ಬ್ರಾಹ್ಮಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Translated from http://en.wikipedia.org/wiki/Brahmin (revision: 361233751) using http://translate.google.com/toolkit with about 97% human translations.
೧ ನೇ ಸಾಲು:
{{About|the social caste|the moth family|Brahmaeidae|similarly spelled words|Brahman (disambiguation)}}
{{ಹಿಂದೂ ತತ್ವಶಾಸ್ತ್ರ}}
{{Cleanup|date=April 2010}}
[[ಹಿಂದೂ]] [[ಧರ್ಮ]]ದ [[ಚತುರ್ವರ್ಣ ಪದ್ಧತಿ]]ಯಲ್ಲಿ [[ಬ್ರಾಹ್ಮಣ]] ಎಂಬುದು [[ಶಿಕ್ಷಕ]]ರ, [[ವಿದ್ವಾಂಸ]]ರ, [[ಬೋಧಕ]]ರ [[ವರ್ಗ]]. ಇದು [[ವರ್ಣಾಶ್ರಮ ಪದ್ಧತಿ]]ಯಲ್ಲಿ ಉಚ್ಚತಮ ಸ್ಥಾನವನ್ನು ಹೊಂದಿದೆ. ಅಗ್ನಿ (ಜಾತವೇದ) ಗುರು (ಬ್ರುಹಸ್ಪತಿ) ಇವರುಗಳು ದೇವ ಸಂಪುಟದ ಪ್ರಮುಖರು. ಜಾತವೇದನಿಗೆ ಎರಡು ತಲೆ, ಮೂರು ಕಾಲು ಏಳು ನಾಲಿಗೆಗಳು ಇದ್ದು ಈತನು ಸರ್ವ ಭಕ್ಷಕನೆಂದು ಕರೆಯುತ್ತಾರೆ. ಬ್ರುಹಸ್ಪತಿಯು ಎಲ್ಲರಿಗಿಂತಲೂ ಹಿರಿಯ ಇತನ ಬಣ್ಣ ಬಿಳಿಯದಾಗಿದ್ದು ಕೇಸರಿ ಬಣ್ಣದ ಉಡುಪನ್ನು ದರಿಸಿರುವನು.
[[ಹಿಂದೂ]][[ಧರ್ಮ]]ವನ್ನು ಬೋಧಿಸುವ ಮತ್ತು ಅರ್ಚಕರ ವರ್ಗಕ್ಕೆ ಸೇರಿದವರನ್ನು '''ಬ್ರಾಹ್ಮಿನ್''' {{IAST|Brāhmaṇa}} (ಬ್ರಾಹ್ಮಣರು) ಎನ್ನುತ್ತಾರೆ.{{lang|sa|ब्राह्मण}}<ref>ನಾಮಪದದ ಅರ್ಥವನ್ನು ಹೀಗೆ ತಿಳಿಯಬಹುದು''{{IAST|brāhmaṇaḥ}}'' "1. ಹಿಂದೂಗಳ ನಾಲ್ಕು ಶ್ರೇಣಿಗಳಲ್ಲಿ ಎರಡನೆಯ ಶ್ರೇಣಿಗೆ ಸೇರಿದಂತಹ ವ್ಯಕ್ತಿ (''{{IAST|varṇas}}'' ''ಜಾತಿಗಳು'' ಬದಲಿಗೆ,ಆಪ್ಟೆಯವರ ಸಂಸ್ಕೃತ-ಹಿಂದಿ ನಿಘಂಟಿನಲ್ಲಿ), ಒಬ್ಬ {{IAST|Brāhmaṇa}}(ಅರ್ಚಕ) ಮತ್ತು ವಿಶೇಷಣ {{lang|sa|ब्राह्मण}} ''{{IAST|brāhmaṇa}}'' ಹೇಗೆಂದರೆ"''a'' . 1. {{IAST|Brāhmaṇa}}ಕ್ಕೆ ಸೇರಿದವರು", ಮತ್ತು ಇತರ ಅರ್ಥಗಳು, ನೋಡಿ: {{Harvnb|Apte|1965|p=707}}, {{Harvnb|Apte|1966|p=724-25}}; ನಂತರದ ಪುಸ್ತಕದ ಪುಟ 901ರಲ್ಲಿ, ಆಪ್ಟೆ {{IAST|varṇa}}ಎಂಬ ಪದದ ಹಲವಾರು ಅರ್ಥಗಳಲ್ಲ ಒಂದನ್ನು''ಜಾತಿ'' ಎಂದಿತ್ತರು ಆದರೆ ಅದನ್ನು ಒಂದು ವಾಕ್ಯದ ಮೂಲಕ ವಿಷದಗೊಳಿಸಿದರು : "ಮುಖ್ಯವಾಗಿ ನಾಲ್ಕರ ಪೈಕಿ {{IAST|brāhmaṇa (priests), kṣatriya (warriors), vaiśya (merchants), śudra (artisans)}}ರ {{IAST|varṇas}} ನೆಯವರು ", ಮತ್ತು {{IAST|varṇa}}ಪದದ ಬಳಕೆಯನ್ನು ಈ ನಾಲ್ಕನ್ನು ಬಿಟ್ಟು ಬೇರೆ ಯಾವುದೇ ಜಾತಿಗಳಿಗೆಅನುಮತಿಸಲಿಲ್ಲ.</ref><ref>{{lang|sa|ब्राह्मण}} ''{{IAST|brāhmaṇa}}'' ಗಳ ಅರ್ಥಕ್ಕೆ, ಕಡೆಯ ಉಚ್ಚಾರಗಳು ವೇದದ ಉಚ್ಚರಣೆಯನ್ನು ತೋರ್ಪಡಿಸುವಾಗ, "mನಂತೆ ನಾಮಪದವಾಗಿ ಉಪಯೋಗಿಸಲಾಗುತ್ತದೆ. (ಬ್ರಹ್ಮನ್ ''ಅಥವಾ'' ದೈವಿಕ ಅರಿವಿಗೆ ಸಂಬಂಧಿಸಿದಂತೆ), ವೇದವಿದ, ಧರ್ಮಪರಾಯಣ, ಅರ್ಚಕ, {{IAST|Brāhman}}, ಮೊದಲ ನಾಲ್ಕು ವರ್ಣಗಳ ವ್ಯಕ್ತಿ"; ಮತ್ತು{{lang|sa|ब्राह्मण}} ''{{IAST|brāhmaṇa}}'' ಗಳ ಅರ್ಥ, ಮೊದಲ ಉಚ್ಚಾರ ಮಾತ್ರ ವೇದದ ರೀತಿಯ ಉಚ್ಚಾರವನ್ನು ಹೊಂದಿರುವಾಗ, ವಿಶೇಷಣವಾಗಿ ಬಳಸಿ "''ಒಂದು'' . (i) ಸಂಬಂಧಿಸಿದಂತೆ {{IAST|Brāhman}}, ಬ್ರಾಹ್ಮಣ್ಯದ", ನೋಡಿ: {{Harvnb|Macdonell|1924|p=199}}.
</ref><ref>''{{IAST|brāhmaṇa}}'' ಗಳ ಅರ್ಥಕ್ಕೆ, ಕಡೆಯ ಉಚ್ಚಾರಗಳು ವೇದದ ಉಚ್ಚಾರಣೆಯನ್ನು ತೋರ್ಪಡಿಸುವಾಗ, ನಾಮಪದವಾಗಿ, "''m'' ., ದೈವಿಕ ಅರಿವು ಉಳ್ಳವನು, ಒಬ್ಬ {{IAST|Brāhman}}. ಮೂರು ದ್ವಿಜ ವರ್ಗಗಳಲ್ಲಿ ಮೊದಲನೆಯದಕ್ಕೆ ಸೇರಿದ ವ್ಯಕ್ತಿ ಮತ್ತು {{IAST|Hindū}} ದೇಹದ ಪ್ರಥಮ ನಾಲ್ಕು ವಿಭಾಗಗಳ ಸಂಬಂಧಿತ", ಮತ್ತು ವಿಶೇಷಣ''{{IAST|brāhmaṇa}}'' , ಮೊದಲ ಉಚ್ಚಾರ ಮಾತ್ರ ವೇದದ ರೀತಿಯ ಉಚ್ಚಾರವನ್ನು ಹೊಂದಿರುವಾಗ, "ಸಂಬಂಧಿಸಿದಂತೆ ಅಥವಾ ನೀಡಲ್ಪಟ್ಟಂತೆ ಯ ಹಾಗೆ {{IAST|Brāhman}}, ಬ್ರಾಹ್ಮಣನಾಗಲು ಅರ್ಹ ಅಥವಾ ಬ್ರಾಹ್ಮಣನಾಗುವಿಕೆ., ಬ್ರಾಹ್ಮಣ್ಯದ", ನೋಡಿ: ಮೋನಿಯರ್-ವಿಲಿಯಮ್ಸ್, ಪುಟ 741, ಮಧ್ಯ ಅಂಕಣ.
Cf. ಋಗ್ವೇದ, ಪುಣೆ ಆವೃತ್ತಿ, ಸಂಪುಟ-5 (ಅನುಕ್ರಮಣಿಕೆ), ಪುಟ 408 ಇದರಲ್ಲಿ ''{{IAST|brāhmaṇa}}'' ನ ಎಲ್ಲಾ ಆಗುಹೋಗುಗಳನ್ನೂ ಪ್ರಥಮ ಪುರುಷ, ಏಕವಚನದಲ್ಲಿ ತೋರಿಸಿ ಅನುದತ್ತ(ಉಚ್ಚಾರರಹಿತತೆ)ವು ಮೊದಲ ಎರಡು ಉಚ್ಚಾರಣಿಗಳ ಮೇಲೆ ಕೇಂದ್ರಿತವಾಗಿದೆ.</ref><ref>ನಪುಂಸಕಲಿಂಗದಲ್ಲಿ ನಾಮಪದದ ಅರ್ಥ''{{IAST|brahman}}'' (ಮೊದಲನೆಯ ಉಚ್ಚಾರಗಳು ವೇದದ ಉಚ್ಚಾರಣೆಯನ್ನು ತೋರ್ಪಡಿಸುವಾಗ) ಬ್ರಾಹ್ಮಣರ ಜಾತಿಯೇ ಒಂದು ಅಂಗವಾಗಿ (ಅಪರೂಪಕ್ಕೊಬ್ಬ ಬ್ರಾಹ್ಮಣ)"; ಮತ್ತು ಪುಲ್ಲಿಂಗ ರೂಪದ ನಾಮಪದ''{{IAST|brahman}}'' (ಕಡೆಯ ಉಚ್ಚಾರಗಳು ವೇದದ ಉಚ್ಚರಣೆಯನ್ನು ತೋರ್ಪಡಿಸುವಾಗ)ದ ಅರ್ಥವು "ಪ್ರಾರ್ಥಿಸುವವನು, ಭಕ್ತ ಅಥವಾ ಧಾರ್ಮಿಕ ವ್ಯಕ್ತಿ, ವೇದದ ಪಠ್ಯಗಳನ್ನು ಅಥವಾ ಉಚ್ಚಾರಗಳನ್ನು ತಿಳಿದಿರುವಂತಹ ಜ್ಞಾನಿಯಾದ ಒಬ್ಬ ಬ್ರಾಹ್ಮಣ, ದೈವಿಕ ಅರಿವನ್ನು ಕರತಲಾಮಲಕವಾಗಿ ತಿಳಿದವನು", ನೋಡಿ: MW, ಪುಟಗಳು 737-738.</ref>.
 
''ಬ್ರಾಹ್ಮಿನ್'' ಎಂಬ ಇಂಗ್ಲಿಷ್ ಪದವು ಸಂಸ್ಕೃತ ಪದವಾದ ರ ಆಂಗ್ಲ ರೂಪವಾಗಿದೆ{{IAST|Brāhman}}; ([[ಬ್ರಹ್ಮನ್]] ಎಂದರೆ ಶ್ರೇಷ್ಠ ಆತ್ಮ ಎಂಬ ಅರ್ಥವೂ ಹಿಂದೂ ಧರ್ಮದಲ್ಲಿದೆ). ಬ್ರಾಹ್ಮಣರನ್ನು '''ವಿಪ್ರ''' "ಪ್ರೇರಣೆಗೊಂಡ"<ref>[[ಮೋನಿಯರ್-ವಿಲಿಯಮ್ಸ್]]: ಪ್ರೇರೇಪಿತ, ಅಂತರ್ಮುಖಿ ''ಚಲನೆ'' ಗೊಂಡವರು, ಜಾಣರು, ವಿದ್ಯಾವಂತರು, ಇತ್ಯಾದಿ.</ref> ಅಥವಾ '''ದ್ವಿಜ''' "ಎರಡು ಬಾರಿ ಹುಟ್ಟಿದವರು" ಎಂದೂ ಕರೆಯುತ್ತಾರೆ.<ref>'ದ್ವಿಜ ಎಂಬುದನ್ನು ಹೆಚ್ಚಾಗಿ ಬ್ರಾಹ್ಮಣರಿಗೇ ಬಳಸಲಾಗುತ್ತಿತ್ತು, ಅದರೆ ಅದು {{IAST|Kṣatriyas}} ರನ್ನು ಒಳಗೊಂಡಿತ್ತು ವಿಧಿವತ್ತಾಗಿ ಪೂಜಾರ್ಹವಾದ ತಿಳಿವಳಿಕೆಯನ್ನು ಪಡೆಯುದರ ಮೂಲಕ ಮರುಹುಟ್ಟು ಪಡೆದ" ವೈಶ್ಯರನ್ನೂ ಒಳಗೊಂಡಿತ್ತು- [[ಮೋನಿಯರ್-ವಿಲಿಯಮ್ಸ್]].</ref>
[[ವರ್ಗ:ಹಿಂದೂ ಧರ್ಮದ ವರ್ಣಗಳು]]
ಬ್ರಾಹ್ಮಣರು ವೇದವಿಧಿಗಳನ್ನು ಸಹ ಆಚರಿಸುತ್ತಾರೆ.{{Citation needed|date=January 2010}}
ಬ್ರಾಹ್ಮಣರೆಂದರೆ ಅರ್ಚಕರೆಂಬುದು ಮಾತ್ರವಲ್ಲ. ಬ್ರಾಹ್ಮಣರ ಒಂದು ಉಪವರ್ಗ ಮಾತ್ರ ಅರ್ಚನೆಯ ವಿಧಿಗಳನ್ನು ಆಚರಿಸುವುದರಲ್ಲಿ ನಿರತವಾಗಿತ್ತು. ವೇದಗಳ ಕಾಲದ ಉತ್ತರಭಾಗದಿಂದಲೂ ಅವರು ವಿವಿಧ ವೃತ್ತಿಗಳನ್ನು ಸಹ ಕೈಗೊಳ್ಳುತ್ತಿದ್ದು, ಪ್ರಮುಖವಾಗಿ ವೈದ್ಯರು, ಯೋಧರು, ಬರಹಗಾರರು, ಕವಿಗಳು, ಭೂ ಒಡೆಯರು, ಮಂತ್ರಿಗಳು, ಇತ್ಯಾದಿ ಕಾಯಿಕಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಭಾರತದ ಕೆಲವು ಭಾಗಗಳಲ್ಲಿ ಬ್ರಾಹ್ಮಣ ರಾಜರು ಆಳ್ವಿಕೆಯನ್ನೂ ಮಾಡುತ್ತಿದ್ದರು.
 
ವೇದಗಳ ಕಾಲದಿಂದಲೂ ರಾಜರು ಬ್ರಾಹ್ಮಣರೊಡನೆ (ಬ್ರಹ್ಮಕ್ಷತ್ರ) ನಿಕಟವಾದ ಸಂಬಂಧವಿರಿಸಿಕೊಳ್ಳುತ್ತಿದ್ದರು ಮತ್ತು ಅವರ ಸಲಹೆಗಳ ಮೇಲೆ ಅವಲಂಬಿತವಾಗಿರುತ್ತಿದ್ದರು.ಭಾರತದಲ್ಲಿ ಬ್ರಾಹ್ಮಣರು ಪ್ರಬಲರೂ, ಪ್ರಭಾವಶಾಲಿಗಳೂ ಆಗಿದ್ದರು ಹಾಗೂ ಹಲವರು 'ಕೆಳ' [[ಜಾತಿ]]ಗಳ ಬಗ್ಗೆ ತಾರತಮ್ಯ ತೋರುತ್ತಿದ್ದರು.<ref>ಮನೋರಂಜನ್ ಮೊಹಾಂತಿ.. ''ಕ್ಲ್ಯಾಸ್, ಕ್ಯಾಸ್ಟ್, ಜೆಂಡರ್'' . 2004. "ಬ್ರಾಹ್ಮಣರು ಮೇಲುಗೈ ಸಾಧಿಸಿದ್ದ ಕಾಲದಲ್ಲಿ, ಬ್ರಾಹ್ಮಣರನ್ನು ಉಚಿತವಾಗಿ ಸತ್ಕರಿಸುವುದು ಮತ್ತು ಅಬ್ರಾಹ್ಮಣರನ್ನು ತುಚ್ಛವಾಗಿ ಕಾಣುವುದು ವ್ಯಾಪಕವಾಗಿತ್ತು. "</ref><ref>ಎಸ್.ಎನ್.ಸದಾಶಿವನ್. ''ಭಾರತದ ಸಾಮಾಜಿಕ ಚರಿತ್ರೆ.'' . ಪುಟ 8 ಎಪಿಹೆಚ್ ಪ್ರಕಾಶನ, 2000. ಐ ಎಸ್ ಬಿ ಎನ್ 1-57863-301-X</ref> ಆಧುನಿಕ ಭಾರತದಲ್ಲಿ, ತಾವು [[ವಿರುದ್ಧ ತಾರತಮ್ಯ]]ಕ್ಕೆ ಒಳಗಾಗಿದ್ದೇವೆಂದು ಬ್ರಾಹ್ಮಣರು ಹೇಳುತ್ತಾರೆ.<ref>[http://online.wsj.com/article/SB.html ರಿವರ್ಸಲ್ ಆಫ್ ಫಾರ್ಚ್ಯೂನ್ಸ್ ಐಸೋಲೇಟ್ಸ್ ಇಂಡಿಯಾಸ್ ಬ್ರಾಹ್ಮಿನ್ಸ್]. [[ದ ವಾಲ್‌ ಸ್ಟ್ರೀಟ್‌ ಜರ್ನಲ್‌.]]</ref> <ref>[http://www.rediff.com/news/2006/may/23franc.htm ಆರ್ ಬ್ರಾಹ್ಮಿನ್ಸ್ ದ ದಲಿತ್ಸ್ ಆಫ್ ಟುಡೇ?]. ಮೇ 26, 2006 [[Rediff.com]].</ref>
ಬ್ರಾಹ್ಮಣರು ತಮ್ಮ ಪರಂಪರೆಯ ಆದಿಯನ್ನು [[ಮಧ್ಯ ಏಷ್ಯಾ]]ದ ಪುರಾತನ ಜನರವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿದೆ.
 
==ಇತಿಹಾಸ==
{{main|History of Hinduism}}
ಭಾರತದಲ್ಲಿ ಬ್ರಾಹ್ಮಣ ಪಂತಡ ಇತಿಹಾಸವು [[ಹಿಂದುತ್ವ]]ದ ಆರಂಭಿಕ ಹಂತವಾದ [[ವೈದಿಕ ಧರ್ಮ]]ದ ಕಾಲದಿಂದ ಪ್ರಾರಂಭವಾಗುತ್ತದೆ, ಈಗ ಅದನ್ನು ಹಿಂದೂಗಳು [[ಸನಾತನ ಧರ್ಮ]]ವೆಂದು ಕರೆಯುತ್ತಾರೆ. [[ವೇದ]]ಗಳು ಬ್ರಾಹ್ಮಣರ ಆಚಾರಗಳಿಗೆ ಬೇಕಾದ ಪ್ರಧಾನ ಜ್ಞಾನದ ಮೂಲಗಳು. ಬಹುತೇಕ ಬ್ರಾಹ್ಮಣ [[ಸಂಪ್ರದಾಯ]]ಗಳು ವೇದಗಳಿಂದಲೇ ಪ್ರೇರಿತವಾಗುತ್ತವೆ. ಸಂಪ್ರದಾಯಬದ್ಧ ಹಿಂದೂ ಆಚರಣೆಗಳ ಪ್ರಕಾರ, ವೇದಗಳು ''{{IAST|apauruṣeya}}'' ಮತ್ತು ''ಅನಾದಿ'' (ಆದಿಯೇ ಇಲ್ಲದಂತಹವು), ಅದರೆ ಸರ್ವಕಾಲಕ್ಕೂ ಸೂಕ್ತವಾದ ನಿಜಗಳನ್ನು ತೋರಿಸಿಕೊಡುವಂತಹವು.
ವೇದಗಳನ್ನು ''[[ಶೃತಿ]]'' (''ಆಲಿಸಲ್ಪಡುವಂತಹವು'' ) ಎಂದು ಪರಿಗಣಿಸಲಾಗಿದ್ದು ಬ್ರಾಹ್ಮಣ ಸಂಪ್ರದಾಯಕ್ಕೆ ಅತ್ಯಮೂಲ್ಯ ಕೊಡುಗೆ ನೀಡುವಂತಹವಾಗಿವೆ. ಶೃತಿಯು ನಾಲ್ಕು ವೇದ([[ಋಗ್ವೇದ]], [[ಯಜುರ್ವೇದ]], [[ಸಾಮವೇದ]], [[ಅಥರ್ವಣ ವೇದ]])ಗಳನ್ನಲ್ಲದೆ ತತ್ಸಂಬಂಧಿತ [[ಬ್ರಹ್ಮಣಗಳು]], [[ಅರಣ್ಯಕಗಳು]] ಮತ್ತು [[ಉಪನಿಷತ್ತು]]ಗಳನ್ನೂ ಒಳಗೊಂಡಿದೆ.
 
[[ಬ್ರಹ್ಮನ್]] ಮತ್ತು ಬ್ರಾಹ್ಮಿನ್ (ಬ್ರಹ್ಮನ್ ಮತ್ತು ಬ್ರಾಹ್ಮಣ, ಪುಲ್ಲಿಂಗ) ಒಂದೇ ಅಲ್ಲ. ಬ್ರಹ್ಮನ್ (ಬ್ರಹ್ಮನ್, ನಪುಂಸಕಲಿಂಗ), ಏಕೆಂದರೆ [[ಉಪನಿಷತ್ತುಗಳು]] ಪರಮಾತ್ಮನನ್ನು ಹಾಗೆ ಕರೆಯುತ್ತವೆ. ಬ್ರಾಹ್ಮಿನ್ ಅಥವಾ ಬ್ರಾಹ್ಮಣ (ಬ್ರಾಹ್ಮಣ್, ಬ್ರಾಹ್ಮಣ)ಒಂದು ವ್ಯಕ್ತಿಯನ್ನು ಕುರಿತಾದ ಪದ. ಅಲ್ಲದೆ, ಬ್ರಹ್ಮ ಎಂಬ ಪದವು (ಬ್ರಹ್ಮ, ಪುಲ್ಲಿಂಗ) ದೇವತೆಗಳಲ್ಲಿ ಮೊದಲಿಗನಿಗೆ ಅರ್ಪಿತವಾದ ಹೆಸರಾಗಿದೆ.
 
1931ರಲ್ಲಿ (ಜಾತಿಯನ್ನು ದಾಖಲಿಸಿದ [[ಭಾರತದ ಕಡೆಯ ಜನಗಣತಿ]]) ಬ್ರಾಹ್ಣರು ಒಟ್ಟು ಜನಸಂಖ್ಯೆಯ 4.32%ರಷ್ಟಿದ್ದರು. ಬಹಳ ಬ್ರಾಹ್ಮಣರಿದ್ದ [[ಉತ್ತರಪ್ರದೇಶ]]ದಲ್ಲೂ ಸಹ ಬ್ರಾಹ್ಮಣರ ದಾಖಲಾದ ಜನಸಂಖ್ಯೆ ಕೇವಲ 12% ಇದ್ದಿತು. [[ಆಂಧ್ರಪ್ರದೇಶ]]ದಲ್ಲಿ, ಅವರ ಸಂಖ್ಯೆ 6%ಗಿಂತಲೂ ಕಡಿಮೆ ಇತ್ತು, [[ತಮಿಳುನಾಡು]]ವಿನಲ್ಲಿ 3%ಗಿಂತಲೂ ಕಡಿಮೆ ಇದ್ದರು ಮತ್ತು and in [[ಕರ್ಣಾಟಕ]]ದಲ್ಲಿ, 2%ಗಿಂತಲೂ ಕಡಿಮೆ ಇದ್ದರು.<ref>[http://www.vedah.net/manasanskriti/Brahmins.html#Brahmin_Population ವೇಪಚೇದು ಶಿಕ್ಷಣ ಸಂಸ್ಥೆಯಲ್ಲಿ ಬ್ರಾಹ್ಮಣರ ಬಗ್ಗೆ ಒಂದು ವಿಸ್ತೃತ ಲೇಖನ]</ref>
[[ಕೇರಳ]]ದಲ್ಲಿ, [[ನಂಬೂದಿರಿ ಬ್ರಾಹ್ಮಣ]]ರು ಜನಸಂಖ್ಯೆಯ 0.7%ನಷ್ಟು ಇದ್ದಾರೆ. 2001ರ ಜನಗಣತಿಯ ಪ್ರಕಾರ, ಬ್ರಾಹ್ಮಣರು ದೇಶದ ಜನಸಂಖ್ಯೆಯ 4.1%ಗಿಂತಲೂ ಕಡಿಮೆ ಇದ್ದಾರೆ. ವಿಶೇಷತಃ, ಸಾರಸ್ವತ ಬ್ರಾಹ್ಮಣರು ಭಾರತದ ಜನಸಂಖ್ಯೆಯಲ್ಲಿನ 1% ಗಿಂತಲೂ ಕಡಿಮೆ ಸಂಖ್ಯೆಯಲ್ಲಿದ್ದಾರೆ.
 
==ಬ್ರಾಹ್ಮಣ ಪಂಗಡಗಳು==
{{Seealso|Brahmin communities}}
 
ಬ್ರಾಹ್ಮಣ ಜಾತಿಯನ್ನು ಸ್ಥೂಲವಾಗಿ ಎರಡು ಪ್ರಾಂತೀಯ ಗುಂಪುಗಳಾಗಿ ವಿಂಗಡಿಸಬಹುದು: ವಿಂಧ್ಯಪರ್ವತದ ಉತ್ತರಭಾಗದಲ್ಲಿರುವವರೆಂದು ಪರಿಗಣಿಸಲಾದ, ಉತ್ತರ ಭಾರತದಲ್ಲಿನ '''[[ಪಂಚ-ಗೌಡ]] ಬ್ರಾಹ್ಮಣರು''' ಮತ್ತು ಕೆಳಕಂಡ [[ಶ್ಲೋಕ]]ವೇ ಹೇಳುವಂತೆ, ವಿಂಧ್ಯಪರ್ವತದ ದಕ್ಷಿಣ ಭಾಗದಲ್ಲಿನ '''ಪಂಚ-ದ್ರಾವಿಡ ಬ್ರಾಹ್ಮಣರು''' ; ಆದರೆ ಈ ಶ್ಲೋಕವು ರಾಜತರಂಗಿಣಿಯ ಕಲ್ಹಣರು ಬರೆದುದಾಗಿದ್ದು ಇದರ ರಚನೆ 11ನೆಯ ಸಿ.ಇ.ಯದಾಗಿದ್ದು, ಇತ್ತೀಚಿನದಾಗಿದೆ.
ಕರ್ಣಾಟಕಾಶ್ಚ ತೈಲಂಗಾ ದ್ರಾವಿಡಾ ಮಹಾರಾಷ್ಟ್ರಕಾಃ,<br>
ಗುರ್ಜರಾಶ್ಚೇತಿ ಪಂಚೈವ ದ್ರಾವಿಡಾ ವಿಂಧ್ಯದಕ್ಷಿಣೇ ||<br>
ಸಾರಸ್ವತಃ ಕಾನ್ಯಕುಬ್ಜಾ ಗೌಡಾ ಉತ್ಕಲಮೈಥಿಲಾಃ,<br>
 
ಪಂಚಗೌಡಾ ಇತಿ ಖ್ಯಾತಾ ವಿಂಧ್ಯಸ್ಯೋತ್ತರವಾಸಿ ||<ref>ಬ್ರಹ್ಮೋತ್ಪತ್ತಿ ಮಾರ್ತಾಂಡ, cf. ದೋರಿಲಾಲ್ ಶರ್ಮಾ, ಪುಟಗಳು 41-42</ref>
 
ಅನುವಾದ: ಕರ್ಣಾಟಕ (ಕನ್ನಡ), ತೆಲುಗು (ಆಂಧ್ರ), ದ್ರಾವಿಡ (ತಮಿಳುನಾಡು ಮತ್ತು ಕೇರಳ), ಮಹಾರಾಷ್ಟ್ರ ಮತ್ತು ಗುಜರಾತ್ ಐದು ದಕ್ಷಿಣದವು (ಪಂಚ ದ್ರಾವಿಡ). ಸಾರಸ್ವತ, [[ಕಾನ್ಯಕುಬ್ಜ]], ಗೌಡ, ಉತ್ಕಲ (ಒರಿಸ್ಸಾ), ಮೈಥಿಲಿ ಈ ಆರು ಉತ್ತರದವು (ಪಂಚ ಗೌಡ).
ಈ ವರ್ಗೀಕರಣವು [[ಕಲ್ಹಣ]]ದ [[ರಾಜತರಂಗಿಣಿ]]ಯಲ್ಲಿ ಕಾಣಸಿಗುತ್ತದೆ ಮತ್ತು ಇದಕ್ಕೂ ಮುನ್ನ ಕೆಲವು ಶಿಲಾಶಾಸನಗಳಲ್ಲಿ ಗೋಚರವಾಗುತ್ತದೆ.<ref>"ಹಿಂದೂ ಜಾತಿಗಳು ಮತ್ತು ಪಂಗಡಗಳು"ವಿನಲ್ಲಿ ಜೋಗೇಂದ್ರ ನಾಥ್ ಭಟ್ಟಾಚಾರ್ಯರಿಂದ ಉಲ್ಲೇಖಿತ. ಬ್ರಾಹ್ಮಣರ ವಿವಿಧ ಗುಂಪುಗಳು ಮತ್ತು ಜಾತಿಗಳ ಬಗ್ಗೆ ವಿಸ್ತೃತ ಲೇಖನ www.vedah.net [http://www.vedah.net/manasanskriti/Brahmins.html#Major_Brahmin_Castes ]</ref>
 
===ಪಂಚ ಗೌಡ ಬ್ರಾಹ್ಮಣರು===
ಪಂಚ ಗೌಡ (ಉತ್ತರಭಾರತದಲ್ಲಿರುವ ಐದು ವರ್ಗಗಳು): (1) [[ಸಾರಸ್ವತ]], (2) [[ಕಾನ್ಯಕುಬ್ಜ]], (3) [[ಮೈಥಿಲ ಬ್ರಾಹ್ಮಣರು ]], (4) [[ಗೌಡ ಬ್ರಾಹ್ಮಣರು]] ([[ಸನಧ್ಯ]]ರನ್ನೊಳಗೊಂಡಂತೆ), ಮತ್ತು (5)[[ಉತ್ಕಲ ಬ್ರಾಹ್ಮಣರು]] .
ಅಲ್ಲದೆ, ಉತ್ತರದ ಬ್ರಾಹ್ಮಣರ ಪರಿಚಯ ನೀಡುವ ಸಲುವಾಗಿ ಪಗರತಿ ಪ್ರಾಂತ್ಯವನ್ನೂ ಪ್ರತ್ಯೇಕವಾಗಿ ಪರಿಗಣಿಸಬೇಕಾಗುತ್ತದೆ, ಹೇಗೆಂದರೆ, [[ಕಾಶ್ಮೀರ]], [[ನೇಪಾಳ]], [[ಉತ್ತರಖಂಡ]], [[ಹಿಮಾಚಲ]], [[ಕುರುಕ್ಷೇತ್ರ]], [[ರಜಪುತಾನ]], [[ಉತ್ತರ ಪ್ರದೇಶ]], [[ಅಯೋಧ್ಯಾ]] (ಔಧ್), [[ಗಾಂಧಾರ]], [[ಪಂಜಾಬ್]], ಈಶಾನ್ಯ ಪ್ರಾಂತ್ಯಗಳು ಮತ್ತು ಪಾಕಿಸ್ತಾನ, [[ಸಿಂಧ್]], [[ಮಧ್ಯ ಭಾರತ]], ತಿರ್ಹಟ್, [[ಬಿಹಾರ]], [[ಒರಿಸ್ಸಾ]], [[ಬಂಗಾಳ]], [[ಅಸ್ಸಾಂ]], ಮುಂತಾದವು. ಇವರು ಮೂಲತಃ (ಈಗ ಬತ್ತಿಹೋಗಿರುವ) ಸರಸ್ವತಿ ನದಿಯ ದಕ್ಷಿಣ ಭಾಗದವರು.<ref name="autogenerated1">ಪುಟ 849 ''ಗುಜರಾತ್ ರಾಜ್ಯ ಗೆಝೆಟಿಯರ್ ಗಳು'' ಗುಜರಾತ್ (ಭಾರತ), 1984</ref>
 
====ಬಿಹಾರ====
[[ಬಿಹಾರ]]ದಲ್ಲಿ, ಹೆಚ್ಚಿನ ಪಾಲು ಬ್ರಾಹ್ಮಣರು [[ಕಾನ್ಯಕುಬ್ಜ ಬ್ರಾಹ್ಮಣ]]ರು, [[ ಭೂಮಿಹಾರ್ ಬ್ರಾಹ್ಮಣರು]] ಮತ್ತು [[ಮೈಥಿಲ್ ಬ್ರಾಹ್ಮಣರು]] ಹಾಗೂ ಗಮನಾರ್ಹ ಸಂಖ್ಯೆಯಲ್ಲಿರುವ[[ಸಕಲದಿವಿಯ]] ಅಥವಾ [[ಶಕ್ದ್ವೀಪೀ]] ಬ್ರಾಹ್ಮಣರು. [[ಮೊಘಲ್ ಸಾಮ್ರಾಜ್ಯ]]ದ ಪತನವಾಗುತ್ತಿದ್ದಂತೆಯೇ, [[ಔಧ್]] ನ ದಕ್ಷಿಣದಲ್ಲಿರುವ ಪ್ರದೇಶಗಳಲ್ಲಿ, ಫಲವತ್ತಾದ ನದಿಯ ನೀರಿನಿಂದ [[ಭತ್ತ]] ಬೆಳೆಯುವ [[ಬನಾರಸ್]], [[ಗೊರಖ್ ಪುರ್]], [[ದೇವರಿಯ]], [[ಗಾಝೀಪುರ್]], [[ಬಲ್ಲಿಯಾ]] ಪ್ರದೇಶಗಳಲ್ಲಿ ಮತ್ತು [[ಬಿಹಾರ್]] ಹಾಗೂ [[ಬಂಗಾಳ]]ದ ಗಡಿರೇಖೆಗಳಲ್ಲಿ, ತಮ್ಮ ಮಾರ್ಗವನ್ನು ಸದೃಢಗೊಳಿಸಿಕೊಂಡವರು 'ಸೇನಾ' ಅಥವಾ ಬೂಮಿಹಾರ್ ಬ್ರಾಹ್ಮಣರು.<ref>{{cite book
| first = Christopher Alan
| last = Bayly
| authorlink = Christopher Alan Bayly
| title = Rulers, Townsmen, and Bazaars: North Indian Society in the Age of British Expansion, 1770-1870
| publisher = [[Cambridge University Press]]
| year = 1983
| isbn = 9780521310543
| page = 489 (at p 18)
}}</ref> ಭೂಮಿಹಾರ್ ಬ್ರಾಹ್ಮಣರ ವಿಶಿಷ್ಟ 'ಜಾತಿ' ಗುರುತಿಸುವಿಕೆಯು ಪ್ರಮುಖವಾಗಿ ಅವರ ಸೇನಾ ಸೇವೆಯಿಂದ ಉಗಮವಾಗಿ, ಅವರ ಎಡೆಬಿಡದ 'ಸಾಮಾಜಿಕ ಖರ್ಚು ಮಾಡುವಿಕೆ'ಯ ರೀತಿಯ ಮೂಲಕ ದೃಢವಾಯಿತು; ಅವರ ಕಾರ್ಯಗಳು ಮಾನವ ಮತ್ತು ಅವನ ಸಂಬಂಧದವರು ಮೇಲ್ವರ್ಗದವರು ಮತ್ತು ರಾಜಠೀವಿಯವರೆಂದು ನಿರೂಪಿಸಿತು.<ref>{{cite book
| first = Susan
| last = Bayly
| title = Caste, Society and Politics in India from the Eighteenth Century to the Modern Age
| publisher = [[Cambridge University Press]]
| year = 2001
| isbn = 9780521798426
| page = 440 (at p 203)
}}</ref> 19ನೆಯ ಶತಮಾನದಲ್ಲಿ ಹಲವಾರು ಭೂಮಿಹಾರ್ ಬ್ರಾಹ್ಮಣರು [[ಜಮೀನ್ದಾರ]]ರಾಗಿದ್ದರು.<ref>{{cite book
| first = Christophe
| last = Jaffrelot
| title = India's silent revolution: the rise of the lower castes in North India
| publisher = [[Columbia University Press]]
| location = [[New York]]
| year = 2003
| isbn = 978-0231127868
| oclc = 50064516
| pages = 68
}}</ref> 1842ರಲ್ಲಿ [[ಬಂಗಾಳ ಸೇನೆ]]ಯಲ್ಲಿದ್ದ 67000 [[ಹಿಂದೂ]]ಗಳಲ್ಲಿ, 28000 ರಜಪುತರೆಂದೂ ಮತ್ತು 25000 ಬ್ರಾಹ್ಮಣರೆಂದೂ ಗುರುತಿಸಲಾಗಿದ್ದು, ಆ ವರ್ಗವು ಭೂಮಿಹಾರ್ ಬ್ರಾಹ್ಮಣರನ್ನೂ ಒಳಗೊಂಡಿತ್ತು.<ref name="The Boxers, China, and the World">{{cite book
| first = Robert A. Bickers
| second = R. G. Tiedemann
| title = The Boxers, China, and the World
| publisher = Rowman & Littlefield
| year = 2007
| isbn = 978-0742553958
| page = 231 (at p 63)
}}</ref> ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ, [[ಮಂಗಲ್ ಪಾಂಡೆ]]ಯ ನೇತೃತ್ವದಲ್ಲಿ ನಡೆದ [[1857ರ ಸಿಪಾಯಿದಂಗೆ]]<ref name="The Boxers, China, and the World"></ref>ಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರೆಂಬ ಅಭಿಪ್ರಾಯದ ಮೇರೆಗೆ, [[ಬಂಗಾಳದ ಸೇನೆ]]ಯಲ್ಲಿನ ಬ್ರಾಹ್ಮಣರ ಸಂಖ್ಯೆಯನ್ನು ಕಡಿಮೆಗೊಳಿಸಲಾಯಿತು. [[ಕಾಶಿ ರಾಜ್ಯಾಡಳಿತ]]ವೂ ಭೂಮಿಹಾರ್ ಬ್ರಾಹ್ಮಣರಿಗೇ ಸೇರಿತ್ತು ಮತ್ತು ದೊಡ್ಡ ಜಮೀನ್ದಾರಿಗಳಾದ [[ಬೆಟ್ಟಯ್ಯ]] ಮತ್ತು [[ತೇಕರಿ]]ಗಳೂ ಅವರಿಗೇ ಸೇರಿದ್ದವು.
 
====ಮಹಾರಾಷ್ಟ್ರ====
[[ಮಹಾರಾಷ್ಟ್ರದಲ್ಲಿ ]],ಪಂಚ ದ್ರಾವಿಡ ಬ್ರಾಹ್ಮಣರನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ: [[ಚಿತ್ಪವನ ಕೊಂಕಣಸ್ಥ ಬ್ರಾಹ್ಮಣರು]], [[ಗೌಡ ಸಾರಸ್ವತ ಬ್ರಾಹ್ಮಣರು]], [[ದೇಶಸ್ಥ ಬ್ರಾಹ್ಮಣರು]], [[ಕರ್ಹಾಡೆ ಬ್ರಾಹರಮಣರು]], ಮತ್ತು [[ದೇವ್ರುಖೆ]]. ಹೆಸರೇ ಸೂಚಿಸುವಂತೆ ಕೊಂಕಣಸ್ಥ ಬ್ರಾಹ್ಮಣರು ಕೊಂಕಣ ಪ್ರದೇಶದಿಂದ ಬಂದವರು. ಗೌಡ ಸಾರಸ್ವತ ಬ್ರಾಹ್ಮಣರು [[ಕೊಂಕಣ]] ಪ್ರದೇಶದಿಂದ ಅಥವಾ [[ಗೋವಾ]] ಅಥವಾ [[ಕರ್ಣಾಟಕ]]ದ ಮೂಲದವರಿರಬಹುದು,ದೇಶಸ್ಥ ಬ್ರಾಹ್ಮಣರು ಮಹಾರಾಷ್ಟ್ರದ ಬಯಲುಸೀಮೆಯವರು, ಕರ್ಹಾಡೆ ಬ್ರಾಹ್ಮಣರು ಪ್ರಾಯಶಃ ಕರ್ಣಾಟಕದವರು (ಈಗಿನ ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ಣಾಟಕಗಳನ್ನು ಹೊಂದಿದ್ದ ಭಾರತದ ಒಂದು ಪುರಾತನ ಪ್ರದೇಶ) ಮತ್ತು ದೇವ್ರುಖೆ ಬ್ರಾಹ್ಮಣರು [[ರತ್ನಗಿರಿ]]ಯ ಸಮೀಪದ ದೇವ್ರುಖ್ ಮೂಲದವರು.[[ಬಾಗ್ಡ ಬ್ರಾಹ್ಮಣರು]]
 
[[ಮಾಗಾ ಬ್ರಾಹ್ಮಣ]]ರ ಗೋತ್ರಕ್ಕೆ ಸೇರಿದವರು ತಾವು ಎಂದು ಹೇಳಿಕೊಳ್ಳುವ [[ದೈವಾಧ್ಯ]]ರು ಭಾರತದ ಪಶ್ಚಿಮ ಕರಾವಳಿಯಗುಂಟ ಕಾಣಸಿಗುತ್ತಾರೆ.[[ಶೃಂಗೇರಿ]]ಯ [[ಶಂಕರಾಚಾರ್ಯರು]] ಅವರನ್ನು ದ್ರಾವಿಡರೆಂದು ಗುರುತಿಸಿದರೂ, ,ಈ ಹೇಳಿಕೆಯನ್ನು ಸರ್ವಕಾಲದಲ್ಲೂ ಇತರ ಸಂಪ್ರದಾಯಸ್ಥ ಪಂಗಡಗಳಿಗೆ ಸಮ್ಮತವಾಗಿಲ್ಲ.
 
====ಗುಜರಾತ್‌‌====
[[ಗುಜರಾತ್]] ನಲ್ಲಿ, ಬ್ರಾಹ್ಮಣರ ಮುಖ್ಯ ಪಂಗಡಗಳೆಂದರೆ [[ನಗರ ಬ್ರಾಹ್ಮಣರು]], [[ಅನಾವಿಲ್ ಬ್ರಾಹ್ಮಣರು]], [[ಖೇದಾವಲ್]] ಬ್ರಾಹ್ಮಣರು, [[ಅವಧಿಕ್ ಬ್ರಾಹ್ಮಣರು]], [[ದಧೀಚಿ ಬ್ರಾಹ್ಮಣರು]], ವಡಾದ್ರ ಬ್ರಾಹ್ಮಣರು ಮತ್ತು [[ಶ್ರೀಮಾಲಿ ಬ್ರಾಹ್ಮಣರು]].(ಬಗಾಡ ಬ್ರಾಹ್ಮಣರು),ತ್ರಿವೇದಿ ಮೇವಾಡ ಬ್ರಾಹ್ಮಣರು,
ಭಟ್ ಮೇವಾಡ ಬ್ರಾಹ್ಮಣರು ಮತ್ತು ರಾಜಗುರು ಬ್ರಾಹ್ಮಣರು ಮತ್ತು ಸುಶಿಕ್ಷಿತ ಹಾಗೂ ಸಿರಿವಂತರಾದ ತಪೋಧನ್ ಬ್ರಾಹ್ಮಣರು; ತಪೋಧನ್ ಬ್ರಾಹ್ಮಣರಲ್ಲಿ ಹಲವಾರು ಜನರು ಗುಜರಾತ್ ಮತ್ತು ಮಹಾರಾಷ್ಟ್ರ(ಮುಂಬೈ)ದಲ್ಲಿ ದೊಡ್ಡ ಉದ್ದಿಮೆಗಳನ್ನು ಹೊಂದಿದ್ದಾರೆ. ಅವರು ಬ್ರಾಹ್ಮಣರಲ್ಲಿ ಕೆಳದರ್ಜೆಯವರು, ಆದರೆ ಪದವೇ ಸೂಚಿಸುವಂತೆ ತಪೋ-(ಶ್ರಮಜೀವಿ) ದನ್ (ಹಣ)- ಎಂದರೆ ಕಷ್ಟಪಟ್ಟು ದುಡಿದು ಹಣ ಸಂಪಾದಿಸುವವರು.
 
====ಹರಿಯಾಣ====
[[ಹರಿಯಾಣ]]ದಲ್ಲಿನ ಬ್ರಾಹ್ಮಣರು ಪ್ರಮುಖವಾಗಿ [[ದಧೀಚ್ ಬ್ರಾಹ್ಮಣರು]], ಆದಿ ಗೌರ್ ಬ್ರಾಹ್ಮಣರು, ಖಂಡೇಲ್ವಾಲ್ ಬ್ರಾಹ್ಮಣರು. ಆದರೆ ಹರಿಯಾಣದಲ್ಲಿನ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಬ್ರಾಹ್ಮಣರು ಆದಿ ಗೌರ್ ಬ್ರಾಹ್ಮಣರು. ಒಂದು ಅಂದಾಜಿನ ಪ್ರಕಾರ UP ಮತ್ತು ದೆಹಲಿಯಲ್ಲಿನ ಎಲ್ಲಾ ಬ್ರಾಹ್ಮಣರೂ ಆದಿ ಗೌರ್ ಪಂಗಡದವರು.
 
====ಮಧ್ಯ ಪ್ರದೇಶ್====
[[ಮಧ್ಯಪ್ರದೇಶ]]ದಲ್ಲಿ, ನಗ್ದಾಹ್ ಅಗ್ನಿಹೋತ್ರಿ ಬ್ರಾಹ್ಮಣರೆಂದು ಕರೆಯಲಾಗಿದ್ದು, [[ಮಾಳವ]] ಪ್ರಾಂತ್ಯದ ಇಂದೋರ್,ಉಜ್ಜಯಿನಿ, ದಿವಾಸ್,ಭೂಪಾಲ್ ರಟ್ಲಂ ಮತ್ತು ಮಧ್ಯಪ್ರದೇಶದ ಎಲ್ಲೆಡೆಗಳಲ್ಲೂ ಅಲ್ಲಲ್ಲಿ ಕಾಣಸಿಗುತ್ತಾರೆ; ವಿಶೇಷವಾಗಿare ಶ್ರೀಗೌಡ ಬ್ರಾಹ್ಮಣರು, [[ಸನಧ್ಯ ಬ್ರಾಹ್ಮಣರು]] ಮತ್ತು ಗುಜ್ಜರ-ಗೌಡ ಬ್ರಾಹ್ಮಣರು ಇಲ್ಲಿ ಕಾಣಬರುತ್ತಾರೆ. ಶ್ರೀ ಗೌಡ ಬ್ರಾಹ್ಮಣರು ಬಹುಸಂಖ್ಯೆಯಲ್ಲಿ [[ಮಾಳವ]] ಪ್ರದೇಶ, [[ಇಂದೋರ್]], [[ಉಜ್ಜಯಿನಿ]] ಮತ್ತು [[ದಿವಸ್]] ಗಳಲ್ಲಿ ಇದ್ದಾರೆ. ಪೂರ್ವ ಮಧ್ಯಪ್ರದೇಶದಲ್ಲಿ ಸರಯೂಪರಾಯಣ ಬ್ರಾಹ್ಮಣರ ಸಂಖ್ಯೆಯು ಹೆಚ್ಚಾಗಿ ಕಂಡುಬರುತ್ತದೆ. ಮಧ್ಯಪ್ರದೇಶದ ಹೋಷಂಗಾಬಾದ್ ಮತ್ತು ಹರ್ದಾ ಜಿಲ್ಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜುಝೋತಿಯಾ([[ಭೂಮಿಹಾರ್ ಬ್ರಾಹ್ಮಣ]]ರ ಒಂದು ವರ್ಗ) ಬ್ರಾಹ್ಮಣರಿದ್ದಾರೆ, ಉದಾಹರಣೆಗೆ [[ಸ್ವಾಮಿ ಸಹಜಾನಂದ ಸರಸ್ವತಿ]] ಮತ್ತು ನರ್ಮದೀಯ ಬ್ರಾಹ್ಮಣ(ಖಾಂಡ್ವಾ, ಹರ್ದಾ, ತೀಮಾರ್ನಿ, ಹೋಷಂಗಾಬಾದ್, ಭೂಪಾಲ್ ಮತ್ತು ನಿಮಾರ್ ಪ್ರಾಂತ್ಯಗಳ)ರಿದ್ದಾರೆ.(ಬಾಗ್ಡಾ ಬ್ರಾಹ್ಮಣರು)
ಖರ್ಗೋನೆ ಸನಧ್ಯ ಬ್ರಾಹ್ಮಣ ಕುಟುಂಬವು ಬಹಳ ಆಪ್ಯಾಯಮಾನವಾದ ಕುಟುಂಬವೆಂದು ಹೆಸರು ಪಡೆದಿತ್ತು.
 
====ನೇಪಾಳ====
[[ನೇಪಾಳ]]ದಲ್ಲಿ ಬೆಟ್ಟದ ಅಥವಾ [[ಖಾಸಾ]] ಬ್ರಾಹ್ಮಣರನ್ನು ಉಪಾಧ್ಯಾಯ ಬ್ರಾಹ್ಮಣರು, ಜೈಸಿ ಬ್ರಾಹ್ಮಣರು, ಮತ್ತು ಕುಮಾಯಿನ್ ಬ್ರಾಹ್ಮಣರೆಂದು ವರ್ಗೀಕರಿಸಲಾಗಿದೆ. ನೆವಾರಿ ಭಾಷೆಯನ್ನು ಮಾತನಾಡುವ ಉಪಾಧ್ಯಾಯ ಬ್ರಾಹ್ಮಣರು ಇತರ ಎರಡು ವರ್ಗಗಳಿಗಿಂತಲೂ ಬಹಳ ಮುಂಚೆಯೇ ನೇಪಾಳದಲ್ಲಿ ತಳವೂರಿದವರೆಂದು ಹೇಳಲಾಗುತ್ತದೆ. ಬೆಟ್ಟದ ಬ್ರಾಹ್ಮಣರ ಪೈಕಿ ಬಹಳಷ್ಟು ಜನರು [[ಖಾಸಾ]] ಮೂಲದವರೆಂಬ ಅಭಿಮತವಿದೆ.
 
====ಪಂಜಾಬ್‌====
[[ಪಂಜಾಬ್]] ನಲ್ಲಿ ಅವರನ್ನು [[ಸಾರಸ್ವತ]] ಬ್ರಾಹ್ಮಣರೆಂದು ಕರೆಯಲಾಗುತ್ತದೆ.
 
====ಕರ್ನಾಟಕ====
[[ಕರ್ಣಾಟಕ]]ದಲ್ಲಿ ಬ್ರಾಹ್ಮಣರು ಪ್ರಮುಖವಾಗಿ ಕನ್ನಡ ಅಥವಾ ತುಳು ಮಾತನಾಡುವ ಮಾಧ್ವರು (ಶ್ರೀ ಮಧ್ವಾಚಾರ್ಯರ ಅನುಯಾಯಿಗಳು), ಮತ್ತು ಸ್ಮಾರ್ತರು(ಶ್ರೀ ಶಂಕರಾಚಾರ್ಯರ ಅನುಯಾಯಿಗಳು) ಎಂದು ಪ್ರಮುಖವಾಗಿ ವಿಂಗಡಿತವಾಗಿದ್ದು, ಸ್ಮಾರ್ತರು ಮತ್ತೂ ವಿಂಗಡಿತಗೊಂಡು ಹವಿಗನ್ನಡ ಮಾತನಾಡುವ [[ಹವ್ಯಕರು]], ಕನ್ನಡ ಮಾತನಾಡುವ [[ಹೊಯ್ಸಳಕರ್ಣಾಟಕರು]], ತುಳು ಮಾತನಾಡುವ [[ಶಿವಾಲಿ]] ಮತ್ತು [[ಸ್ಥಾನಿಕ ಬ್ರಾಹ್ಮಣರು]], ಕನ್ನಡ ಮಾತನಾಡುವ [[ಕೋಟಾ ಬ್ರಾಹ್ಮಣರು]], ಮರಾಠಿ ಮಾತನಾಡುವ ಕರ್ಹಾಡ ಬ್ರಾಹ್ಮಣರೆಂದು ವಿಂಗಡಿಸಲಾಗಿದ್ದು, ಎಲ್ಲರೂ ತಮ್ಮದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ. ಕರ್ಣಾಟಕದ ಇತರ ಪ್ರಮುಖ ಬ್ರಾಹ್ಮಣ ಪಂಗಡವೆಂದರೆ ಹೆಬ್ಬಾರ್ ಶ್ರೀವೈಷ್ಣವರು. ಹೆಬ್ಬಾರ ಶ್ರೀವೈಷ್ಣವರು ಪುರಾತನ ತಮಿಳು ಮತ್ತು ಕನ್ನಡದ ವಿಶಿಷ್ಠ ಮಿಶ್ರಣವಾದ ಭಾಷೆಯಲ್ಲಿ ಮಾತನಾಡುತ್ತಾರೆ. ಮುಂಚಿನ ದಿನಗಳಲ್ಲಿ ಅವರು ತುಮಕೂರು ಜಿಲ್ಲೆಯ ಬೇಲೂರು, ಶಾಂತಿಗ್ರಾಮ, ನುಗ್ಗೇಹಳ್ಳಿ, ನೊಣವಿನಕೆರೆ, ಬಿಂಡಿಗನವಿಲೆ ಪಟ್ಟಣಗಳು ಮತ್ತು ಹಿರೇಮಗಳೂರಿಗೆ ಸೀಮಿತವಾಗಿದ್ದರು (ಈ ಎಲ್ಲವೂ ಕಾವೇರಿ ನದಿಗುಂಟ ದಕ್ಷಿಣ ಕನ್ನಡದಲ್ಲಿದೆ). ವೈಷ್ಣವರ ಗುರುವಾದ ಆಚಾರ್ಯ ಶ್ರೀ ರಾಮಾನುಜರೊಡನೆ ತಮಿಳು ನಾಡಿನಿಂದಿ ವಲಸೆ ಬಂದ ಶ್ರೀವೈಷ್ಣವರ ವಂಶಜರೇ ಹೆಬ್ಬಾರರು ಎಂದು ನಂಬಲಾಗಿದೆ.
 
====ರಾಜಾಸ್ಥಾನ್====
[[ರಾಜಾಸ್ಥಾನ್]] ನಲ್ಲಿ, ಬ್ರಾಹ್ಮಣರ ವರ್ಗವು ಪ್ರಮುಖವಾಗಿ ಈ ಕೆಳಕಂಡಂತಿದೆ:[[ರಾಜಪುರೋಹಿತ]] ಬ್ರಾಹ್ಮಣರು, [[Shrimali]] ಬ್ರಾಹ್ಮಣರು, ನಗದಃ ಅಗ್ನಿಹೋತ್ರಿ ಬ್ರಾಹ್ಮಣರು, [[ಬಾಗ್ಡಾ ಬ್ರಾಹ್ಮಣರು]], [[ದಧೀಚ್ ಬ್ರಾಹ್ಮಣರು]], [[ಸಾರಸ್ವತ್ ಬ್ರಾಹ್ಮಣರು]], [[ಪರೀಖ್]], [[ಗೌರ್ ಬ್ರಾಹ್ಮಣರು]], [[ಸನಧ್ಯ ಬ್ರಾಹ್ಮಣರು]], [[ಪುರೋಹಿತ್]] ಬ್ರಾಹ್ಮಣರು, [[ಶ್ರೀ ಗೌರ್ ಬ್ರಾಹ್ಮಣರು]], [[ಖಂಡೇಲ್ ವಾಲ್l ಬ್ರಾಹ್ಮಣರು]], [[ಗುರ್ಜರ್ ಗೌರ್]], [[ಪುಷ್ಕರ್ಣ]],[[ಗಾರ್ಗ್ ,ಗಾರು,ಗುರು]] ಬ್ರಾಹ್ಮಣರು.
[[ರಾಜಪುರೋಹಿತ್]] ಬ್ರಾಹ್ಮಣರು ಪ್ರಧಾನವಾಗಿ [[ರಾಜಾಸ್ಥಾನ್]]ನ [[ಮಾರ್ವಾರ್]] ಮತ್ತು [[ಗೋಡ್ವಾಡ್]] ಪ್ರದೆಶಗಳಲ್ಲಿ ಕಾಣಸಿಗುತ್ತಾರೆ.
ಅವರು ಹಳೆಯ ರಾಜರ ಆಸ್ಥಾನಗಳಲ್ಲಿ ''ರಾಜಗುರು'' ಗಳಾಗಿದ್ದ ಬ್ರಾಹ್ಮಣರ ವಂಶದವರು. [[ಶಕ್ದ್ವೀಪೀಯ]] ಬ್ರಾಹ್ಮಣರು ರಾಜಾಸ್ಥಾನದ ಹಲವಾರು ಸ್ಥಳಗಳಲ್ಲಿ ಇದ್ದಾರೆ ಮತ್ತು ಪಶ್ಚಿಮ ರಾಜಾಸ್ಥಾನದ ಹಲವಾರು ದೇವಸ್ಥಾನಗಳಲ್ಲಿ ಇವರೇ ಪ್ರಧಾನ ಪೂಜಾರಿಗಳಾಗಿದ್ದಾರೆ.
 
====ಸಿಂಧ್====
[[ಸಿಂಧ್]] ನಲ್ಲಿ ನರ್ಸರ್ಪುರ್ ಮತ್ತು ಸುಕ್ಕರ್ ಪ್ರಾಂತ್ಯಗಳ ಬ್ರಾಹ್ಮಣರನ್ನು ನರ್ಸರ್ಪುರಿ ಮತ್ತು ಸುಕ್ಕುರಿ ಸಿಂಧ್ ಸಾರಸ್ವತ ಬ್ರಾಹ್ಮಣರೆಂದು ಕರೆಯಲಾಗುತ್ತದೆ. ಇವರು ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಕಾಲದಲ್ಲಿ ಭಾರತಕ್ಕೆ ವಲಸೆ ಬಂದವರು.
 
====ಕಾಶ್ಮೀರ====
[[ಕಾಶ್ಮೀರ]] ಮತ್ತು [[ಹಿಮಾಚಲ ಪ್ರದೇಶ]]ಗಳಲ್ಲಿ, [[ಭಾರಧ್ವಾಜ]],[[ಡೋಗ್ರಾ]]ಗಳು ಭಾರತೀಯ ಪರ್ಯಾಯದ್ವೀಪದ ಹಿಮಾಲಯದ ಪ್ರದೇಶದಿಂದ ವಲಸೆ ಬಂದ ಬ್ರಾಹ್ಮಣರಿದ್ದಾರೆ.
 
====ಉತ್ತರ ಪ್ರದೇಶ====
[[ಉತ್ತರ ಪ್ರದೇಶ]]ದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ: ಸನಧ್ಯ, ಗೌಡ ಮತ್ತು ತ್ಯಾಗಿ (ಪಶ್ಚಿಮ UP), ಕಾನ್ಯಕುಬ್ಜ (ಮಧ್ಯ UP), ಸರಯೂಪರಿಣ್ (ಮಧ್ಯ ಉತ್ತರಪ್ರದೇಶ, ಪೂರ್ವ, ಈಶಾನ್ಯ,ಮತ್ತು ಆಗ್ನೇಯ UP) ಮತ್ತು ಮೈಥಿಲಿ (ವಾರಣಾಸಿ ಮತ್ತು ಆಗ್ರಾ ಪ್ರದೇಶಗಳು), ಸೂರ್ಯಧ್ವಜ ಬ್ರಾಹ್ಮಣರು (ಪಶ್ಚಿಮ UP), ವಾಯುವ್ಯ UP, ಎಂದರೆ, ಬುಂಡೇಲ್ ಖಂಡ್ ನಲ್ಲಿ ಜುಝೋತಿಯಾ ಬ್ರಾಹ್ಮಣರು ಹೆಚ್ಚು ಸಾಂದ್ರವಾಗಿದ್ದಾರೆ (ಕಾನ್ಯಕುಬ್ಜ ಬ್ರಾಹ್ಮಣರ ಒಂದು ವರ್ಗ: ''ಆಕರ'' . ಇತಿಹಾಸ ಮತ್ತು ವದಂತಿಯ ನಡುವೆ: ಬುಂಡೇಲ್ ಖಂಡ್ ನಲ್ಲಿ ಸಾಮರ್ಥ್ಯ ಮತ್ತು &amp; ಅಂತಸ್ತು, ಬರೆದವರು ರವೀಂದ್ರ ಕೆ ಜೈನ್).
ಜುಝೋತಿಯಾ ವರ್ಗದ [[ಭೂಮಿಹಾರ್ ಬ್ರಾಹ್ಮಣ]]ರ ಬಗ್ಗೆ ''ವಿಲಿಯಮ್ ಕ್ರೂಕ್'' ಹೀಗೆ ಬರೆಯುತ್ತಾರೆ, "ಕನೌಜ ಬ್ರಾಹ್ಮಣರ ಒಂದು ವರ್ಗ ([[ಕಾನ್ಯಕುಬ್ಜ ಬ್ರಾಹ್ಮಣ]]ರ)ದ ಇವರಿಗೆ ಈ ಹೆಸರು ತಮ್ಮ ಸ್ಥಳವಾದ ಜಜಕ್ಷುಕುವಿನಿಂದ ಬಂದಿದೆ, ಹೀಗೆಂದು [[ಮದನಪುರ]]ದ ಕೆತ್ತನೆಗಳಲ್ಲಿ (ಶಿಲಾಶಾಸನಗಳಲ್ಲಿ) ಉಲ್ಲೇಖವಾಗಿದೆ."<ref>{{cite book
| first = William
| last = Crooke
| authorlink = William Crooke
| title = The Tribes and Castes of the North-Western Provinces and Oudh
| publisher = [[Asian Educational Services]]
| location = 6A, Shahpur Jat, New Delhi-110049, India
| year =1999
| isbn = 8120612108
| volumes = 4
}}</ref> ಮಥುರೆ ಅಥವಾ ಮಥುರೀಯ ಬ್ರಾಹ್ಮಣರಾದ 'ಚೌಬೇಗಳು' ಮಥುರೆಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದಾರೆ.
 
====ಬಂಗಾಳ====
[[ಪಶ್ಚಿಮ ಬಂಗಾಳ]]ದಲ್ಲಿ ಬ್ರಾಹ್ಮಣರನ್ನು ಬರೇಂದ್ರ ಮತ್ತು ರಾರ್ಹಿ ಬ್ರಾಹ್ಮಣರೆಂದು ವಿಂಗಡಿಸಲಾಗಿದ್ದು, ಇದಕ್ಕೆ ಕಾರಣ ಅವರು ಬರೇಂದ್ರಭೂಮಿ (ಉತ್ತರ ಬಂಗಾಳ) ಮತ್ತು ರಾರ್ಹದೇಶ (ದಕ್ಷಿಣ ಬಂಗಾಳ){ಈಗಿನ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ}ದ ಮೂಲದವರಾಗಿದ್ದುದೇ ಆಗಿದೆ. ಬರೇಂದ್ರ ಪಂಗಡದವರು ರೂಢೀಗತವಾದ ಗುರುಗಳೋ, ಅರ್ಚಕರೋ ಆಗದೆ, ವೈದ್ಯಶಾಸ್ತ್ರ ಮತ್ತು ಶಸ್ತ್ರಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಾಂಪ್ರದಾಯಿಕ ಬ್ರಾಹ್ಮಣರಾಗಿದ್ದು, ತತ್ಕಾರಣವಾಗಿ ರಾರ್ಹಿಗಳು, ಬರೇಂದ್ರರು ಅವರ ವಂಶದ ಟಿಸಿಲುಗಳೇ ಆದರೂ, ಅವರನ್ನು ಬ್ರಾಹ್ಮಣರೆಂದು ಹಲವಾರು ಸಂದರ್ಭಗಳಲ್ಲಿ ಒಪ್ಪಿಕೊಳ್ಳುವುದಿಲ್ಲ.
 
ಬಂಗಾಳಿ ಬ್ರಾಹ್ಮಣರು ಬೆಳೆದುಬಂದ ರೀತಿಯ ಸಾಂಪ್ರದಾಯಿಕ ವಿಚಾರಗಳನ್ನು ಕುಲಗ್ರಂಥಗಳು(ಉದಾಹರಣೆ: ಕುಲದೀಪಿಕಾ) ಎಂಬ ಪಠ್ಯಗಳಲ್ಲಿ ನೀಡಲಾಗಿದೆ.ಈ ಗ್ರಂಥಗಳು 17ನೆಯ ಶತಮಾನದಲ್ಲಿ ಸಿದ್ಧಪಡಿಸಲ್ಪಟ್ಟವು. ವೈದಿಕ ಪರಿಣಿತರು ಸ್ಥಳೀಯವಾಗಿ ದೊರಕದ ಕಾರಣ,ಯಜ್ಞವನ್ನು ಮಾಡಲು ಇಚ್ಛಿಸಿದ ಆದಿಶೂರ ಎಂಬ ರಾಜನು ಕಾನ್ಯಕುಬ್ಜ[7]ದಿಂದ ಐವರು ಬ್ರಾಹ್ಮಣರನ್ನು ಕರೆಸಿದನೆಂದು ಉಲ್ಲೇಖಿತವಾಗಿದೆ. ಸಾಂಪ್ರದಾಯಿಕ ಗ್ರಂಥಗಳ ಪ್ರಕಾರ ಆದಿಶೂರನು ಬಲ್ಲಾಳಸೇನನ ಮಾತೃವಿನ ಕಡೆಯ ಪೂರ್ವಜನಾಗಿದ್ದು AD 1077ರಲ್ಲಿ ಐವರು ಬ್ರಾಹ್ಮಣರನ್ನು ಆಹ್ವಾನಿಸಿದ್ದನೆಂಬ ಉಲ್ಲೇಖವಿದೆ.
ಇತಿಹಾಸತಜ್ಞರು ಆದಿಶೂರನೆಂಬ ರಾಜನು ಉತ್ತರ ಬಿಹಾರ್ ಅನ್ನು ಆಳಿದನೆಂದೂ, ಬಂಗಾಳವನ್ನಲ್ಲವೆಂದೂ ಹೇಳುತ್ತಾರೆ. ಆದರೆ ಬಲ್ಲಾಳ ಸೇನ ಮತ್ತು ಅವನ ಪೂರ್ವಜರು ಬಂಗಾಳ ಮತ್ತು ಮಿಥಿಲಾ(ಎಂದರೆ ಉತ್ತರ ಬಿಹಾರ) ಎರಡನ್ನೂ ಆಳಿದರು. ಯಜ್ಞವನ್ನು ಮಾಡಲು ಮಿಥಿಲೆಗೆ ಕಾನ್ಯಕುಬ್ಜದಿಂದ ಬ್ರಾಹ್ಮಣರನ್ನು ಕರೆಸಿರುವ ಸಾಧ್ಯತೆಗಳು ಕಡಿಮೆ, ಏಕೆಂದರೆ ವೇದಗಳ ಕಾಲದಿಂದಲೂ ಮಿಥಿಲೆಯಲ್ಲಿ ಬ್ರಾಹ್ಮಣರ ಬಲವಾದ ಉಪಸ್ಥಿತಿಯಿದ್ದೇ ಇದ್ದಿತು.
ಮತ್ತೊಂದು ವೃತ್ತಾಂತದ ಪ್ರಕಾರ ರಾಜ ಶ್ಯಾಮಲ ವರ್ಮನು ಐವರು ಬ್ರಾಹ್ಮಣರನ್ನು ಕಾನ್ಯಕುಬ್ಜದಿಂದ ಕರೆಸಿದನೆಂದೂ, ಆ ಐವರು ವೈದಿಕ ಬ್ರಾಹ್ಮಣರ ಮೂಲ ಪುರುಷರಾದರೆಂದೂ ಮಾತಿದೆ. ಮೂರನೆಯ ಸುದ್ದಿಯ ಪ್ರಕಾರ ಐವರು ಬ್ರಾಹ್ಮಣರು ವರೇಂದ್ರ ಬ್ರಾಹ್ಮಣರ ಮೂಲಪುರುಷರಂತೆ. ಹೆಸರುಗಳ ಹೋಲಿಕೆಯ ಮೇಲೆ (ಉದಾಹರಣೆಗೆ ಉಪಾಧ್ಯಾಯ), ಮೊದಲು ಹೇಳಿದುದೇ ಹೆಚ್ಚು ಸಮಂಜಸವೆನಿಸುತ್ತದೆ.
 
ಈ ಎರಡು ಪ್ರಮುಖ ಪಂಗಡಗಳಲ್ಲದೆ ಒರಿಸ್ಸಾದಿಂದ ವಲಸೆ ಬಂದ ಉತ್ಕಲ ಬ್ರಾಹ್ಮಣರು ಮತ್ತು ಪಶ್ಚಿಮ ಮತ್ತು ಉತ್ತರ ಭಾರತದಿಂದ ವಲಸೆ ಬಂದ ವೈದಿಕ ಬ್ರಾಹ್ಮಣರು ಸಹ ಇದ್ದಾರೆ.
 
ಮಹಾಭಾರತ ಯುದ್ಧದ ನಂತರ ರಾಜ ಜನಮೇಜಯನು ಎಲ್ಲಾ ಸರ್ಪಗಳನ್ನೂ ಕೊಲ್ಲಲು ಒಂದು ಯಜ್ಞವನ್ನು ಹಮ್ಮಿಕೊಂಡನು, ಆದರೆ ಪುರೋಹಿತರಾಗಿ ಕಾರ್ಯವೆಸಗುವ ಸಾಮರ್ಥ್ಯವಿದ್ದ ಪಂಡಿತರು ಈ ಪ್ರಾಂತ್ಯದಲ್ಲಿರಲಿಲ್ಲ. ತಮಗೆ ಯಾವುದೇ ದಕ್ಷಿಣೆ ನೀಡಬಾರದೆಂಬ ಒಡಂಬಡಿಕೆಯ ಮೇರೆಗೆ ಬಂಗಾಳದ ಆದಿ ಗೌರ್ ಬ್ರಾಹ್ಮಣರು ಈ ಕಾಯಕವನ್ನು ಕೈಗೊಂಡರು. ಅವರು ಇಂದ್ರಪ್ರಸ್ಥಕ್ಕೆ ಬಂದು ಪುರೋಹಿತರಾಗಿ ಕಾರ್ಯವೆಸಗಿದರು ಹಾಗೂ ನಂತರದ ದಿನಗಳಲ್ಲಿ ಇಲ್ಲಿಗೇ ಸಂಪೂರ್ಣ ವರ್ಗವಾದರು.
 
===ಒರಿಸ್ಸಾ===
 
===ಪಂಚ ದ್ರಾವಿಡ===
 
ಪಂಚ ದ್ರಾವಿಡ (ದಕ್ಷಿಣ ಭಾರತದ ಐದು ವರ್ಗಗಳು): 1) ಆಂಧ್ರ, 2) ದ್ರಾವಿಡ (ತಮಿಳುನಾಡು ಮತ್ತು ಕೇರಲ), 3) ಕರ್ಣಾಟಕ, 4) ಮಹಾರಾಷ್ಟ್ರ ಮತ್ತು ಕೊಂಕಣ, ಮತ್ತು 5) ಗುಜರಾತ್.<ref name="autogenerated1"></ref>
 
ಮಹಾರಾಷ್ಟ್ರದಲ್ಲಿ ಪಂಚ ದ್ರಾವಿಡ ಬ್ರಾಹ್ಮಣರನ್ನು ಐದು ಪಂಗಡಗಳಾಗಿ ವಿಂಗಡಿಸಲಾಗಿದೆ: ಚಿತ್ಪವನ ಕೊಂಕಣಸ್ಥ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೇಶಸ್ಥ ಬ್ರಾಹ್ಮಣರು, ಕರ್ಹಾಡೆ ಬ್ರಾಹ್ಮಣರು, ಮತ್ತು ದೇವ್ರುಖೆ. ಹೆಸರೇ ಸೂಚಿಸುವಂತೆ ಕೊಂಕಣಸ್ಥ ಬ್ರಾಹ್ಮಣರು ಕೊಂಕಣ ಪ್ರದೇಶದವರು. ಗೌಡ ಸಾರಸ್ವತ ಬ್ರಾಹ್ಮಣರು ಕೊಂಕಣ ಪ್ರದೇಶದವರು ಅಥವಾ ಗೋವಾ ಅಥವಾ ಕರ್ಣಾಟಕದವರೂ ಆಗಿರಬಹುದು, ದೇಶಸ್ಥ ಬ್ರಾಹ್ಮಣರು ಮಹಾರಾಷ್ಟ್ರದ ಬಯಲುಸೀಮೆಯವರು, ಕರ್ಹಾಡೆ ಬ್ರಾಹ್ಮಣರು ಬಹುಶಃ ಕರ್ಹಾಟಕ್ (ಇಂದಿನ ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ಣಾಟಕವನ್ನು ಸೇರಿಸಿದಂತಿದ್ದ ಅಂದಿನ ಭಾರತದ ಒಂದು ಭಾಗ)ದವರಿರಬಹುದು ಮತ್ತು ದೇವ್ರುಖೆ ಬ್ರಾಹ್ಮಣರು ರತ್ನಗಿರಿಯ ಬಳಿಯ ದೇವ್ರುಖ್ ಪ್ರದೇಶದವರು. ಬಾಗ್ಡಾ ಬ್ರಾಹ್ಮಣರು
 
[[ಆಂಧ್ರಪ್ರದೇಶ]]ದಲ್ಲಿ ಬ್ರಾಹ್ಮಣರನ್ನು ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು: [[ವೈದಿಕ ಬ್ರಾಹ್ಮಣರು]] (ವೇದವಿದರು ಮತ್ತು ಧಾರ್ಮಿಕ ವಿಧಿಗಳನ್ನು ಆಚರಿಸುವವರು) ಮತ್ತು [[ನಿಯೋಗಿಗಳು]] (ಕೇವಲ ಸಾಂಸಾರಿಕ ವಿಧಿಗಳನ್ನು ಆಚರಿಸುವವರು) ಅವರನ್ನು ಮತ್ತೂ ಉಪಪಂಗಡಗಳಾಗಿ ವಿಂಗಡಿಸಲಾಗಿದೆ. ಆದರೆ, ಬಹುತೇಕ ಬ್ರಾಹ್ಮಣರು, ವೈದಿಕ ಹಾಗೂ ನಿಯೋಗಿಗಳಿಬ್ಬರೂ, ಕೇವಲ ಸಾಂಸಾರಿಕ ವೃತ್ತಿಯನ್ನೇ ಕೈಗೊಳ್ಳುತ್ತಾರೆ.<ref>ವೇಪಚೇದು ಶಿಕ್ಷಣ ಸಂಸ್ಥೆಯಲ್ಲಿ ಆಂಧ್ರಪ್ರದೇಶದ ಬ್ರಾಹ್ಮಣರ ಬಗ್ಗೆ ಒಂದು ವಿಸ್ತೃತ ಲೇಖನ[http://www.vedah.net/manasanskriti/Brahmins.html#Brahmins_of_Andhra_Pradesh ]</ref>
 
[[ತಮಿಳುನಾಡು]] ವಿನಲ್ಲಿ ಬ್ರಾಹ್ಮಣರು ಎರಡು ಪ್ರಮುಖ ಪಂಗಡಗಳಿಗೆ ಸೇರಿದ್ದಾರೆ: [[ಐಯ್ಯಂಗಾರ್]] ಮತ್ತು [[ಐಯ್ಯರ್]]. ಐಯ್ಯಂಗಾರರು [[ವೈಷ್ಣವ]] ಬ್ರಾಹ್ಮಣರಾಗಿದ್ದು, ಅವರಲ್ಲೂ ಎರಡು ಪಂಗಡಗಳಿವೆ: [[ವಡಕಳೈ]] ಮತ್ತು [[ತೆಂಕಳೈ]]. ಅವರು ಸಾಮಾನ್ಯವಾಗಿ [[ರಾಮಾನುಜ]]ರ ಅನುಯಾಯಿಗಳು. ಐಯ್ಯರ್ ರಲ್ಲಿ [[ಸ್ಮಾರ್ತ]] ಮತ್ತು [[ಶೈವ]] ಬ್ರಾಹ್ಮಣರು ಇದ್ದಾರೆ ಹಾಗೂ ಸ್ಥೂಲವಾಗಿ [[ವಡಮ]], ವತಿಮ, ಬೃಹಚ್ಚರಣಂ, ಅಷ್ಟಸಹಸ್ರಂ, ಶೋಲಿಯಾರ್ ಮತ್ತು [[ಗುರುಕ್ಕಲ್]] ಎಂದು ವಿಂಗಡಿತವಾಗಿದ್ದಾರೆ. ಅವರು ಸಾಮಾನ್ಯವಾಗಿ [[ಆದಿ ಶಂಕರಾಚಾರ್ಯ]]ರ ಅನುಯಾಯಿಗಳಾಗಿದ್ದಾರೆ ಮತ್ತು ಸಂಖ್ಯೆಯಲ್ಲಿ, ತಮಿಳು ನಾಡಿನ ಸುಮಾರು ಮುಕ್ಕಾಲು ಭಾಗ ಬ್ರಾಹ್ಮಣರು ಇವರೇ ಆಗಿದ್ದಾರೆ.
 
[[ಕರ್ಣಾಟಕ]]ದಲ್ಲಿ ಬ್ರಾಹ್ಮಣರು ಸ್ಥೂಲವಾಗಿ ಎರಡು ಗುಂಪುಗಳಾಗಿ ವರ್ಗೀಕೃತವಾಗಿದ್ದಾರೆ: [[ಮಾಧ್ವ]](ಶ್ರೀ [[ಮಧ್ವಾಚಾರ್ಯ]]ರ ಅನುಯಾಯಿಗಳು) ಮತ್ತು [[ಸ್ಮಾರ್ತ]] (ಶ್ರೀ [[ಆದಿ ಶಂಕರಾಚಾರ್ಯ]]ರ ಅನುಯಾಯಿಗಳು). ಅವರು ಮತ್ತೂ ಹಲವಾರು ಉಪ-ಪಂಗಡಗಳಾಗಿ ವಿಂಗಡಿತವಾಗಿದ್ದಾರೆ.
 
ಈ ಗುಂಪುಗಳಲ್ಲದೆ ಇರುವ ಇತರ ಬ್ರಾಹ್ಮಣ ಪಂಗಡಗಳೆಂದರೆ [[ಹವ್ಯಕ]], ಕೋಟಾ, [[ಶಿವಳ್ಳಿ]], ಸಾರಸ್ವತ, ಮುಂತಾದುವು.
 
[[ಕೇರಳ]]ದಲ್ಲಿ ಬ್ರಾಹ್ಮಣರು ಸ್ಥೂಲವಾಗಿ ನಾಲ್ಕು ಗುಂಪುಗಳಾಗಿ ವರ್ಗೀಕೃತವಾಗಿದ್ದಾರೆ: [[ನಂಬೂದಿರಿ]]ಗಳು, [[ಪೊಟ್ಟಿ]]ಗಳು, ಎಝಾವತಿ ಬ್ರಾಹ್ಮಣರು (ಸ್ಮಾರ್ತ ಪಂಗಡ) ಮತ್ತು [[ಪುಷ್ಪಕ]]ರು. (ಪುಷ್ಪಕರನ್ನು ಸಾಮಾನ್ಯವಾಗಿ ಅಂಪಲವಾಸಿ ಪಂಗಡದೊಂದಿಗೆ ಸೇರಿಸಲಾಗುತ್ತದೆ). ಪ್ರಮುಖ ಪೂಜಾವಿಧಿಗಳನ್ನು [[ನಂಬೂದಿರಿ]]ಗಳು ಆಚರಿಸುತ್ತಾರೆ ಹಾಗೂ ಇತರ ದೇಗುಲ ಸಮಬಂಧಿತ ಚಟುವಟಿಕೆಗಳಾದ ಕಝಕಂ ಗಳನ್ನು [[ಪುಷ್ಪಕ ಬ್ರಾಹ್ಮಣರು]] ಮತ್ತು ಇತರ ಅಂಪಲವಾಸಿಗಳು ಮಾಡುತ್ತಾರೆ. ಶ್ರೀ [[ಆದಿ ಶಂಕರ]]ರು [[ಕೇರಳ]]ದ ಒಂದು ಗ್ರಾಮವಾದ [[ಕಾಲಡಿ]]ಯಲ್ಲಿ ಶಿವಗುರು ಮತ್ತು ಆರ್ಯಾಂಬ ಎಂಬ [[ನಂಬೂದಿರಿ ಬ್ರಾಹ್ಮಣ]] ದಂಪತಿಗಳಿಗೆ ಜನಿಸಿದರು ಮತ್ತು ಮೂವತ್ತೆರಡು ವರ್ಷಗಳ ಕಾಲ ಜೀವಿಸಿದರು. ಕೇರಳದ ನಂಬೂದಿರಿ ಬ್ರಾಹ್ಮಣರು, ಪೊಟ್ಟಿ ಬ್ರಾಹ್ಮಣರು ಮತ್ತು ಪುಷ್ಪಕ ಬ್ರಾಹ್ಮಣರು ಶ್ರೀ [[ಆದಿ ಶಂಕರಾಚಾರ್ಯ]]ರ ತತ್ತ್ವಗಳನ್ನು ಅನುಸರಿಸುತ್ತಾರೆ. ತಮಿಳು ನಾಡಿನಿಂದ ಕೇರಳಕ್ಕೆ ವಲಸೆ ಬಂದ ಬ್ರಾಹ್ಮಣರನ್ನು ಕೇರಳದಲ್ಲಿ ಪಟ್ಟಾರ್ ಎಂದು ಕರೆಯುತ್ತಾರೆ.ಎಝಾವತಿಯರು ಸಜ [[ಚೇರ]] ವಂಶಕ್ಕೆ ಸಂಬಂಧಿಸಿದ ಕೇರಳದ ಬ್ರಾಹ್ಮಣರು. ಅವರು ಪೊಟ್ಟಿ ಬ್ರಾಹ್ಮಣರು ಕೇರಳದಲ್ಲಿ ಪಡೆಯುವ ಮಾನ್ಯತೆಯನ್ನೇ ಹೆಚ್ಚು ಕಡಿಮೆ ಪಡೆಯುತ್ತಾರೆ.
 
[[ಮಧ್ಯಪ್ರದೇಶ]]ದಲ್ಲಿ [[ಸೋಮನಾಥ ದೇವಸ್ಥಾನ]]ದ ಅರ್ಚಕರ ವಂಶಜರಾದ [[ನರಮ್ ದೇವ್ ಬ್ರಾಹ್ಮಣರು]] ಗುಜರಾತ್ ನಿಂದ ಮಧ್ಯಪ್ರದೇಶಕ್ಕೆ ಮಹಮ್ಮದ್ ಘಝ್ನಿಯ [[ಸೌರಾಷ್ಟ್ರ]]ದ ಮೇಲಿನ ಧಾಳಿ ಮತ್ತು [[ಸೋಮನಾಥ]]ದ ವಿನಾಶಗೊಳಿಸಿದ ನಂತರ ವಲಸೆ ಬಂದರು ಮತ್ತು [[ನರ್ಮದಾ ನದಿ]]ಯ ತೀರದಲ್ಲಿ ವಾಸಿಸಲಾರಂಬಿಸಿದುದರ ಫಲವಾಗಿ [[ನರ್ಮದೀಯ ಬ್ರಾಹ್ಮಣರು]] ಅಥವಾ [[ನರಮ್ ದೇವರು]] ಎಂಬ ಹೆಸರನ್ನು ಪಡೆದರು. [[ಆದಿ ಶಂಕರಾಚಾರ್ಯ]]ರ ಗುರುವಾದ [[ಗೋವಿಂದಾಚಾರ್ಯ]]ರು ಈ ಪಂಗಡಕ್ಕೆ ಸೇರಿದವರೆಂದೂ, [[ನರ್ಮದಾ]] ತಟಾಕದಲ್ಲಿ [[ಓಂಕಾರೇಶ್ವರ]]ದಲ್ಲಿ ಅವರಿಗೆ ದೀಕ್ಷೆ ನೀಡಿದರೆಂದೂ ಪ್ರತೀತಿ ಇದೆ. [[ನರಮ್ ದೇವ್ ರು]] ಸಾಂದ್ರವಾಗಿ [[ನಿಮಾರ್]] ([[ಖಾಂಡ್ವಾ]] ಮತ್ತು [[ಖಾರ್ಗೋನ್]])ಮತ್ತು [[ಮಧ್ಯಪ್ರದೇಶ]]ದ [[ಭುವನ]] ಪ್ರದೇಶ ([[ಹಾರ್ದಾ]]) ವಾಸಿಸುತ್ತಾರೆ.
 
 
[[ಗುಜರಾತ್]] ನಲ್ಲಿ, ಎಂಟು ವಿಧವಾದ ಬ್ರಾಹ್ಮಣ ಪಂಗಡಗಳಿವೆ: [[ಅನಾವಿಲ್ ಬ್ರಾಹ್ಮಣರು]], [[ಔದೊಚ್ಚು ಬ್ರಾಹ್ಮಣರು]], [[ಬಾರ್ಡಾಯ್ ಬ್ರಾಹ್ಮಣರು]], [[ಗಿರಿನಾರಾಯಣ್ ಬ್ರಾಹ್ಮಣರು]], [[ಖೇದಾವಲ್]], [[ನಗರ ಬ್ರಾಹ್ಮಣರು]],
[[ಶ್ರೀಮಾಲಿ ಬ್ರಾಹ್ಮಣರು]], [[ಸಿಧ್ರಾ-ರುಧ್ರಾ ಬ್ರಾಹ್ಮಣರು]] ಮತ್ತು [[ಮೋಧ್]] ಬ್ರಾಹ್ಮಣರು. ಮೋಧ್ ಬ್ರಾಹ್ಮಣರು ಮಾತಂಗಿ ಮೋಧೇಶ್ವರೀ ಮಾತೆ(ಮೋಧೇರಾ)ಯನ್ನು ಪೂಜಿಸುತ್ತಾರೆ ಮತ್ತು ಹೆಚ್ಚಾಗಿ ಉತ್ತರ ಗುಜರಾತ್ ಮತ್ತು [[ಬರೋಡಾ]] ಪ್ರದೇಶಗಳಲ್ಲಿ ವಾಸಿಸುತ್ತಾರೆ.
ಬ್ರಾಹ್ಮಣರನ್ನು ಗುರುತಿಸುವುದು ಈ ಕೆಳಕಂಡಂತೆ:
''ಜನ್ಮನೋ ಜಾಯತೇ ಶೂದ್ರಾ ಸಂಕರಾತ್ ದ್ವಿಜ ಉಚ್ಯತೇ''
ವೇದಪತಿ ಭವೇತ್ ವಿಪ್ರ ಬ್ರಹ್ಮಮ್ ಜಾನಾತಿ ಬ್ರಾಹ್ಮಣ''''
ಹುಟ್ಟಿನಿಂದ ಬ್ರಾಹ್ಮಣನು ಶೂದ್ರನೇ. ಆದರೆ ಅವನು ಮುಂಜಿಯನ್ನು ಮಾಡಿಕೊಂಡಾಗ ಅವನು ದ್ವಿಜ| ಹಾಗೂ ಅವನು ವೇದವನ್ನು ಕಲಿತಾಗ ವಿಪ್ರನಾಗುತ್ತಾನೆ ಮತ್ತು ಬ್ರಹ್ಮಜ್ಞಾನವನ್ನು ಪಡೆದಾಗ ಬ್ರಾಹ್ಮಣನಾಗುತ್ತಾನೆ||
 
==ಬರ್ಮಾ==
{{Burmese characters}}
ಐತಿಹಾಸಿಕವಾಗಿ, ಆಧುನಿಕ [[ಬರ್ಮೀ ಭಾಷೆ]]ಯಲ್ಲಿ ''ಪೊನ್ನ'' {{my|ပုဏ္ဏား}} ಎಂದೇ ಖ್ಯಾತರಾದ ಬ್ರಾಹ್ಮಣರು (1900ರ ವರೆಗೂ ''ಪೊನ್ನ'' ಎಂದರೆ ವಸಾಹತುಶಾಹಿ ಆಳ್ವಿಕೆಗೆ ಮುನ್ನ ಬಂದ [[ಭಾರತೀಯರ]]ನ್ನು ಕರೆಯುವ ಹೆಸರಾಗಿತ್ತು, ಇದು ಬ್ರಿಟಿಷ್ ಆಳ್ವಿಕೆಯಲ್ಲಿ ಬಂದ ಭಾರತೀಯರಾದ ''ಕಾಳ'' ರಿಗಿಂತಲೂ ಭಿನ್ನವಾದುದು) ಬ್ರಿಟಿಷ್ ವಸಾಹತುಶಾಹಿಗೆ ಮುನ್ನ ಪ್ರಭಾವಿ ತಂಡವಾಗಿದ್ದರು. [[ಕೋನ್ ಬಾಂಗ್ ವಂಶದವರ ಆಳ್ವಿಕೆ]]ಯ ಕಾಲದಲ್ಲಿ ರಾಜ್ಯದ ರಾಜಧಾನಿಗಳನ್ನು ಬದಲಾಯಿಸಲು, ಸಮರ ಸಾರಲು, [[ಮಹಾಮುನಿ ಬುದ್ಧ]]ರಂತಹ ಬೌದ್ಧ ತಾಣಗಳಿಗೆ ಕಾಣಿಕೆ, ನೈವೇದ್ಯ ಅರ್ಪಿಸಲು,ಮತ್ತು ತಾರಾಫಲ (ಜ್ಯೋತಿಷ್ಯ) ಅರಿಯಲು ರಾಜರು ಬ್ರಾಹ್ಮಣರ ಸಲಹೆ ಕೇಳುತ್ತಿದ್ದರು.<ref name="leider">{{cite journal |last=Leider |first=Jacques P. |year= |title=Specialists for Ritual, Magic and Devotion: The Court Brahmins of the Konbaung Kings |journal=The Journal of Burma Studies |volume=10 |pages=159–180 }}</ref> ಅವರು ಯಾವ ಮೂಲದವರು ಎಂಬ ಆಧಾರದ ಮೇಲೆ ಬರ್ಮಾದ ಬ್ರಾಹ್ಮಣರನ್ನು ನಾಲ್ಕು ಸಾಮಾನ್ಯ ಗುಂಪುಗಳಾಗಿ ವಿಂಗಡಿಸಬಹುದು:
* ಮಣಪುರ ಬ್ರಾಹ್ಮಣರು {{lang-my|မုနိပူရဗြာဟ္မဏ}}- [[ಮಣಿಪುರ]]ವು ಬರ್ಮಾದ ಆಳ್ವಿಕೆಗೆ ಬಂದ ರಾಜ್ಯವಾದ ನಂತರ 1700ರ ದಶಕದಲ್ಲಿ ಬರ್ಮಾಕ್ಕೆ ಕಳುಹಿಸಲ್ಪಟ್ಟ ಬ್ರಾಹ್ಮಣರು ಮತ್ತು ಮಣಿಪುರದ ರಾಯಭಾರಿಗಳು.
* ಅರಕಾನೀಸ್ ಬ್ರಾಹ್ಮಣರು {{lang-my|ရခိုင်ဗြာဟ္မဏ}}: ಕೋನ್ ಬಾಂಗ್ ರಾಜನಾದ [[ಬೋಡಾವ್ ಪಾಯಾ]]ನು [[ಅರಕಾನ್]] ಅನ್ನು ಆಕ್ರಮಿಸಿದಾಗ ಅರಕಾನ್ ನಿಂದ ಬರ್ಮಾಕ್ಕೆ ಕರೆದೊಯ್ಯಲ್ಪಟ್ಟ ಬ್ರಾಹ್ಮಣರು.
* ಸಗಾಯಿಂಗ್ ಬ್ರಾಹ್ಮಣರು: ಬರ್ಮಾದ ಸಮಾಜದಲ್ಲಿನ ಅತಿ ಪ್ರಾಚೀನ ಬ್ರಾಹ್ಮಣರು; ಇವರು ಕೋನ್ ಬಾಂಗ್ ರಾಜ್ಯಾಡಳಿತಕ್ಕೆ ಸಲಹೆ ನೀಡುವ ಮುನ್ನ [[ಪ್ಯು]], [[ಬರ್ಮನ್]] ಮತ್ತು [[ಮಾನ್]] ಪ್ರಭುತ್ವದ ರಾಜ್ಯಗಳಿಗೆ ಸಲಹೆಗಾರರಾಗಿದ್ದರು.
* ಭಾರತೀಯ ಬ್ರಾಹ್ಮಣರು: ಬರ್ಮಾವು [[ಬ್ರಿಟಿಷ್ ರಾಜ್]] ನ ಪಾಲಾದಾಗ, ಬ್ರಿಟಿಷ್ ವಸಾಹತುಶಾಹಿ ಆಡಳಿತದೊಂದಿಗೆ ಬಂದಂತಹ ಬ್ರಾಹ್ಮಣರು.
 
ಬರ್ಮಾದ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಪ್ರಕಾರ, ಬರ್ಮಾದಲ್ಲಿ ಬ್ರಾಹ್ಮಣರು ನಾಲ್ಕು-[[ಜಾತಿಯ ವ್ಯವಸ್ಥೆ]]ಗೆ ಗುರಿಯಾಗಿದ್ದು, ಅದರಲ್ಲಿ ಬ್ರಾಹ್ಮಣರು{{my|ဗြာဟ္မဏ}}, ಕ್ಷತ್ರಿಯರು(ಖೆಟ್ಟಯ), ವೈಶ್ಯರು (ಬೇಯ್ಷಾಗಳು) ಮತ್ತು ಶೂದ್ರರು (ತೊಟ್ಟಿಯ)ಗಳಿದ್ದರು. ಬರ್ಮಾದ ಪ್ರಭುತ್ವವು ಜಾತಿ ಪದ್ಧತಿಯನ್ನು ಭಾರತೀಯರ ಮೇಲೆ ಹೇರಿದುದರಿಂದ, ಜಾತಿ ಸಂಪ್ರದಾಯವನ್ನು ಮತ್ತು ಕಟ್ಟಳೆಗಳನ್ನು ಮುರಿದ ಬ್ರಾಹ್ಮಣರಿಗೆ ಶಿಕ್ಷೆ ವಿಧಿಸಲಾಗುತ್ತಿತ್ತು. ಅರಕಾನ್ ನ ರಾಜ್ಯಭಾರದಲ್ಲಿ, ಶಿಕ್ಷೆಗೊಳಗಾದ ಬ್ರಾಹ್ಮಣರು ಹಲವಾರು ಬಾರಿ ''ಕ್ಯುನ್ ಪೊನ್ನ'' {{my|ကျွန်ပုဏ္ဏား}}, ಎಂದರೆ ಗುಲಾಮ ಬ್ರಾಹ್ಮಣರು ಆಗುತ್ತಿದ್ದರು ಮತ್ತು ಇವರು ಬುದ್ಧನ ಪ್ರತಿಮೆಗಳಿಗೆ ಹೂವನ್ನು ಹಾಕಿವುದು ಮತ್ತು ಕೀಳು ಕಾರ್ಯಗಳನ್ನು ಎಸಗುವುದನ್ನು ಕೈಗೊಳ್ಳಬೇಕಾಗುತ್ತಿತ್ತು. ಕೋನ್ ಬಾಂಗ್ ರಾಜ್ಯಾಡಳಿತದಲ್ಲಿ, ಜಾತಿಯನ್ನು ಧರಿಸಿದ ''[[ಸಾಲ್ವೆ]]'' (ದಾರ)ಗಳ ಸಂಖ್ಯೆಗಳ ಮೂಲಕ ಅಳೆಯಲಾಗುತ್ತಿತ್ತು; ಬ್ರಾಹ್ಮಣರು ಒಂಬತ್ತು ಎಳೆಗಳನ್ನು ಧರಿಸುತ್ತಿದ್ದರು, ಕೀಳುಜಾತಿಯವರು ದಾರವನ್ನೇ ಧರಿಸುತ್ತಿರಲಿಲ್ಲ. ಒಂಬತ್ತು ದೈವಿಕಗಳು ಎಂಬ ಒಂಬತ್ತು-ದೇವತೆಗಳ ಪೂಜಾವಿಧಿ(''ಫಾಯಾ ಕೋ ಸೂ'' {{my|ဘုရားကိုးစု}})ಯು ಮೂಲತಃ ಒಂಬತ್ತು ದೇವತೆಗಳನ್ನು, [[ಬುದ್ಧ ]]ಮತ್ತು ಎಂಟು [[ಅರ್ಹಂತ]]ರನ್ನು, ಅಥವಾ ಒಂಬತ್ತು ದೇವತೆಗಳ - ಅದರಲ್ಲಿ ಐದು ಹಿಂದೂ ದೇವತೆಗಳು ಮತ್ತು ನಾಲ್ಕು [[ನಾಟ್]] ಗಳಿರುವ ಗುಂಪನ್ನು, ಸಂಪ್ರೀತಗೊಳಿಸುವ ಬರ್ಮೀಯರ{{dn|Puja|puja}} ಕ್ರಮವಾಗಿದ್ದು (ಬರ್ಮೀ ಭಾಷೆಯಲ್ಲಿ ''ಪುಝಾ'' ) ಇದರಲ್ಲಿ ಬ್ರಾಹ್ಮಣರದು ಪ್ರಮುಖವಾದ ಪಾತ್ರವಿರುತ್ತದೆ.<ref name="leider"></ref> ಈ ಆಚರಣೆಯನ್ನು ಆಧುನಿಕ ಕಾಲದ ಬರ್ಮಾದವರೂ ಆಚರಿಸುವುದನ್ನು ಮುಂದುವರಿಸಿದ್ದಾರೆ.
 
==ಗೋತ್ರಗಳು ಮತ್ತು ಪ್ರವರಗಳು==
{{see also|Classification of Brahmins}}
ಸಾಮಾನ್ಯವಾಗಿ, [[ಗೋತ್ರ]]ವು ಯಾವುದೇ ವ್ಯಕ್ತಿಯು ಒಬ್ಬ ಪುರುಷ ಪೂರ್ವಜನಿಂದ ಸತತವಾಗಿ ಮುಂದುವರಿದ ಪುರುಷರ ಪೀಳಿಗೆಯನ್ನು ಪತ್ತೆ ಹಚ್ಚುವಿಕೆಯ ದ್ಯೋತಕವಾಗಿದೆ. ವ್ಯಾಕರಣದ ಉದ್ದೇಶಗಳಿಗಾಗಿ ಪಾಣಿನಿಯು ಗೋತ್ರವೆಂದರೆ 'ಅಪಥ್ಯಮ್ ಪೌತ್ರಪ್ರಭೃತಿ ಗೋತ್ರಮ್' (IV. 1. 162),ಎಂದರೆ 'ಗೋತ್ರ ಎಂಬ ಪದವು (ಒಬ್ಬ ಋಷಿಯ) ಸಂತತಿಯಾಗಿದ್ದು ಮಗನ ಮಗನಿಂದ ಆರಂಭವಾಗುತ್ತದೆ ಎಂದು ವಿವರಿಸುತ್ತಾರೆ. ಒಬ್ಬ ವ್ಯಕ್ತಿಯು 'ನಾನು ಕಾಶ್ಯಪಸ ಗೋತ್ರದವನು' ಎಂದರೆ ಅವನು ತನ್ನ ಪೂರ್ವಜರ ಪುರುಷ ಸಂತತಿಯನ್ನು ಕಾಶ್ಯಪರವರೆಗೂ ಅನೂಚಾನವಾಗಿ ಪತ್ತಹಚ್ಚಿರುವನೆಂದರ್ಥ. ಬೌಧಾಯನರ ರೌತ-ಸೂತ್ರದ ಪ್ರಕಾರ [[ವಿಶ್ವಾಮಿತ್ರ]], [[ಜಮದಗ್ನಿ]], [[ಭರಧ್ವಾಜ]], [[ಗೌತಮ]], [[ಅತ್ರಿ]], [[ವಸಿಷ್ಠ]], [[ಕಾಶ್ಯಪ]] ಮತ್ತು [[ಅಗಸ್ತ್ಯ]]ರು 8 ಋಷಿಗಳು. ಈ ಎಂಟು ಋಷಿಗಳ ಪೀಳಿಗೆಯನ್ನೇ ಗೋತ್ರವೆಂದು ಕರೆಯುವುದು. ಈ ಎಂಟು ಗೋತ್ರಗಳ ಗಣನೆಯು [[ಪಾಣಿನಿ]]ಗೆ ತಿಳಿದಿತ್ತೆಂದು ತೋರುತ್ತದೆ. ಈ ಗೋತ್ರಗಳು ಪ್ರಜಾಪತಿ ಅಥವಾ ನಂತರದ ಬ್ರಹ್ಮರಿಗೆ ನೇರವಾಗಿ ಸಂಬಂಧಿಸಿಲ್ಲ. ಈ ಎಂಟು ಋಷಿಗಳ ಮಕ್ಕಳೇ (ಅಪತ್ಯ) ಗೋತ್ರಗಳು ಮತ್ತು ಇದರಿಂದ ಹೊರತಾದವರನ್ನು 'ಗೋತ್ರಾವಯವ' ಎಂದು ಕರೆಯುತ್ತಾರೆ.<ref>ವೇಪಚೇದು ಶಿಕ್ಷಣ ಸಂಸ್ಥೆಯಲ್ಲಿ ಬ್ರಾಹ್ಮಣರ ಗೋತ್ರಗಳ ಬಗ್ಗೆ ಒಂದು ವಿಸ್ತೃತ ಲೇಖನ [http://www.vedah.net/manasanskriti/Brahmins.html#Brahmin_Sages_and_Branches ]</ref>
 
ಗೋತ್ರಗಳನ್ನು ಗುಂಪುಗಳಾಗಿ ವಿಂಗಡಿಸಲಾಗುತ್ತದೆ; ಉದಾಹರಣೆಗೆ ಅಶ್ವಲಾಯನ-ಶ್ರೌತಸೂತ್ರದ ಪ್ರಕಾರ ವಸಿಷ್ಠಗಣದಲ್ಲಿ ನಾಲ್ಕು ಉಪವಿಭಾಗಗಳಿವೆ. ಅವುಗಳು ಉಪಮನ್ಯು, [[ಪರಾಶರ]], [[ಕುಂಡಿನ]] ಮತ್ತು [[ವಸಿಷ್ಠ]] (ಮೊದಲ ಮೂರು ಅಲ್ಲದೆ). ಈ ನಾಲ್ಕಕ್ಕೂ ಮತ್ತಷ್ಟು ಉಪ-ವಿಂಗಡಣೆಗಳಿವೆ, ಪ್ರತಿಯೊಂದನ್ನೂ ಗೋತ್ರವೆಂದು ಕರೆಯುತ್ತಾರೆ. ಅಲ್ಲಿಗೆ ಕ್ರಮವು ಮೊದಲು ಗಣಗಳು, ನಂತರ ಪಕ್ಷಗಳು, ತದನಂತರ ವೈಯಕ್ತಿಕ ಗೋತ್ರಗಳು ಎಂದಾಯಿತು. ಮೊದಲನೆಯುದು [[ಭೃಗು]] ಮತ್ತು [[ಅಂಗೀರಸ]] ಗಣಗಳನ್ನು ತಡೆದುಕೊಂಡಿದೆ. ಬೌಧಾಯನನ ಪ್ರಕಾರ, ಎಂಟು ಪ್ರಧಾನ ಗೋತ್ರಗಳನ್ನು ಪಕ್ಷಗಳಾಗಿ ವಿಭಜಿಸಲಾಯಿತು. ಉಪಮನ್ಯುವಿನ ಪ್ರವರವು [[ವಸಿಷ್ಠ]], ಭಾರದ್ವಸು, ಇಂದ್ರಪ್ರಮಾದ; ಪರಾಶರ ಗೋತ್ರದ ಪ್ರವರವು [[ವಸಿಷ್ಠ]], ಶಕ್ತ್ಯ, ಪರಾಶರ್ಯ; ಕುಂಡಿನ ಗೋತ್ರದ ಪ್ರವರವು ವಸಿಷ್ಠ, ಮೈತ್ರಾವರುಣ, ಕೌಂಡಿನ್ಯ ಮತ್ತು ಈ ಮೂರರ ಹೊರತಾಗಿ ವಸಿಷ್ಠಗಳ ಪ್ವರವು ಕೇವಲ ವಸಿಷ್ಠ ಆಗಿರುತ್ತದೆ. ಆದ್ದರಿಂದ ಕೆಲವರು ಪ್ರವರವು ಒಂದು ಋಷಿಗಳ ಗುಂಪಾಗಿದ್ದು, ಒಂದು ಗೋತ್ರದ ಸ್ಥಾಪಕನನ್ನು (ಎಂದರೆ ಮೊದಲಾಗಿಸಿದವರು)ಇನ್ನೊಂದು ಗೋತ್ರದ ಸ್ಥಾಪಕನಿಂದ ಪ್ರತ್ಯೇಕವಾಗಿ ತೋರಿಸುವಂತಹುದು ಎನ್ನುತ್ತಾರೆ.
 
ಪ್ರವರಗಳಲ್ಲಿ ಎರಡು ವಿಧಗಳಿವೆ, 1) ಶಿಷ್ಯ-ಪ್ರಶಿಷ್ಯ ಋಷಿ ಪರಂಪರೆ, ಮತ್ತು 2) ಪುತ್ರಪರಂಪರೆ. ಗೋತ್ರಪ್ರವರಗಳು ಏಕಾರ್ಷೇಯ, ದ್ವಯಾರ್ಷೇಯ, ತ್ರೈಯಾರ್ಷೇಯ, ಪಂಚಾರ್ಷೇಯ, ಸಪ್ತಾರ್ಷೇಯ, ಮತ್ತು 19 ಋಷಿಗಳವರೆಗೂ ಇವೆ. ಆಂಧ್ರಪ್ರದೇಶದಲ್ಲಿ ಕಾಶ್ಯಪಸ ಗೋತ್ರಕ್ಕೆ ಕನಿಷ್ಠ ಎರಡು ವಿಶಿಷ್ಟ ಪ್ರವರಗಳಿವೆ: ಒಂದು ಮೂರು ಋಷಿಗಳದು (ತ್ರೈಯಾರ್ಷೇಯ ಪ್ರವರ) ಮತ್ತು ಇನ್ನೊಂದು ಏಳು ಋಷಿಗಳದು (ಸಪ್ತಾರ್ಷೇಯ ಪ್ರವರ). ಈ ಪ್ರವರವು ಶಿಷ್ಯ-ಪ್ರಶಿಷ್ಯ ಋಷಿ ಪರಂಪರೆಯದು ಅಥವಾ ಪುತ್ರಪರಂಪರೆಯದು ಆಗಿರಬಹುದು. ಅದು ಶಿಷ್ಯ-ಪ್ರಶಿಷ್ಯ ಋಷಿ ಪರಂಪರೆಯದಾದರೆ, ವರ ಮತ್ತು ವಧುವಿನ ಗೋತ್ರಗಳಲ್ಲಿ ಅರ್ಧ ಅಥವಾ ಅರ್ಧಕ್ಕಿಂತಲೂ ಹೆಚ್ಚಿನ ಋಷಿಗಳು ಅವರವರೇ ಆದರೆ ಮದುವೆಯು ಸಮ್ಮತವಲ್ಲ. ಅದು ಪುತ್ರಪರಂಪರೆಯಾದರೆ, ಒಬ್ಬ ಋಷಿ ಎರಡೂ ಗೋತ್ರಗಳಲ್ಲಿ ಕಂಡರೂ<ref>ವೇಪಚೇದು ಶಿಕ್ಷಣ ಸಂಸ್ಥೆಯಲ್ಲಿ ಬ್ರಾಹ್ಮಣರ ಗೋತ್ರಗಳು ಮತ್ತು ಪ್ರವರಗಳ ಬಗ್ಗೆ ಒಂದು ವಿಸ್ತೃತ ಲೇಖನ[http://www.vedah.net/manasanskriti/Brahmins.html ]</ref> ಸಹ ವಿವಾಹ ಖಂಡಿತ ಸಮ್ಮತವಲ್ಲ. ಶಾಂಡಿಲ್ಯ ಗೋತ್ರವು ಬ್ರಾಹ್ಮಣರ ಒಂದು ಗೋತ್ರ.
 
==ಪಂಗಡಗಳು ಮತ್ತು ಋಷಿಗಳು==
ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಮತ್ತು ಆಚರಣೆಗಳಲ್ಲಿ ಬಹಳವೇ ವಿಭಿನ್ನತೆ ಇರುವುದರಿಂದ ಹಾಗೂ ಅವರು ಸೇರಿರುವಂತಹ ವೇದದ ತರಗತಿಗಳಿಗನುಗುಣವಾಗಿ, ಬ್ರಾಹ್ಮಣರು ಮತ್ತಷ್ಟು ಉಪ-ಜಾತಿಗಳಾಗಿ ವಿಂಗಡಿತವಾಗಿದ್ದಾರೆ. ಸೂತ್ರ ಕಾಲದಲ್ಲಿ, ಎಂದರೆ 1000 BCE ಇಂದ 200 BCEಗಳ ನಡುವೆ, ವಿವಿಧ ವೇದಗಳನ್ನು ಅಳವಡಿಸಿಕೊಳ್ಳುವುದರ ಆಧಾರದ ಮೇಲೆ ಹಾಗೂ [[ವೇದಗಳ]] ವಿವಿಧ ಬಗೆಯ ಅರ್ಥೈಸಿಕೊಳ್ಳುವಿಕೆಯ ಮೇರೆಗೆ ಬ್ರಾಹ್ಮಣರು ಹಲವಾರು [[ಶಾಖೆ]]ಗಳಾಗಿ(ಕೊಂಬೆಗಳಾಗಿ) ವಿಭಜಿತರಾದರು. ಬ್ರಾಹ್ಮಣರ ಪೈಕಿಯ ಪ್ರತಿಷ್ಠಿತ ಗುರುಗಳ ನೇತೃತ್ವದಲ್ಲಿ ವೇದಗಳ ಒಂದೇ ಶಾಖೆಯ ವಿವಿಧ ವಿಂಗಡಣೆಗಳುಳ್ಳ ವಿಭಾಗಗಳು ರಚಿತವಾದವು
 
ಬ್ರಾಹ್ಮಣ ಸೂತ್ರಗಳನ್ನು ನೀಡುವ ಹಲವಾರು ಪ್ರಮುಖರೆಂದರೆ [[ಅಂಗೀರಸ]], [[ಆಪಸ್ತಂಭ]], [[ಅತ್ರಿ]], [[ಭೃಗು]], [[ಬೃಹಸ್ಪತಿ]], [[ಬೌಧಾಯನ]], [[ದಕ್ಷ]], [[ಗೌತಮ]], [[ಹಾರೀತ]], [[ಕಾತ್ಯಾಯನ]], [[ಲಿಖಿತ]], [[ಮನು]],<ref>[http://www.sacred-texts.com/hin/manu/manu02.htm ವೇದಗಳ ಕಲಿಕೆಯ ಬಗ್ಗೆ ಮನುಸ್ಮೃತಿ]</ref> [[ಪರಾಶರ]], [[ಸಂವರ್ತ]], [[ಶಂಖ]], [[ಶತತಪ]], [[ಉಷಾನಸ]], [[ವಸಿಷ್ಠ]], [[ವಿಷ್ಣು]], [[ವ್ಯಾಸ]], [[ಯಾಜ್ಞವಲ್ಕ್ಯ]] ಮತ್ತು [[ಯಮ]]. ಈ ಇಪ್ಪತ್ತೊಂದು ಋಷಿಗಳು [[ಸ್ಮೃತಿ]]ಯ ಪ್ರತಿಪಾದಕರು. ಈ ಸ್ಮೃತಿಗಳಲ್ಲಿ ಬಹಳ ಹಳೆಯವೆಂದರೆ ಆಪಸ್ತಂಭ, ಬೌಧಾಯನ, ಗೌತಮ ಮತ್ತು ವಸಿಷ್ಠ [[ಸೂತ್ರಗಳು]].<ref>ವೇಪಚೇದು ಶಿಕ್ಷಣ ಸಂಸ್ಥೆಯಲ್ಲಿ ಬ್ರಾಹ್ಮಣರ ವಿವಿಧ ಪಂಗಡಗಳು ಮತ್ತು ಋಸಿಗಳ ಬಗ್ಗೆ ಒಂದು ವಿಸ್ತೃತ ಲೇಖನ[http://www.vedah.net/manasanskriti/Brahmins.html#Brahmin_Sages_and_Branches ]</ref>
 
===ಬ್ರಾಹ್ಮಣರಿಂದಾದ ಪೀಳಿಗೆಗಳು===
ಹಲವಾರು ಭಾರತೀಯರು ಹಾಗೂ ಭಾರತೀಯರಲ್ಲದವರು ತಾವು ಬ್ರಾಹ್ಮಣ ಮತ್ತು ಅಬ್ರಾಹ್ಮಣಗಳೆರಡೂ ವಂಶಗಳ ವೇದಕಾಲದ ಋಷಿಗಳ ಸಂತತಿ ಎಂದು ಹೇಳಿಕೊಳ್ಳುತ್ತಾರೆ. ಉದಾಹರಣೆಗೆ ಡಾಷ್ ಮತ್ತು [[ನಾಗಾಗಳು]] [[ಕಾಶ್ಯಪ ಮುನಿ]]ಯ ವಂಶಜರೆಂದು ಹೇಳಲಾಗುತ್ತದೆ.
ವಿಶ್ವಕರ್ಮರು ಪಂಚಋಷಿಗಳು ಅಥವಾ ಬ್ರಹ್ಮರ್ಷಿಗಳ ವಂಶಜರು. ಯಜುರ್ವೇದ ಮತ್ತು ಬ್ರಹ್ಮಾಂಡ ಪುರಾಣದ ಪ್ರಕಾರ ಅವರು ಸನಘ, ಸನಾತನ, ಅಭುವಾನಸ, ಪ್ರಾಜ್ಞಸ, ಸುಪರ್ಣಸರು.
[[ದಕ್ಷಿಣ ಭಾರತ]]ದ ಕಾನಿ ಬುಡಕಟ್ಟಿನವರು ತಾವು [[ಅಗಸ್ತ್ಯ ಮುನಿ]]ಗಳ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ.
 
ಗೋಂಧಲಿ, ಕಾನೆಟ್, ಭೋತ್, ಲೋಹಾರ್, ದಾಗಿ, ಮತ್ತು ಹೆಸಿಸ್ ಗಳು ತಾವು [[ರೇಣುಕಾ ದೇವಿ]]ಯ ಅಂಶಜರೆನ್ನುತ್ತಾರೆ.
 
ಕಾಶಿ ಕಪಾಡಿ ಶೂದ್ರರು ತಾವು ಬ್ರಾಹ್ಮಣ ಶುಕ್ರದೇವನ ವಂಶಜರೆನ್ನುತ್ತಾರೆ. ಅವರ ಕೆಲಸವು ಪುಣ್ಯಸ್ಥಳವಾದ ಕಾಶಿಗೆ ನೀರನ್ನು ಹೊರುವುದಾಗಿತ್ತು.<ref>(ಭಾನು, ಬಿ. ವಿ., ಪುಟ 948, ''ಪೀಪಲ್ ಆಫ್ ಇಂಡಿಯಾ'' )</ref>
 
[[ದಧೀಚ್ ಬ್ರಾಹ್ಮಣರು]]/ದಯಾಮಾ ಬ್ರಾಹ್ಮಣರು [[ದಧೀಚಿ ಋಷಿ]]ಯವರೆಗೆ ತಮ್ಮ ಮೂಲವನ್ನು ಪತ್ತೆ ಹಚ್ಚಿದ್ದಾರೆ.
ಹಲವಾರಯ ಜಾಟ್ ಗಳು ತಾವು [[ದಧೀಚಿ ಋಷಿ]]ಯ ಸಂತತಿಯೆನ್ನುತ್ತಾರೆ ಹಾಗೂ [[ಡುಡಿ ಜಾಟ್]] ಗಳು ಡುಡ ಋಷಿಯ ವಂಶಜರೆನ್ನುತ್ತಾರೆ.
 
ಬುದ್ಧ ದೇವರಾದರೋ [[ಅಂಗೀರಸ]] ಹಾಗೂ [[ಗೌತಮ]]ರ ವಂಶಾವಳಿಯವರು. ಒಬ್ಬ ಮಕ್ಕಳಿಲ್ಲದ ರಾಜನ ಬಯಕೆಯನ್ನು ತೀರಿಸುವ ಸಲುವಾಗಿ(ದತ್ತಕವಾದಾಗ), ಇತರ ಕ್ಷತ್ರಿಯ ಪಂಗಡಗಳ ಸದಸ್ಯರು ಸಹ ಅಂಗೀರಸರ ವಂಶಾವಳಿಗೆ ಸೇರಿಹೋದರು.<ref>ಪುಟ 17 ''ಕ್ಲ್ಯಾಸಿಕಲ್ ಡಿಕ್ಷ್ನರಿ ಆಫ್ ಹಿಂದೂ ಮೈಥಾಲಜಿ ಎಂಡ್ ರಿಲೀಜನ್, ಜಿಯಾಗ್ರಫಿ, ಹಿಸ್ಟರಿ ಎಂಡ್ ಲಿಟರೇಚರ್ '' ಲೇಖಕ ಜಾನ್ ಡಾಸನ್ </ref>
 
ಹಿಂದುಳಿದ ಜಾತಿಗೆ ಸೇರಿದ ಮಾತಂಗರು ತಾವು, ತನ್ನ ಕರ್ಮಗಳ ಮೂಲಕ ಬ್ರಾಹ್ಮಣರಾದ [[ಮಾತಂಗ ಮುನಿ]]ಯ, ವಂಶಜರೆಂದು ಹೇಳಿಕೊಳ್ಳುತ್ತಾರೆ.
 
ಕೇರಳದ ಅಲೆಮಾರಿ ಜನಾಂಗವಾದ ಕಕ್ಕರಿಸ್ಸಿಯು ಒಂದು ವದಂತಿಯ ಪ್ರಕಾರ ಇವರು ವಿಷ್ಣುವಿನ ವಾಹನವಾದ [[ಗರುಡ]]ನ ಬಾಯಿಯಿಂದ ಹೊರಬಂದವರೆಂದೂ, ಹೊರಬಂದುದೇ ಬ್ರಾಹ್ಮಣರಾಗಿ ಎಂದೂ ಹೇಳಲಾಗುತ್ತದೆ.<ref>(ಪುಟ 227 ''ಹಿಸ್ಟರಿ ಆಫ್ ಇಂಡಿಯನ್ ಥಿಯೇಟರ್'' ಲೇಖಕ ಮನೋಹರ್ ಲಕ್ಷ್ಮಣ್ ವರದಪಾಂಡೆ)</ref>
 
==ಇತರ ಕಾರ್ಯಗಳನ್ನು ಕೈಗೊಳ್ಳುವ ಬ್ರಾಹ್ಮಣರು==
ಬ್ರಾಹ್ಮಣರು ಹಲವಾರು ವೃತ್ತಿಗಳನ್ನು ಕೈಗೊಂಡಿದ್ದಾರೆ - ಅರ್ಚಕರಾದುದರಿಂದ ಹಿಡಿದು, ಯತಿಗಳು ಮತ್ತು ಪಂಡಿತರು, ಯೋಧರು ಹಾಗೂ ಉದ್ದಿಮೆದಾರರು; ಇದನ್ನು ಕಲ್ಹಣರ ರಾಜತರಂಗಿಣಿಯಲ್ಲಿ ದೃಢೀಕರಿಸಲಾಗಿದೆ.
ಕ್ಷತ್ರಿಯ ಗುಣವುಳ್ಳ ಬ್ರಾಹ್ಮಣರನ್ನು 'ಬ್ರಹ್ಮಕ್ಷತ್ರಿಯರು' ಎನ್ನುತ್ತಾರೆ. ಇದಕ್ಕೆ ಹೇಹಯರನ್ನು 21 ಬಾರಿ ನಾಶಗೊಳಿಸಿದ [[ಪರಶುರಾಮಾ]]ವತಾರವೇ ಒಂದು ಒಳ್ಳೆಯ ಉದಾಹರಣೆ. ಋಷಿ ಪರಶುರಾಮರು ಯುದ್ಧಕಲೆಯನ್ನು ಬಲ್ಲವರಾಗಿದ್ದುದಲ್ಲದೆ, ಅವರು ಎಷ್ಟು ಶಕ್ತಿವಂತರಾಗಿದ್ದರೆಂದರೆ ಯಾವುದೇ ಶಸ್ತ್ರಾಸ್ತ್ರಗಳಿಲ್ಲದೆಯೂ ಸಹ ಕಾದಾಡಬಲ್ಲವರಾಗಿದ್ದರು ಮತ್ತು ಇತರರೂ ಶಸ್ತ್ರಾಸ್ತ್ರಗಳಿಲ್ಲದೆ ಕಾದಾಡಲು ತರಬೇತಿ ನೀಡುತ್ತಿದ್ದರು. <ref>{{cite book
| first = William
| last = Crooke
| authorlink = William Crooke
| title = The Tribes and Castes of the North-Western Provinces and Oudh
| publisher = [[Asian Educational Services]]
| location = 6A, Shahpur Jat, New Delhi-110049, India
| year =1999
| pages =1809 (at page 64)
| isbn = 8120612108
}}</ref>ಪರಶುರಾಮರು ಕ್ಷತ್ರಿಯ ವಂಶವನ್ನು ನಾಶಮಾಡಿದಾಗ [[ಭೂಮಿಹಾರ್ ಬ್ರಾಹ್ಮಣ]]ರು ಸ್ಥಾಪಿತವಾದರು ಹಾಗೂ [[ಪರಶುರಾಮ]] ಸಹ ಕ್ಷತ್ರಿಯರ ಜಾಗದಲ್ಲಿ ಬ್ರಾಹ್ಮಣರ ಸಂತತಿಯವರನ್ನೇ ಕೂಡಿಸಿದರು; ಆ ಬ್ರಾಹ್ಮಣರು, ಕೆಲ ಕಾಲಾನಂತರ, ಬಹವಂಶ ತಮ್ಮ ಅರ್ಚನಾವೃತ್ತಿಯನ್ನು ಬಿಟ್ಟುಬಿಟ್ಟಿದ್ದು (ಈಗಲೂ ಕೆಲವರು ಅರ್ಚನೆ ಮಾಡುತ್ತಾರೆ)ಭೂಮಿಯನ್ನು ಹೊಂದಲು ಆರಂಭಿಸಿದರು.<ref>{{cite book
| first = William
| last = Crooke
| authorlink = William Crooke
| title = The Tribes and Castes of the North-Western Provinces and Oudh
| publisher = [[Asian Educational Services]]
| location = 6A, Shahpur Jat, New Delhi-110049, India
| year =1999
| pages =1809 (at page 64)
| isbn = 8120612108
}}</ref> ಬಹಳಷ್ಟು ಬ್ರಾಹ್ಮಣರು ವೈದ್ಯವೃತ್ತಿಯನ್ನು ಅವಲಂಬಿಸಿದರು. ಈ ಬೈದ್ಯ ಬ್ರಾಹ್ಮಣರು ಎಂದು [[ಬಂಗಾಳ]]ದಲ್ಲಿ ಕರೆಸಿಕೊಳ್ಳುವ ವೈದ್ಯ ಬ್ರಾಹ್ಮಣರು (ಗುಪ್ತ, ದಾಸ್ ಗುಪ್ತ ಮತ್ತು ಸೇನ್ ಗುಪ್ತರು) ಆಯುರ್ವೇದದ ಪಿತಾಮಹ ಹಾಗೂ ವೈದ್ಯಕೀಯದ ದೇವತೆಯಾದ ಧನ್ವಂತರಿಯ ಸಂತತಿಯವರು.
 
ಇಂದಿನ ದಿನಗಳಲ್ಲಿ ಬ್ರಹ್ಮಖತ್ರಿ ಎಂಬ ಒಂದು ಜಾತಿಯಿದ್ದು, ಈ ಜಾತಿಯವರು [[ಖತ್ರಿ]]ಗಳ ಕುಲದವರಾಗಿದ್ದಾರೆ.ಇದು ಸಂದೇಹಕ್ಕೆ ಎಡೆಕೊಡುತ್ತದೆ; ಏಕೆಂದರೆ ಖತ್ರಿಗಳು ಪಂಜಾಬ್ ನ ಒಂದು ವ್ಯಾಪಾರೀ ಜಾತಿ/ಸಮುದಾಯಕ್ಕೆ ಸೇರಿದ್ದು, ವೈಶ್ಯ ಜಾತಿಗೆ ಸೇರುತ್ತಾರೆ. ಖತ್ರಿ ಎಂಬುದನ್ನು ಹಲವಾರು ಬಾರಿ ಕ್ಷತ್ರಿಯ ಅರ್ಥಾತ್ ಯೋಧ ಎಂಬ ಪದದ ಅನ್ಯರೂಪವೆಂದು ತಪ್ಪಾಗಿ ತಿಳಿಯಲಾಗಿದೆ; ಆದರೆ, ಖತ್ರಿ ಆಳ್ವಿಕೆಯ ರಾಜ್ಯಗಳ ಅಥವಾ ಚಕ್ರಾಧಿಪತ್ಯಗಳ ದಾಖಲೆಗಳು ಭಾರತೀಯ ಇತಿಹಾಸದಲ್ಲಿ ಇಲ್ಲ ಹಾಗೂ ಈ ಕ್ಷತ್ರಿಯ ಎಂದು ಹೇಳಿಕೊಳ್ಳುವುದು ಸಹ 20ನೆಯ ಶತಮಾನದಷ್ಟು ಇತ್ತೀಚಿನ ಪರಿ.
 
ಬಹುಶಃ ಬ್ರಹ್ಮ-ಕ್ಷತ್ರಿಯ ಎಂಬ ಪದವು ಎರಡೂ ಜಾತಿಗಳ ಪರಂಪರೆಗಳಿಗೆ ಸೇರಿದ ವ್ಯಕ್ತಿಯನ್ನು ಕುರಿತಾದದ್ದಿರಬೇಕು.<ref name="autogenerated4">ಪುಟ 201, ''ಪ್ರೊಫೆಸರ್ ಎ.ಎಲ್. ಭಾಷಂ, ನನ್ನ ಗುರುಗಳು, ಸಮಸ್ಯೆಗಳು ಮತ್ತು ಪುರಾತನ ದೃಷ್ಟಿಕೋನಗಳು'' ...ಲೇಖಕ ಸುಚೀಂದ್ರ ಕುಮಾರ್ ಮೈತಿ.</ref> ಆದಾಗ್ಯೂ, ರಜಪುತ ರಾಜರ ಮನೆತನಗಳಲ್ಲಿ, ರಾಜಕುಮಾರರ ವೈಯಕ್ತಿಕ ಗುರುಗಳು ಹಾಗೂ ರಕ್ಷಣಾಕಾರರೂ ಆದ ಬ್ರಾಹ್ಮಣರು [[ರಾಜಪುರೋಹಿತ]] ಸ್ಥಾನಕ್ಕೆ ಏರಿದರು ಮತ್ತು ರಾಜಕುಮಾರರಿಗೆ ಯುದ್ಧ ಕೌಶಲಗಳನ್ನೊಳಗೊಂಡಂತೆ ಎಲ್ಲವನ್ನೂ ಹೇಳಿಕೊಡುತ್ತಿದ್ದರು. ಅವರು ರಾಜರ ವಂಶಾವಳಿ ಮತ್ತು ಇತಿಹಾಸದ ರಕ್ಷಕರೂ ಆಗಿದ್ದರು. ಮುಂದೆ ರಾಜನಾಗಬೇಕಾದವನು ತಬ್ಬಲಿಯಾಗಿ ಮತ್ತು ಅಪ್ರಾಪ್ತವಯಸ್ಕನಾಗಿದ್ದರೆ ಅವರು ಸಿಂಹಾಸನವನ್ನು ರಕ್ಷಿಸುವ ಹೊಣೆಯನ್ನೂ ಹೊರುತ್ತಿದ್ದರು.
 
<ref>ಪುಟ 29 ''ಮತ್ಸ್ಯಪುರಾಣದಿಂದ ಸಾಂಸ್ಕೃತಿಕ ಚರಿತ್ರೆ'' ಲೇಖಕ ಸುರೇಶ್ ಚಂದ್ರ ಗೋವಿಂದ್ ಲಾಲ್ ಕಾಂತಾವಾಲ</ref>ಕ್ಷತ್ರಿಯ ಬ್ರಾಹ್ಮಣನೆಂದರೆ ಆ ಎರಡೂ ಜಾತಿಯವರ ಗುಣಗಳನ್ನು ಹೊಂದಿರುವವನು.<ref>ಪುಟ 29 ''ಮತ್ಸ್ಯಪುರಾಣದಿಂದ ಸಾಂಸ್ಕೃತಿಕ ಚರಿತ್ರೆ'' ಲೇಖಕ ಸುರೇಶ್ ಚಂದ್ರ ಗೋವಿಂದ್ ಲಾಲ್ ಕಾಂತಾವಾಲ</ref>
 
ತಮ್ಮನ್ನು ತಾವೇ ಬ್ರಹ್ಮಕ್ಷತ್ರಿಯರೆಂದು ಕರೆದುಕೊಳ್ಳುತ್ತಿದ್ದ [[ಪಲ್ಲವ]]ರು ಇದಕ್ಕೆ ಉದಾಹರಣೆಯಾಗಿದ್ದಾರೆ. [[ಕಾಶ್ಮೀರ]]ದ [[ರಾಜ ಲಲಿತಾದಿತ್ಯ ಮುಕ್ತಪಾದ]]ರು ಇಡೀ ಭಾರತ ಮತ್ತು ಮಧ್ಯ ಏಷ್ಯಾವನ್ನೂ ಸಹ ಆಳಿದರು.
 
657ನೆಯ ಇಸವಿಯಲ್ಲಿ [[ಚಂಪ(ವಿಯೆಟ್ನಾಂ)]]ದ ರಾಜರಾಗಿದ್ದ ರಾಜ ರುದ್ರವರ್ಮರು ಒಬ್ಬ ಬ್ರಾಹ್ಮಣನ ಮಗನಾಗಿದ್ದರು.<ref name="autogenerated4"></ref>
 
781ನೆಯ ಇಸವಿಯಲ್ಲಿ ಕಾಂಬೋಜ(ಕಾಂಪುಕೀಯ)ವನ್ನಾಳಿದ ಅರಸು [[ರಾಜ ಜಯವರ್ಮ]]ರು ಒಬ್ಬ ಬ್ರಾಹ್ಮಣ-ಕ್ಷತ್ರಿಯರಾಗಿದ್ದರು.<ref name="autogenerated4"></ref>
 
ವೈಶ್ಯ ಅಥವಾ ವರ್ತಕನ ಗುಣಗಳುಳ್ಳ ಬ್ರಾಹ್ಮಣರನ್ನು 'ಬ್ರಹ್ಮವೈಶ್ಯ'ರೆಂದು ಕರೆಯುತ್ತಾರೆ. ದಕ್ಷಿಣ ಭಾರತ ಮತ್ತು ಬಂಗಾಳದಲ್ಲಿ ವಾಸಿಸುವ ಅಂಬಸ್ಥ<ref>ಪುಟ 37 ''ಏಷ್ಯಾದ ವೈದ್ಯಕೀಯ ಪದ್ಧತಿ: ಒಂದು ತೌಲನಿಕ ಅಧ್ಯಯನ'' ಲೇಖಕ ಚಾರ್ಲ್ಸ್ ಲೆಸ್ಲೀ</ref> ಜಾತಿಯವರು ಇದಕ್ಕೆ ಒಳ್ಳೆಯ ಉದಾಹರಣೆ ಅವರು ವೈದ್ಯವೃತ್ತಿಯನ್ನು ನಡೆಸುತ್ತಾರೆ - ಪುರಾತನ ಕಾಲದಿಂದಲೂ ಅವರು [[ಆಯುರ್ವೇದ]]ವನ್ನು ಅಭ್ಯಸಿಸುತ್ತಿದ್ದು, [[ವೈದ್ಯ]]ರಾಗಿದ್ದಾರೆ.
 
ದಕ್ಷಿಣ ಭಾರತದ ಹಲವಾರು ಪಲ್ಲಿಗಳು ಬ್ರಾಹ್ಮಣರೆಂದು ಹೇಳಿಕೊಳ್ಳುತ್ತಾರೆ (ಮತ್ತೂ ಕೆಲವರು ತಾವು [[ಅಗ್ನಿಕುಲ]] ಕ್ಷತ್ರಿಯರೆನ್ನುತ್ತಾರೆ.)<ref name="autogenerated3">ಪುಟ 13 ''ದಕ್ಷಿಣ ಭಾರತದ ಜಾತಿಗಳು ಮತ್ತು ಪಂಗಡಗಳು'' ಲೇಖಕರು ಎಡ್ಗಾರ್ ಥರ್ಸ್ಟನ್, ಕೆ. ರಂಗಾಚಾರಿ</ref> ಕುಲಮಾನ್ ಪಲ್ಲಿಗಳನ್ನು ಹೊರಗಿನವರು ಕುಲವಾನ್ ಬ್ರಾಹ್ಮಣರೆಂಬ ಅಡ್ಡಹೆಸರಿನಿಂದ ಕರೆಯುತ್ತಾರೆ.<ref name="autogenerated3"></ref>
ಹರಿಯಾಣದ ರೇವಾರಿಯ ಹೇಮು ಸಹ ಜನ್ಮತಃ ಬ್ರಾಹ್ಮಣರೇ.
 
==ಆಚರಣೆಗಳು ==
ಬ್ರಾಹ್ಮಣರು, ವೈದಿಕ ಪೂಜಾರಿಗಳು [[ಬ್ರಾಹ್ಮಣತ್ವ]]ದ ತತ್ತ್ವಗಳಿಗೆ, ಸನಾತನ ಧರ್ಮಕ್ಕೆ ಬದ್ಧರಾಗಿರುತ್ತಾರೆ ಹಾಗೂ [[ಹಿಂದುತ್ವ]]ದ ವಿವಿಧ ಮತಗಳಲ್ಲಿ ಕಾಣಸಿಗುತ್ತಾರೆ; [[ವೇದ]]ಗಳಿಗೆ ಇವ ರುಬದ್ಧರಾಗಿರುತ್ತಾರೆ. ''{{IAST|Brāhmaṇas}}'' ಆರು ಹೊಣೆಗಳನ್ನು ನಿಭಾಯಿಸಬೇಕಾಗಿದ್ದು, ಅದರಲ್ಲಿ ಮೂರು ಕಡ್ಡಾಯವಾದುದು - ವೇದಾಧ್ಯಯನ, ಮೂರ್ತಿಪೂಜೆ ಮತ್ತು ದಾನ ನೀಡುವಿಕೆ. ಬೋಧಿಸುವುದು, ಇತರರನ್ನು ದೇವತಾಪೂಜೆಗೆ ಪ್ರೇರೇಪಿಸುವುದು ಹಾಗೂ ದಾನಗಳನ್ನು ಸ್ವೀಕರಿಸುವುದರ ಮೂಲಕ ಈ ''{{IAST|brāhmaṇas}}'' ಜೀವಿಸಲು ಬೇಕಾದುದನ್ನು ಪಡೆಯುತ್ತಾರೆ. ಇದು ''{{IAST|Manu-saḿhitā}}'' ರಲ್ಲೂ ದೃಢೀಕರಿಸಲ್ಪಟ್ಟಿದೆ:
 
''{{IAST|ṣaṇṇāḿ tu karmaṇām asya
 
trīṇi karmāṇi jīvikā
 
yajanādhyāpane caiva
 
viśuddhāc ca pratigrahaḥ}}''
 
''{{IAST|brāhmaṇas}}'' ರ ಆರು ಕಾರ್ಯಪರ ಹೊಣೆಗಳಲ್ಲಿ ಮೂರು ಕಡ್ಡಾಯವಾದುದು - ವೇದಾಧ್ಯಯನ, ಮೂರ್ತಿಪೂಜೆ ಮತ್ತು ದಾನ ನೀಡುವಿಕೆ. ಪ್ರತಿಫಲವಾಗಿ, ಬ್ರಾಹ್ಮಣನು ದಾನ ಪಡೆಯಲೇಬೇಕು ಮತ್ತು ಇದೇ ಅವನ ಜೀವನೋಪಾಯವಾಗಬೇಕು. ''{{IAST|brāhmaṇa}}'' ನು ಯಾವುದೇ ವೃತ್ತಿಪರ ಕೆಲಸಗಳನ್ನು ತನ್ನ ಜೀವನೋಪಾಯಕ್ಕಾಗಿ ನಡೆಸುವಂತಿಲ್ಲ. ''{{IAST|śāstras}}'' ಗಳು ವಿಶೇಷವಾಗಿ ಒತ್ತಿ ಹೇಳುವುದೆಂದರೆ, ವ್ಯಕ್ತಿಯು ತಾನು ''{{IAST|brāhmaṇa}}'' ಎಂದು ಹೇಳಿಕೊಂಡರೆ.<ref>http://vedabase.net/sb/7/11/14/en | ಶ್ರೀಮದ್ ಭಗವದ್ಗೀತಂ 7.11.14</ref> ಬ್ರಾಹ್ಮಣರು ''{{IAST|Sarvejanāssukhinobhavaṃtu}}'' - ಸರ್ವೇ ಜನಾಃ ಸುಖಿನೋ ಭವಂತು, ಮತ್ತು ''{{IAST|Vasudhaika kuṭuṃbakaṃ}}'' - ವಸುಧೈವ ಕುಟುಂಬಕಂ ಎಂಬುದನ್ನು ನಂಬಿದವರಾಗಿದ್ದಾರೆ. ಹಲವಾರು ಬ್ರಾಹ್ಮಣರು ಸುಧಾರಕರಾಗಿದ್ದಾರೆ. ಬಹುತೇಕ ಬ್ರಾಹ್ಮಣರು ಇಂದು [[ಸಸ್ಯಾಹಾರ]] ಅಥವಾ [[ಹಾಲು-ಸಸ್ಯಾಹಾರ]]ವನ್ನು ಸೇವಿಸುತ್ತಾರೆ. ಶೀತಲ ಗುಡ್ಡಗಾಡು ಪ್ರದೇಶಗಳಾದ ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ನೇಪಾಳದಂತಹ ಜಾಗಗಳಲ್ಲಿನ ಬ್ರಾಹ್ಮಣರು ಮಾಂಸಾಹಾರಿಗಳಾಗಿದ್ದಾರೆ ಹಾಗೂ ಕರಾವಳಿ ಪ್ರದೇಶಗಳಾದ ಬಂಗಾಳದಂತಹ ಸ್ಥಳಗಳಲ್ಲಿ ಮೀನು ತಿನ್ನುವ ಬ್ರಾಹ್ಮಣರೂ ಇದ್ದಾರೆ. ಆದಾಗ್ಯೂ, ಮಾಂಸಾಹಾರಿ ಬ್ರಾಹ್ಮಣರೂ ಗೋಮಾಂಸವನ್ನು ನಿಷೇಧಿಸುತ್ತಾರೆ.
 
==ಸಂಪ್ರದಾಯಗಳು==
ಬ್ರಾಹ್ಮಣರ ಮೂರು [[ಸಂಪ್ರದಾಯ]]ಗಳು (ಆಚರಣೆಗಳು), ವಿಶೇಷವಾಗಿ [[ದಕ್ಷಿಣ ಭಾರತ]]ದಲ್ಲಿ,ಯಾವುವೆಂದರೆ [[ಸ್ಮಾರ್ತ ಸಂಪ್ರದಾಯ]], [[ಶ್ರೀವೈಷ್ಣವ ಸಂಪ್ರದಾಯ]] ಮತ್ತು [[ಮಧ್ವ ಸಂಪ್ರದಾಯ]].
===ವೈಷ್ಣವ ಮತ===
[[ಶ್ರೀವೈಷ್ಣವ ಸಂಪ್ರದಾಯ]] ಮತ್ತು [[ಮಧ್ವ ಸಂಪ್ರದಾಯ]]ಗಳು ವೈಷ್ಣವ ಧರ್ಮದ ಎರಡು ಪ್ರಮುಖ ಅಂಗಗಳು. ಈ ಎರಡರಿಂದ ಪ್ರಭಾವಿತವಾದ ವೈಷ್ಣವ ಪಂಗಡಗಳೆಂದರೆ [[ರಮಾನಂದ ಸಂಪ್ರದಾಯ]] ಮತ್ತು ರಾಮ್ ದಾಸ್ಸೀ ಸಂಪ್ರದಾಯ. ಶ್ರೀವೈಷ್ಣವ ಸಂಪ್ರದಾಯದ ಪ್ರಮುಖ [[ಪ್ರವರ್ತಕ]]ರೆಂದರೆ [[ರಾಮಾನುಜ]]ರು; ಮಧ್ವ ಸಂಪ್ರದಾಯದ ಅಧ್ವರ್ಯು [[ಮಧ್ವ]]ರು. [[ವಲ್ಲಭ ಆಚಾರ್ಯ]]ರು ಸ್ಥಾಪಿಸಿದ [[ಪುಷ್ಟಿಮಾರ್ಗ ಸಂಪ್ರದಾಯ]]ವೂ ಆ ಎರಡು ಪ್ರಮುಖ ವೈಷ್ಣವ ಪಂಗಡಗಳಿಂದ ಪ್ರಭಾವಿತವಾದಂತಹವೇ.
 
ವೈಷ್ಣವ ಪಂಥದಲ್ಲೇ ಬಹಳ ಪ್ರಸಿದ್ಧವಾದುದೆಂದರೆ ಬಂಗಾಳದ ಬ್ರಹ್ಮ [[ಗೌಡೀಯ ವೈಷ್ಣವ ಮತ]].{{Citation needed|date=January 2009}} ಇದನ್ನು ಸ್ಥಾಪಿಸಿದವರು ಶ್ರೀ [[ಚೈತನ್ಯ ಮಹಾಪ್ರಭು]]. ವೈಷ್ಣವ ಮತದ ಈ ಶಾಖೆಯು ಭಾರತೀಯ ಪರಂಪರೆಯವರಲ್ಲದವರಿಗೂ ಮೊಟ್ಟಮೊದಲ ಬಾರಿಗೆ ಬ್ರಾಹ್ಮಣತ್ವವನ್ನು ಕೊಡಮಾಡಿತು. ಈ ಬ್ರಾಹ್ಮಣರು [[ಗೌಡೀಯ ವೈಷ್ಣವ]]ರ ಒಂದು ಶಾಖೆಯಾದ [[ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾಂಷಿಯಸ್ನೆಸ್]], ಅಥವಾ [[ಇಸ್ಕಾನ್]] ನ ಒಂದು ಭಾಗವಾಗಿದ್ದಾರೆ.
 
ವೈಷ್ಣವ ಮತವು ಸ್ವಾಮಿನಾರಾಯಣ ಸಂಪ್ರದಾಯದಂತಹ ಹಲವಾರು ಪಂಗಡಗಳನ್ನು ಒಳಗೊಂಡಿತ್ತು.
 
ಆಧುನಿಕ ಕಾಲದ ಉತ್ತರಪ್ರದೇಶದ ವೈಷ್ಣವ ಬ್ರಾಹ್ಮಣರಾಗಿದ್ದು, ಘನಶ್ಯಾಂ ಪಾಂಡೆ ಎಂಬ ಜನ್ಮನಾಮದ,[[ ಭಗವಾನ್ ಸ್ವಾಮಿನಾರಾಯಣ]]ರು ಸ್ಥಾಪಿಸಿದ [[ಸ್ವಾಮಿನಾರಾಯಣ ಸಂಪ್ರದಾಯ]]ಕ್ಕೆ ಹಲವಾರು ಸದಸ್ಯರಿದ್ದಾರೆ. ಅವರು ನಂತರ ಸಂಪ್ರದಾಯಶರಣರು ಹೆಚ್ಚಿನ ಸಂಖ್ಯೆಯಲ್ಲಿರುವ ಗುಜರಾತ್ ನಲ್ಲಿ ನೆಲೆಸಿದರು. ಇದು ಒಂದು ವೈಷ್ಣವ ಪಂಗಡ. ಇದನ್ನು 18ನೆಯ ಶತಮಾನದ ಉತ್ತರಭಾಗದಲ್ಲಿ ಸ್ಥಾಪಿಸಲಾಯಿತು.
 
[[ಶ್ರೀಕೃಷ್ಣ]]ನನ್ನು [["ವಿಠಲ"]] ಎಂದು ಪೂಜಿಸುವ [[ವರ್ಕರಿ ಸಂಪ್ರದಾಯ]]ವೂ ಇದೆ. "ವರ್ಕರಿ" ಎಂದರೆ ''ಪ್ರಯಾಣಿಕರು'' ಎಂಬ ಅರ್ಥವಿದ್ದು, ಈ ಪಂಥದವರು ತಮ್ಮ ಪಟ್ಟಣಗಳಿಂದ [[ಪಂಡರಾಪುರ]]ಕ್ಕೆ ಕಾಲ್ನಡಿಗೆಯಲ್ಲಿ ತೀರ್ಥಯಾತ್ರೆ ಕೈಗೊಳ್ಳುವುದರಿಂದ ಈ ಹೆಸರು ಬಂದಿದೆ. ಈ ಪಂಥದ ಹರಿಕಾರರೆಂದರೆ ಬ್ರಾಹ್ಮಣರಾದ [[ಧ್ಯಾನೇಶ್ವರ]] ಮತ್ತು [[ಮುಕ್ತಾಬಾಯಿ]] ಹಾಗೂ ಹಲವಾರು ಬ್ರಾಹ್ಮಣೇತರ ಶ್ರೇಷ್ಠರು.
 
12ನೆಯ ಶತಮಾನದಲ್ಲಿ ಚಕ್ರಧರ ಸ್ವಾಮಿ ಎಂದೇ ಜನಪ್ರಿಯರಾದ ರಾಜ ಚಕ್ರಧರರು ಸ್ಥಾಪಿಸಿದ [[ಮಹಾನುಭವ ಸಂಪ್ರದಾಯ]]ವೆಂಬ ಸಂಪ್ರದಾಯವೂ ಇದೆ. ಈ ಪಂಥದವರು ವಿಷ್ಣುವಿನ ಐದು ಅವತಾರಗಳನ್ನು ಪೂಜಿಸುತ್ತಾರೆ: ಶ್ರೀ ಕೃಷ್ಣ, ಶ್ರೀ ದತ್ತಾತ್ರೇಯ, ಶ್ರೀ ಚಕ್ರಪಾಣಿ, ಶ್ರೀ ಗೋವಿಂದಪ್ರಭು ಮತ್ತು ಶ್ರೀ ಚಕ್ರಧರ (ಸ್ಥಾಪನೆ ಮಾಡಿದವರೇ).
 
===ಶೈವ ಮತ===
ಶೈವ ಬ್ರಾಹ್ಮಣರಿಗೆ ಕರ್ಣಾಟಕದ [[ಬಸವ ಸ್ವಾಮಿ]], ತಮಿಳು ನಾಡಿನ ಕುಂಗಿಳಿಯ ಕಳಯ ನಾಯನಾರ್ ಮತ್ತು ಗುಜರಾತ್ ನ ಲಕುಲೀಶರು ಪ್ರಮುಖ ಮೂರ್ತಿಸ್ವರೂಪಿಗಳಾಗಿದ್ದಾರೆ.
 
=== ಇತರ ಪಂಥಗಳು===
ಇತರ ಸಂಪ್ರದಾಯಗಳನ್ನು ಅನುಸರಿಸುವ ಮಟ್ಟಕ್ಕೆ ಅನುಸರಿಸದ ಮತ್ತೂ ಕೆಲವು ಸಂಪ್ರದಾಯಗಳಿವೆ.
 
[[ಮಹಿಮಾ ಧರ್ಮ]] ಅಥವಾ [["ಸತ್ಯ ಮಹಿಮಾ ಅಲೇಖ ಧರ್ಮ"]] ವು, ಇಂದಿನ ಒರಿಸ್ಸಾದಲ್ಲಿದ್ದ, ''ಭೀಮ್ ಭೋಯಿ'' ಪುಸ್ತಕದ ಪ್ರಕಾರ, ಅನುಯಾಯಿಗಳಲ್ಲಿ ಮಹಿಮಾ ಸ್ವಾಮಿ ಎಂದೇ ಜನಪ್ರಿಯರಾದ, ಬ್ರಾಹ್ಮಣ, ಮುಕಂದ ದಾಸ್ ರಿಂದ, ಸ್ಥಾಪಿತವಾಯಿತು.<ref name="autogenerated2">[http://www.orissa.gov.in/e-magazine/Orissareview/may2005/engpdf/mahima_dharma_bhima_bhoi_biswanathbaba.pdf "ಮಹಿಮಾ ಧರ್ಮ, ಭೀಮ ಭೋಯಿ ಮತ್ತು ಬಿಶ್ವನಾಥ್ ಬಾಬಾ"]</ref> ಅವರು ಒಮ್ಮೆ ರಾಜ್ಯವಾಗಿದ್ದ ಬೌಧ್ ನಲ್ಲಿ 18ನೆಯ ಶತಮಾನದ ಅಂಚಿನಲ್ಲಿ ಅನಂತ ಮಿಶ್ರರ ಪುತ್ರನಾಗಿ ಜನಿಸಿದರು. ''ಭೀಮ ಭೋಯಿ'' ಯ ಎರಡನೆಯ ಸಂಪುಟದ ಮಹಿಮಾ ವಿನೋದ್ ದಲ್ಲಿ ಉಲ್ಲೇಖಿಸಿದಂತೆ ಅವರು ಬ್ರಾಹ್ಮಣ ಜಾತಿಯವರಾಗಿದ್ದರು. ಈ ಸಂಪ್ರದಾಯವು ವೈಷ್ಣವ ಸಂಪ್ರದಾಯದಂತೆಯೇ ಇದೆ. ಈ ಪಂಥದವರು [[ಶ್ರೀ ವಿಷ್ಣು]]ವನ್ನು [[ಇಷ್ಟದೈವ]]ವೆಂದು ಆರಾಧಿಸದಿದ್ದರೂ, [[ಶ್ರೀಮದ್ಭಾಗವತ]]ವು ಪೂಜ್ಯವೆಂದು ಭಾವಿಸುತ್ತಾರೆ. ಈ ಪಂಥವನ್ನು ಆರಂಭಿಸುವ ಮುನ್ನ ಇಎರ ಸ್ಥಾಪಕರು ವೈಷ್ಣವರೇ ಆಗಿದ್ದರು.<ref name="autogenerated2"></ref> ಈ ಸಂಪ್ರದಾಯವು 18ನೆಯ ಶತಮಾನದ ಉತ್ತರಭಾಗದಲ್ಲ ಸ್ಥಾಪಿತವಾಯಿತು.<ref name="autogenerated2"></ref>
 
[[ಭಗವಾನ್ ದತ್ತಾತ್ರೇಯ]] ಮತ್ತು ಅವನ ಸ್ವರೂಪಗಳಾದ [[ನರಸಿಂಹ ಸರಸ್ವತಿ]] ಮತ್ತು [[ಶಿರಡಿ ಸಾಯಿ ಬಾಬಾ]] ರನ್ನು ಪೂಜಿಸುವಂತಹ [[ಅವಧೂತ ಪಂಥ]] ಎಂಬುದೊಂದಿದೆ. ಭಗವಾನ್ ದತ್ತಾತ್ರೇಯನನ್ನು ಹಿಂದೂ ತ್ರಿಮೂರ್ತಿಯಾಗಿ ಪೂಜಿಸಲಾಗುತ್ತದೆ - [[ಬ್ರಹ್ಮ]], [[ವಿಷ್ಣು]] ಮತ್ತು [[ಶಿವ]] ಒಂದೇ ದೈವಿಕ ಸ್ವರೂಪವಾಗಿ. ಹಲವರು ದತ್ತಾತ್ರೇಯನನ್ನು ವಿಷ್ಣುವಿನ ಅಥವಾ [[ಶಿವ]]ನ [[ಅವತಾರ]]ವೆಂದೂ ಪೂಜಿಸುತ್ತಾರೆ.
 
==ಇತರ ಧರ್ಮಗಳಲ್ಲಿ ಬ್ರಾಹ್ಮಣರು==
===ಬೌದ್ಧಧರ್ಮ===
ಬುದ್ಧ "ಬ್ರಾಹ್ಮಣ" ಪದವು ಅರ್ಹಂತ ಎಂಬುದಕ್ಕೆ ಪರ್ಯಾಯವಾಗುವಂತೆ ಅರ್ಥೈಸಿ, ಜನ್ಮಾಧಾರಿತಕ್ಕಿಂತಲೂ ಆಧ್ಯಾತ್ಮ ಸಾಧನೆ ಆಧಾರಿತವಾದ ಜೀವನಕ್ಕೆ ಪ್ರಾಶಸ್ತ್ಯವಿತ್ತರು.<ref>ಥಾಣಿಸ್ಸರಾವ್ ಭಿಕ್ಕು, ''ಹ್ಯಾಂಡ್ ಫುಲ್ ಆಫ್ ಲೀವ್ಸ್'' ಸಂಪುಟ 1, 2ನೆಯ ಆವೃತ್ತಿ, ಪುಟ 391.</ref> <ref>ಉದಾಹರಣೆಗೆ ನೋಡಿ Dhp XXVI, ''ಬ್ರಾಹ್ಮಣವಗ್ಗ'' , ಅಥವಾ [[ಮಝ್ಝಿಮ ನಿಕಾಯ]] 3.24, ಅಥವಾ ವಿಶೇಷವಾಗಿ MN 98 ಅನ್ನು ಮತ್ತೂ ಮೂರು ಉದಾಹರಣೆಗಳಿಗಾಗಿ.</ref>
 
ಬುದ್ಧರ ಬೋಧನೆಗಳಲ್ಲಿ ಪ್ರಮುಖವಾದುದು ತೃಪ್ತಿ, ಈ ಬೋಧನೆಯ ಪ್ರಭಾವವು ಬ್ರಾಹ್ಮಣ್ಯದ ಅರ್ಚಕಸ್ಥಾನಕ್ಕೆ ಸಂಪೂರ್ಣವಾಗಿ ಬೆಲೆಯಿಲ್ಲದಂತಾಗಿಸಿತು.<ref>ಸ್ಯೂ ಹ್ಯಾಮಿಲ್ಟನ್, ''ಅರ್ಲಿ ಬುದ್ಧಿಸಂ: ಎ ನ್ಯೂ ಅಪ್ರೋಚ್: ದ ಐ ಆಫ್ ದ ಬಿಹೋಲ್ಡರ್.'' ರೋಟ್‌ಲೆಡ್ಜ್, 2003, ಪುಟ 58.</ref>
 
ಆಚರಣಾ ಶುದ್ಧತೆಯ ಚಿಂತನೆಯು ಜಾತಿ ಪದ್ಧತಿಯ ವೈಚಾರಿಕ ನೆಲೆಯಾಗಿದ್ದಿತು; ಅಶುದ್ಧ ಅಥವಾ ನಿಷೇಧಿತ ವಸ್ತುಗಳ ಸಂಬಂಧಿತ ವೃತ್ತಿಗಳು ಹಾಗೂ ಕಾರ್ಯಗಳೂ ಅಶುದ್ಧವೆಂದು ಸಮೀಕರಿಸಲಾಗುತ್ತಿತ್ತು. ಇಂತಹ ಆಚರಣಾ ಶುದ್ಧತೆಯ ವ್ಯವಸ್ಥೆ ಮತ್ತು ನಿಷೇಧಗಳ ನಿಯಮಗಳನ್ನು ಹೇರುವಂತಹ ಪದ್ಧತಿಗಳು ಬೌದ್ಧ ಆಶ್ರಮದ ನಿಯಮಗಳಲ್ಲಿಲ್ಲ ಹಾಗೂ ಇವನ್ನು ಬೌದ್ಧ ಬೋಧನೆ<ref>{{Harv|Robinson|Johnson|Thanissaro|2005|p=51}}</ref>ಗಳ ಅಂಗವಾಗಿ ಪರಿಗಣಿಸಲಾಗುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಮೊದಲ ಬೌದ್ಧ ಗ್ರಂಥಗಳು ಶುದ್ಧತೆಯು ವ್ಯಕ್ತಿಯ ಮನೋಸ್ಥಿತಿಯೆಂದೂ, ಅನೈತಿಕವಾಗಿ ವರ್ತಿಸುವ ಯಾವುದೇ ವ್ಯಕ್ತಿಯು, ಯಾವುದೇ ಜಾತಿಯವನಾಗಿದ್ದರೂ, "ಒಳಗೇ ಕೊಳೆಯುತ್ತಿರುವವನು" ಅಥವಾ "ಅಶುದ್ಧತೆಯ ಕೊಳಕಿನ ರಾಶಿ" ಎಂದು ಉಲ್ಲೇಖಿಸಿವೆ.<ref>ಸ್ಯೂ ಹ್ಯಾಮಿಲ್ಟನ್, ''ಅರ್ಲಿ ಬುದ್ಧಿಸಂ: ಎ ನ್ಯೂ ಅಪ್ರೋಚ್: ದ ಐ ಆಫ್ ದ ಬಿಹೋಲ್ಡರ್.'' ರೋಟ್ ಲೆಡ್ಜ್ 2000, ಪುಟಗಳು 47, 49.</ref>
 
===ಜೈನಧರ್ಮ===
* [[ಮಹಾವೀರ]]ರ ಮೊದಲ ಮತಾಂತರಿ, 24ನೆಯ [[ಜೈನಮತ]]ದ [[ತೀರ್ಥಂಕರ]] [[ಇಂದ್ರಭೂತಿ]](ಅಲಿಯಾಸ್ ಗೌತಮಸ್ವಾಮಿ)ಯು ಬ್ರಾಹ್ಮಣನಾಗಿದ್ದು, ಇತರ ಬ್ರಾಹ್ಮಣರ ತಂಡವೊಂದರ ನೇತೃತ್ವ ವಹಿಸಿ, ಅವರನ್ನು [[ಜೈನಧರ್ಮ]]ಕ್ಕೆ ಮತಾಂತರಿಸಿದರು. ಅವರು [[ರಾಜಗೃಹ]]ದ ಸಮೀಪ ಇರುವ ಗೊಬ್ಬರ್ (ಗೋವರ್ಯ ಎಂದೂ ಕರೆಯುತ್ತಾರೆ) ಗ್ರಾಮದವರು. ಗೌತಮರನ್ನು ಕಂಡ ತಕ್ಷಣ, ಒಮ್ಮೆ ಅವರೊಂದಿಗೆ ಬೆಟ್ಟದ ತುದಿಯನ್ನು ತಲುಪಲು ಸ್ಪರ್ಧಿಸುತ್ತಿದ್ದ ತಾಪ್ಸರು, ವಿಜಯಿ ಗೌತಮರನ್ನು ಶಿಖರದಲ್ಲಿ ಕಂಡಾಕ್ಷಣ, ಮೋಕ್ಷವನ್ನು ಪಡೆದರೆಂದು ಹೇಳಲಾಗುತ್ತದೆ.<ref>ಪುಟ 21 ''ಜೈನ-ರೂಪ-ಮಂಡಣ =: ಜೈನ ಐಕಾನೋಗ್ರಫಿ'' ಲೇಖಕ ಉಮಾಕಾಂತ್ ಪ್ರೇಮಾನಂದ್ ಷಾ</ref>
* ಸಜ್ಜಂಭವರು ರಾಜಗೃಹದಲ್ಲಿ ಹುಟ್ಟಿದ ಮತ್ತೊಬ್ಬರಾಗಿದ್ದು ಅವರನ್ನು ಜೈನ ದೇವಸ್ಥಾನದ ಮುಖ್ಯಸ್ಥರನ್ನಾಗಿ ಆರಿಸಲಾಯಿತು. "ದಶವೈಕಲಿಕ ಸೂತ್ರ"ವನ್ನು ರಚಿಸಿವುದರ ಮೂಲಕ ಅವರು ಕೀರ್ತಿಭಾಜನರಾದರು.
* ಆಚಾರ್ಯ ವಿದ್ಯಾನಂದರು ದಿಗಂಬರ ಪಂಥದ ಒಬ್ಬ ಬ್ರಾಹ್ಮಣರಾಗಿದ್ದು, ಸಂಸ್ಕೃತದಲ್ಲಿ "ಅಷ್ಟ ಸಹಸ್ರಿ" ಎಂಬ ಎಂಟು ಸಾವಿರ ಪದ್ಯಗಳ ಹೊತ್ತಿಗೆಯನ್ನು ರಚಿಸಿದರು.
* ಜೈನರಲ್ಲಿ "ಗುರೂಜೀ" ಎಂದೇ ಖ್ಯಾತರಾದ ಆಚಾರ್ಯ ಸುಶೀಲ್ ಕುಮಾರ್ ಹರಿಯಾಣ ಪ್ರಾಂತ್ಯದ ಶಕರ್ಪುರ್ ಗ್ರಾಮದಲ್ಲಿ ವೈದಿಕರಾಗಿ ಜನಿಸಿದರು. ತಮ್ಮ ಹದಿನೈದರ ಹರೆಯದಲ್ಲಿ ಅವರು ಶ್ವೇತಾಂಬರರ ಒಳ-ಪಂಗಡವಾದ ಸ್ಥಾನಕವಾಸಿಯಾಗಿ ದೀಕ್ಷೆ ತೆಗೆದುಕೊಂಡರು (ಸಂನ್ಯಾಸಿಯಾದರು).
* ತುಂಭೀವನದಲ್ಲಿನ ಧನಗಿರಿಯೆಂಬ ಬ್ರಾಹ್ಮಣನೊಬ್ಬನು ಜೈನ ಆಚಾರ್ಯ ಸಿನ್ಹಗಿರಿಯವರ ಉಪನ್ಯಾಸಗಳನ್ನು ಕೇಳುತ್ತಾ, ಕೇಳುತ್ತಾ ಐಹಿಕ ಭೋಗಗಳಲ್ಲಿ (ಸಿರಿಯಲ್ಲಿ) ಆಸಕ್ತಿ ಕಳೆದುಕೊಂಡು ದೀಕದಷೆ ತೆಗೆದುಕೊಳ್ಳಲು ನಿರ್ಧರಿಸಿದನು ಎಂಬ ಒಂದು ಕಥೆಯೂ ಇದೆ.
* ಉಮಾಸ್ವತಿಯು ಜೈನರ ಪ್ರೀತಿಗೆ ಎಷ್ಟು ಒಳಗಾಗಿದ್ದರೆಂದರೆ ದಿಗಂಬರ ಪಂಥದವರು ಅವರು ದಿಗಂಬರರೆಂದೂ, ಶ್ವೇತಾಬರರು ಅವರು ಶ್ವೇತಾಂಬರರೆಂದೂ ಪರಿಗಣಿಸಿ ಅವರನ್ನು ಬಿಟ್ಟುಕೊಡಲು ಆಗದಂತಿದ್ದರು.
 
====ಭಾರತದ ರಾಜರಾಳಿದ ನಾಡುಗಳು====
* [[ಪುಂಡ್ರವರ್ಧನ]]ದ ಜೈನ ಆಚಾರ್ಯ ಭದ್ರಬಾಹುರವರು ಬೌದ್ಧ ದೊರೆ [[ಅಶೋಕ]]ನ ತಾತನಾದ [[ಮೌರ್ಯ]]ವಂಶದ [[ಚಂದ್ರಗುಪ್ತ ಮೌರ್ಯ]]ನ ಗುರುಗಳಾಗಿದ್ದರೆಂದು ಹೇಳಲಾಗಿದೆ.
* [[ಗುಪ್ತ]]ರ ಕಾಲದ, ಸೋಮಪುರದ ಆಸುಪಾಸಿನಲ್ಲಿ ದೊರೆತ, ಒಂದು ತಾಮ್ರಶಾಸನದಲ್ಲಿನ ಉಲ್ಲೇಖದಂತೆ ವಾಟಗೋಹಳಿಯಲ್ಲಿ ಬ್ರಾಹ್ಮಣನೊಬ್ಬನು ತನ್ನ ಜಮೀನನ್ನು ಒಂದು ಜೈನವಿಹಾರಕ್ಕೆ ದಾನ ನೀಡಿದ್ದಾನೆ.
* ವಿಜಯಾದಿತ್ಯ ವಂಶದ ಕಾಮದೇವ ರಾಜರ ಸೇನಾಪತಿಯಾಗಿದ್ದ ವಾಸುದೇವ ಎಂಬ ಬ್ರಾಹ್ಮಣ ಪಾರ್ಶ್ವನಾಥ ದೇವರ ಗುಡಿಯೊಂದನ್ನು ಕಟ್ಟಿಸಿದರು.
* ಪಾಲಸಿಕದ ಕದಂಬ ರಾಜರು ಜೈನ ಬ್ರಾಹ್ಮಣರಾಗಿದ್ದು, ಜೈನಧರ್ಮವನ್ನು ಬೆಂಬಲಿಸುತ್ತಿದ್ದರು ಮತ್ತು ಭೂಪ್ರದೇಶಗಳನ್ನು ದೇಣಿಗೆಯಾಗಿ ನೀಡುತ್ತಿದ್ದುದಲ್ಲದೆ ಹಲವಾರು ದೇವಸ್ಥಾನಗಳನ್ನು ಕಟ್ಟಿಸಿದರು ಮತ್ತು ಈ ರೀತಿಯಲ್ಲಿ ಜೈನಧರ್ಮವನ್ನು ಪೋಷಿಸಿದರು. ಇದು ಜೈನಧರ್ಮವು ದಕ್ಷಿಣ ಭಾರತವನ್ನು ಪಶ್ಚಿಮದ ಮೂಲಕ ಪ್ರವೇಶಿಸಿತು ಮತ್ತು ಪ್ರಾಯಶಃ ಉಜ್ಜಯಿನಿಯ ಮೂಲಕವೇ ಎಂಬ ದೃಷ್ಟಿಕೋನವನ್ನು ಬೆಂಬಲಿಸುತ್ತದೆ.
* ಪಾಲಸಿಕದ ಕದಂಬ ವಂಶದ ರಾಜ ಮೃಗೇಶವರ್ಮನ್ ಯಾಪನಿಯರು, ನಿಗ್ರಂಥರು ಮತ್ತು ಕುರ್ಚಕರಿಗೂ ದೇಣಿಗೆಗಳನ್ನು ನೀಡಿದರು.
* ಹರಿಭದ್ರ ಎಂಬ ಬ್ರಾಹ್ಮಣ ಜಿನಭದ್ರ (ಅಥವಾ ಜಿನಭಟ್ಟ)ರ ಶಿಷ್ಯರಾಗಿದ್ದರು ಮತ್ತು ನಂತರದ ದಿನಗಳಲ್ಲಿ "ಸೂರಿ" ಎಂಬ ಬಿರುದನ್ನು ಪಡೆದರು(ಜೈನ ಮಾಂಕ್ ಗಳಲ್ಲಿ ಗೌರವಾನ್ವಿತ ಪಾಂಡಿತ್ಯದ ಬಿರುದು)
 
===ಸಿಖ್ ಧರ್ಮ===
ಸಿಖ್ ಧರ್ಮವು [[ಗುರು ನಾನಕ್]] ರ ಬದುಕಿಗೂ ಮುನ್ನ ಮೂರು ಪ್ರಮುಖ ಭಗತ್(ಭಕ್ತ) ರನ್ನು ಗುರುತಿಸುತ್ತದೆ; [[ಭಗತ್(ಭಕ್ತ) ರಮಾನಂದ]], [[ಭಗತ್(ಭಕ್ತ) ಸೂರ್ ದಾಸ್]] ಮತ್ತು [[ಭಗತ್(ಭಕ್ತ) ಜಯದೇವ]].
 
[[ಔರಂಗಝೇಬ್]] ರಾಜ್ಯವಾಳುತ್ತಿದ್ದಾಗ, [[ಇಫ್ತಿಕಾರ್ ಖಾನ್]] ರ ರಾಜ್ಯಪಾಲನೆಯಡಿಯಲ್ಲಿ (1672-1675 A.D.) [[ಕಾಶ್ಮೀರಿ ಬ್ರಾಹ್ಮಣರು]] ಇವರಿಂದ ಬಹಳ ಕ್ರೂರವಾದ ವರ್ತನೆಗಳನ್ನು, ಕೋಟಲೆಗಳನ್ನು ಅನುಭವಿಸಿದರು. [[ಕಾಶ್ಮೀರ]], [[ವಾರಣಾಸಿ]], [[ಪ್ರಯಾಗ]], [[ಹರಿದ್ವಾರ]], ಮುಂತಾದಲ್ಲಿನ [[ಬ್ರಾಹ್ಮಣರನ್ನು]] ಇಸ್ಲಾಂ ಮತಕ್ಕೆ ಮತಾಂತರಿಸಿಬಿಟ್ಟರೆ ಭಾರತದ ಮಿಕ್ಕ ಎಲ್ಲಾ ಜನರನ್ನೂ ಮತಾಂತರಿಸುವುದ ಸುಲಭವಾಗುವುದು ಎಂಬುದು ಔರಂಗ್ ಝೇಬ್ ರ ದೃಢವಾದ ನಂಬಿಕೆಯಾಗಿತ್ತು. ಸಿಖ್ಖರ ಬಗ್ಗೆ ವಿಶೇಷ ಜ್ಞಾನವುಳ್ಳವರೆಂದು ಖ್ಯಾತರಾದ ಮ್ಯಾಕ್ಸ್ ಆರ್ಥರ್ ಮೆಕಾಲಿಫ್ ಇಂತೆನ್ನುತ್ತಾರೆ, "ಮತಾಂತರದ ಮೊದಲ ಯತ್ನ ಕಾಶ್ಮೀರದಲ್ಲಿ ನಡೆಯಿತು. ಅದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದಾಗಿ, [[ಕಾಶ್ಮೀರೀ ಪಂಡಿತ]]ರು ಬಹಳ ವಿದ್ಯಾವಂತರೆಂದಿದ್ದು, ಅವರು ಮತಾಂತರಗೊಂಡರೆ, ಹಿಂದೂಸ್ಥಾನದ ವಾಸಿಗಳು ಅವರ ದೃಷ್ಟಾಂತವನ್ನು ಅನುಸರಿಸುವರೆಂಬ ಅಭಿಮತ್. ಎರಡನೆಯದಾಗಿ, ಪೆಷಾವರ್ ಮತ್ತು ಕಾಬೂಲ್ ಎರಡೂ [[ಮಹಮ್ಮದೀಯ]] ರಾಜ್ಯಗಳಾಗಿದ್ದು, ಕಾಶ್ಮೀರಕ್ಕೆ ಸಮೀಪ ಇದ್ದವು ಮತ್ತು ಕಾಶ್ಮೀರಿಗಳು ಮತಾಂತರಕ್ಕೆ ಪ್ರತಿರೋಧ ವ್ಯಕ್ತಪಡಿಸಿದಲ್ಲಿ ಮಹಮ್ಮದೀಯರು ಅವರ ಮೇಲೆ ಧಾರ್ಮಿಕ ಯುದ್ಧ ಸಾರಿ, ಸೋಲಿಸಿ, ನಾಶಗೊಳಿಸಬಹುದಿತ್ತು." ಎಲ್ಲಾ ವಿಷಯಗಳ ಬಗ್ಗೆ ಹೇಗೋ, ಹಾಗೆಯೇ ಈ ವಿಷಯದಲ್ಲೂ ಔರಂಗ್ ಝೇಬರ ಆಲೋಚನೆಯು ಸರಳ ಮತ್ತು ಶಕ್ಯವಾಗಿತ್ತು. ಮತದ ಬಗ್ಗೆ ಅತ್ಯಾಭಿಮಾನವನ್ನೇ ಹೊಂದಿದ್ದ ಇಫ್ತಿಕರ್ ಗೆ ಈ ಕಾರ್ಯಕ್ಕೆ ತನ್ನನ್ನು ಆರಿಸಿದ್ದು ಅಪರಿಮಿತ ಸಂತಸ ತಂದಿತು. ಕಾಶ್ಮೀರಿ ಪಂಡಿತರನ್ನು ಮತಾಂತರಿಸಲು ಅವರು ಬಲವಂತಗೊಳಿಸುವುದಲ್ಲದೆ, ಜೊತೆಗೆ ಕತ್ತಿಯ ಶಕ್ತಿಯನ್ನೂ ಸೇರಿಸಿದರು.
ಬೆದರಿದ ಕಾಶ್ಮೀರಿ ಪಂಡಿತರು ಮೊದಲಿಗೆ ಗುರು ತೇಜ್ ಬಹದ್ದೂರ್ ರನ್ನು ಭೇಟಿಯಾಗಿ ತಮ್ಮ ಪರಿಸ್ಥಿತಿಯನ್ನು ವಿವರಿಸಲು ನಿಶ್ಚಯಿಸಿದರು. ಕಾಶ್ಮೀರಿ ಪಂಡಿತರ ಅದೃಷ್ಟಕ್ಕೆ [[ಬಾರಧ್ವಾಜ]] [[ಗೋತ್ರ]]ದ ಮತ್ತಾನ್ ಪ್ರಾಂತ್ಯದ [[ಪಂಡಿತ ಕೃಪಾ ರಾಮ್]] [[ಗುರು ತೇಜ್ ಬಹದ್ದೂರ್]] ರ ಸ್ನೇಹಿತರಾಗಿದ್ದರು ಮತ್ತು ಇವರು [[ಗೋವಿಂದ್ ರಾಜ್]] (ನಂತರ [[ಗುರು ಗೋವಿಂದ್ ಸಿಂಘ್]]) ರ ಗುರುಗಳೂ ಆಗಿದ್ದರು. ಹೀಗಾಗಿ ಕಾಶ್ಮೀರಿ ಬ್ರಾಹ್ಮಣರು ಗುರು ತೇಜ್ ಬಹದ್ದೂರರನ್ನು ಭೇಟಿಯಾಗುವುದು ಸುಲಭವಾಯಿತು. ಭಟ್ ವಾಹಿ ತಲಂದ ಪರ್ಗನ ಜಿಂದ್ ಎಂಬ ಅಂದಿನ ಅಧಿಕೃತ ದಾಖಲೆಗಳ ಪ್ರಕಾರ, ಪಂಡಿತ್ ಕೃಪಾ ರಾಮ್ ಮತ್ತು ಅವರ ಸಂಗಡಿಗರು ಗುರು ತೇಜ್ ಬಹದ್ದೂರರನ್ನು ಮೇ ೨೫, 1675ರಂದು ಪರ್ಘನ ಕೆಹ್ಲೂರ್ ನ ಚಕ್ ನಾನಕಿಯಲ್ಲಿ ಭೇಟಿಯಾಗಿ ತಮ್ಮ ಸ್ಥಿತಿಯನ್ನು ಅವರಿಗೆ ಅರುಹಿದರು. ಈ ಮಹಾನ್ ಗುರುಗಳು ಕಾಶ್ಮೀರಿ ಬ್ರಾಹ್ಮಣರನ್ನು ಮತಾಂತರಿಸುವ ಮುನ್ನ ಸಾಧ್ಯವಾದರೆ ತನ್ನನ್ನು [[ಇಸ್ಲಾಂ]]ಗೆ ಮತಾಂತರಿಸಲು ಯತ್ನಿಸಬೇಕೆಂದು ಔರಂಗ್ ಝೇಬ್ ಗೆ ಸವಾಲೊಡ್ಡಿದರು.
ಕಡೆಗೆ ಔರಂಗ್ ಝೇಬ್ ಗುರು ತೇಜ್ ಬಹದ್ದೂರರನ್ನು ಸೆರೆ ಹಿಡಿಸಿದರು ಹಾಗೂ ನಂತರ ಗುರು ತೇಜ್ ಬಹದ್ದೂರರು ಸಾರ್ವಜನಿಕರ ಎದುರೇ ನವೆಂಬರ್ 11, 1675ರಲ್ಲಿ ಶಿರಚ್ಛೇದನಗೊಂಡರು. ಇದಕ್ಕೂ ಮುನ್ನ ಗುರು ತೇಜ್ ಬಹದ್ದೂರರ ಜೊತೆಗಾರರ ಪೈಕಿ ಮೂವರಾದ [[ಭಾಯಿ ಮತಿ ದಾಸ್]], [[ಭಾಯಿ ಸತಿ ದಾಸ್]] ಮತ್ತು [[ಭಾಯಿ ದಯಾಳ್ ದಾಸ್]] ಔರಂಗ್ ಝೇಬ್ ರ ಆಜ್ಷೆಯ ಮೇರೆಗೆ ಬಹಳ ದಾರುಣವಾಗಿ ಕೊಲ್ಲಲ್ಪಟ್ಟರು. ಕಡೆಗೆ ಪಂಡಿತ್ ಕೃಪಾ ರಾಮ್ ಸ್ವತಃ ಶಸ್ತ್ರ ಹಿಡಿದು ಮುಘಲರೊಡನೆ ಕಾದಲು ಗುರು ಗೋವಿಂದ್ ಸಿಂಘ್ ರನ್ನು ಸೇರಿದರು ಮತ್ತು 1705ರ ಚಮ್ಕೋರ್ ಯುದ್ಧದಲ್ಲಿ ಹುತಾತ್ಮರಾದರು.
 
ಅಕ್ಟೋಬರ್ 7, 1708ರಂದು ಗುರು ಗೋವಿಂದ್ ಸಿಂಘ್ ರು ಹೇಡಿಗಳ ಆಕ್ರಮಣದಿಂದಾದ ಗಾಯಗಳಿಂದ ಅಸು ನೀಗಿದಾಗ, ಅವರ ನಿಷ್ಠ ಅನುಯಾಯಿಯಾದ [[ಬಂದಾ ಬಹಾದುರ್]] ಎಂಬ ರಾಜಪುರಿಯ ಬ್ರಾಹ್ಮಣ(ರಾಜಪುರಿ ಅಥವಾ ಈಗಿನ [[ರಾಜೌರಿ]]ಯು ಐತಿಹಾಸಿಕವಾಗಿ ಬಹಳ ಕಾಲ ವಿಶಾಲ ಕಾಶ್ಮೀರದ ಭಾಗವಾಗಿಯೇ ಇದ್ದದ್ದು ತಿಳಿದಿರುವ ಅಂಶವೇ)ಮೊಘಲರ ವಿರುದ್ಧ ಸಮರ ಸಾರಿದರು. ಬಂದಾ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದರು(ಕೆಲವು ಲೇಖಕರು ರಾಜಪುತ ವಂಶಜರೆಂದು ಹೇಳುವುದು ಸತ್ಯವಲ್ಲ). ಬಂದಾರವರ ಮೂಲನಾಮ [[ಲಕ್ಷ್ಮಣ್ ದೇವ್]] [[ಭರಧ್ವಾಜ್]] ಎಂದಿತ್ತು ಮತ್ತು ಎಲ್ಲಾ ಅಧಿಕೃತ ದಾಖಲೆಗಳೂ ಅವರು ಬ್ರಾಹ್ಮಣರೆಂದು ಸೂಚಿಸುತ್ತವೆ.ಚೌವೇ ರತ್ತನ್ ಎಂಬ ಖ್ಯಾತ ಪುಸ್ತಕವನ್ನು ಬರೆದ ಕೀರ್ತಿವೆತ್ತ್ತ ಪಂಡಿತರಾದ ಪೂಂಚ್ ನ ಗ್ಯಾನಿ ಬುಧ್ ಸಿಂಘ್ ಸಹ ಇದನ್ನು ಅನುಮೋದಿಸುತ್ತಾರೆ. ಮಾನವನ ಇತಿಹಾಸದಲ್ಲೇ ನಿರಂಕುಶ ಪ್ರಭುತ್ವದ ವಿರುದ್ಧ [[ಲಕ್ಷ್ಮಣ್ ದೇವ್ ಭರಧ್ವಾಜ್]] ಹೋರಾಡಿದ ರೀತಿಯಲ್ಲಿ ಪ್ರಾಯಶಃ ಯಾರೂ ಹೋರಾಡಿರಲಾರರು ಎಂದರೆ ಅತಿಶಯೋಕ್ತಿಯೇನಲ್ಲ. 1709-1715ರ ವರೆಗೆ, ಸೆರೆಯಾಗಿ ಹತ್ಯೆಯಾಗುವವರೆಗೂ, ಅವರು ಮೊಘಲರ ಚಕ್ರಾಧಿಪತ್ಯದ ಜಂಘಾಬಲವನ್ನೇ ಉಡುಗಿಸಿದರು. ನಂತರದ ದಿನಗಳಲ್ಲಿ ಕಾಶ್ಮೀರವನ್ನು [[ಆಫ್ಘನ್ನ]]ರಿಂದ ಬಿಡಿಸಲು [[ಮಹಾರಾಜ ರಂಜಿತ್ ಸಿಂಘ್]] ರನ್ನು ಒಪ್ಪಿಸಿದುದೂ ಪಂಡಿತ್ ಬೀರ್ ಬಲ್ ಧಾರ್ ಎಂಬ ಓರ್ವ ಕಾಶ್ಮೀರಿ ಪಂಡಿತರೇ. ಕಾಲಕ್ರಮೇಣ, ಪಂಡಿತ್ ಬೀರ್ ಬಲ್ ಧಾರ್ ರ ಸಲಹೆಯನ್ನು ಆಲಿಸಿದ ಈ ಮಹಾನ್ ಅರಸರು ಕಾಶ್ಮೀರವನ್ನು 1819ರಲ್ಲಿ ಆಕ್ರಮಿಸಿದರು.
 
ಮಹಾರಾಜ ರಂಜಿತ್ ಸಿಂಘ್ ರ ಆಸ್ಥಾನವು [[ಕಾಶ್ಮೀರಿ ಬ್ರಾಹ್ಮಣ]]ರಿಂದ ತುಂಬಿ ತುಳುಕುತ್ತಿದ್ದು, ಅದರಲ್ಲಿ ಪ್ರಮುಖರಾದವರು [[ದಿವಾನ್ ದೀನಾನಾಥ್]], ಕರ್ನಲ್ [[ಬದರಿನಾಥ್]], [[ಪಂಡಿತ್ ಅಯೋಧ್ಯಾ ಪ್ರಸಾದ್]], ಮುಂತಾದವರು.ಮಹಾರಾಜರು ದೀನಾನಾಥ್ ರನ್ನು ಎಲ್ಲಾ ಸೂಕ್ಷ್ಮ ವಿಚಾರಗಳಲ್ಲೂ ನಂಬುತ್ತಿದ್ದರು ಮತ್ತು 1838ರಲ್ಲಿ ದೀನಾನನಾಥ್ ರಿಗೆ ದಿವಾನಗಿರಿಯನ್ನು ನೀಡಲಾಯಿತು. ಸಿಖ್ಖರ ಸಾಮ್ರಾಜ್ಯವು ಪತನವಾದನಂತರವೂ ಪಂಡಿತ್ ದೀನಾನಾಥರು ಮಹಾರಾಜರ ವಂಶಸ್ಥರಿಗೆ ಬದ್ಧರಾಗಿಯೇ ಇದ್ದರು.<ref>http://dr-upinder-fotadar.sulekha.com/blog/post/2008/06/the-kashmiri-pandits-an-important-component-of-the.htm</ref><ref>http://gurbani101.net/GURUS/GURUTEGBHADURJI/tabid/149/language/en-US/Default.aspx</ref>
 
ಸಿಖ್ ಧರ್ಮದ ಹಲವಾರು ಮೂರ್ತಿಸ್ವರೂಪಿಗಳು ಬ್ರಾಹ್ಮಣರಾದ [[ಭಗತ್ ಕಬೀರ್]], [[ಭಗತ್ ಧನ್ನ]], [[ಭಗತ್ ರವಿದಾಸ್]], [[ಭಗತ್ ಪೀಪಾ]], [[ಭಗತ್ ಸಾಯಿನ್]] ರ ಶಿಷ್ಯರು. ಈ ಶ್ರೇಷ್ಠರ ಬರಹಗಳು ಮತ್ತು ಹೇಳಿಕೆಗಳನ್ನು ಸಿಖ್ ಗ್ರಂಥವಾದ [[ಶ್ರೀ ಗುರು ಗ್ರಂಥ್ ಸಾಹಿಬ್]] ನಲ್ಲಿ ಸಂರಕ್ಷಿಸಲಾಗಿದೆ.
 
ಗುರು ಗ್ರಂಥ ಸಾಹೇಬವನ್ನು ಬರೆದ ಹಲವಾರು ಲೇಖಕರ ಉಪನಾಮವು [[ಭಟ್]] ಎಂದಿದೆ.<ref>ಆದಿ ಗ್ರಂಥದಲ್ಲಿ [http://www.allaboutsikhs.com/sikh-history/bards-bhatts-in-adi-granth-bhatt-mathura.html ಕವಿಗಳು/ಭಟ್ಟರು : ಭಟ್ Mathura]</ref> ಮಥುರಾ ಭಟ್ಟರು ರಚಿಸಿದ ಈ ಸಿಖ್ ಗ್ರಂಥದಲ್ಲಿ ಏಳು ಗುರು ರಾಮ್ ದಾಸ್ ರ ಶ್ನಾಘನೆಗೂ, ಏಳು ಗುರು ಅರ್ಜನರ ಸ್ತುತಿಗೂ ಸೀಮಿತವಾಗಿವೆ.
 
ಸಿಖ್ ಜನಾಂಗದಲ್ಲಿ ಹಲವಾರು [[ಮೊಹ್ಯಾಲ್]] ಗಳು (ಬ್ರಾಹ್ಮಣ ಯೋಧರು) ಇದ್ದಾರೆ.
 
==ಇವನ್ನೂ ಗಮನಿಸಿ==
* [[ರಾಜಪುರೋಹಿತ
]]
* [[ಬ್ರಾಹ್ಮಣರ ಆಹಾರದ ಇತಿಹಾಸ]]
* [[ಹಿಂದುತ್ವದಲ್ಲಿ ವರ್ಣ]]
* [[ಬ್ರಾಹ್ಮಣ ಪಂಗಡಗಳು]]
* [[ಬ್ರಾಹ್ಮಣತ್ವ]]
* [[ಮುಂದುವರಿದ ಜಾತಿಗಳು]]
* [[ಸಾಮಾಜಿಕ ಆವರ್ತನ ಸಿದ್ಧಾಂತ]]
* [[ನೇಪಾಳದ ಬ್ರಾಹ್ಮಣರು]]
* [[ಬ್ರಹ್ಮಕುಮಾರಿಯರು]]
 
==ಟಿಪ್ಪಣಿಗಳು==
{{reflist|2}}
 
== ಆಕರಗಳು==
* ''[[ಸ್ವಾಮಿ ಸಹಜಾನಂದ ಸರಸ್ವತಿ]] ರಚನಾಗಳಿ'' (ಸ್ವಾಮಿ ಸಹಜಾನಂದ ಸರಸ್ವತಿಯವರ ಆಯ್ದ ಕೃತಿಗಳು), ಪ್ರಕಾಶನ್ ಸಂಸ್ಥಾನ್, [[ದೆಹಲಿ]], 2003.
* [[ಬಾಲ್ ದೇವ್ ಉಪಾಧ್ಯಾಯ]], ಕಾಶಿ ಕೀ ಪಾಂಡಿತ್ಯ ಪರಂಪರಾ, ಶಾರ್ದಾ ಸಂಸ್ಥಾನ್, [[ವಾರಣಾಸಿ]], 1985.
* ಎಂ.ಎ. ಷೆರಿಂಗ್, ಹಿಂದೂ ಟ್ರೈಬ್ಸ್ ಎಂಡ್ ಕ್ಯಾಸ್ಟ್ಸ್ ಆಸ್ ರಿಪ್ರೊಡ್ಯೂಸ್ಡ್ ಇನ್ ಬನಾರಸ್, [[ಏಷ್ಯನ್ ಎಜುಕೇಷನಲ್ ಸರ್ವೀಸಸ್]], ನವದೆಹಲಿ, ಮೊದಲನೆಯ ಆವೃತ್ತಿ 1872, ಹೊಸ ಆವೃತ್ತಿ 2008.
* ಜೋಗೇಂದ್ರ ನಾಥ್ ಭಟ್ಟಾಚಾರ್ಯ, ಹಿಂದೂ ಜಾತಿಗಳು ಮತ್ತು ಪಂಗಡಗಳು, [[ಮುನ್ಷೀರಾಂ ಮನೋಹರ್ ಲಾಲ್]], ದೆಹಲಿ, ಮೊದಲ ಆವೃತ್ತಿ 1896, ಹೊಸ ಆವೃತ್ತಿ 1995.
* ಇ.ಎ.ಹೆಚ್.ಬ್ಲಂಟ್, ದ ಕ್ಯಾಸ್ಟ್ ಸಿಸ್ಟಮ್ ಆಫ್ ನಾರ್ತ್ ಇಂಡಿಯಾ, ಎಸ್.ಚಂದ್ ಪಬ್ಲಿಷರ್ಸ್, 1969.
* [[ಕ್ರಿಸ್ತೋಫರ್ ಅಲನ್ ಬೇಯ್ಲೀ]], ರೂಲರ್ಸ್, ಟೌನ್ಸ್ ಮನ್ ಎಂಡ್ ಬಝಾರ್ಸ್: ಬ್ರಿಟಿಷ್ ವಿಸ್ತರಣಾ ಕಾಲದಲ್ಲಿ ಉತ್ತರಭಾರತದ ಸಮಾಜ, 1770–1870, [[ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮುದ್ರಣಾಲಯ]], 1983.
* ಆನಂದ್ ಎ. ಯಾಂಗ್, ಬಝಾರ್ ಇಂಡಿಯಾ: ಮಾರ್ಕೆಟ್ಸ್, ಸೊಸೈಟಿ, ಎಂಡ್ ದ ಕಾಲೋನಿಯಲ್ ಸ್ಟೇಟ್ ಇನ್ ಬಿಹಾರ್, [[ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಮುದ್ರಣಾಲಯ]], 1999.
* ಆಚಾರ್ಯ [[ಹಝಾರಿ ಪ್ರಸಾದ್ ದ್ವಿವೇದಿ]] ರಚನಾವಳಿ, [[ರಾಜ್ ಕಮಲ್ ಪ್ರಕಾಶನ]], [[ದೆಹಲಿ]].
* ಬಿಭಾ ಝಾರವರ[[ಪಿಹೆಚ್.]] [[ಡಿ]] ವಿಷಯ ''ಭೂಮಿಹಾರ್ ಬ್ರಾಹ್ಮಣರು: ಒಂದು ಸಾಮಾಜಿಕ ಅಧ್ಯಯನ'' , [[ಪಾಟ್ನಾ ವಿಶ್ವವಿದ್ಯಾಲಯ]]ಕ್ಕೆ ಸಮರ್ಪಿತ.
* [[ಎಂ.ಎನ್.ಶ್ರೀನಿವಾಸ್]], ಆಧುನಿಕ ಭಾರತದಲ್ಲಿ ಸಾಮಾಜಿಕ ಬದಲಾವಣೆ, [[ಓರಿಯೆಂಟ್ ಲಾಂಗ್ ಮನ್]], [[ದೆಹಲಿ]], 1995.
* [[ಮಹಾವೀರ್ ಪ್ರಸಾದ್ ದ್ವಿವೇದಿ]]ಯ ಪ್ರಬಂಧಗಳು.
* {{Citation
| last =Apte
| first =
| author-link =
| last2 =
| first2 =
| author2-link =
| editor-last=
| editor-first =
| year =1965
| title =
| edition =Fourth Revised and Enlarged
| volume =
| place =New Delhi
| publisher =Motilal Banarsidass
| isbn =
}}.
* {{Citation
| last =Apte
| first =
| author-link =
| last2 =
| first2 =
| author2-link =
| editor-last=
| editor-first =
| year =1966
| title =
| edition =Reprint 1997
| volume =
| place =New Delhi
| publisher =
| isbn =
}}.
* {{Citation
| last =Macdonell
| first =
| author-link =
| last2 =
| first2 =
| author2-link =
| editor-last=
| editor-first =
| year =1924
| title =
| edition =1966
| volume =
| place =New Delhi
| publisher =
| isbn =
}}.
* {{Citation
| last =Monier-Williams
| first =Monier
| author-link =
| last2 =
| first2 =
| author2-link =
| editor-last=
| editor-first =
| year =1899
| title =
| edition =
| volume =
| place =Delhi
| publisher =
| id =
| isbn =
| doi =
| oclc =
| url =
| accessdate =
}}.
* {{Citation
| last =
| first =
| author-link =
| last2 =
| first2 =
| author2-link =
| editor-last=Sontakke
| editor-first =N. S.
| editor-last-2=Rājvade
| editor-first-2=V. K.
| publication-date =
| year =1972
| title ={{IAST|}}
| edition =First
| volume =
| publication-place =Pune
| place =
| publisher ={{IAST|}}
| id =
| isbn =
| doi =
| oclc =
| url =
| accessdate =
}}.
 
==ಬಾಹ್ಯ ಕೊಂಡಿಗಳು==
* [http://www.kamat.com/kalranga/people/brahmins/ ಬ್ರಾಹ್ಮಣರ ಬಗ್ಗೆ ವಿಷಯಗಳು]
* [http://www.keralaiyers.com ಕೇರಳ ಅಯ್ಯರ್ ಗಳು ಅಲಿಯಾಸ್ ''ಪಟ್ಟಾರ್ ಗಳು'' , ತಮಿಳು ನಾಡಿನಿಂದ ಕೇರಳಕ್ಕೆ ಶತಮಾನಗಳ ಹಿಂದೆಯೇ ವಲಸೆ ಬಂದವರು.]
* [http://www.maganti.org/PDFdocs/brahmins.pdf ಆಂಧ್ರ ಬ್ರಾಹ್ಮಣರ ಮತ್ತು ಉಪನಾಮಗಳ ಪಟ್ಟಿ.]
* [http://www.kamat.com/kalranga/people/brahmins/list.htm ಬ್ರಾಹ್ಮಣ ಜಾತಿ ಹಾಗೂ ಉಪ-ಜಾತಿಗಳ ದೀರ್ಘ ಪಟ್ಟಿ.]
* [http://.shakdweepiya.com ಆನ್ ಲೈನ್ ಶಕ್ದ್ವೀಪೀಯ ಸಮುದಾಯ]
* [http://shakdwipi.com/ ಆನ್ ಲೈನ್ ಶಕ್ದ್ವೀಪೀಯ ಸಮುದಾಯ]
* [http://groups.google.com/group/shakyadeep ಶಕ್ದ್ವೀಪೀಯ ಕ್ಲಬ್]
* [http://www.harilalupadhyay.org ಗುಜರಾತಿ ಲೇಖರನಿಂದ ಸುದ್ದಿ]
* [http://www.marryabrahmin.com/ ಬ್ರಾಹ್ಮಣರಿಗಾಗಿ ಮದುವೆ ಮತ್ತು ವಿವಾಹ ಸಂಬಂಧ ಕುದುರಿಸುವಿಕೆ - www.marryAbrahmin.com]
 
[[Category:ಬ್ರಾಹ್ಮಣರು]]
[[Category:ಹಿಂದುತ್ವದಲ್ಲಿ ವರ್ಣಗಳು]]
[[Category:ಹಿಂದೂ ತತ್ವಶಾಸ್ತ್ರದ ಪರಿಕಲ್ಪನೆ]]
[[Category:ಸಂಸ್ಕೃತ ಪದಗಳು ಮತ್ತು ವಾಕ್ಯಗಳು]]
[[Category:ಹಿಂದೂ-ಆರ್ಯ ಜನಗಳು]]
 
[[cs:Bráhmana]]
[[da:Brahmin]]
[[de:Brahmane]]
 
[[en:Brahmin]]
[[et:Braahman]]
[[es:Brahmán (casta)]]
Line ೨೩ ⟶ ೪೯೨:
[[pl:Bramin]]
[[pt:Brâmane]]
[[ru:Брахманы (варна)]]
[[sr:Брамани]]
[[simple:Brahmin]]
[[fi:Bramiini]]
[[sv:Brahmin]]
[[th:พราหมณ์]]
[[vi:Bà-la-môn]]
[[uk:Брахмани]]
[[ur:برہمن]]
[[vi:Bà-la-môn]]
[[zh:婆罗门]]
"https://kn.wikipedia.org/wiki/ಬ್ರಾಹ್ಮಣ" ಇಂದ ಪಡೆಯಲ್ಪಟ್ಟಿದೆ