ಮಹೀದಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
ಮಹೀದಾಸನು ಅಥವಾ ಮಹೀದಾಸ ಐತರೇಯನು [[ವೇದ]]ಗಳಲ್ಲಿ ಉಲ್ಲೇಖಿಸಲ್ಪಟ್ಟ ಒಬ್ಬ [[ಋಷಿ]]. ಸಂಪ್ರದಾಯದ ಪ್ರಕಾರ, [[ಐತರೇಯ ಅರಣ್ಯಕ]] ಮತ್ತು [[ಐತರೇಯ ಬ್ರಾಹ್ಮಣ]]ಗಳ [[ಋಷಿ]]ಯು
ಮಹೀದಾಸನು ಚಿಕ್ಕವನಾಗಿದ್ದಾಗ, ಒಂದು ದಿನ ಅವನ ತಂದೆಯು [[ಹೋಮ]]ವೊಂದರಲ್ಲಿ ವ್ಯಸ್ತನಾಗಿದ್ದಾಗ ಅವನ ತೊಡೆಯಮೇಲೆ ತನ್ನ ಇತರ ಸಹೋದರರು ಕುಳಿತುಕೊಂಡದ್ದನ್ನು ಕಂಡ ಮಹೀದಾಸನು ತಾನೂ
ಕುಳಿತುಕೊಳ್ಳಲು ಹೋದನು ಆದರೆ ಅವನ ತಂದೆಯು ಅನುಮತಿಸಲಿಲ್ಲ. ಇದರಿಂದ ನೊಂದ ಬಾಲಕ ಮಹೀದಾಸನು ತಾಯಿಯ ಬಳಿಸಾರಿ ತನ್ನ ದುಃಖವನ್ನು ಹೇಳಿಕೊಂಡನು.ಬಹಳ ಕಾಲದಿಂದ ತನ್ನನ್ನು ಮತ್ತು ತನ್ನ ಮಗುವನ್ನು ಕೀಳಾಗಿ ಕಾಣುವುದರಿಂದ ನೊಂದುಕೊಳ್ಳುತ್ತಿದ್ದ ಅವಳು ಅಂದು ಭರಿಸಲಾರದೆ ತಾನು ನಿತ್ಯವೂ ಪೂಜಿಸುತ್ತಿದ್ದ ಪೃಥ್ವೀ ದೇವಿ ಯನ್ನು ಅಳುತ್ತಾ ಪ್ರಾರ್ಥಿಸಿದಳು. ಆಗ ಪೃಥ್ವೀ ದೇವಿಯು ಪ್ರತ್ಯಕ್ಷಳಾಗಿ ಮಹೀದಾಸನಿಗೆ ವರಸ್ವರೂಪವಾಗಿ ಅದುವರೆಗೂ ಪ್ರಕಾಶಿಸಲ್ಪಡದ ವೇದ ಙ್ಞಾನವನ್ನು ಪ್ರಸಾದಿಸಿದಳು.ನಂತರ ಮಹೀದಾಸ ಋಷಿಯೆಂದು ಗೌರವಿಸಲ್ಪಟ್ಟನು. ಪೃಥ್ವೀ ದೇವತೆಯಿಂದ ಮಹೀದಾಸ ಐತರೇಯನಿಗೆ ಪ್ರಾಪ್ತವಾದ ವೇದ ಭಾಗಗಳನ್ನೇ ನಂತರ ಐತರೇಯ ಅರಣ್ಯಕ ಮತ್ತು ಐತರೇಯ ಬ್ರಾಹ್ಮಣಗಳೆಂದು ಕೆರೆಯಲಾಯಿತು. ತನ್ನ ತಾಯಿಯ ಕಾರಣದಿಂದ ಙ್ಞಾನ ಸಂಪಾದಿಸಿದ್ದರಿಂದ ಮಹೀದಾಸನನ್ನು ಅವನ ತಂದೆಯಿಂದ ಗುರುತಿಸದೇ, ತಾಯಿಯ ಬಳಕೆಯ ನಾಮವಾದ "ಇತರಾ" ಎಂಬುವದರಿಂದ "ಐತರೇಯ" ನೆಂದು ಗುರುತಿಸಲಾಗುತ್ತದೆ. ಮಹೀದಾಸ ಎಂಬ ಹೆಸರೂ "ಪೃಥ್ವಿಯ ದಾಸ" (ಮಹೀ ಎಂದರೆ ಭೂಮಿ ಅಥವಾ ಪೃಥ್ವಿ) ಎಂದು ಅರ್ಥಕೊಡುತ್ತದೆ ಎಂಬುದನ್ನು ಗಮನಿಸಬಹುದು.
[[ವರ್ಗ:ಹಿಂದೂ ಋಷಿಗಳು]]
|