ಜಯಂತ ಕಾಯ್ಕಿಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೪ ನೇ ಸಾಲು:
ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ.
ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು."ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು", "ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ", "ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ", "ಮಧುವನ ಕರೆದರೆ ತನು ಮನ ಸೆಳೆದರೆ", "ನಿಂತಲ್ಲೆ ಹಾಳಾದೆ ನಿನ್ನಿಂದಲೇ", ಎನ್ನುತ್ತಾ ೨೦೦೬ರ ವರುಷದಿಂದೀಚಿಗೆ, ಕನ್ನಡ ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ
ಶ್ರೀ ಕಾಯ್ಕಿಣಿಯವರ ಬರಹದ ಆಸಕ್ತಿ ಶುರುವಾಗಿದ್ದು ೧೯೭೦ರಿಂದಲೇ, ಆಗಲೇ ಅವರು ಕವಿ, ಸಣ್ಣ ಕಥೆಗಳ ಬರಹಗಾರ, ನಾಟಕಕಾರ ಮತ್ತು ಅಂಕಣಕಾರ ಹೀಗೆ ನಾನಾ ರೂಪಧಾರಿ. ಕನ್ನಡ ಸಾಹಿತ್ಯದಲ್ಲಿ ಮೇರು ಪ್ರಶಸ್ತಿಯೆಂದು ಹೆಸರಾದ "ರಾಜ್ಯ ಸಾಹಿತ್ಯ ಅಕಾಡೆಮಿ"ಯ ಪುರಸ್ಕಾರವು, ಶ್ರೀ ಜಯಂತರವರಿಗೆ, ತಮ್ಮ ೧೯ನೇಯ ವಯಸ್ಸಿನಲ್ಲಿಯೇ, "ರಂಗದಿಂದೊಂದಿಷ್ಟು ದೂರ" ಎಂಬ ಕವನಸಂಕಲನಕ್ಕೆ ೧೯೭೪ರಲ್ಲಿ ಪ್ರಥಮ ಬಾರಿಗೆ ದೊರಕಿತು. ಅಂಥ ಅಸಾಧಾರ್ಅಣ, ಅಭಿಜಾತ ಪ್ರತಿಭೆ ಅವರದು. ತಂದೆಯೇ ಅವರಿಗೆ ಆದರ್ಶಪ್ರಾಯ, ಅವರೊಂದಿಗೆ ಯಶವಂತ ಚಿತ್ತಾಲರವರೂ ಸಹ ಜಯಂತರ ಮೇಲೆ ಬಹಳ ಪ್ರಭಾವ ಬೀರಿರುವರು. ನಾನು ಜಯಂತಣ್ಣನೆಂದರೆ "ಶಬ್ದಗಳ ಮೋಡಿಗಾರ"ನೆಂದು ಅವರ ಬಗ್ಗೆ ಬರೆಯುತ್ತಿರುವ ಈ ಲೇಖನಕ್ಕೆ ತಲೆಬರಹ ಇಟ್ಟ ಕಾರಣ, ಅವರ ಸಾಹಿತ್ಯ ಪ್ರೇಮಿಗಳಿಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಜನಸಾಮಾನ್ಯರ ಆಡುಭಾಷೆಗಳಲ್ಲಿ ಬರುವ ಪದಗಳನ್ನು ಮುತ್ತಿನ ಮಣಿಗಳಂತೆ ಜೋಡಿಸಿ, ಜನರ ಮನಸ್ಸಿನ ಆಳಕ್ಕೆ ಇಳಿಯುವಂತೆ ಸುಂದರ ಪದಮಾಲೆಗಳನ್ನು ಕಟ್ಟುವುದರಲ್ಲಿ ಕಾಯ್ಕಿಣಿಯವರು ನಿಷ್ಣಾತರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ನಾಣ್ಣುಡಿಯಂತೆ, ಸಾಹಿತ್ಯಗಳಲ್ಲಿ ಇವರು ಬರೆಯದ ಪ್ರಕಾರಗಳಿಲ್ಲ. ತಮ್ಮ ಅತ್ಯುನ್ನತ ಸಾಹಿತ್ಯ ರಚನೆಗಳಿಗಾಗಿ, ಇನ್ನೂ ಮೂರು ಸಲ, "ರಾಜ್ಯ ಸಾಹಿತ್ಯ ಆಕಾಡೆಮಿಯ ಪ್ರಶಸ್ತಿ" ಗಳನ್ನು, ೧೯೮೨ರಲ್ಲಿ "ತೆರೆದಷ್ಟೆ ಬಾಗಿಲು" ಎಂಬ ಸಣ್ಣ ಕಥೆಗಳ ಸಂಗ್ರಹ, ೧೯೮೯ರಲ್ಲಿ "ದಗ್ಡೂ ಪರಬನ ಅಶ್ವಮೇಧ" ಎಂಬ ಸಣ್ಣ ಕಥೆಗಳ ಸಂಗ್ರಹ ಮತ್ತು ೧೯೯೬ರಲ್ಲಿ "ಅಮೃತ ಬಳ್ಳಿ ಕಷಾಯ" ಎಂಬ ಸಣ್ಣ ಕಥೆಗಳ ಸಂಗ್ರಹಕ್ಕೆ ಪಡೆದರು. ಪುನಃ "ಅಮೃತಬಳ್ಳಿ ಕಷಾಯ" ಕ್ಕೆ ೧೯೯೬ರಲ್ಲಿಯೇ ಉತ್ತಮ ಸೃಜನಾತ್ಮಕ ಕಥೆಗಳಿಗಾಗಿ ಮೀಸಲಾಗಿರುವ ರಾಷ್ಟ್ರೀಯ ಕಥಾ ಪ್ರಶಸ್ತಿ ಮತ್ತು ೧೯೯೭ರಲ್ಲಿ ಬಿ.ಎಚ್.ಶ್ರೀಧರ್ ಕಥಾ ಪ್ರಶಸ್ತಿ ಗಳು ದೊರಕಿದವು. ೧೯೯೮ರಲ್ಲಿ "ನೀಲಿಮಳೆ" ಕವನಸಂಕಲನಕ್ಕೆ ದಿನಕರ ದೇಸಾಯಿ ಕವನ ಪ್ರಶಸ್ತಿಯೂ ದೊರಕಿತು.
ಅವರು ತಮ್ಮ ಎಂ.ಎಸ್ಸಿ ಪದವಿಯ ನಂತರ ಮುಂಬೈಯಲ್ಲಿ ಫಾರ್ಮಾ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ, ಪ್ರಾಕ್ಟರ್-ಗ್ಯಾಂಬಲ್ ಮತ್ತು ಹೂಸ್ಟ್( Hoechst) ಎಂಬ ಕಂಪನಿಗಳಲ್ಲಿ ೧೯೭೭ ರಿಂದ ೧೯೯೭ರ ವರೆಗೆ ವೃತ್ತಿಕೆಲಸ ಮಾಡಿದರು. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ, ಕನ್ನಡ ಸಾಹಿತ್ಯಸೇವೆಯನ್ನಂತೂ ಅವರು ಬಿಡಲಿಲ್ಲ. ೧೯೮೨ರಲ್ಲಿ "ಕೋಟಿತೀರ್ಥ" ಎಂಬ ಕವನ ಸಂಕಲನ ಮತ್ತು "ತೆರೆದಷ್ಟೆ ಬಾಗಿಲು" ಹಾಗೂ "ಗಾಳ" ಎಂಬ ಸಣ್ಣ ಕಥೆಗಳ ಎರಡು ಸಂಕಲನಗಳನ್ನೂ ಪ್ರಕಟಿಸಲಾಯಿತು. ೧೯೮೭ರಲ್ಲಿ "ಶ್ರಾವಣ ಮಧ್ಯಾಹ್ನ" ಎಂಬ ಕವನ ಸಂಕಲನ ಮತ್ತು ೧೯೮೯ರಲ್ಲಿ "ದಗ್ಡೂ ಪರಬನ ಅಶ್ವಮೇಧ" ಎಂಬ ಸಣ್ಣ ಕಥಾಸಂಕಲನವನ್ನು ಪ್ರಕಟಿಸಲಾಯಿತು. ೧೯೯೫ರಲ್ಲಿ "ಸೇವಂತಿ ಪ್ರಸಂಗ" ಎಂಬ ನಾಟಕವನ್ನು, ೧೯೯೬ರಲ್ಲಿ "ಅಮೃತಬಳ್ಳಿ ಕಷಾಯ" ಎಂಬ ಸಣ್ಣ ಕಥಾಸಂಕಲನವನ್ನು, ೧೯೯೭ರಲ್ಲಿ "ನೀಲಿಮಳೆ" ಎಂಬ ಕವನ ಸಂಕಲನವನ್ನು ಪ್ರಕಟಿಸಲಾಯಿತು. ೧೯೯೭ ರಿಂದ ೧೯೯೮ರ ವರೆಗೆ ಮುಂಬೈಯಲ್ಲಿಯೇ ಸ್ವತಂತ್ರ ಬರಹಗಾರನಾಗಿ (freelance copy writer) ಲಿಂಟಾಸ್, ಮುದ್ರಾ ಮತ್ತು ತ್ರಿಕಾಯ ಜಾಹೀರಾತು ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ೧೯೯೭ರಲ್ಲಿ ಭಾರತೀಯ ಲೇಖಕರ ಪ್ರತಿನಿಧಿಗಳನ್ನು ಚೀನಾ ದೇಶಕ್ಕೆ ಕಳುಹಿಸಿದಾಗ, ಅವರಲ್ಲೊಬ್ಬ ಪ್ರತಿನಿಧಿಯಾಗಿ, ಶ್ರೀ ಜಯಂತರವರನ್ನೂ ಆಯ್ಕೆ ಮಾಡಿ ಕಳುಹಿಸಿದ್ದರು. ಹೊರದೇಶಕ್ಕೂ ಆಗಿನ ಕಾಲದಲ್ಲಿಯೂ ಹೊಮ್ಮಿತ್ತು ನಮ್ಮ ಜಯಂತಣ್ಣನವರ ಪ್ರತಿಭೆಯ ಪ್ರಕಾಶ. ಅವರು ೧೯೯೭ ರಿಂದ ೧೯೯೯ ರವರೆಗೆ ಈಟಿವಿ ಕನ್ನಡವಾಹಿನಿಯ ಕಾರ್ಯಕ್ರಮ ಸಮಿತಿಯಾಗಿ ಸದಸ್ಯರಾಗಿ, ರಾಮೋಜಿ ಫಿಲ್ಮ್ ಸಿಟಿ, ಹೈದರಾಬಾದ್ ನಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ "ಬಣ್ಣದ ಕಾಲು" ಎಂಬ ಸಣ್ಣ ಕಥೆಗಳ ಸಂಕಲನವಿರುವ ಪುಸ್ತಕವನ್ನು ಪ್ರಕಟಿಸಲಾಯಿತು.
Line ೧೬ ⟶ ೧೪:
==ಬಹುಮುಖ ಪ್ರತಿಭೆ==
ಜಯಂತ ಕಾಯ್ಕಿಣಿ ಅವರದು ಬಹುಮುಖ ಪ್ರತಿಭೆಯೇ ಸರಿ, ಅವರು ಕತೆಗಾರರಷ್ಟೆ ಅಲ್ಲ, ಭಾವನೆಗಳಿಗೆ ಸುಂದರ ರೂಪ ನೀಡುವುದರಲ್ಲಿ ಅವರಿಗೆ ಅವರೇ ನಿಸ್ಸೀಮರು.ಈ ವಿಚಾರ ಈಗಾಗಲೇ ಕರ್ನಾಟಕದ ಮನೆ ಮಾತಾಗಿದೆ. ಇದುವರೆಗೂ ಚಿತ್ರಗೀತೆಗಳು ಎಂದರೆ ಸಂಗೀತವಷ್ಟೇ ಮುಖ್ಯ ಎಂದುಕೊಂಡವರಿಗೆ ಕಾಯ್ಕಿಣಿಯವರು ರಚಿಸಿರುವ ''ಮುಂಗಾರು ಮಳೆ'',''ಮಿಲನ'', ''ಗೆಳೆಯ'' ಮತ್ತಿತರ ಚಿತ್ರಗಳ ಗೀತೆಗಳನ್ನು ಕೇಳಿದರೆ ಅವುಗಳ ಗುಂಗಿನಿಂದ ಹೊರ ಬರಲು ಸಾದ್ಯವೇ ಇಲ್ಲ. ಇದಲ್ಲದೆ ಉತ್ತಮ ನಿರೂಪಕರು ಮತ್ತು ಸಂದರ್ಶಕರಾಗಿ ಹಲವಾರು ಟಿ.ವಿ.ಛಾನಲ್ ಗಳಲ್ಲಿ ಸಾಹಿತಿಗಳ ಮತ್ತು ಗಣ್ಯವಕ್ತಿಗಳ ಸಂದರ್ಶನಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಸಿನಿಮಾದಲ್ಲಿ ಬರೆದರೆ ಸೃಜನಶೀಲತೆಗೆ ಧಕ್ಕೆಯಾಗುತ್ತದೆಂದು ದೂರ ಉಳಿದಿರುವ ಸಾಂಪ್ರದಾಯಿಕ ಸಾಹಿತಿಗಳಿಗಿಂತ ಬಿನ್ನವಾಗಿ ನಿಲ್ಲುತ್ತಾರೆ.ಕ್ರಪೆ:- ಸ೦ಪದ
==ಕೃತಿಗಳು==
|