಿಕ ಪ್ರಜ್ಞೆಯ ಆತ್ಮಗಳು ಹಾಗು ಬೌತವಸ್ತು ಸೇರಿಕೊಂಡಿವೆ. [[ಬ್ರಹ್ಮನ್]],ಬೌತವಸ್ತು ಹಾಗು ವೈಯಕ್ತಿಕ ಆತ್ಮಗಳು ಭಿನ್ನವಾಗಿದ್ದರೂ, ಪರಸ್ಪರ ಬೇರ್ಪಡಿಸಲಾಗದ ಅಸ್ತಿತ್ವಗಳಾಗಿವೆ.
ಈ ಪರಂಪರೆಯು [[ಭಕ್ತಿ]] ಅಥವಾ ವಿಷ್ಣುವಿನ ರೂಪದ ದೇವರ ಮೇಲಿನ ನಿಷ್ಠೆಯನ್ನು ವಿಮೋಚನೆಗೆ ಮಾರ್ಗವೆಂದು ಪ್ರತಿಪಾದಿಸಿದೆ.
[[ಮಾಯೆ]] ಯನ್ನು ದೇವರ ಸೃಷ್ಟಿಶೀಲ ಶಕ್ತಿಯ ಮೂಲಕ ಕಾಣಲಾಗುತ್ತದೆ.<ref name="Vedanta"></ref>
[[
ಮಾಯೆ]] ಯನ್ನು ದೇವರ ಸೃಷ್ಟಿಶೀಲ ಶಕ್ತಿಯ ಮೂಲಕ ಕಾಣಲಾಗುತ್ತದೆ.<ref name="Vedanta"></ref>
 
=== ದ್ವೈತ ===
[[ದ್ವೈತ]] ಸಿದ್ಧಾಂತವನ್ನು [[ಮಧ್ವಾಚಾರ್ಯ]] ರು ಪ್ರತಿಪಾದಿಸಿದ್ದಾರೆ. ಇದನ್ನು ತತ್ವವಾದ ಎಂದೂ ಕರೆಯಲಾಗುತ್ತದೆ - ಸತ್ಯದ ತತ್ವಶಾಸ್ತ್ರ.
ಈ ಪರಂಪರೆಯಲ್ಲಿ [[ಬ್ರಹ್ಮನ್]] ನನ್ನು ಸಂಪೂರ್ಣವಾಗಿ ದೇವರ ಜೊತೆಗೆ ಗುರುತಿಸುವುದರ ಜೊತೆಗೆ ಅನುಕ್ರಮವಾಗಿ [[ವಿಷ್ಣು]]ವಿನ ವಿವಿಧ ಅವತಾರಗಳಾದ [[ಕೃಷ್ಣ]], [[ನರಸಿಂಹ]], [[ಶ್ರೀನಿವಾಸ]] ಮುಂತಾದ ರೂಪಗಳಲ್ಲಿ ಗುರುತಿಸಲಾಗುತ್ತದೆ. ಈ ದೃಷ್ಟಿಯಿಂದ ವಿಶಿಷ್ಟಾದ್ವೈತ ಪರಂಪರೆಯ ಶ್ರೀ-ವೈಷ್ಣವ ತತ್ವದೊಂದಿಗೆ ಭಿನ್ನತೆಯನ್ನು ಗುರುತಿಸುವ ಸಲುವಾಗಿ ಇದನ್ನು ಸತ್-ವೈಷ್ಣವ ತತ್ವವೆಂದೂ ಕರೆಯಲಾಗುತ್ತದೆ. ಇದು [[ಬ್ರಹ್ಮನ್]], ಎಲ್ಲ ವೈಯಕ್ತಿಕ ಆತ್ಮಗಳು (''ಜೀವಾತ್ಮ'' ಗಳು) ಹಾಗು ಬೌತವಸ್ತುಗಳನ್ನು ಅನಂತ ಹಾಗು ಪರಸ್ಪರ ಪ್ರತ್ಯೇಕ ಅಸ್ತಿತ್ವಗಳೆಂದು ಪರಿಗಣಿಸಿದೆ. ಈ ಪರಂಪರೆಯು [[ಭಕ್ತಿ]]ಯೊಂದೇ ಸಾತ್ವಿಕ ವಿಮೋಚನೆಯ ಮಾರ್ಗವೆಂದೂ ಭಗವಂತನೆಡೆಗೆ ಹಗೆತನ (ದ್ವೇಷ) ಹಾಗು ಉಪೇಕ್ಷೆಯು ಕ್ರಮವಾಗಿ ಶಾಶ್ವತವಾದ ನರಕಕ್ಕೆ ಹಾಗು ಶಾಶ್ವತವಾದ ಬಂಧನಕ್ಕೆ ಎಡೆ ಮಾಡಿಕೊಡುತ್ತದೆಂದು ಬೋಧಿಸುತ್ತದೆ.
ವಿಮೋಚನೆಯು ಗರಿಷ್ಠ ಸಂತೋಷ ಅಥವಾ ದುಃಖದ ಸ್ಥಿತಿ ಸಾಧನೆ. ಇದು ವೈಯಕ್ತಿಕ ಆತ್ಮಗಳಿಗೆ(ಅವರ ಸಾಧನೆಯ ಅಂತ್ಯದಲ್ಲಿ)ಒಳ್ಳೆಯದು ಅಥವಾ ಕೆಟ್ಟದರತ್ತ ಆತ್ಮಗಳ ಅಂತರ್ಗತ ಅಥವಾ ಸ್ವಾಭಾವಿಕ ಪ್ರವೃತ್ತಿಯ ಆಧಾರದ ಮೇಲೆ ಲಭ್ಯವಾಗುತ್ತದೆ. ಭಗವಾನ್ ವಿಷ್ಣುವಿನ ಅಚಿಂತ್ಯ-ಅದ್ಭುತ ಶಕ್ತಿ (ಅಪರಿಮಿತ ಶಕ್ತಿ)ಯು ಬ್ರಹ್ಮಾಂಡದ ನಿಮಿತ್ತ ಕಾರಣವೆಂದೂ ಹಾಗು ಸೃಷ್ಟಿಕಾಲದ ಬೌತವಸ್ತು ಅಥವಾ ಪ್ರಕೃತಿಯು ಬೌತಿಕ ಕಾರಣ ಎಂದು ಪರಿಗಣಿಸಲಾಗಿದೆ. ದ್ವೈತ ಸಿದ್ಧಾಂತವು, ಎಲ್ಲ ಕಾರ್ಯಗಳನ್ನು ದೇವರು ನಿರ್ವಹಿಸುವುದರ ಜೊತೆಗೆ ಪ್ರತಿ ಆತ್ಮದ ಒಳಗೂ ಶಕ್ತಿಯನ್ನು ತುಂಬುತ್ತಾನೆ. ಜೊತೆಗೆ ಆತ್ಮಕ್ಕೆ ಪರಿಣಾಮಗಳನ್ನು ನೀಡುತ್ತಾನೆ ಆದರೆ ಆತನಿಗೆ ಈ ಪರಿಣಾಮಗಳಿಂದ ಕಿಂಚಿತ್ ಕೂಡ ಹಾನಿಯಾಗುವುದಿಲ್ಲ ಎಂದು ಪ್ರತಿಪಾದಿಸುತ್ತದೆ.<ref name="Vedanta"></ref>
 
=== ದ್ವೈತಾದ್ವೈತ ===
[[ದ್ವೈತಾದ್ವೈತ]] ವನ್ನು [[ನಿಂಬಾರ್ಕ]]ರು ಪ್ರತಿಪಾದಿಸಿದ್ದಾರೆ. ಇದು ಪೂರ್ವದ [[ಭೇಧಾಭೇಧ]] ಪರಂಪರೆಯನ್ನು ಆಧರಿಸಿದೆ. ಇದನ್ನು [[ಭಾಸ್ಕರ]] ಬೋಧಿಸಿದರು. ಈ ಪರಂಪರೆಯ ಪ್ರಕಾರ, ''ಜೀವಾತ್ಮನ್'' ಒಂದೇ ಆಗಿದ್ದರೂ ಬ್ರಹ್ಮನ್ ನಿಂದ ಬೇರೆಯಾಗಿದೆ. ಈ ಜೀವಾ ಸಂಬಂಧವನ್ನು ಒಂದು ದೃಷ್ಟಿಕೋನದಲ್ಲಿ ದ್ವೈತ ಸಿದ್ಧಾಂತದಿಂದ, ಇನ್ನೊಂದು ದೃಷ್ಟಿಕೋನದಲ್ಲಿ ಅದ್ವೈತ ಸಿದ್ಧಾಂತದಿಂದ ಪರಿಗಣಿಸಬಹುದು. ಈ ಪರಂಪರೆಯಲ್ಲಿ, ದೇವರನ್ನು [[ಕೃಷ್ಣ]]ನ ಪ್ರತಿರೂಪದಂತೆ ಕಾಣಲಾಗಿದೆ.<ref name="Vedanta"></ref>
 
=== ಶುದ್ಧಾದ್ವೈತ ===
[[ಶುದ್ಧಾದ್ವೈತ]] ವನ್ನು [[ವಲ್ಲಭ]] ರು ಪ್ರತಿಪಾದಿಸಿದ್ದಾರೆ. ಈ ಪರಂಪರೆಯೂ ಸಹ ಭಕ್ತಿಯನ್ನು ವಿಮೋಚನೆಯ ಏಕೈಕ ಸಾಧನವೆಂದು ಗುರುತಿಸುತ್ತದೆ, 'ಗೋಲೋಕಕ್ಕೆ ಹೋಗುವುದು' (ಅರ್ಥ., ಗೋವುಗಳ ಜಗತ್ತು; ಸಂಸ್ಕೃತ ಪದ 'ಗೋ', 'ಹಸು', 'ನಕ್ಷತ್ರ'ವನ್ನು ಸೂಚಿಸುತ್ತದೆ)[[]] ಈ ಜಗತ್ತೇ ಒಂದು [[ಕೃಷ್ಣ]]ನ ಲೀಲೆ ಎಂದು ಹೇಳಲಾಗಿದೆ. ಇವನು ''[[ಸತ್-ಚಿತ್-ಆನಂದ]]'' .<ref name="Vedanta"></ref>
 
=== ಅಚಿಂತ್ಯ ಭೇಧಾಭೇಧ ===
[[ಅಚಿಂತ್ಯ ಭೇಧಾಭೇಧ]] ವನ್ನು [[ಚೈತನ್ಯ ಮಹಾಪ್ರಭು]]ಗಳು ಪ್ರತಿಪಾದಿಸಿದರು (ಬಂಗಾಳ, 1486-1534) ಇವರು ಶ್ರೀ [[ಮಧ್ವಾಚಾರ್ಯ]] ರ [[ದ್ವೈತ]]ವೇದಾಂತದ ಅನುಯಾಯಿಗಳು.
ಅಚಿಂತ್ಯ ಹಾಗು ಏಕಕಾಲಿಕವಾದ ಅಭೇದ ಹಾಗು ಭೇದವನ್ನು ಆಧರಿಸಿದ ಈ ಸಿದ್ಧಾಂತವು, ಆತ್ಮ ಅಥವಾ ಭಗವಂತನ ಶಕ್ತಿ ಎರಡೂ ಭಗವಂತನಿಂದ ಭೇದ ಹಾಗು ಅಭೇದವನ್ನು ಹೊಂದಿದೆ. ಇದನ್ನು ಅವರು [[ಕೃಷ್ಣ]], [[ಗೋವಿಂದ]] ಎಂಬ ಹೆಸರಿನಿಂದ ಗುರುತಿಸುತ್ತಾರೆ. ಜೊತೆಗೆ ಅಚಿಂತ್ಯವಾದ ಇದನ್ನು, ಅಕ್ಕರೆಯ ಭಕ್ತಿ ಪ್ರಕ್ರಿಯೆಯ ಮೂಲಕ ಅನುಭವಿಸಬಹುದು(''[[ಭಕ್ತಿ]]'' ).<ref>[http://web.archive.org/web/20020607045307/http://www.krishna.com/printarticles/Lord_Chaitanya.html Lord Chaitanya] (krishna.com)
"ಇದನ್ನು ಅಚಿಂತ್ಯ-ಭೇದ-ಅಭೇದ-ತತ್ವ, ಭಾವನಾತೀತ, ಏಕಕಾಲದ ಅಭೇದ ಹಾಗು ಭೇದ ಎಂದು ಕರೆಯಲಾಗುತ್ತದೆ." </ref> "ಅಚಿಂತ್ಯ ಅಭೇದ ಹಾಗು ಭೇದ" ದ ಈ ತತ್ವವನ್ನು [[ISKCON]] ನ ಒಳಗೊಂಡಂತೆ ಹಲವಾರು ನೂತನ [[ಗೌಡೀಯ ವೈಷ್ಣವ]] ಪಂಥಗಳು ಅನುಸರಿಸುತ್ತವೆ.
 
=== ಪೂರ್ಣಾದ್ವೈತ ಅಥವಾ ಸಂಪೂರ್ಣ ಅದ್ವೈತ ===
 
ತಮ್ಮ ಅನುಯಾಯಿಗಳ ಪ್ರಕಾರ, [[ಶ್ರೀ ಅರಬಿಂದೋ]], ತಮ್ಮ ''[[ದಿ ಲೈಫ್ ಡಿವೈನ್]]'' ಪುಸ್ತಕದಲ್ಲಿ, ವೇದಾಂತದ ಎಲ್ಲ ಪರಂಪರೆಗಳನ್ನು ಸಮನ್ವಯಗೊಳಿಸಿ ಪಾಶ್ಚಾತ್ಯ [[ತತ್ವಮೀಮಾಂಸೆ]] ಹಾಗು ಆಧುನಿಕ [[ವಿಜ್ಞಾನ]]ದ ಮಾರ್ಗಗಳನ್ನು ಏಕೀಕರಿಸಿ ಸಮಗ್ರ ನಿರ್ಣಯವನ್ನು ನೀಡಿದರು. ಅವರು ವೇದಾಂತದ ವ್ಯಾಖ್ಯಾನದ ಹೊಕ್ಕುಳಬಳ್ಳಿಯನ್ನು [[ವೇದಗಳ]]ಜತೆ ಮರುಸ್ಥಾಪಿಸಿದ್ದಾರೆಂದು ಹೇಳಲಾಗಿದೆ.{{Citation needed|date=January 2010}}
 
=== ಆಧುನಿಕ ವೇದಾಂತ ===
{{Main|Hindu revivalism}}
"ಆಧುನಿಕ ವೇದಾಂತ" ವನ್ನು ಕೆಲವೊಂದು ಬಾರಿ [[ರಾಮಕೃಷ್ಣ ವರ್ಗ]]ದ ಸನ್ಯಾಸಿಗಳಾದ [[ಸ್ವಾಮಿ ವಿವೇಕಾನಂದ]] ರು ವ್ಯಾಖ್ಯಾನಿಸಿದ [[ಅದ್ವೈತ ವೇದಾಂತ]] ವನ್ನು ವಿವರಿಸಲು ಬಳಸಲಾಗುತ್ತದೆ. [http://web.archive.org/web/20071027080510/http://www.sriramakrishnamath.org/Activity/Vedanta.shtml] ಅವರು ಒತ್ತುಕೊಡುವ ವಿಷಯವೆಂದರೆ:
 
* ದೇವರು [[ಪರಮ]] ಸತ್ಯವಾದರೂ, ಜಗತ್ತಿನಲ್ಲಿ [[ಕಾಲ್ಪನಿಕ]] ಸತ್ಯವೂ ಇದೆ. ಹೀಗಾಗಿ ಇದನ್ನು ಸಂಪೂರ್ಣವಾಗಿ ಉಪೇಕ್ಷಿಸಬಾರದು.
* ಅತಿದೀನಾವಸ್ಥೆಯ [[ಬಡತನ]]ದ ಪರಿಸ್ಥಿತಿಯನ್ನು ತೊಡೆದುಹಾಕಬೇಕು; ಹೀಗಾದರೆ ಮಾತ್ರ ಜನರು ದೇವರೆಡೆಗೆ ತಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತಾರೆ.
* ಎಲ್ಲ ಧರ್ಮಗಳು ತಮ್ಮದೇ ಆದ ಮಾರ್ಗದಲ್ಲಿ ಅಂತಿಮ ಸತ್ಯವನ್ನು ಅರಿಯುವ ಪ್ರಯತ್ನದಲ್ಲಿವೆ. ಸಂಕುಚಿತವಾದ [[ಪಂಥೀಯ]] ಜಗಳಗಳನ್ನು ತ್ಯಜಿಸಬೇಕು, ಹಾಗು ವಿವಿಧ [[ಹಿಂದೂ ವರ್ಗ]]ಗಳೂ, ಜೊತೆಗೆ [[ಕ್ರೈಸ್ತ ಧರ್ಮ]], [[ಯಹೂದಿಧರ್ಮ]], [[ಇಸ್ಲಾಂ ಧರ್ಮ]], [[ಬೌದ್ಧ ಧರ್ಮ]] ಮುಂತಾದವುಗಳ ನಡುವೆ [[ಧಾರ್ಮಿಕ ಸಹಿಷ್ಣುತೆ]] ಯನ್ನು ಬೆಳೆಸಿಕೊಳ್ಳಬೇಕು.
 
ವಿವೇಕಾನಂದರು 1893ರಲ್ಲಿ [[ಚಿಕಾಗೋ]] ನಲ್ಲಿ ನಡೆದ [[ಪಾರ್ಲಿಮೆಂಟ್ ಆಫ್ ವರ್ಲ್ಡ್'ಸ್ ರಿಲಿಜನ್ಸ್ ]] ನಲ್ಲಿ ಭಾಗವಹಿಸಿ ಪೂರ್ವ ಹಾಗು ಪಾಶ್ಚಿಮಾತ್ಯದ ಚಿಂತನೆಯನ್ನು ಏಕೀಕರಿಸಿದ ಪ್ರಭಾವಿ ವ್ಯಕ್ತಿಯಾಗಿದ್ದಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವೇದಾಂತವನ್ನು ಸಾರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಅವರ ಭೇಟಿಯನ್ನು ಕೆಲವು ಸಾಂಪ್ರದಾಯಿಕ ಹಿಂದೂಗಳು ಟೀಕೆ ಮಾಡುತ್ತಾರೆ. ಅವರು ವೇದಾಂತವನ್ನು ಆಧುನಿಕ ಜಗತ್ತಿಗೆ ಹೇಗೆ ಅನ್ವಯ ಮಾಡಬಹುದೆಂಬುದನ್ನು ಗ್ರಹಿಸಿ ಅದಕ್ಕೆ ತಮ್ಮ ಚೈತನ್ಯವನ್ನು ವಿನಿಯೋಗಿಸುವ ಮೂಲಕ ವೇದಾಂತಕ್ಕೆ ಬದುಕುನೀಡಿದರು ಎಂದು ಅವರ ಪ್ರತಿಪಾದಕರು ಹೇಳುತ್ತಾರೆ.[http://www.ramakrishna.org/activities/message/message9.htm ] ವಿವೇಕಾನಂದರಿಗೆ, ವೇದಾಂತವು ಕೇವಲ ನಿರ್ಭಾವ ಅಥವಾ ಅಧಿಕೃತವಾದುದಲ್ಲ, ಆದರೆ ಒಂದು [[ಆತ್ಮ-ಜ್ಞಾನ]] ದ ಶೋಧನೆಯಲ್ಲಿನ ಒಂದು ವರ್ತಮಾನದ ಹಾದಿ.
 
Line ೧೦೨ ⟶ ೧೦೧:
 
 
== ಆಧ್ಯಾತ್ಮ ಗುರುಗಳ ಪಟ್ಟಿ ==
{{Main|List of teachers of Vedanta}}
ಶತಮಾನಗಳಿಂದ [[ಭಾರತ]] ದಲ್ಲಿ ಹಾಗು ಇತರ ದೇಶಗಳಲ್ಲಿ ವೇದಾಂತವನ್ನು ನಿರೂಪಿಸುವ ಹಲವು ಗುರುಗಳಿದ್ದಾರೆ. [[ಶ್ರೀ ರಾಮಕೃಷ್ಣ]], [[ಸ್ವಾಮಿ ವಿವೇಕಾನಂದ]], [[ಸ್ವಾಮಿ ರಾಮ ತೀರ್ಥ]], [[ರಮಣಮಹರ್ಷಿ]], ಶ್ರೀ [[ನಿಸರ್ಗದತ್ತ ಮಹಾರಾಜ್]], [[ಶ್ರೀ ಶಿವರುದ್ರ ಬಾಲಯೋಗಿ]], ಶ್ರೀ ರಂಜಿತ್ ಮಹಾರಾಜ್, [[ಸ್ವಾಮಿ ಶಿವಾನಂದ]], [[ ಸ್ವಾಮಿ ಕೃಷ್ಣಾನಂದ]], [[ಸ್ವಾಮಿ ಜ್ಯೋತಿರ್ಮಯಾನಂದ]], [[ಕಂಚಿ ಮಹಾಸ್ವಾಮಿಗಳು]], ಸ್ವಾಮಿ [[ಬ್ರಹ್ಮಾನಂದ ಸರಸ್ವತಿ]], [[A. C. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ]], ಮಹರ್ಷಿ ಸ್ವಾಮೀ ದಯಾನಂದ ಸರಸ್ವತಿ (ಆರ್ಯ ಸಮಾಜ), ಹರಿ ಪ್ರಸಾದ ಶಾಸ್ತ್ರಿ, [[ಸ್ವಾಮಿ ನಿರಂಜನ್ ಜಿ ಮಹಾರಾಜ್]], ಸ್ವಾಮಿ ಪರಮಾನಂದ, [[ಸ್ವಾಮಿ ಚಿನ್ಮಯಾನಂದ]], [[ಅರ್ಶ ವಿದ್ಯಾ ಗುರುಕುಲಂ ನ ಸ್ವಾಮಿ ಶ್ರೀ ದಯಾನಂದ ಸರಸ್ವತಿ]], [[ಸ್ವಾಮಿ ಶ್ರೀ ಲೀಲ ಶಾಹ್ ಜಿ ಮಹಾರಾಜ್]], ಸ್ವಾಮಿ ಮನೋಹರ್ ದಾಸ್ ಜಿ ಮಹಾರಾಜ್, ಶ್ರೀ [[ಮಹರ್ಷಿ ಮಹೇಶ್ ಯೋಗಿ]], ಶ್ರೀ ಅರಬಿಂದೋ, ಶ್ರೀ ಸ್ವಾಮಿ ತಪೋವನ್ ಮಹಾರಾಜ್, ಅನಂತರಾಮ ದೀಕ್ಷಿತರ್, ಸ್ವಾಮಿ ರಂಗನಾಥಾನಂದ- ಇವರೆಲ್ಲರೂ ವೇದಾಂತದ ಅತ್ಯಂತ ದೊಡ್ಡ ವಿದ್ವಾಂಸರು. [[ಸ್ವಾಮಿ ದಯಾನಂದ ಸರಸ್ವತಿ]], [[ ಪೂಜ್ಯ ಶ್ರೀ ಪ್ರೇಮ್ ಸಿದ್ಧಾರ್ಥ್]], [[ಪೂಜ್ಯ ಮಹಾಭೈರವ ಸಂಭೋಹ ಶಾಸ್ತ್ರಿ]], ಇವರೆಲ್ಲರೂ ಇಂದು ಪ್ರಾಮುಖ್ಯತೆ ಪಡೆದ ವೇದಾಂತದ ಸಾಂಪ್ರದಾಯಿಕ ವಿದ್ವಾಂಸರು{{citation}}. ಸ್ವಾಮಿ ಪರಮಹಂಸ ಯೋಗಾನಂದ ಈ ಪರಂಪರೆಯ ಪ್ರಮುಖ ಬೋಧಕರಾಗಿದ್ದಾರೆ.{{citation}}, ಸ್ವಾಮಿ ಭೂಮಾನಂದ ತೀರ್ಥ, ಓಶೋ(ಭಗವಾನ್ ರಜನೀಶ್, ಜಗದ್ಗುರು ಶ್ರೀ ಕೃಪಾಳು ಜಿ ಮಹಾರಾಜ್ (ಕಳೆದ 5,000 ವರ್ಷಗಳಲ್ಲಿ ಐದನೇ ಜಗದ್ಗುರು ಎನಿಸಿಕೊಂಡವರು)
 
== ಪಶ್ಚಿಮದಲ್ಲಿ ಇದರ ಪ್ರಭಾವ ==
ತತ್ವಜ್ಞಾನಿ [[ಜಾರ್ಜ್ ವಿಲಹೆಲ್ಮ್ ಫ್ರಿಯೆಡ್ ರಿಚ್ ಹೇಗೆಲ್]], ಅದ್ವೈತ-ವೇದಾಂತವನ್ನು ಸ್ಮರಣೆಗೆ ತರುವ ಭಾರತೀಯ ಚಿಂತನೆಯನ್ನು ತಮ್ಮ ''[[ದಿ ಫಿನಾಮಿನಾಲಾಜಿ ಆಫ್ ಸ್ಪಿರಿಟ್]]'' ಹಾಗು ''[[ಸೈನ್ಸ್ ಆಫ್ ಲಾಜಿಕ್]]'' ಪುಸ್ತಕದ ಪ್ರಸ್ತಾವನೆಯಲ್ಲಿ ಉಲ್ಲೇಖಿಸುತ್ತಾರೆ. [[ಆರ್ಥರ್ ಸ್ಕ್ಹೊಪೇನ್ಹುಯೇರ್]], ವೇದಗಳು ಹಾಗು ಉಪನಿಷದ್ ಗಳಿಂದ ಪ್ರಭಾವಿತರಾಗಿದ್ದರು; ಅವರ ವಾಕ್ಯಗಳಲ್ಲಿ: "ಓದುಗನು ಉಪನಿಷತ್‌ಗಳ ಮಾರ್ಗಗಳ ಮೂಲಕ ಪ್ರವೇಶ ಪಡೆದು,ವೇದಗಳನ್ನು ಓದುವುದರಿಂದ ಪ್ರಯೋಜನವನ್ನು ಪಡೆದರೆ,ನನ್ನ ದೃಷ್ಟಿಯಲ್ಲಿ ಅದು ಎಲ್ಲ ಹಿಂದಿನ ಶತಮಾನಗಳಿಗಿಂತ ಈ ಹೊಸ ಶತಮಾನಕ್ಕೆ(1818) ಅತ್ಯಂತ ದೊಡ್ಡ ಸುಯೋಗವಾಗಿ ಪರಿಣಮಿಸುತ್ತದೆ. ಓದುಗನು ಪ್ರಾಚೀನ ಭಾರತದ ಬಗ್ಗೆ ಜ್ಞಾನದ ಉಪಕ್ರಮವನ್ನು ಮುಕ್ತ ಹೃದಯದಿಂದ ಸ್ವೀಕರಿಸಿದ್ದಲ್ಲಿ ನಾನು ಏನು ಹೇಳಬಯಸುತ್ತೆನೆಂಬುದನ್ನು ಅವನು ಸರಿಯಾದ ರೀತಿಯಲ್ಲಿ ಕೇಳಿಸಿಕೊಳ್ಳಲು ತಯಾರಾಗಿರುತ್ತಾನೆ." (''[[ದಿ ವರ್ಲ್ಡ್ ಆಸ್ ವಿಲ್ ಅಂಡ್ ರೆಪ್ರೆಸೆನ್ಟೇಷನ್]]'' ) ವೇದಾಂತದಿಂದ ಪ್ರಭಾವಿತಗೊಂಡು ಅದರ ಬಗ್ಗೆ ವ್ಯಾಖ್ಯಾನಿಸಿದ ಇತರ ಪಾಶ್ಚಿಮಾತ್ಯರೆಂದರೆ [[ರಾಮ್ ದಾಸ್ಸ್]], [[ಫ್ರೆಡ್ರಿಚ್ ನಿಯೆಟ್ಜ್ಸೆ]], [[ಮ್ಯಾಕ್ಸ್ ಮುಲ್ಲರ್]], [[ವೋಲ್ಟೈರ್]], [[J.D. ಸಲಿಂಗೆರ್]], [[ಆಲ್ಡಸ್ ಹಕ್ಸ್ಲೇ]], [[T. S. ಎಲಿಯಟ್]], [[J.B. ಪ್ರಿಸ್ಟ್ಲೇಯ್]], [[ಕ್ರಿಸ್ಟೋಫರ್ ಐಶೇರ್ವುಡ್]], [[ರೋಮೈನ್ ರೊಲ್ಲಂಡ್]], [[ಅಲನ್ ವಾಟ್ಸ್]], [[ಯುಜಿನಿ ವಿಗ್ನರ್]], [[ಆರ್ನಾಲ್ಡ್ ಟೋಯ್ನ್ ಬೀ]], [[ಜೋಸೆಫ್ ಕ್ಯಾಂಪ್ಬೆಲ್]], [[ಹರ್ಮನ್ನ್ ಹೆಸ್ಸೆ]], [[ರಾಲ್ಪ್ಹ್ ವಾಲ್ಡೋ ಎಮರ್ಸನ್]]<ref>ಸಚಿನ್ N. ಪ್ರಧಾನ್, ಯುನೈಟೆಡ್ ಸ್ಟೇಟ್ಸ್ ನಲ್ಲಿ ಭಾರತ: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಕ್ಕೆ ಭಾರತದ ಹಾಗು ಭಾರತೀಯರ ಕೊಡುಗೆ, ಬೆಥೆಸ್ಡ, MD: SP ಪ್ರೆಸ್ ಇಂಟರ್ನ್ಯಾಷನಲ್, Inc., 1996, p 12. </ref>, [[ಹೆನ್ರಿ ಡೇವಿಡ್ ತೋರು]]<ref name="HDT">{{Citation
| first = Carl T.
Line ೧೩೧ ⟶ ೧೩೦:
ಈಗ ನಾನು ಮೃತ್ಯು ದೇವತೆಯಾಗಿದ್ದೇನೆ, ಜಗತ್ತುಗಳ ವಿನಾಶಕ."<ref>ರೋಡ್ಸ್, ರಿಚರ್ಡ್(ಅಕ್ಟೋಬರ್ 1977). ""I AM BECOME DEATH..." ದಿ ಅಗೋನಿ ಆಫ್ J. ರಾಬರ್ಟ್ ಒಪ್ಪೇನ್ಹಿಮೆರ್", ಅಮೆರಿಕನ್ ಹೆರಿಟೇಜ್. 23 ಮೇ 2008ರಲ್ಲಿ ಮರುಸಂಪಾದಿಸಲಾಗಿದೆ.</ref>
 
== ಟಿಪ್ಪಣಿಗಳು ==
{{Reflist|1}}
 
== ಇವನ್ನೂ ಗಮನಿಸಿ ==
* [[ಅದ್ವೈತದ ಪ್ರತಿಪಾದನೆ ]]
* [[ಸ್ವಯಂ ಭಗವಾನ್ ]]
* [[ದೀಪಕ್ ಚೋಪ್ರ ]]
 
== ಹೆಚ್ಚಿನ ಮಾಹಿತಿಗಾಗಿ ==
*
 
ಪಾಲ್ ಡ್ಯುಸ್ಸೇನ್ ರ ''ದಿ ಸಿಸ್ಟಂ ಆಫ್ ವೇದಾಂತ'' 1912. ಮರುಮುದ್ರಣ 2007.
* ''ದಿ ಐ ಆಫ್ ಶಿವ'' . ನ್ಯೂಯಾರ್ಕ್, ವಿಲ್ಲಿಯಮ್ ಮೊರ್ರೌ &amp; ಕೋ. 1981. ಅಮುರಿ ಡೆ ರಯಿನ್ಕೋರ್ಟ್
* [[ಹಸ್ಟನ್ ಸ್ಮಿತ್]] ರ ''ಫರ್ಗಾಟನ್ ಟ್ರೂತ್: ದಿ ಪ್ರಿಮೊರ್ಡಿಯಲ್ ಟ್ರಡಿಷನ್''
*
[[ಫ್ರಾನ್ಸಿಸ್ X. ಕ್ಲೂನೆಯ್]] ರ ''ಥಿಯೋಲಜಿ ಆಫ್ಟರ್ ವೇದಾಂತ''
* ''ಶಂಕರ ಅಂಡ್ ಇಂಡಿಯನ್ ಫಿಲಾಸಫಿ'' [[ನತಾಲಿಯ ಇಸಯೇವ]]ರಿಂದ
* ''ಏ ಹಿಸ್ಟರಿ ಆಫ್ ಅರ್ಲಿ ವೇದಾಂತ ಫಿಲಾಸಫಿ'' [[ಹಜಿಮೆ ನಕಮುರ]]ರಿಂದ
* ''ಎನ್ಸೈಕ್ಲೋಪೀಡಿಯ ಆಫ್ ಇಂಡಿಯನ್ ಫಿಲಾಸಪ್ಹೀಸ್'' ಅಂಡ್ "ವೇದಾಂತ ಸೂತ್ರಾಸ್ ಆಫ್ ನಾರಾಯಣ ಗುರು" [[ಕಾರ್ಲ್ ಪಾಟರ್]] ಹಾಗು [[ಸಿಬಜಿಬನ್ ಭಟ್ಟಾಚಾರ್ಯ]]ರಿಂದ.
* ಲೀ ಪ್ರೋಸ್ಸೇರ್ ರ ''ಇಷೆರ್ವುಡ್, ಬೋವ್ಲೆಸ್, ವೇದಾಂತ, ವಿಕ್ಕಾ, ಅಂಡ್ ಮೀ'' 2001 ISBN 0-595-20284-5.
* [[ಶ್ರೀ ಅರಬಿಂದೋ]] ರ ''ದಿ ಉಪನಿಷದ್ಸ್'' [http://www.sriaurobindoashram.info/Contents.aspx?ParentCategoryName=_StaticContent/SriAurobindoAshram/-09%20E-Library/-01%20Works%20of%20Sri%20Aurobindo/-12_The%20Upanishad_Volume-12 ].
[[ಶ್ರೀ ಅರಬಿಂದೋ ಆಶ್ರಮ್]], [[ಪಾಂಡಿಚೆರಿ]]. 1972.
[[
* [[ಸ್ವಾಮಿ ಪಾರ್ಥಸಾರಥಿ]] ಅವರ ''ವೇದಾಂತ ಟ್ರೀಟೈಸ್- ದಿ ಎಟರ್ನೆಟೀಸ್'' [http://www.vedantaworld.org ]
ಶ್ರೀ ಅರಬಿಂದೋ ಆಶ್ರಮ್]], [[ಪಾಂಡಿಚೆರಿ]]. 1972.
* [[ಪ್ರವ್ರಾಜಿಕ ವ್ರಜಾಪ್ರನ]] ರ ''ವೇದಾಂತ: ಏ ಸಿಂಪಲ್ ಇಂಟ್ರೋಡಕ್ಷನ್''
*[[ಸ್ವಾಮಿ ಪಾರ್ಥಸಾರಥಿ]] ಅವರ ''ವೇದಾಂತ ಟ್ರೀಟೈಸ್- ದಿ ಎಟರ್ನೆಟೀಸ್'' [http://www.vedantaworld.org ]
*[[ಪ್ರವ್ರಾಜಿಕ ವ್ರಜಾಪ್ರನ]] ರ ''ವೇದಾಂತ: ಏ ಸಿಂಪಲ್ ಇಂಟ್ರೋಡಕ್ಷನ್''
[http://www.vedanta.com ]
* ''ಸ್ವಾಮಿ ಭೂಮಾನಂದ ತೀರ್ಥ'' [http://www.brahmavidya.org ನಾರಾಯಣಾಶ್ರಮ ತಪೋವನಂ]
Line ೧೬೯ ⟶ ೧೬೭:
{{Indian Philosophy}}
 
[[Categoryವರ್ಗ:ಹಿಂದೂ ತತ್ವಶಾಸ್ತ್ರದ ಪರಿಕಲ್ಪನೆ]]
[[Categoryವರ್ಗ:ಭಾರತೀಯ ತತ್ವಶಾಸ್ತ್ರ ]]
[[Categoryವರ್ಗ:ವೇದಾಂತ ]]
[[Categoryವರ್ಗ:ಸಂಸ್ಕೃತ ಪದಗಳು ಮತ್ತು ವಾಕ್ಯಗಳು]]
 
[[bg:Веданта]]
Line ೨೦೨ ⟶ ೨೦೦:
[[te:వేదాంతము]]
[[uk:Веданта]]
[[zh:吠檀多学派]]
"https://kn.wikipedia.org/wiki/ವೇದಾಂತ" ಇಂದ ಪಡೆಯಲ್ಪಟ್ಟಿದೆ