ತಾಳ್ತಜೆ ವಸಂತಕುಮಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
'''ಡಾ|ತಾಳ್ತಜೆ ವಸಂತಕುಮಾರ''' ಇವರು [[ಕರ್ನಾಟಕ]]ದ [[ದಕ್ಷಿಣ ಕನ್ನಡ]] ಜಿಲ್ಲೆಯವರು. [[ಮುಂಬಯಿ ವಿಶ್ವವಿದ್ಯಾಲಯ]]ದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ನ್ದ್ದಿವ್ರೃತ್ತರಾಗಿದ್ದಾರೆ. [[ಮುಂಬಯಿ]]ಯ [[ಕನ್ನಡ]] ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ತಾಳ್ತಜೆಯವರು ಸೃಜನಾತ್ಮಕ ಸಾಹಿತಿಗಳು, ವಿಮರ್ಶಕರು ಹಾಗು ಸಂಶೋಧಕರೂ ಸಹ ಆಗಿರುತ್ತಾರೆ.
==’ಡಾ ತಾಳ್ತಜೆ’ ಯವರಿಗೆ, ’ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’-೨೦೦೯ ==
’೨೦೦೯ ರ ಪ್ರತಿಶ್ಠಿತ, ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ, ’ ಖ್ಯಾತ ಸಾಹಿತಿ, ಸಂಶೋಧಕ, ಸಮರ್ಥ ಆಯೋಜಕ, ಡಾ|ತಾಳ್ತಜೆ ವಸಂತಕುಮಾರ್ ವರಿಗೆ ಲಭಿಸಿದೆ. ಮುಂಬೈಯ ’ಅಕ್ಷಯ ಪತ್ರಿಕೆ’ ಯ ಗೌ. ಪ್ರಧಾನ-ಸಂಪಾದಕರಾದ, ’ಎಂ.ಬಿ. ಕುಕ್ಯಾನ್’, ಪ್ರಾಯೋಜಕತ್ವದಲ್ಲಿ, ಮುಂಬೈನ ಭಿಲ್ಲವರ ಅಸೋಸಿಯೇಷನ್’, ಕೊಡಲಿಚ್ಛಿಸುವ ಪ್ರತಿಷ್ಠಿತ, ನಾರಾಯಣ ಗುರುಸಾಹಿತ್ಯ ಪ್ರಶಸ್ತಿ,ತಾಳ್ತಜೆಯವರ, ೪ ದಶಕಗಳ ಮುಂಬೈನ ಕನ್ನಡ ಶಿಕ್ಷಣ ಸಾಹಿತ್ಯ ಸೇವೆಗಳನ್ನು ಗುರುತಿಸಿ, ಕೊಡಲು ತೀರ್ಮಾನಿಸಲಾಗಿದೆ.
 
==ಪ್ರಶಸ್ತಿಪ್ರದಾನ-ಸಮಿತಿ==
ಪ್ರಶಸ್ತಿಪ್ರದಾನ-ಸಮಿತಿಯಲ್ಲಿ ಹಿರಿಯ ಸಾಹಿತಿಗಳಾದ, ಡಾ. ಸಂಜೀವಶೆಟ್ಟಿ ಹಾಗೂ ಡಾ.ವಿಶ್ವನಾಥ್ ಕಾರ್ನಾಡರ ಮುಂದಾಳತ್ವದಲ್ಲಿ, ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. 'ತಾಳ್ತಜೆ ವಸಂತಕುಮಾರ್' ರಿಗೆ, ಸಾಹಿತ್ಯದಲ್ಲಿ ಆಸ್ತೆ, ಹಾಗೂ ಅಭಿರುಚಿ ಬಾಲ್ಯದಿಂದಲೇ ಬಂದದ್ದು. ’ಬೆಂಗಳೂರು ವಿಶ್ವವಿದ್ಯಾಲಯ’ ದಿಂದ ಎಂ. ಎ. ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ, 'ಬಂಗಾರದ ಪದಕ'ವನ್ನು ಗಳಿಸಿದ್ದಾರೆ. ’ಮಂಗಳೂರು ವಿಶ್ವವಿದ್ಯಾಲಯ’ದಿಂದ ’[[ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ]],’ ಎಂಬ ವಿಷಯವನ್ನು ಆರಿಸಿಕೊಂಡು ಸಂಶೋಧನೆನಡೆಸಿ, ಮಹಾಪ್ರಬಂಧವನ್ನು ಸಿದ್ಧಪಡಿಸಿ, ’ಪಿ. ಎಚ್. ಡಿ’ ಪದವಿಯನ್ನು ಸಂಪಾದಿಸಿದರು. ’ಪುತ್ತೂರಿನ ವಿವೇಕಾನಂದ ಕಾಲೇಜ್’ ನಲ್ಲಿ ೧೫ ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ, ಮುಂಬೈಗೆ ಪಾದಾರ್ಪಣೆಮಾಡಿದರು. ಮುಂದೆ, ಮುಂಬೈನಲ್ಲಿ, ೧೯೮೬-೨೦೦೮, ನಿವೃತ್ತರಾಗುವವರೆಗೆ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ,ಸೇವೆಸಲ್ಲಿಸಿದರು. ತಾಳ್ತಜೆಯವರಿಗೆ ಮುದಕೊಟ್ಟ ಒಲವಿನ ಸಾಹಿತ್ಯ ಪ್ರಾಕಾರಗಳು, ಸಂಶೋಧನೆ, ಕಾವ್ಯ ಮೀಮಾಂಸೆ, ಜಾನಪದ ಸಂಸ್ಕೃತಿಯ ಅಧ್ಯಯನ, ವಿಮರ್ಶೆ, ಇತ್ಯಾದಿ. ಹಳೆಗನ್ನಡ ಕಾವ್ಯಗಳನ್ನು ಚೆನ್ನಾಗಿ ಓದಿಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು, ಅವರ ಮಾರ್ಗದರ್ಶನದಲ್ಲಿ ಪಿ. ಎಚ್. ಡಿ ಗಳಿಸಿದ್ದಾರೆ.