ಕರ್ವಾಲೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೩ ನೇ ಸಾಲು:
==ಕರ್ವಾಲೋ ಕಾದಂಬರಿಯಾಗಿ==
* ಈ ಕತೆಯ ನಿರೂಪಕ, ಮಂದಣ್ಣ ಮತ್ತು ಕರ್ವಾಲೋ ಎಂಬ ಸಂಶೋಧಕ.
ಈ ಮೂವರು ತಮ್ಮ ಪರಿಸರದಲ್ಲಿ ಕಂಡುಕೊಂಡ ವಿಸ್ಮಯಕರ ಸಂಗತಿಗಳೇ ‘ಕರ್ವಾಲೋ’ ಕಾದಂಬರಿಯ ವಸ್ತು; ಇದರ ಸರಳ ಸುಂದರ ಹಂದರ. ಈ ಕೃತಿಯನ್ನು ಓದುತ್ತಿದ್ದರೆ ಕಣ್ಣಮುಂದೆ ಒಂದು ಚಿತ್ರದಂತೆ ಬರುತ್ತದೆ. ವಿಶೇಷವಾಗಿ ಮಂದಣ್ಣ ಮತ್ತು ಅವನ ಮದುವೆಯ ಸನ್ನಿವೇಶಗಳು ಹಾಸ್ಯದ ಹೊನಲನ್ನೇ ಹರಿಸುತ್ತವೆ. * ಅಕಸ್ಮಾತ್ತಾಗಿ ಪರಿಚಯವಾದ ಮಂದಣ್ಣ ಎಂಬ ಹಳ್ಳಿಗನ ಬದುಕು ಮತ್ತು ಅವನಲ್ಲಿ ಹುದುಗಿರುವ ಪ್ರತಿಭೆ ಈ ಕಾದಂಬರಿಯ ತಳಪಾಯ; ಈತನ ಗೆಳೆತನದಿಂದ ಮತ್ತು ಕರ್ವಾಲೋ ಅವರ ಮಾರ್ಗದರ್ಶನದಿಂದ ಕತೆಗಾರರು ಕಂಡುಕೊಂಡ ಅರಣ್ಯ ಮಧ್ಯದ ಜೀವರಾಶಿಯ ನಿಗೂಢ ಬದುಕು ಈ ಕಾದಂಬರಿಯ ಇನ್ನೊಂದು ಸ್ತರ.
* ಅತ್ಯಂತ ಸ್ಪಷ್ಟ ಭಾಷೆಯಲ್ಲಿ ಮುಗ್ಧ ಕುತೂಹಲದಿಂದ ಹೇಳಲಾಗಿರುವ ಈ ಕತೆ ಸಮಾಜದ ನಿರ್ಲಕ್ಷ್ಯದಿಂದ ನಾಶವಾಗುತ್ತಿರುವ ಮಂದಣ್ಣರು, ಕ್ರಮೇಣ ಇಲ್ಲವಾಗುತ್ತಿರುವ ಸೃಜನಶೀಲ ಕರ್ವಾಲೋಗಳು ಮತ್ತು ನಾಗರಿಕತೆಯ ತುಳಿತಕ್ಕೆ ಧ್ವಂಸಗೊಂಡು ಮಾಯವಾಗುತ್ತಿರುವ ಅರಣ್ಯ ಮತ್ತು ಜೀವರಾಶಿ - ಈ ಎಲ್ಲವನ್ನೂ, ಎಲ್ಲರನ್ನೂ ಕುರಿತದ್ದು.
* ಈ ಕೃತಿ ಎಷ್ಟು ಚೆನ್ನಾಗಿದೆ ಎಂದರೆ ಇದರೊಳಗಿರುವ ಹಾಸ್ಯದಿಂದ ಓದುಗರು ನಕ್ಕು ನಕ್ಕು ಸಾಕಾಗುತ್ತಾರೆ. ಪ್ಯಾರ, ಕಿವಿ, ಮಂದಣ್ಣ, ಕರಿಯಪ್ಪ, ಎಂಗ್ಟ , ಪ್ರಭಾಕರ ನಿಮ್ಮನ್ನು ನಗಿಸಿ ನಗಿಸಿ ಇಡುತ್ತಾರೆ. ಕೆಲವು ಸನ್ನಿವೇಶಗಳಾದ ಮಂದಣ್ಣನ ಬ್ಯಾಂಡ್ ಬಾರಿಸುವಿಕೆ, ಮಂದಣ್ಣನ ಮದುವೆ, ಎಂಗ್ಟ - ಕರಿಯಪ್ಪನ ಜಗಳ, ಕೋರ್ಟ್ ಕೇಸು ಮುಂತಾದವು ಎಂದಿಗೂ ಮರೆಯಲಾಗದಂತದ್ದು.
* ನೀವು ದಟ್ಟ ಕಾಡು ನೋಡಿಲ್ಲವೇ? ಹಾಗಾದರೆ 'ಕರ್ವಾಲೋ' ಪುಸ್ತಕ ಕೈಗೆತ್ತಿಕೊಳ್ಳಿ. ದಟ್ಟ ಕಾಡಿನೊಳಕ್ಕೆ ತೇಜಸ್ವಿ ನಿಮ್ಮನ್ನು ಎಳೆದೊಯ್ಯುತ್ತಾರೆ.ಮೊದಲನೇ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ. ಈ ಕೃತಿಯ ಕೊನೆಯನ್ನು ಓದುವಾಗ ಓದುಗರು ಅನುಭವಿಸುವ ರೋಮಾಂಚನ ವರ್ಣಿಸಲಾಗದ್ದು. ಎಷ್ಟು ಸಾರಿ ಓದಿದರೂ ಬೇಸರವೆನಿಸದ ಅದ್ಭುತ ಪುಸ್ತಕ ಇದು.
* ಜೇನು ತುಪ್ಪದ ಪ್ರಕರಣ, ಜೇನುಹುಳಗಳ ಧಾಳಿ, ಪ್ಯಾರನ ಕೆಟ್ಟಕನ್ನಡ, ಕಿವಿಯ ಬೇಟೆಯ ಉತ್ಸಾಹ, ಒಂದಷ್ಟು ರಸಿಕತೆ, ಮಂದಣ್ಣನ ಹೆಂಡತಿಯ ನಡವಳಿಕೆ, ನಿರೂಪಕರ ಸಹಜ ಭಾಷೆ, ಜನಪದ ವೈದ್ಯ, ಕುಡಿತ, ಆಹಾರ ಕ್ರಮ, ಜೇನುಸಾಕಣೆ,
* ಕರ್ವಾಲೋ ಕಾದಂಬರಿ ಲೇಖಕರು ಬದುಕಿರುವಾಗಲೇ, ಕರ್ನಾಟಕದ ಹಲವಾರು ವಿಶ್ವವಿದ್ಯಾನಿಲಯಗಳಿಗೆ ಪಠ್ಯಪುಸ್ತಕವಾಗಿಯು ಜನಪ್ರಿಯಗೊಂಡಿದೆ. ಇದೊಂದು ಬಹುಮುಖ ಕಾದಂಬರಿಯಾಗಿ ಹಲವು ವಿಶಿಷ್ಟತೆಗಳನ್ನು ಒಳಗೊಂಡಿದೆ.
|