ಬಿ.ಡಿ.ಜತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox ರಾಷ್ಟ್ರಪತಿ
'''ಬಿ.ಡಿ.ಜತ್ತಿ''' ([[ಸೆಪ್ಟೆಂಬರ್ ೧೦]],[[೧೯೧೨]] - [[ಜೂನ್ ೦೭]], [[೨೦೦೨]]) - [[ಭಾರತ]]ದ ಹಿಂದಿನ [[ಉಪರಾಷ್ಟ್ರಪತಿ]]ಗಳಲ್ಲೊಬ್ಬರು, ಹಾಗು [[ಕರ್ನಾಟಕ]]ದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.
| name=ಬಸಪ್ಪ ದಾನಪ್ಪ ಜತ್ತಿ
| image=Bdjattii.jpg|300px
| order=೮ನೇ [[ಹಂಗಾಮಿ ಭಾರತದ ರಾಷ್ಟ್ರಪತಿ]]†
| term_start= [[ಫೆಬ್ರವರಿ ೧೧]], [[೧೯೭೭]]
| final term ends= [[ಜುಲೈ ೨೭]], [[೧೯೭೭]]
| vicepresident= [[]]
| primeminister=[[]]
| predecessor=[[ಫಕ್ರುದ್ದೀನ್ ಅಲಿ ಅಹ್ಮದ್]]
| successor=[[ ನೀಲಂ ಸಂಜೀವ ರೆಡ್ಡಿ]]
| birth_date=[[ಸೆಪ್ಟೆಂಬರ್ ೧೦]],[[೧೯೧೨]]
| birth_place=[[ಸಾವಳಗಿ ]],[[ಬಾಗಲಕೋಟ ಜಿಲ್ಲೆ]], [[ಕರ್ನಾಟಕ]]
| death_date={{Death date and age|2002|6|7|1912|8|10}}
| party=[[ಪಕ್ಷೇತರ)]]
| spouse=[[]]
| religion=[[ಹಿಂದು]]
| languages spoken=[[ಮರಾಠಿ]],[[ಹಿಂದಿ]], [[ಇಂಗ್ಲಿಷ್]]
| signature=
|}}
 
 
'''ಬಸಪ್ಪ ದಾನಪ್ಪ ಜತ್ತಿ'''(ಬಿ.ಡಿ.ಜತ್ತಿ''') ([[ಸೆಪ್ಟೆಂಬರ್ ೧೦]],[[೧೯೧೨]] - [[ಜೂನ್ ೦೭]], [[೨೦೦೨]]) - [[ಭಾರತ]]ದ ಹಿಂದಿನ [[ಉಪರಾಷ್ಟ್ರಪತಿ]]ಗಳಲ್ಲೊಬ್ಬರು, ಹಾಗು [[ಕರ್ನಾಟಕ]]ದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.
 
ಸಾವಳಗಿ ಗ್ರಾಮಪಂಚಾಯತ್ ನಿಂದ ದೇಶದ ಹಂಗಾಮಿ ರಾಷ್ಟ್ರಪತಿ ಹುದ್ದೆಯವರೆಗೆ ತಲುಪಿದ ರಾಜಕಾರಣಿ ಬಿ.ಡಿ.ಜತ್ತಿ. ರಾಜ್ಯದಲ್ಲಿ ಸಚಿವರಾಗಿ, ನಂತರ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ, ಪಾಂಡಿಚೇರಿಯಲ್ಲಿ ಲೆ.ಗೌವರನರ್ ಆಗಿ ಸೇವೆ ಸಲ್ಲಿಸಿ, ಮುಂದೆ ಉಪರಾಷ್ಟ್ರಪತಿ ಮತ್ತು ಫಕ್ರುದ್ದಿನ್ ಅಹ್ಮದ್ ಅವರ ಅಕಾಲ ಮೃತ್ಯುವಿನ ನಂತರ ಕೆಲಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಇವರು ಸೇವೆ ಸಲ್ಲಿಸಿದರು. ಉತ್ತಮ ಆಡಳಿತಗಾರ, ಸರಳ ಜೀವಿ ಮತ್ತು ರಾಜಕೀಯ " ಜಟ್ಟಿ"ಎಂದು ಜತ್ತಿ ಹೆಸರು ಗಳಿಸಿದ್ದಾರೆ.
 
ತುರ್ತು ಪರಿಸ್ಥಿತಿಯ ನಂತರ ನೆಡೆದ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತದಿಂದ ಜಯಗೊಳಿಸಿದರೂ, ಮುರಾರ್ಜಿ ದೇಸಾಯಿಯವರನ್ನು ಪ್ರಧಾನಿ ಮಂತ್ರಿ ಹುದ್ದೆ ಸ್ವೀಕರಿಸಲು ಆಹ್ವಾನಿಸಲು, ಆಗ ಹಂಗಾಮಿ ರಾಷ್ಟ್ರಪತಿಗಳಾಗಿದ್ದ ಜತ್ತಿಯವರು ತಡ ಮಾಡಿದರೆಂದು ಅವರ ವಿರುದ್ಧ [[ನವದೆಹಲಿ|ದೆಹಲಿಯಲ್ಲಿ]] ಭಾರಿ ಪ್ರತಿಭಟನೆ ನೆಡೆದಿತ್ತು.ಇದರಿಂದಾಗಿ, ನಿಜಲಿಂಗಪ್ಪನವರು ರಾಷ್ಟ್ರಪತಿಯಾಗಲು ನಿರಾಕರಿಸಿದ ನಂತರ ಬಹುದಿನಗಳ ನಂತರ ಜತ್ತಿಯವರಿಗೆ ದೊರೆತಿದ್ದ ರಾಷ್ಟ್ರಪತಿ ಹುದ್ದೆ ಅವಕಾಶವು ಕೊನೆಗೆ ನೀಲಂ ಸಂಜೀವ ರೆಡ್ಡಿಯವರ ಪಾಲಾಯಿತೆಂದು ಆಗ ರಾಜಕೀಯ ಚರ್ಚೆ ನೆಡೆದಿತ್ತು. ಅದರ ಸತ್ಯಾಸತ್ಯತೆಗಳೇನೇ ಇರಲಿ, ಕನ್ನಡಿಗರಿಗೆ ರಾಷ್ಟ್ರಪತಿಯಾಗುವ ಅವಕಾಶ ದೂರವಾಗಿದ್ದು ಮಾತ್ರ ಸತ್ಯವಾಗಿದೆ.
 
1936: ಭಾರತದ ಮಾಜಿ ಉಪರಾಷ್ಟ್ರಪತಿ ಬಸಪ್ಪ ದಾನಪ್ಪ ಜತ್ತಿ (ಬಿ.ಡಿ. ಜತ್ತಿ) (10-9-1936ರಿಂದ 7-6-2002) ಜನ್ಮದಿನ. ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿಯವರಾದ ಜತ್ತಿ ಸ್ವ ಸಾಮರ್ಥ್ಯದಿಂದ ತಮ್ಮ ಬದುಕು ರೂಪಿಸಿಕೊಂಡು ಭಾರತದ ಉಪರಾಷ್ಟ್ರಪತಿ ಸ್ಥಾನದವರೆಗಿನ ಉನ್ನತ ಸ್ಥಾನಕ್ಕೆ ಏರಿದವರು. ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹ್ಮದ್ ಅವರು ನಿಧನರಾದಾಗ ಸ್ವಲ್ಪ ಕಾಲ ಹಂಗಾಮಿ ರಾಷ್ಟ್ರಪತಿಯಾಗಿಯೂ ಜತ್ತಿ ಕಾರ್ಯ ನಿರ್ವಹಿಸಿದ್ದರು. ಗುಡ್ಡಗಾಡು ಪ್ರದೇಶದ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ 1943ರಲ್ಲಿಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯರಾದ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.
1940ರಲ್ಲಿ ನ್ಯಾಯವಾದಿಯಾಗಿ ಬದುಕು ಆರಂಭಿಸಿದ ಅವರು ರಾಜಕಾರಣಿಯಾಗಿ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡರು.
 
==ಪ್ರಮುಖ ಹುದ್ದೆಗಳು==
ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲವು:
 
*ಮುಂಬೈ ವಿಧಾನಸಭೆಯ ಶಾಸಕ (೧೯೪೯)
*ಮುಂಬೈ ರಾಜ್ಯದ ಉಪ ಮುಖ್ಯಮಂತ್ರಿ (೧೯೫೫)
*ಭೂಸುಧಾರಣಾ ಮಂಡಲದ ಅಧ್ಯಕ್ಷ (೧೯೫೭),
*ರಾಜ್ಯ ಪುನರ್ ವಿಂಗಡಣೆಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ (೧೯೫೮)
*ಪಾಂಡಿಚೇರಿಯ (ಈಗಿನ ಪುದುಚೆರಿ) ಲೆಫ್ಟಿನೆಂಟ್ ಗವರ್ನರ್ (೧೯೬೮-೧೯೭೨)
*ಒರಿಸ್ಸಾ ರಾಜ್ಯದ ರಾಜ್ಯಪಾಲ (೧೯೭೨ - ೧೯೭೭)
*ಭಾರತದ ೫ನೇಯ ಉಪರಾಷ್ಟ್ರಪತಿ (ಅಗಸ್ಟ ೩೧, ೧೯೭೪ ರಿಂದ ಅಗಸ್ಟ ೩೦, ೧೯೭೯)
*ಭಾರತದ ಹಂಗಾಮೀ ರಾಷ್ಟ್ರಪತಿ (೧೧-೦೨-೧೯೭೭ ರಿಂದ ೨೫-೦೭-೧೯೭೭)
*ಮೈಸೂರ ರಾಜ್ಯ [[ಕರ್ನಾಟಕ]]ದ ೫ನೇಯ ಮುಖ್ಯಮಂತ್ರಿ (ಮೇ ೧೬, ೧೯೫೮ ರಿಂದ ಮಾರ್ಚ್ ೯,೧೯೬೨ )
 
[[ಅನ್ನದಾನಯ್ಯ ಪುರಾಣಿಕ]],[[ಕೆ.ಎಂ.ನಂಜಪ್ಪ]],[[ವೈ.ಸಿ.ಬಸಪ್ಪ]],[[ಗಂಗಪ್ಪ]],[[ಬಿ.ಎಸ್.ಶಂಕರಪ್ಪಶೆಟ್ಟಿ]], [[ಪಾವಟೆ]] ಮೊದಲಾದ ಗಣ್ಯರ ಜೊತೆಗೂಡಿ, ಬೆಂಗಳೂರಿನಲ್ಲಿ ಅಖಿಲ ಭಾರತ ಬಸವ ಸಮಿತಿ ಸ್ಥಾಪಿಸಿದರು. ಬಸವತತ್ವ ಪ್ರಚಾರಕ್ಕಾಗಿ ಮೀಸಲಾದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಅಧ್ಯಕ್ಷರಾಗಿ ಜತ್ತಿ ಮತ್ತು 27 ವರ್ಷಗಳ ಕಾಲ ಗೌರವ ಕಾರ್ಯದರ್ಶಿಯಾಗಿ [[ಅನ್ನದಾನಯ್ಯ ಪುರಾಣಿಕ]]ನಿರಂತರ ಮತ್ತು ನಿಸ್ಪಾರ್ಥ ಸೇವೆ ಸಲ್ಲಿಸಿದ್ದಾರೆ.
 
 
{{ಭಾರತದ ರಾಷ್ಟ್ರಪತಿಗಳು}}
"https://kn.wikipedia.org/wiki/ಬಿ.ಡಿ.ಜತ್ತಿ" ಇಂದ ಪಡೆಯಲ್ಪಟ್ಟಿದೆ